ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ‌ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ!

ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಆಹಾರವಿಲ್ಲದೆ ಪಾರಿವಾಳಗಳು ಪರದಾಡುತ್ತಿವೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ದೊಡ್ಡ ತಲೆ ನೋವಾಗಿದೆ. ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ.

ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ‌ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ!
ಪಾರಿವಾಳಕ್ಕೆ ಆಹಾರ ಹಾಕುವುದಕ್ಕೆ‌ ಬ್ರೇಕ್: ಮೈಸೂರು ದಸರಾ ಆನೆಗಳಿಗೆ ಸಂಕಷ್ಟ
Follow us
| Updated By: ಆಯೇಷಾ ಬಾನು

Updated on: Sep 24, 2024 | 9:33 AM

ಮೈಸೂರು, ಸೆ.24: ಮೈಸೂರು ಅರಮನೆ (Mysuru Palace) ಮುಂಭಾಗದಲ್ಲಿ ಪಾರಿವಾಳಗಳಿಗೆ (Pigeon) ಕಾಳು ಹಾಕುವುದನ್ನು ನಿಲ್ಲಿಸಬೇಕೆಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Krishnadatta Chamaraja Wadiyar) ಅವರ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ಅರಮನೆ ಮುಂಭಾಗದಲ್ಲಿ ಪಾರಿವಾಳಗಳಿಗೆ ಕಾಳು ಹಾಕಲಾಗುತ್ತಿಲ್ಲ. ಆದರೆ ಇದರಿಂದ ದಸರಾ ಆನೆಗಳಿಗೆ (Dasara Elephants) ಸಂಕಷ್ಟ ಎದುರಾಗಿದೆ. ವಿಶ್ವವಿಖ್ಯಾತ ಮೈಸೂರು ಅರಮನೆ ಬಳಿ ಪಾರಿವಾಳಗಳಿಗೆ ಆಹಾರ ಹಾಕುವುದಕ್ಕೆ‌ ಬ್ರೇಕ್ ಬಿದ್ದಿರುವುದರಿಂದ ಗಜಪಡೆ ಆಹಾರಕ್ಕೆ‌ ಪಾರಿವಾಳಗಳು ಮುಗಿ ಬಿದ್ದಿವೆ.

ಪಾರಿವಾಳಗಳಿಂದ ದಸರಾ ಗಜಪಡೆಗೆ ಕಿರಿ ಕಿರಿ ಉಂಟಾಗಿದೆ. ಆಹಾರಕ್ಕಾಗಿ ಪಾರಿವಾಳಗಳು ಆನೆಗಳ ಹಿಂದೆ ಮುಂದೆ ಸುತ್ತುತ್ತಿವೆ. ಆನೆಗಳಿಗೆ ಆಹಾರ ನೀಡುವಾಗ ಪರಿವಾಳಗಳು ಮುಗಿಬೀಳುತ್ತಿವೆ. ಆನೆಗಳು, ಮಾವುತರಿಗೆ ಪಾರಿವಾಳಗಳನ್ನು ಓಡಿಸುವುದೇ ದೊಡ್ಡ ತಲೆ ನೋವಾಗಿದೆ. ಪದೇ ಪದೇ ಪಾರಿವಾಳಗಳು ಆನೆ ಬಳಿ ಕೂರುತ್ತಿರುವುದರಿಂದ ಆನೆಗಳಿಗೂ ಸಂಕಟವಾಗುತ್ತಿದೆ. ಪಾರಿವಾಳಗಳನ್ನು ಓಡಿಸಿ ಮಾವುತ ಕಾವಾಡಿಗಳು ಹೈರಾಣಾಗುತ್ತಿದ್ದಾರೆ.

ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಆಹಾರವಿಲ್ಲದೆ ಪಾರಿವಾಳಗಳು ಪರದಾಡುತ್ತಿವೆ. ಈ ಹಿಂದೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪಕ್ಷಿ ಪ್ರಿಯರು ಕಾಳು ಹಾಕುತ್ತಿದ್ದರು. ಆದರೆ ಈಗ ಕಾಳು ಹಾಕುತ್ತಿದ್ದವರಿಗೂ ಹಾಕಬೇಡಿ ಎಂದು ನಿರ್ಬಂಧ ಹೇರಲಾಗಿದೆ. ಸಂಸದ ಯದುವೀರ್ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಮಾಡಲಾಗಿದೆ. ಪಾರಿವಾಳಗಳ ಆಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದೆ ದಿಢೀರ್ ಆಗಿ ಕಾಳು ಹಾಕುವುದನ್ನು ರದ್ದು ಮಾಡಲಾಗಿದೆ. ಪಾರಿವಾಳಗಳಿಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಗಜಪಡೆಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೈಸೂರು ಅರಮನೆ ಮುಂದೆ ಪಾರಿವಾಳಗಳಿಗೆ ಆಹಾರ ಹಾಕುವುದು ಬಂದ್: ಯದುವೀರ್​ ನೇತೃತ್ವದ ಸಭೆ ಯಶಸ್ವಿ​

ಪಾರಿವಾಳಗಳಿಂದ ಅಸ್ತಮ, ಅಲರ್ಜಿ,‌ ಮಕ್ಕಳಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ. ಚಾಮರಾಜ ಒಡೆಯರ್, ಅಂಬೇಡ್ಕರ್ ಪ್ರತಿಮೆಗಳಿಗೆ ಹಾನಿಯಾಗುತ್ತದೆ. ಪಾರಿವಾಳಗಳಿಗೆ ಕಾಳು ಹಾಕುವುದನ್ನು ನಿಲ್ಲಿಸುವುದಕ್ಕೆ ಕಾನೂನು ಆಗಬೇಕಿದೆ. ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ. ಸಾರ್ವಜನಿಕ ಆರೋಗ್ಯ ಕಾಳಜಿಯಿಂದ ಪಾರಿವಾಳಗಳಿಗೆ ಅಹಾರ ಹಾಕುವುದನ್ನು ನಿಲ್ಲಿಸಬೇಕು ಎಂದು ಸಂಸದ ಯದುವೀರ್ ಓಡೆಯರ್​ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ
‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕುರಿತು ಕಿಚ್ಚ ಸುದೀಪ್​ ಸುದ್ದಿಗೋಷ್ಠಿ