AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿ ಬಜಾರ್​​ನಲ್ಲಿ ಕೋ ಅಪರೇಟಿವ್ ಬ್ಯಾಂಕಿನಿಂದ ಗ್ರಾಹಕರಿಗೆ 18 ಕೋಟಿ ರೂ ವಂಚನೆ ಆರೋಪ; ಬ್ಯಾಂಕ್ ನೀಡಿದ ಭರವಸೆಯೇನು?

Sri Shaila Coop Bank in Gandhi Bazaar: ಬಸವನಗುಡಿಯ ಗಾಂಧಿ ಬಜಾರ್​​ನಲ್ಲಿರುವ ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. 200 ಕ್ಕೂ ಅಧಿಕ ಗ್ರಾಹಕರಿಗೆ ವಂಚಿಸಿರುವ ಆರೋಪ ಹೊರಬಿದ್ದಿದೆ. ಅಂದಾಜು 18 ಕೋಟಿ ರೂಪಾಯಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ

ಗಾಂಧಿ ಬಜಾರ್​​ನಲ್ಲಿ ಕೋ ಅಪರೇಟಿವ್ ಬ್ಯಾಂಕಿನಿಂದ ಗ್ರಾಹಕರಿಗೆ 18 ಕೋಟಿ ರೂ ವಂಚನೆ ಆರೋಪ; ಬ್ಯಾಂಕ್ ನೀಡಿದ ಭರವಸೆಯೇನು?
ಗಾಂಧಿ ಬಜಾರ್​​ನಲ್ಲಿ ಕೋ ಅಪರೇಟಿವ್ ಬ್ಯಾಂಕಿನಿಂದ ಗ್ರಾಹಕರಿಗೆ 18 ಕೋಟಿ ರೂ ವಂಚನೆ ಆರೋಪ; ಬ್ಯಾಂಕ್ ನೀಡಿರುವ ಭರವಸೆಯೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 27, 2022 | 4:12 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೋ ಅಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಪಂಗನಾಮ ಹಾಕಿರುವ ಆರೋಪ ಕೇಳಿಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಹಕರು, ಚಂದಾದಾರರಿಗೆ ಸಾರಾಸಗಟಾಗಿ ಅನೇಕ ಬ್ಯಾಂಕು, ಸೊಸೈಟಿ, ಚಿಟ್ ಫಂಡ್ ಹೀಗೆ ಮೋಸದ ಜಾಲ ಬೀರುವ ಅನೇಕ ಹಣಕಾಸು ಸಂಸ್ಥೆಗಳು ಜನರನ್ನು ಯಾಮಾರಿಸುತ್ತಲೇ ಇದೆ. ವಿಶೇಷವೆಂದರೆ ಇತ್ತೀಚೆಗೆ ನಡೆದಿರುವ ಇಂತಹ ಹಣಕಾಸು ವಚನೆ ಪ್ರಕರಣಗಳು ಸರಿಸುಮಾರು ಎಲ್ಲ ನಡೆದಿರುವ ಹಳೆಯ ಬೆಂಗಳೂರಿನ ಭಾಗವಾದ ಬಸವನಗುಡಿ, ಅದರ ಪಕ್ಕದ ಹನುಮಂತನಗರ, ಸ್ವಲ್ಪ ಈ ಕಡೆ ಬಂದರೆ ಜಯನಗರ ಈ ಭಾಗಗಳಲ್ಲಿಯೇ ಈ ವಂಚನೆ ಪುರಾಣಗಳು ಬಿಚ್ಚಿಕೊಂಡಿವೆ. ಆದರೆ ಇದಕ್ಕೆಲ್ಲ ಕಾರಣಕರ್ತರಾಗುವುದು ಅದೇ ಗ್ರಾಹಕ ವರ್ಗ ಎಂದರೆ ತಪ್ಪೇನುಲ್ಲ. ಎಲ್ಲಿಯವರೆಗೆ ಮೋಸ ಹೋಗುವ ಜನ ನಾಮುಂದು ತಾಮುಂದು ಎಂದು ಮೋಸ ಹೋಗೋಕ್ಕೆ ಮುಗಿಬೀಳುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವ ನಯವಂಚಕರು ಸಾಲು ಸಾಲು ನಿಂತಿರುತ್ತಾರೆ. ಸೋ, ಎಚ್ಚರಿಕೆಯಂದ ಇರಬೇಕಿರುವುದು.. ಕಷ್ಟಪಟ್ಟು ಹಣ ದುಡಿದಿರುತ್ತಾರೋ ಅಂತಹವರು ತಮ್ಮ ಇಡಿಗಂಟನ್ನು ಸ್ವಯಂ ಜೋಪಾನಮಾಡುವುದು ಅವರವರಿಗೇ ಬಿಟ್ಟಿದ್ದು ಎಂದು ಹೇಳುತ್ತಾ ಇಂದು ಮತ್ತೊಂದು ವಂಚನೆ ಪುರಾಣ ಬೆಳಕಿಗೆ ಬಂದರುವ ಬಗ್ಗೆ ಹೇಳಬೇಕಿದೆ.

ಹೌದು ಮತ್ತದೇ ಬಸವನಗುಡಿಯ ಗಾಂಧಿ ಬಜಾರ್​​ನಲ್ಲಿರುವ ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ (Sri Shaila Coop Bank in Gandhi Bazaar ) ತನ್ನ ಗ್ರಾಹಕರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. 200 ಕ್ಕೂ ಅಧಿಕ ಗ್ರಾಹಕರಿಗೆ ವಂಚಿಸಿರುವ (cheat) ಆರೋಪ ಹೊರಬಿದ್ದಿದೆ. ಅಂದಾಜು 18 ಕೋಟಿ ರೂಪಾಯಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದೆ (allegation).

ಇದರಿಂದ ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ ಎದುರು ವಂಚನೆಗೊಳಗಾಗಿರುವ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಹಕರು ನೇರವಾಗಿ ಬ್ಯಾಂಕ್ ಒಳಗಡೆ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕಳೆದ ಎರಡು ವರ್ಷದಿಂದ ಠೇವಣಿ ಹಿಂದಿರುಗಿಸದೇ ಸದರಿ ಬ್ಯಾಂಕ್ ಸತಾಯಿಸುತ್ತಿದೆಯಂತೆ. ಇದರಿಂದ ಬೇಸತ್ತ ಗ್ರಾಹಕರು ಅನ್ಯ ಮಾರ್ಗ ಕಾಣದೆ ಪ್ರತಿಭಟನೆ ಮಾರ್ಗ ಹಿಡಿದಿದ್ದಾರೆ. ಸಮಾಧಾನಕರ ಸಂಗತಿಯೆಂದರೆ ಗ್ರಾಹಕರ ಒತ್ತಡಕ್ಕೆ ಮಣಿದು ಶ್ರೀಶೈಲ ಕೋ ಅಪರೇಟಿವ್ ಬ್ಯಾಂಕ್ ಹಣ ನೀಡುವ ಭರವಸೆ ನೀಡಿದೆಯಂತೆ. ಮುಂದಿನ ತಿಂಗಳು ಮೇ ಹತ್ತರೊಳಗಡೆ ಗ್ರಾಹಕರ ಠೇವಣಿ ವಾಪಸ್ ನೀಡುವ ಲಿಖಿತ ಭರವಸೆ ನೀಡಿದ್ದಾರೆ ಬ್ಯಾಂಕ್ ಸಿಇಎ ಪಲ್ಲವಿ ಅವರು. ಗ್ರಾಹಕರು ಸದ್ಯಕ್ಕೆ ಸಮಾಧಾನದ ನಿಟ್ಟುಸಿರುಬಿಟ್ಟಿದ್ದಾರೆ.

ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಹಕರಿಗೆ ವಂಚನೆ: ಜಾರಿ ನಿರ್ದೇಶನಾಲಯದಿಂದ 6.17 ಕೋಟಿ ರೂಪಾಯಿ ಜಪ್ತಿ

ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಗ್ರಾಹಕರಿಗೆ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು ಜಾರಿ ನಿರ್ದೇಶನಾಲಯದಿಂದ (ಇ.ಡಿ) 6.17 ಕೋಟಿ ರೂಪಾಯಿ ಜಪ್ತಿ ಮಾಡಲಾಗಿದೆ. ವಿವಿಧ ಕಂಪನಿಗಳ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಹೊಂದಿದ್ದ ಖಾತೆಗಳಿಂದ ಹಣ ಜಪ್ತಿ ಮಾಡಲಾಗಿದೆ. ಕಂಪನಿಗಳ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಇವರೆಲ್ಲ ಖಾತೆಗಳನ್ನು ಹೊಂದಿದ್ದರು. ಇವುಗಳಲ್ಲಿ ಬಹುತೇಕವು ಕೊವಿಡ್ ವೇಳೆ ತಲೆ ಎತ್ತಿದ್ದ ಮೈಕ್ರೋ ಫೈನಾನ್ಸ್ ಕಂಪನಿಗಳಾಗಿದ್ದವು.

ಚೀನಾ ಮೂಲದ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ ಈ ನಕಲಿ ಕಂಪನಿಗಳು ನಾನಾ ಹೆಸರುಗಳಲ್ಲಿ ಆ್ಯಪ್ ಮೂಲಕ ಹೂಡಿಕೆ ಮತ್ತು ಲೋನ್ ವ್ಯವಹಾರ ನಡೆಸಿದ್ದವು. ನ್ಯಾಯಯುತವಲ್ಲದೆ, ಬೆದರಿಸಿ ಲೋನ್ ರಿಕವರಿ ಆರೋಪ ಈ ಕಂಪನಿಗಳ ವಿರುದ್ಧವಿತ್ತು. ಇವುಗಳ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮೀಪುರಂ, ಮಾರತ್‌ಹಳ್ಳಿ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ವಿದೇಶಿ ಹಣ ವರ್ಗಾವಣೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ಮತ್ತೊಂದು ದಿವ್ಯ ಕೊಡುಗೆ! ’6 ವರ್ಷ ಹಿಂದೆಯೇ ದಿವ್ಯಾ ಹಾಗರಗಿ ಮೂಲಕ 16 ಪಿಎಸ್​ಐಗಳು ಆಯ್ಕೆಯಾಗಿದ್ದಾರೆ ಮಹಾಸ್ವಾಮಿ!’

ಇದನ್ನೂ ಓದಿ: PSI Recruitment: ಪಿಎಸ್ಐ ನೇಮಕ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡ!

Published On - 1:34 pm, Wed, 27 April 22

Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ