AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ‌ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ!

ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಆಹಾರವಿಲ್ಲದೆ ಪಾರಿವಾಳಗಳು ಪರದಾಡುತ್ತಿವೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ದೊಡ್ಡ ತಲೆ ನೋವಾಗಿದೆ. ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ.

ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ‌ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ!
ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ‌ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ
ರಾಮ್​, ಮೈಸೂರು
| Updated By: ಆಯೇಷಾ ಬಾನು|

Updated on: Sep 24, 2024 | 9:33 AM

Share

ಮೈಸೂರು, ಸೆ.24: ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ಪಾರಿವಾಳಗಳಿಗೆ (Pigeon) ಕಾಳು ಹಾಕುವುದನ್ನು ನಿಲ್ಲಿಸಬೇಕೆಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Krishnadatta Chamaraja Wadiyar) ಅವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಅರಮನೆ ಮುಂಭಾಗದಲ್ಲಿ ಪಾರಿವಾಳಗಳಿಗೆ ಕಾಳು ಹಾಕಲಾಗುತ್ತಿಲ್ಲ. ಆದರೆ ಇದರಿಂದ ದಸರಾ ಆನೆಗಳಿಗೆ (Dasara Elephants) ಸಂಕಷ್ಟ ಎದುರಾಗಿದೆ. ವಿಶ್ವವಿಖ್ಯಾತ ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ‌ ಬ್ರೇಕ್ ಬಿದ್ದಿರುವುದರಿಂದ ಗಜಪಡೆ ಆಹಾರಕ್ಕೆ‌ ಪಾರಿವಾಳಗಳು ಮುಗಿ ಬಿದ್ದಿವೆ.

ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳಿಗೆ ಆಹಾರ ನೀಡುವಾಗ ಪರಿವಾಳಗಳು ಮುಗಿಬೀಳುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ದೊಡ್ಡ ತಲೆ ನೋವಾಗಿದೆ. ಪದೇ ಪದೇ ಪಾರಿವಾಳಗಳು ಆನೆ ಬಳಿ ಕೂರುತ್ತಿರುವುದರಿಂದ ಆನೆಗಳಿಗೂ ಸಂಕಟವಾಗುತ್ತಿದೆ. ಪಾರಿವಾಳಗಳನ್ನು ಓಡಿಸಿ ಮಾವುತ ಕಾವಾಡಿಗಳು ಹೈರಾಣಾಗುತ್ತಿದ್ದಾರೆ.

ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಆಹಾರವಿಲ್ಲದೆ ಪಾರಿವಾಳಗಳು ಪರದಾಡುತ್ತಿವೆ. ಈ ಹಿಂದೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪಕ್ಷಿ ಪ್ರಿಯರು ಕಾಳು ಹಾಕುತ್ತಿದ್ದರು. ಆದರೆ ಈಗ ಕಾಳು ಹಾಕುತ್ತಿದ್ದವರಿಗೂ ಹಾಕಬೇಡಿ ಎಂದು ನಿರ್ಬಂಧ ಹೇರಲಾಗಿದೆ. ಸಂಸದ ಯದುವೀರ್ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಮಾಡಲಾಗಿದೆ. ಪಾರಿವಾಳಗಳ ಆಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ದಿಢೀರ್ ಆಗಿ ಕಾಳು ಹಾಕುವುದನ್ನು ರದ್ದು ಮಾಡಲಾಗಿದೆ. ಪಾರಿವಾಳಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಗಜಪಡೆಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೈಸೂರು ಅರಮನೆ ಮುಂದೆ ಪಾರಿವಾಳಗಳಿಗೆ ಆಹಾರ ಹಾಕುವುದು ಬಂದ್: ಯದುವೀರ್​ ನೇತೃತ್ವದ ಸಭೆ ಯಶಸ್ವಿ​

ಪಾರಿವಾಳಗಳಿಂದ ಅಸ್ತಮ, ಅಲರ್ಜಿ,‌ ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಚಾಮರಾಜ ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿಯಾಗುತ್ತದೆ. ಪಾರಿವಾಳಗಳಿಗೆ ಕಾಳು ಹಾಕುವುದನ್ನು ನಿಲ್ಲಿಸುವುದಕ್ಕೆ ಕಾನೂನು ಆಗಬೇಕಿದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ. ಸಾರ್ವಜನಿಕ ಆರೋಗ್ಯ ಕಾಳಜಿಯಿಂದ ಪಾರಿವಾಳಗಳಿಗೆ ಅಹಾರ ಹಾಕುವುದನ್ನು ನಿಲ್ಲಿಸಬೇಕು ಎಂದು ಸಂಸದ ಯದುವೀರ್ ಓಡೆಯರ್​ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ