ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ: ಇನ್ನೋವಾ ಕಾರಿನಲ್ಲಿ ಬಂದು ನೀಚ ಕೃತ್ಯ

ಕುಡಿದ ನಶೆಯಲ್ಲಿದ್ದ ಯುವಕರ ಗುಂಪು ಫುಟ್​ಪಾತ್ ಮೇಲೆ ಕಾರು ಹತ್ತಿಸಿದ್ದಲ್ಲದೇ, ಶಾಲಾ ಬಾಲಕಿಯರ ಜೊತೆ ಅಸಭ್ಯ ವರ್ತನೆ ಮಾಡಿರುವಂತಹ ಘಟನೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರಶ್ನಿಸಿದ ಸ್ಥಳೀಯರ ಮೇಲೆ ಹಲ್ಲೆಗೆ ಯುವಕು ಮುಂದಾಗಿದ್ದಾರೆ. ಪೊಲೀಸ್​ರು ಬರುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ: ಇನ್ನೋವಾ ಕಾರಿನಲ್ಲಿ ಬಂದು ನೀಚ ಕೃತ್ಯ
ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ: ಇನ್ನೋವಾ ಕಾರಿನಲ್ಲಿ ಬಂದು ನೀಚ ಕೃತ್ಯ
Edited By:

Updated on: Jul 18, 2024 | 7:30 PM

ಬೆಂಗಳೂರು, ಜುಲೈ 18: ಕುಡಿದ ಅಮಲಿನಲ್ಲಿ ಪುಂಡರ ಗ್ಯಾಂಗ್​ವೊಂದು ಶಾಲಾ ಬಾಲಕಿಯರ (schoolgirls) ಜೊತೆ ಅಸಭ್ಯ ವರ್ತನೆ ಮಾಡಿರುವಂತಹ ಘಟನೆ ನಗರದ ಹೆಚ್​ಎಎಲ್​ (HAL) ಖಾಸಗಿ ಶಾಲೆ ಬಳಿ ನಡೆದಿದೆ ಇನೋವಾ ಕಾರಿನಲ್ಲಿ ಬಂದಿದ್ದ ಯುವಕ ಗ್ಯಾಂಗ್​ನಿಂದ ಶಾಲಾ ಬಾಲಕಿಯರಿಗೆ ಕಿರುಕುಳ ನೀಡಲಾಗಿದೆ. ಫುಟ್​ಪಾತ್ ಮೇಲೆ ಓಡಾಡುತ್ತಿದ್ದ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದರೊಂದಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೆ ಮೂವರು ಯುವಕರು ಹಲ್ಲೆಗೆ ಮುಂದಾಗಿದ್ದರು.

ಕುಡಿದ ನಶೆಯಲ್ಲಿದ್ದ ಯುವಕರ ಗುಂಪು ಫುಟ್​ಪಾತ್ ಮೇಲೆ ಇನೋವಾ ಕಾರು ಹತ್ತಿಸಿದ್ದಾರೆ. ನಶೆಯಲ್ಲಿದ್ದ ಓರ್ವ ನಿಲ್ಲಲಾಗದೆ ರಸ್ತೆಗೆ ಬಿದ್ದು ಕಿರುಚಾಡಿದ್ದಾನೆ. ಕುಡುಕರ ವಿಕೃತಿ ಮುಂದುವರಿದಾಗ ಕಂಟ್ರೋಲ್​ ರೂಮ್​ಗೆ ಸ್ಥಳೀಯರಿಂದ ಮಾಹಿತಿ ನೀಡಲಾಗಿದ್ದು, ಪೊಲೀಸ್ ವಾಹನ ಬರುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ಮನೆಗೆ ನುಗ್ಗಿ‌ ದುಷ್ಕರ್ಮಿಗಳ ಅಟ್ಟಹಾಸ: ಮಹಿಳೆಯೊಂದಿಗೆ ಅಸಭ್ಯ ವರ್ತನೆ, ಕಾಂಗ್ರೆಸ್​ ಸದಸ್ಯನ ಕೈವಾಡ ಆರೋಪ

ಗಾಂಜಾ ನಶೆ, ಕುಡಿದ ಅಮಲಿನಲ್ಲಿ ದೌರ್ಜನ್ಯವೆಸಗಿರುವ ಶಂಕೆ ವ್ಯಕ್ತವಾಗಿದ್ದು, ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನೆ ಬಗ್ಗೆ ವಿದ್ಯಾರ್ಥಿನಿ ಹೇಳಿದ್ದಿಷ್ಟು 

ಘಟನೆ ಬಗ್ಗೆ ಓರ್ವ ವಿದ್ಯಾರ್ಥಿನಿ ಪ್ರತಿಕ್ರಿಯಿಸಿದ್ದು, ನಾವು ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಫುಟ್​ಪಾತ್ ಮೇಲೆ ಇನೋವಾ ಕಾರು ಹತ್ತಿಸಿ ಒಬ್ಬ ಯುವಕ ಬಿದ್ದ. ಕೈಯಲ್ಲಿ ಬಾಟಲ್​ ಹಿಡಿದಿದ್ದು ಆ್ಯಸಿಡ್​ ಹಾಕುತ್ತೇನೆ ಎಂದು ಹೆದರಿಸಿದ. ಭಯವಾಗಿ ನಾವು ದೂರು ಹೋದೆವು.

ಇದನ್ನೂ ಓದಿ: ಬೆಂಗಳೂರಲ್ಲಿ ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ: ‘ನಾನು ಇಲ್ಲಿ ಸುರಕ್ಷಿತಳಲ್ಲ’ ಎಂದ ಮಹಿಳೆ

ಬಳಿಕ ಅಶ್ಲೀಲ ಶಬ್ದಗಳಿಂದ ನಿಂದಿಸಿದ. ಏನು ಅಂತ ಕೇಳುವುದಕ್ಕೆ ಹೋದಾಗ ನಮ್ಮ ಮೇಲೆ ಕಾರು ಹತ್ತಿಸಲು ಮುಂದಾದರು. ಆಗ ಒಬ್ಬರು ಅಂಕಲ್​ ಬಂದು ಪ್ರಶ್ನಿಸಿದಕ್ಕೆ ಅವರ ಮೇಲೆ ಕೂಡ ಹಲ್ಲೆ ಮಾಡಿದರು ಎಂದು ಹೇಳಿದ್ದಾರೆ.

ನಾಗರಾಜ್​ ಎನ್ನುವವರು ಮಾತನಾಡಿ, ಕೆಲ ಯುವಕರು ಶಾಲಾ ಮಕ್ಕಳಿಗೆ ಅಡ್ಡಹಾಕಿ ತೊಂದರೆ ನೀಡುತ್ತಿದ್ದರು. ಯಾಕೆ ಹೀಗೆ ಮಾಡುತ್ತಿದ್ದೀರಾ ಎಂದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಲು ಬಂದರು. ಬಳಿಕ ಸಾರ್ವಜನಿಕರು ಸೇರುತ್ತಿದ್ದಂತೆ ಕಾರಿನಲ್ಲಿ ಪರಾರಿ ಆಗಿದ್ದಾರೆ. ಮಕ್ಕಳಿಗೆ ಪೊಲೀಸ್​ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳಿದ್ದೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us