AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಬುಕ್ ಮಾಡಿದ್ದು ಒಂದಾದ್ರೆ ಪಾರ್ಸಲ್​​ನಲ್ಲಿ ಬರೋದೆ ಇನ್ನೊಂದು; ಮಂಡ್ಯದ ಆಟೋ ಚಾಲಕನಿಗೆ ಮಕ್ಮಲ್ ಟೋಪಿ

ಸೈಬರ್ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿವರೆಗೆ ಮೋಸ ಮಾಡುವವರು ಇರುತ್ತಾರೆ. ಹೀಗಾಗಿ ಆನ್​ಲೈನ್ ಮೂಲಕ ಬುಕ್ ಮಾಡುವ ಮುನ್ನ ಎಚ್ಚರವಾಗಿರಿ.

ನೀವು ಬುಕ್ ಮಾಡಿದ್ದು ಒಂದಾದ್ರೆ ಪಾರ್ಸಲ್​​ನಲ್ಲಿ ಬರೋದೆ ಇನ್ನೊಂದು; ಮಂಡ್ಯದ ಆಟೋ ಚಾಲಕನಿಗೆ ಮಕ್ಮಲ್ ಟೋಪಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jan 09, 2023 | 7:30 AM

ಮಂಡ್ಯ: ಆನ್​ಲೈನ್​ನಲ್ಲಿ ಬಣ್ಣಬಣ್ಣದ ಮಾತುಗಳನ್ನಾಡಿ ತಮ್ಮ ಮೇಲೆ ಸಂಪೂರ್ಣವಾಗಿ ನಂಬಿಕೆ ಬರುವಂತೆ ಮಾಡುವ ಸೈಬರ್ ಅಪರಾಧಿಗಳು ತುಂಬಾ ಆಕ್ಟಿವ್ ಆಗಿದ್ದಾರೆ. ಇಂತಹ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲಿವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿವರೆಗೆ ಮೋಸ ಮಾಡುವವರು (Cyber criminals) ಇರುತ್ತಾರೆ. ಹೀಗಾಗಿ ಆನ್​ಲೈನ್ ಮೂಲಕ ಖರೀದಿಸುವ ಮುನ್ನ ಒಂದಲ್ಲ, ಎರಡದಲ್ಲೂ ಹಲವು ಬಾರಿ ಯೋಚಿಸಿ. ಏಕೆಂದರೆ ಕೆಲವೊಮ್ಮೆ ಆನ್​ಲೈನ್ ಮೂಲಕ ನಾವು ಆರ್ಡರ್ ಮಾಡುವುದು ಒಂದು, ಪಾರ್ಸೆಲ್​ನಲ್ಲಿ ಬರುವುದೇ ಬೇರೆಯದ್ದೇ (Online Cheating) ಆಗಿರುತ್ತದೆ. ಈ ರೀತಿಯ ವಂಚನೆಗೆ ಸಿಲುಕಿದವರು ಅನೇಕರು. ಈ ಪೈಕಿ ಮಂಡ್ಯದ ಆಟೋ ಚಾಲಕನೂ ಒಬ್ಬ.

ಆನ್​​ಲೈನ್​ನಲ್ಲಿ ಆಫರ್ ಇದೆ ಎಂದು ಪ್ರಾಡೆಕ್ಟ್ ಬುಕ್ ಮಾಡುವ ಮುನ್ನ ಎಚ್ಚರವಾಗಿರಿ. ನಿಮ್ಮ ಮೊಬೈಲ್​ಗೆ ಅಪರಿಚಿತ ಸಂಖ್ಯೆ ಮೂಲಕ ಆಫರ್ ಇದೆ ಎಂದು ಕರೆ ಮಾಡಿದಾಗ ನಂಬುದುದರ ಬದಲು ಯೋಚಿಸುವುದು ಒಳಿತು. ಏಕೆಂದರೆ, ಆಫರ್ ಇದೆ ಎಂದು ಮಂಡ್ಯದ ಆಟೋ ಚಾಲಕ ಜಗನ್ನಾಥ ಎಂಬವರಿಗೆ ಆನ್​ಲೈನ್ ಶಾಪಿಂಗ್ ಕಂಪನಿಯಿಂದ ಕರೆ ಬಂದಿದೆ. ಕರೆ ಸ್ವೀಕರಿಸಿದ ಜಗನ್ನಾಥ ಅವರಿಗೆ ಸ್ಯಾಮ್​ಸಂಗ್ ಎ50 ಮೊಬೈಲ್​ ಮೇಲೆ ಆಫರ್ ಇದೆ ಎಂದು ಹೇಳಿದೆ.

ಇದನ್ನೂ ಓದಿ: Crime News: ಜೇವರ್ಗಿ ಬಳಿ ಟೈರ್ ಬ್ಲಾಸ್ಟ್ ಆಗಿ ಮದ್ಯ ಸರಬರಾಜು ಮಾಡುತ್ತಿದ್ದ ವಾಹನ ಪಲ್ಟಿ

ಬೆಲೆಬಾಳುವ ಮೊಬೈಲ್​ ಆಫರ್​ ಬೆಲೆ 2700 ರೂಪಾಯಿ ಇದ್ದು, ಇದರೊಂದಿಗೆ ಒಂದು ಬ್ಲೂಟೂತ್ ಇಯರ್ ಬಡ್ಸ್ ಹಾಗೂ ಪವರ್ ಬ್ಯಾಂಕ್ ನೀಡುವುದಾಗಿ ಕಂಪನಿ ಹೇಳಿದೆ. ದುಬಾರಿ ಮೊಬೈಲ್ 2700 ರೂಪಾಯಿಗೆ ಸಿಗುತ್ತದೆ ಎಂದಾದರೆ ಯಾರು ಬಿಡುತ್ತಾರೆ ಅಲ್ವಾ? ಕಂಪನಿ ಕೊಟ್ಟ ಆಫರ್ ನಂಬಿದ ಜಗನ್ನಾಥ ಹಣ ಕಟ್ಟಿದ್ದಾನೆ. ಅದರಂತೆ ಬಂದ ಪಾರ್ಸಲ್ ಓಪನ್ ಮಾಡಿದಾಗ ಜಗನ್ನಾಥ ಅವರು ಶಾಕ್ ಆಗಿದ್ದಾರೆ.

ಬುಕ್ ಮಾಡಿದ್ದು ಮೊಬೈಲ್ ಫೋನ್, ಆದರೆ ಪಾರ್ಸೆಲ್​ನಲ್ಲಿ ಟಾರ್ಚ್ ಬಂದಿರುವುದನ್ನು ನೋಡಿದ ಜಗನ್ನಾಥನಿಗೆ ತಾನು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ತಿಳಿದುಬಂದಿದೆ. ಹಣ ಕಟ್ಟಿಸಿಕೊಂಡು ಟಾರ್ಚ್ ಹಾಗೂ ಚೈನಾ ಪವರ್ ಬ್ಯಾಂಕ್ ನೀಡಿ ವಂಚನೆ ಎಸಗಿದ್ದಾರೆ. ಆದರೆ ಜಗನ್ನಾಥ ಅವರು ಠಾಣೆಗೆ ದೂರು ನೀಡಿದೆ ಸುಮ್ಮನಾಗಿದ್ದಾರೆ.

ನ್ಯಾಪ್​ಟಾಲ್​ ಕಂಪನಿಯಿಂದ ದೂರವಾಣಿ ಕರೆಬಂದಿದ್ದು, ಆಫರ್ ಇದೆ ತಗೊಳಿ ಎಂದು ಹೇಳಿದ್ದಾರೆ. ಈ ಹಿಂದೆ ತಂದೆಯವರಿಗೆ ನ್ಯಾಪ್​ಟಾಲ್ ಮೂಲಕ ಗೋಲ್ಡ್ ಚೈನ್, ವಾಚ್ ಆರ್ಡರ್ ಮಾಡಿದ್ದೆವು. ಅದರ ಬಣ್ಣ ಎಲ್ಲಾ ಹೋಗಿತ್ತು. ಈ ಬಗ್ಗೆಯೂ ಕರೆ ಬಂದಾಗ ಆರಂಭದಲ್ಲಿ ಬೇಡ ಹೇಳಿದ್ದೆ. ಆದರೂ ಕಾಲ್ ಮೇಲೆ ಕಾಲ್ ಮಾಡಿ 15ಸಾವಿರದ ಮೊಬೈಲ್ 2700 ರೂ.ಗೆ ಸಿಗುತ್ತಿದೆ. ಇದರ ಜೊತೆಗೆ ಪವರ್ ಬ್ಯಾಂಕ್ ಮತ್ತು ಬ್ಲೂಟೂತ್ ಸಿಗುತ್ತದೆ ಎಂದು ಹೇಳಿದರು. ಆದರೂ ನಂಬಿಕೆ ಬರಲಿಲ್ಲ, ಅವರು ಫೋಟೋ ಕಳುಹಿಸಿದರು ಎಂದು ಜಗನ್ನಾಥ ಅವರು ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಡಗಿನ ಹುಡುಗಿ.. ವಿಜಯಲಕ್ಷ್ಮೀ.. ಚಿನ್ನು.. ಬಂಗಾರ: ಬಗೆದಷ್ಟು ಬಯಲಾಗುತ್ತಿವೆ ಸ್ಯಾಂಟ್ರೋ ರವಿಯ ಲೀಲೆಗಳು

ಮೊಬೈಲ್, ಬ್ಲೂಟೂತ್ ಇಯರ್ ಬಡ್ಸ್ ಹಾಗೂ ಪವರ್ ಬ್ಯಾಂಕ್ ಫೋಟೋ ಕಳುಹಿಸಿದ ನಂತರ ನಂಬಿಕೆ ಬರದ ಹಿನ್ನಲೆ ಆರ್ಡರ್ ಮಾಡುತ್ತೇನೆ, ಆದರೆ ಪಾರ್ಸೆಲ್ ಓಪನ್ ಮಾಡಿದ ನಂತರವೇ ಹಣ ಪಾವತಿಸುತ್ತೇನೆ ಎಂದಾಗ ಕಂಪನಿಯವರು ಅದಕ್ಕೂ ಒಪ್ಪಿದ್ದಾರೆ. ನಮ್ಮಲ್ಲಿ ಕ್ಯಾಶ್ ಆ್ಯಂಡ್ ಡೆಲಿವರಿ ಇದೆ ತಗೊಳಿ ಎಂದಿದ್ದಾರೆ. ಹೀಗಾಗಿ ಆರ್ಡರ್ ಮಾಡಿದ್ದೆ. ಮರುದಿನ ಮತ್ತೆ ಕರೆ ಮಾಡಿ ನಿಮ್ಮ ಆರ್ಡರ್ ಅಂಚೆ ಕಚೇರಿಗೆ ತಲುಪಿದೆ, ಆನ್​ಲೈನ್ ಆದರೆ ನಾಲ್ಕೈದು ದಿನಗಳಾಗುತ್ತವೆ ಅಂತ ಸ್ಪೀಡ್ ಪೋಸ್ಟ್ ಮಾಡಿದ್ದೇವೆ, ಹೋಗಿ ತಗೊಳಿ, ಅದರಲ್ಲಿರುವ ಕೋಡ್ ನಮಗೆ ತಿಳಿಸಿ ಎಂದಿದ್ದಾರೆ ಎಂದು ಜಗನ್ನಾಥ ಮಾಹಿತಿ ಹಂಚಿಕೊಂಡಿದ್ದಾರೆ.

ಕಂಪನಿ ನೀಡಿದ ಮಾಹಿತಿ ಆಧರಿಸಿ ಪೋಸ್ಟ್ ಆಫೀಸ್​ಗೆ ಹೋಗಾದ 2700 ಜೊತೆ 180 ರೂಪಾಯಿ ಕಟ್ಟಲು ಸೂಚಿಸಿದ್ದಾರೆ. ಈ ಎಲ್ಲಾ ಹಣ ಕಟ್ಟಿದ ಪಾರ್ಸೆಲ್ ಓಪನ್ ಮಾಡಿದಾಗ ಆನ್ ಆಗದ ಸ್ಯಾಮ್​ಸಂಗ್ ಅಂತ ಹೆಸರಿರುವ ಆನ್ ಆಗದ ಚೈನಾ ಮಾಡೆಲ್ ಪವರ್​ಬ್ಯಾಂಕ್ ಮತ್ತು ಲೈಟ್ ನೀಡಿದ್ದಾರೆ. ಕೂಡಲೇ ಅದೇ ನಂಬರ್​ಗೆ ಕರೆ ಮಾಡಿದಾಗ ವಾಟ್ಸ್​​ಆ್ಯಪ್ ಮೂಲಕ ಫೋಟೋ ಕಳುಹಿಸಲು ಹೇಳಿದ್ದಾರೆ. ಅದರಂತೆ ಫೋಟೋ ಕಳುಹಿಸಿದೆ. ನಂತರ ಮತ್ತೆ ನಾನು ಎಷ್ಟೇ ಕರೆ ಮಾಡಿದಾಗ ಬ್ಯುಸಿ ಅಂತಾನೇ ಬರುತ್ತಿತ್ತು ಎಂದು ಜಗನ್ನಾಥ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓಲು ಇಲ್ಲಿ ಕ್ಲಿಕ್ ಮಾಡಿ

Published On - 7:30 am, Mon, 9 January 23

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್