AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಸಾರಥ್ಯದಲ್ಲಿ ಕುಟುಂಬದ 5 ಮಂದಿ ಸಾವು; ಪತ್ನಿಯನ್ನು ದೂರಿದ ಸಂಪಾದಕ ಶಂಕರ್

ಸಂಪಾದಕ ಶಂಕರ್ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರು. ಚಿಕ್ಕ ದುರ್ಗೆಗೌಡ ಮತ್ತು ಅಮ್ಮಯಮ್ಮ ಎಂಬ ದಂಪತಿಗಳ ಹಿರಿಯ ಮಗ. ಶಂಕರ್​ಗೆ ಒಬ್ಬ ಸಹೋದರ, ಐದು ಜನ ಸಹೋದರಿಯರಿದ್ದಾರೆ.

ಪತ್ನಿಯ ಸಾರಥ್ಯದಲ್ಲಿ ಕುಟುಂಬದ 5 ಮಂದಿ ಸಾವು; ಪತ್ನಿಯನ್ನು ದೂರಿದ ಸಂಪಾದಕ ಶಂಕರ್
ಆತ್ಮಹತ್ಯಗೆ ಶರಣಾಗಿರುವ ಶಂಕರ್ ಕುಟುಂಬ
TV9 Web
| Edited By: |

Updated on:Sep 18, 2021 | 11:20 AM

Share

ಮಂಡ್ಯ: ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಸಂಪಾದಕ ಶಂಕರ್, ತನ್ನ ಪತ್ನಿಯನ್ನು ದೂರಿದ್ದಾರೆ. ನನ್ನ ಮಗಳು ಮಾತ್ರ ಚೆನ್ನಾಗಿರಬೇಕು, ಅಳಿಯ ಎನಾದರೂ ಆಗಲಿ ಅಂತ ನನ್ನ ಪತ್ನಿ ಹೇಳುತ್ತಿದ್ದರು. ಅಳಿಯ ಕುಟುಂಬ ವರ್ಗದವರೊಂದಿಗೆ ಹೊಂದಿಕೊಳ್ಳದಂತೆ ನಡೆದುಕೊಳ್ಳುವುದನ್ನ ಹೇಳಿಕೊಡುತ್ತಿದ್ದಳು. ಇದನ್ನ ನಾನು ಕಣ್ಣಾರೆ ಕಂಡಿದ್ದಾನೆ ಅಂತ ಶಂಕರ್ ಆರೋಪ ಮಾಡಿದ್ದಾರೆ.

ಸಂಪಾದಕ ಶಂಕರ್ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರು. ಚಿಕ್ಕ ದುರ್ಗೆಗೌಡ ಮತ್ತು ಅಮ್ಮಯಮ್ಮ ಎಂಬ ದಂಪತಿಗಳ ಹಿರಿಯ ಮಗ. ಶಂಕರ್​ಗೆ ಒಬ್ಬ ಸಹೋದರ, ಐದು ಜನ ಸಹೋದರಿಯರಿದ್ದಾರೆ. ಹಲವು ವರ್ಷಗಳ ಹಿಂದೆಯೇ ಬದುಕು ಕಟ್ಟಿಕೊಳ್ಳಲು ಶಂಕರ್ ಮಂಡ್ಯದಿಂದ ಬೆಂಗಳೂರಿಗೆ ಬಂದಿದ್ದರು. ಸದ್ಯ ಹಲ್ಲೆಗೆರೆಯಲ್ಲಿ ಶಂಕರ್ ಓರ್ವ ಸಹೋದರಿ ಪಾರ್ವತಮ್ಮ ಇದ್ದಾರೆ.

ಶಂಕರ್ ತನ್ನ ಗ್ರಾಮದಲ್ಲಿ ಯಲ್ಲಮ್ಮ ದೇವಿ ದೇವಾಲಯ ನಿರ್ಮಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ ಶಂಕರ್ ನೇತೃತ್ವದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಸವದತ್ತಿಯ ಯಲ್ಲಮ್ಮ ದೇವಿ ಶಂಕರ್ ಮನೆ ದೇವರು. ಪ್ರತಿಬಾರಿ ಸವದತ್ತಿಗೆ ಹೋಗಲಾಗಲ್ಲ ಎಂದು ಗ್ರಾಮದಲ್ಲೇ ದೇವಾಲಯವನ್ನು ನಿರ್ಮಿಸಿದ್ದರು. 2002 ರಲ್ಲೇ ದೇವಾಲಯ ನಿರ್ಮಣವಾಗಿತ್ತು. ಇತ್ತೀಚೆಗೆ ಮೂರನೇ ಶ್ರಾವಣ ಶನಿವಾರ ಪತ್ನಿ ಮತ್ತು ಮಕ್ಕಳ ಸಮೇತ ಬಂದು ಪೂಜೆ ಸಲ್ಲಿಸಿ ಹೋಗಿದ್ದರು. ದೇವಾಲಯಕ್ಕೆ ಪೂಜೆ ಸಲ್ಲಿಸುವುದಕ್ಕಾಗಿ ಶಂಕರ್ ಅರ್ಚಕನನ್ನ ನೇಮಿಸಿದ್ದಾರೆ. ಪ್ರತಿ ತಿಂಗಳು 3 ಸಾವಿರ ರೂ. ವೇತನ ನೀಡಿ ಅರ್ಚಕನನ್ನು ನೇಮಿಸಿದ್ದಾರೆ.

ಇನ್ನು ಈ ಪ್ರಕರಣದ ಬಗ್ಗೆ ಹಲ್ಲೆಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಂಕರ್ ಸಹೋದರಿ ಪಾರ್ವತಮ್ಮ, ಟಿವಿ9ನಲ್ಲಿ ನೋಡಿದ ಬಳಿಕ ನನಗೆ ಮಾಹಿತಿ ತಿಳಿಯಿತು. ಶಂಕರ್ ಬೆಂಗಳೂರಿಗೆ ಹೋಗಿ 30 ವರ್ಷ ಆಗಿದೆ. ಶಂಕರ್ ಕುಟುಂಬಸ್ಥರು ಎಲ್ಲರೂ ಚೆನ್ನಾಗಿಯೇ ಇದ್ದರು. ಶಂಕರ್ ಕುಟುಂಬದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮೊದಲ ಶ್ರಾವಣ ಶನಿವಾರ ದೇವಾಲಯಕ್ಕೆ ಬಂದಿದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಗೊತ್ತಿಲ್ಲ ಅಂತ ಹೇಳಿದರು.

ಇದನ್ನೂ ಓದಿ

ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ

Mantri Mall: ತೆರಿಗೆ ಕಟ್ಟಿ ಕಟ್ಟೀ ಅಂದರೂ ಡೋಂಟ್​ ಕೇರ್! ಮಂತ್ರಿ ಮಾಲ್​ಗೆ ಬೀಗ ಜಡಿಯಲು ಮುಂದಾದ ಬಿಬಿಎಂಪಿ

(Editor Shankar accused of wife in Bengaluru)

Published On - 10:38 am, Sat, 18 September 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?