AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ದಿನದಂದು ಹುಟ್ಟಿದ ಕರುವಿಗೆ ನಾಮಕರಣ; ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸಂಭ್ರಮಿಸಿದ ಸಿಲಿಕಾನ್ ಸಿಟಿ ಮಂದಿ

ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರತಿ ಬೆಳಗಿ, ಕರುವಿನ ಕಿವಿಯಲ್ಲಿ ‘ಸುರಭಿ.. ಸುರಭಿ’ ಎಂದು ನಾಮೋಚ್ಚರಣೆ ಮಾಡಿ ಸಂಭ್ರಮಿಸಿದರು.

ಶಿವರಾತ್ರಿ ದಿನದಂದು ಹುಟ್ಟಿದ ಕರುವಿಗೆ ನಾಮಕರಣ; ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸಂಭ್ರಮಿಸಿದ ಸಿಲಿಕಾನ್ ಸಿಟಿ ಮಂದಿ
ಹಸುವಿಗೆ ನಾಮಕರಣ ಮಾಡುತ್ತಿರುವ ದೃಶ್ಯ
preethi shettigar
| Edited By: |

Updated on: Apr 05, 2021 | 7:13 AM

Share

ಬೆಂಗಳೂರು: ನಗರದ ಹೇಸರಘಟ್ಟ ರಸ್ತೆಯ ಕುಂಬಾರಹಳ್ಳಿಯ ಶ್ರೀ ಸದ್ಗುರು ಗೋಶಾಲೆಯಲ್ಲಿ ಶಿವರಾತ್ರಿ ದಿನ ಹುಟ್ಟಿದ ಕರುವಿಗೆ ನಿನ್ನೆ (ಏಪ್ರಿಲ್​ 4) ನಾಮಕರಣ ಮಾಡಲಾಯಿತು. ರೈತಾಪಿ ವರ್ಗದ ಜನರಿಗೆ ಕೃಷಿ ಭೂಮಿ, ಸಾಕು ಪ್ರಾಣಿಗಳೆಂದರೆ ಒಂದು ಬಾಂಧವ್ಯ. ಅದರಲ್ಲೂ ಹಸು, ಕರುಗಳೆಂದರೆ ಅಚ್ಚುಮೆಚ್ಚು, ಅವುಗಳನ್ನ ಮನೆ ಸದಸ್ಯರಂತೆ ಕಾಣುತ್ತಾ, ಅವುಗಳಿಗೆ ಹೆಸರಿಡಿದು ಕರೆಯುವುದು ಸರ್ವೇ ಸಾಮಾನ್ಯ. ಇದೇ ರೀತಿ ಶಿವರಾತ್ರಿ ದಿನದಂದು ಜನಿಸಿದ ಕರುವಿಗೆ ಹೆಸರಿಟ್ಟು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ಕುಟುಂಬ ವರ್ಗದ ಜೊತೆಗೆ ಊರಿನವರು ಸಂಭ್ರಮಿಸಿದ್ದಾರೆ.

ಕುಂಬಾರಹಳ್ಳಿಯ ಸದಾನಂದ ಹೆಗ್ಡೆಯವರು ತಮ್ಮ ಗೋಶಾಲೆಗೆ ಗುಜರಾತ್​ನಿಂದ ಗಿರ್ ತಳಿಯ ಕೃಷ್ಣ ,ರುಕ್ಮಿಣಿ ಎಂಬ ಜೋಡಿ ಹಸುಗಳನ್ನು ತಂದಿದ್ದರು. ಅವುಗಳಿಗೆ ಶಿವರಾತ್ರಿ ದಿನದಂದು ಹುಟ್ಟಿದ ಮೂರನೇ ಕರುವಿಗೆ ಇದೀಗ ನಾಮಕರಣ ನೇರವೇರಿದೆ.

ತಾಯಿ ಮಡಿಲಲ್ಲಿ ಹಾಲು ಕುಡಿಯುತ್ತಾ, ಹಣ್ಣು ತಿನ್ನುತ್ತಾ ಸಂಭ್ರಮಿಸುತ್ತಿದ್ದ ಕರುವಿಗೆ ಲಗು ಬಗೆಯಿಂದ ಮುತ್ತೈದೆಯರು ತಿಲಕ ಇಟ್ಟು ಸಿಂಗರಿಸಿದ್ದರು. ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರತಿ ಬೆಳಗಿ, ಕರುವಿನ ಕಿವಿಯಲ್ಲಿ ‘ಸುರಭಿ..ಸುರಭಿ’ ಎಂದು ನಾಮೋಚ್ಚರಣೆ ಮಾಡಿ ಸಂಭ್ರಮಿಸಿದರು.

calf naming

ಶಿವರಾತ್ರಿ ದಿನದಂದು ಜನಿಸಿದ ಕರುವಿಗೆ ಹೆಸರಿಡುತ್ತಿರುವ ದೃಶ್ಯ

ಒಟ್ಟಾರೆ ಮೂಕ ಪ್ರಾಣಿಯೊಂದಕ್ಕೆ ತಮ್ಮ ಮಕ್ಕಳಂತೆ ನಾಮಕರಣ ಮಾಡಿದ ಪಶುಪಾಲಕರು ಊರಿನ ಜನರದೊಂದಿಗೆ ಸಂಭ್ರಮಿಸಿದರು, ಅಲ್ಲದೆ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಮುದ್ದಾದ ಕರುವಿಗೆ ಹಾರೈಸುವುದರೊಂದಿಗೆ ಗೋವಿನ ಆಶಿರ್ವಾದ ಪಡೆದು ಹರ್ಷಿತರಾದರು.

(ವರದಿ: ಮೂರ್ತಿ. ಬಿ)

ಇದನ್ನೂ ಓದಿ: ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು

ಲೈಟ್​ಮನ್​ಗಳಿಗೆ 1 ಕೋಟಿ ಹೆಚ್ಚು ಕೊಟ್ರೂ ಸರಿ.. ಹಸುವಿನ ಕತೆ ಹೇಳಿ ನಿರ್ಮಾಪಕರಿಗೆ ಕಂಡೀಷನ್ ಹಾಕಿದ ಡಿ ಬಾಸ್ ದರ್ಶನ್!

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಇದು ಯಾವ ಸೀಮೆಯ ಬೌಲಿಂಗ್: ಪಾಕ್ ಸ್ಪಿನ್ನರ್ ಶೈಲಿಗೆ ಗ್ರೀನ್​ ಆಕ್ರೋಶ
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು
ಬಲೂಚ್ ಬಂಡುಕೋರರು ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವು