AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬಾರಿ ಹನುಮ ಜಯಂತಿಯಂದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ಹೋಗಿ ಪೂಜೆ ಸಲ್ಲಿಸುತ್ತೇವೆ : ಹಿಂದೂ ಮುಖಂಡ ಮಂಜುನಾಥ್

ಈ ಬಾರಿ ಹನುಮ ಜಯಂತಿಗೆ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ಹೋಗಿ ಪೂಜೆ ಸಲ್ಲಿಸುತ್ತೇವೆ ಎಂದು ಹಿಂದೂ ಮುಖಂಡ ಮಂಜುನಾಥ್ ಹೇಳಿದ್ದಾರೆ.

ಈ ಬಾರಿ ಹನುಮ ಜಯಂತಿಯಂದು ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ಹೋಗಿ ಪೂಜೆ ಸಲ್ಲಿಸುತ್ತೇವೆ : ಹಿಂದೂ ಮುಖಂಡ ಮಂಜುನಾಥ್
ಜಾಮಿಯಾ ಮಸೀದಿ ಶ್ರೀಲಂಗ ಪಟ್ಟಣ
TV9 Web
| Edited By: |

Updated on: May 14, 2022 | 12:09 PM

Share

ಮಂಡ್ಯ: ಈ ಬಾರಿ ಹನುಮ ಜಯಂತಿಗೆ ಶ್ರೀರಂಗಪಟ್ಟಣದ (Shrirang Pattana) ಜಾಮಿಯಾ ಮಸೀದಿಗೆ (Jamiya Mosque) ಹೋಗಿ ಪೂಜೆ ಸಲ್ಲಿಸುತ್ತೇವೆ ಎಂದು ಹಿಂದೂ ಮುಖಂಡ ಮಂಜುನಾಥ್ ಹೇಳಿದ್ದಾರೆ. ಎಲ್ಲಾ ಹನುಮಾನ ಮಾಲದಾರಿಗಳು ಶ್ರೀರಂಗಪಟ್ಟಣಕ್ಕೆ ಹೋಗಿ ಪೂಜೆ ಸಲ್ಲಿಸುತ್ತೇವೆ. ಪೂಜೆಗೆ ಅನುಮತಿ ನೀಡುವಂತೆ ಈಗಾಗಲೇ ಡಿಸಿಗೆ ಮನವಿ ಮಾಡಿದ್ದೇವೆ. ಈ ಬಾರಿ ಮಸೀದಿಯಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು. ಪೂಜೆಗೆ ಅವಕಾಶ ನೀಡದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಹಿಂದೂ ಕಾರ್ಯಕರ್ತರು ಜಾಮಿಯಾ ಮಸೀದಿಯಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಮೂಡಲ ಬಾಗಿಲು ಆಂಜನೇಯ ದೇವಸ್ಥಾನದ ಮೇಲೆ ಮಸೀದಿ ಮಾಡಲಾಗಿದೆ. ಈ ಬಗ್ಗೆ ಅನೇಕ ಇತಿಹಾಸಕಾರರು ದಾಖಲೆ ಉಲ್ಲೇಖ ಮಾಡಿದ್ದಾರೆ.

ಸ್ವತಃ ಟಿಪ್ಪು ಪರ್ಶಿಯಾದ ಖಲೀಫ್ ಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಮಸೀದಿ ಆಂಜನೇಯನ ದೇವಾಲಯವಾಗಿತ್ತು ಎಂಬುದಕ್ಕೆ ಇಂದಿಗೂ ಕುರುಹುಗಳಿದ್ದು, ಕಲ್ಯಾಣಿ ಸೇರಿದಂತೆ ಹಿಂದು ದೇವರುಗಳ ಕೆತ್ತನೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಪುರಾತತ್ವ ಇಲಾಖೆ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ಕಾನೂನು ಬದ್ದವಾಗಿ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು. ಆಂಜನೇಯನ ಪೂಜೆಗೆ ಅವಕಾಶ ನೀಡದಿದ್ರೆ ಕಾನೂನು ಹೋರಾಟ ಮಾಡುವುದಾಗಿ ಕರ್ನಾಟಕ ನರೇಂದ್ರ ಮೋದಿ ವಿಚಾರ ಮಂಚ್ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಟಿಪ್ಪು ಸುಲ್ತಾನ್ (Tippu Sultan) ಕಾಲದಲ್ಲಿ ಕೋಟೆ ಆಂಜನೇಯ ಸ್ವಾಮಿಯ ದೇವಾಲಯವನ್ನ ಕೆಡವಲಾಗಿತ್ತು. ದೇವಾಲಯವನ್ನ ಕೆಡವಿ ಅಲ್ಲಿ ಮಸೀದಿಯನ್ನ ನಿರ್ಮಾಣ ಮಾಡಲಾಗಿದೆ. ಮಸೀದಿಯ ಓಳಗಡೆ ಹೊಯ್ಸಳರ ಲಾಂಚನಗಳಿವೆ ಕಂಬ ಹಾಗೂ ಕಲ್ಯಾಣಿ ಸಹವಿದೆ. ಪ್ರತಿ ಕಂಬದಲ್ಲಿ ಗಂಡಬೇರುಂಡ ಹಾಗೂ ಸಿಂಹದ ಲಾಂಚನವಿದೆ. ಮೈಸೂರು ಅರಸರ ಆಳ್ವಿಕೆಯ ಹಿಂದಯೇ ಈ ದೇವಾಲಯವನ್ನ ಕಟ್ಟಲಾಗಿತ್ತು. ಟಿಪ್ಪು ಆಳ್ವಿಕೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯವನ್ನ ಮಸೀದಿಯನ್ನಾಗಿ ಪರಿವರ್ತಿಸಲಾಗಿದೆ. ಈ ಹಿಂದೆ ಇದು ದೇವಾಲಯವಾಗಿತ್ತು ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಪ್ರತಿ ಕಂಬದ ಮೇಲಿನ ಶಿಲ್ಪ ಕಲೆಗಳು ಇದನ್ನ ಸಾರಿ ಹೇಳುತ್ತೆ.

784 ರಲ್ಲಿ ದೇವಾಸ್ಥಾನವನ್ನ ಹೊಡೆದು ಅದರ ಮೇಲೆ ಮಸೀದಿಯ ಗೋಪುರ ನಿರ್ಮಾಣ ಮಾಡಲಾಗಿದೆ. 1784 ಹಿಂದೆ ಅದು ಪ್ರಸಿದ್ದ ಕೋಟೆ ಆಂಜನೇಯ (ಮೂಡಲ ಆಂಜನೇಯ) ಶ್ರೀರಂಗ ಪಟ್ಟದ ರಂಗನಾಥ ಸ್ವಾಮಿಯ ಅಷ್ಟ ದಿಕ್ಕುಗಳಲ್ಲು ಹನುಮನ ದೇವಾಲಯಗಳಿವೆ. ಮುಖ್ಯವಾಗಿದ್ದದ್ದ ಮೂಡಲ ಬಾಗಿಲು ಆರ್ಕ್ಯಲಾಜೀಕಲ್ ಇಲಾಖೆ 1935 ದಾಖಲೆ ಮಾಡುತ್ತೆ. ಪ್ರಾಚೀನ ದೇವಸ್ಥಾನವನ್ನ ಹೊಡೆದು ಟಿಪ್ಪು ಸುಲ್ತಾನ್ ಜಾಮೀಯ ಹೆಸರನ್ನಿಟ್ಟಿದ್ದಾನೆ.

ರಾಜ್ಯದ ಇನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ