AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಬೆಚ್ಚಿಬೀಳಿಸುವ ಕೃತ್ಯ; ಆರ್​ಟಿಐ ಕಾರ್ಯಕರ್ತನ ಕೈ, ಕಾಲು ಕಟ್ ಮಾಡಿ ಕೌರ್ಯ ಮೆರೆದ ದುಷ್ಕರ್ಮಿಗಳು

ಆತ ಒಬ್ಬ ಸಾಮಾಜಿಕ ಕಾರ್ಯಕರ್ತ. ಸರ್ಕಾರಿ ಕಚೇರಿಗಳಲ್ಲಿ ಆರ್ ಟಿ ಐ ಹಾಕಿ ಸಾಕಷ್ಟು ಮಾಹಿತಿಗಳನ್ನ ಕಲೆ ಹಾಕುತ್ತಿದ್ದ. ಇದೇ ವಿಚಾರ ಇದೀಗ ಆತನಿಗೆ ಮುಳುವಾಗಿದೆ. ಆರ್ ಟಿ ಐ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆಯಾಗಿದ್ದು, ಕೈ ಕಾಲುಗಳನ್ನ ಕಟ್ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಅದು ಕೂಡ ಪೊಲೀಸ್ ಠಾಣೆಯ ಸಮೀಪವೇ ಹಲ್ಲೆ ನಡೆದಿರೋದು ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ.

ರಾಜ್ಯದಲ್ಲಿ ಬೆಚ್ಚಿಬೀಳಿಸುವ ಕೃತ್ಯ; ಆರ್​ಟಿಐ ಕಾರ್ಯಕರ್ತನ ಕೈ, ಕಾಲು ಕಟ್ ಮಾಡಿ ಕೌರ್ಯ ಮೆರೆದ ದುಷ್ಕರ್ಮಿಗಳು
ಆರ್ಟಿಐ ಕಾರ್ಯಕರ್ತ ವೆಂಕಟೇಶ್
Follow us
TV9 Web
| Updated By: ಆಯೇಷಾ ಬಾನು

Updated on: Jul 16, 2021 | 7:32 AM

ಬೆಂಗಳೂರು: ರಾಜ್ಯದಲ್ಲಿ ಎರಡು ಕಡೆ ಇಂತಹ ಭೀಕರ ಘಟನೆ ನಡೆದಿದೆ. ಈ ಸುದ್ದಿ ಕೇಳಿ ಕೂತಲ್ಲೇ ಬೆಚ್ಚಿಬೀಳಬಹುದು, ಜಿಟಿಜಿಟಿ ಮಳೆ ನಡುವೆಯೂ ಬೆವರುವಂತೆ ಮಾಡಬಹುದು. ಯಾಕಂದ್ರೆ ಇದು ಬಿಹಾರದ್ದೋ, ಉತ್ತರಪ್ರದೇಶದ್ದೋ ಕ್ರೈಂ ಕಹಾನಿಯಲ್ಲ. ನಮ್ಮದೇ ರಾಜ್ಯದಲ್ಲಿ ನಿನ್ನೆ ನಡೆದ ಎರಡು ಆಘಾತಕಾರಿ ಅಟ್ಯಾಕ್ಗಳಿವು.. ಅಂದಹಾಗೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪಟ್ಟಣದ ನಿವಾಸಿ, ಆರ್ಟಿಐ ಕಾರ್ಯಕರ್ತ ವೆಂಕಟೇಶ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳೊಂದಿಗೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ವೆಂಕಟೇಶ್ರ ಬಲಗೈ ಹಾಗೂ ಬಲ ಕಾಲನ್ನು ಕತ್ತರಿಸಿಬಿಟ್ಟಿದ್ದಾರೆ. ತಮ್ಮ ಕಚೇರಿಯಲ್ಲಿದ್ದ ವೆಂಕಟೇಶ್ರನ್ನು ಹೊರಗೆಳೆದು ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿ ಕೈ, ಕಾಲು ಕಟ್ ಮಾಡಿ ಪರಾರಿಯಾಗಿದ್ದಾರೆ.

ವಿಜಯನಗರಲ್ಲಿ ಆರ್ಟಿಐ ಕಾರ್ಯಕರ್ತನ ಬರ್ಬರ ಹತ್ಯೆ ಅತ್ತ ತಾವರೆಕೆರೆಯಲ್ಲಿ ಆರ್ಟಿಐ ಕಾರ್ಯಕರ್ತನನ್ನು ಟಾರ್ಗೆಟ್ ಮಾಡಿದ್ದ ಗ್ಯಾಂಗ್ ಭೀಕರ ಅಟ್ಯಾಕ್ ಮಾಡಿದ್ರೆ ಇತ್ತ ವಿಜಯನಗರದಲ್ಲೂ ಆರ್ಟಿಐ ಕಾರ್ಯಕರ್ತನ ಮೇಲೆ ರಾಡ್ನಿಂದ ಹೊಡೆದು ಮರ್ಡರ್ ಮಾಡಲಾಗಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಎಡಿಬಿ ಕಾಲೇಜು ಬಳಿ ವಾಕಿಂಗ್ ಮಾಡ್ತಿದ್ದ ಆರ್ಟಿಐ ಕಾರ್ಯಕರ್ತ ವಾಲ್ಮೀಕಿ ನಗರದ ನಿವಾಸಿ ಶ್ರೀಧರ್ರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಒಟ್ನಲ್ಲಿ ದೂರದ ಬಿಹಾರ, ಉತ್ತರಪ್ರದೇಶ ಶೈಲಿಯಲ್ಲೇ ರಾಜ್ಯದಲ್ಲೂ ಆರ್ಟಿಐ ಕಾರ್ಯಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ಹತ್ಯೆ ನಡೆದಿರೋದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: Shocking News: ಬಾವಿಗೆ ಬಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿ ಪಾಲಾದ 40 ಜನ; ಮೂವರು ಸಾವು, 11 ಮಂದಿ ಕಣ್ಮರೆ