AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ನಾಯಿಗಳಿಗೂ ತಟ್ಟಿದ ಮುಷ್ಕರದ ಬಿಸಿ; ಜನರ ಓಡಾಟ ಕಡಿಮೆಯಾಗಿ ಹಸಿವಿನಿಂದ ಕಂಗಾಲಾದ ನಾಯಿಗಳು

ಸಾಧಾರಣವಾಗಿ ಬಸ್​ ನಿಲ್ದಾಣದ ಅಂಗಡಿಗಳು ಹಾಗೂ ಪ್ರಯಾಣಿಕರು ನೀಡುವ ತಿಂಡಿಗಳನ್ನೇ ನೆಚ್ಚಿ ಬದುಕುವ ಬೀದಿ ನಾಯಿಗಳು ಬಸ್​ ನಿಲ್ದಾಣಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುತ್ತವೆ. ಆದರೆ, ಹೀಗೆ ಬಂದ್, ಮುಷ್ಕರಗಳು ಉಂಟಾದಾಗ ಪ್ರಯಾಣಿಕರು ಬಾರದೇ, ಅಂಗಡಿಗಳು ತೆರೆಯದೇ ಬೀದಿ ನಾಯಿಗಳಿಗೆ ಹೊಟ್ಟೆಗೆ ಏನೂ ಸಿಗದಾಗುತ್ತದೆ.

ಬೀದಿ ನಾಯಿಗಳಿಗೂ ತಟ್ಟಿದ ಮುಷ್ಕರದ ಬಿಸಿ; ಜನರ ಓಡಾಟ ಕಡಿಮೆಯಾಗಿ ಹಸಿವಿನಿಂದ ಕಂಗಾಲಾದ ನಾಯಿಗಳು
ಹಸಿವಿನಿಂದ ಪರದಾಡುತ್ತಿರುವ ಬೀದಿನಾಯಿ
Skanda
|

Updated on:Apr 08, 2021 | 9:25 AM

Share

ಗದಗ: ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಸಾರಿಗೆ ನೌಕರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಒಂದೆಡೆ ಬಸ್​ ಇಲ್ಲದೇ ಜನ ಸಾಮಾನ್ಯರು ಪರದಾಟ ನಡೆಸುತ್ತಿರುವ ದೃಶ್ಯಾವಳಿಗಳು ಸಾಮಾನ್ಯವಾಗಿದ್ದರೆ ಇನ್ನೊಂದೆಡೆ ಬಸ್​ ನಿಲ್ದಾಣವನ್ನೇ ನಂಬಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬೀದಿನಾಯಿಗಳು ಪ್ರಯಾಣಿಕರಿಲ್ಲದ ಕಾರಣ ಹಸಿವಿನಿಂದ ಕಂಗಾಲಾಗಿವೆ. ಗದಗದಲ್ಲಿ ಬೀದಿ ನಾಯಿಗಳು ಹಸಿವಿನಿಂದ ಒದ್ದಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವೆಂಬಂತೆ ಕಂಡುಬರುತ್ತಿದೆ.

ಸಾಧಾರಣವಾಗಿ ಬಸ್​ ನಿಲ್ದಾಣದ ಅಂಗಡಿಗಳು ಹಾಗೂ ಪ್ರಯಾಣಿಕರು ನೀಡುವ ತಿಂಡಿಗಳನ್ನೇ ನೆಚ್ಚಿ ಬದುಕುವ ಬೀದಿ ನಾಯಿಗಳು ಬಸ್​ ನಿಲ್ದಾಣಗಳನ್ನೇ ಆವಾಸ ಸ್ಥಾನಗಳನ್ನಾಗಿ ಮಾಡಿಕೊಂಡಿರುತ್ತವೆ. ದಿನಿತ್ಯವೂ ಸಾವಿರಾರು ಜನ ಪ್ರಯಾಣಿಸುವುದರಿಂದ ಒಬ್ಬರಲ್ಲಾ ಒಬ್ಬರು ಇವುಗಳ ಹಸಿವು ನೀಗಿಸುತ್ತಾರೆ. ಆದರೆ, ಹೀಗೆ ಬಂದ್, ಮುಷ್ಕರಗಳು ಉಂಟಾದಾಗ ಪ್ರಯಾಣಿಕರು ಬಾರದೇ, ಅಂಗಡಿಗಳು ತೆರೆಯದೇ ಬೀದಿ ನಾಯಿಗಳಿಗೆ ಹೊಟ್ಟೆಗೆ ಏನೂ ಸಿಗದಾಗುತ್ತದೆ. ಹೀಗಾಗಿ ಸದ್ಯ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಬಿಸಿ ಬೀದಿ ನಾಯಿಗಳಿಗೂ ತಟ್ಟಿದೆ ಎನ್ನುವಂತಾಗಿದೆ.

ನಾಯಿಗಳಿಗೆ ಆಹಾರ ತಿನ್ನಿಸಿ ಮಾನವೀಯತೆ ಮೆರೆದ ಸಾರಿಗೆ ಸಿಬ್ಬಂದಿ ಮುಷ್ಕರದ ನಡುವೆ ಬಸ್​ ನಿಲ್ದಾಣದ ಕಡೆ್ಗೆ ಬಂದಿದ್ದ ಕೆಲ ಸಾರಿಗೆ ಸಿಬ್ಬಂದಿ ಬೀದಿನಾಯಿಗಳ ಪರದಾಟ ನೋಡಲಾಗದೇ ಅವುಗಳಿಗೆ ಆಹಾರ ತಿನ್ನಿಸಿ ಮಾನವೀಯತೆ ಮೆರೆದಿದ್ದಾರೆ. ನಿನ್ನೆಯಿಂದಲೂ ಸರಿಯಾಗಿ ತಿನ್ನಲು ಸಿಗದೆ ಬಳಲಿದ್ದ ನಾಯಿಗಳಿಗೆ ಆರೈಕೆ ಮಾಡಿದ್ದಾರೆ.

ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲೂ ಹೀಗೆಯೇ ಆಗಿತ್ತು ಕಳೆದ ಬಾರಿ ಕೊರೊನಾ ನಿಯಂತ್ರಣಕ್ಕೆ ಲಾಕ್​ಡೌನ್​ ಹೇರಿದ್ದಾಗಲೂ ಜನ ಸಂಚಾರ ಕಡಿಮೆಯಾಗಿ ಬೀದಿ ನಾಯಿಗಳು, ಪಕ್ಷಿಗಳು, ಬಿಡಾಡಿ ದನಗಳು ಹಸಿವಿನಿಂದ ಕಂಗಾಲಾಗಿದ್ದವು. ಅಂಗಡಿ ಮುಂಗಟ್ಟು, ಬೇಕರಿ, ಹೊಟೇಲ್, ಮಾಂಸದಂಗಡಿಗಳನ್ನು ನಂಬಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಮೂಕ ಪ್ರಾಣಿಗಳು ಲಾಕ್​ಡೌನ್​ ಅವಧಿಯಲ್ಲಿ ಆಹಾರ ಸಿಗದೇ ಒದ್ದಾಡಿದ್ದವು.

ಈ ವೇಳೆ ಬೀದಿ ನಾಯಿಗಳ ಬಗ್ಗೆ ಅಧ್ಯಯನ ನಡೆಸಿದ್ದ ಕೆಲ ವೈದ್ಯಕೀಯ ತಜ್ಞರು ಲಾಕ್​ಡೌನ್​ ವೇಳೆ ಹಸಿವಿನಿಂದ ಕಂಗೆಟ್ಟು, ಮನುಷ್ಯರ ಒಡನಾಟದಿಂದ ದೂರವಾದ ಬೀದಿನಾಯಿಗಳ ಮನಸ್ಥಿತಿಯಲ್ಲಿ ಬದಲಾವಣೆ ಆಗಿರುವ ಸಾಧ್ಯತೆ ಇದೆ. ಅವುಗಳ ವರ್ತನೆ ಮೊದಲಿಗಿಂತಲೂ ವ್ಯಗ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಬೆಂಗಳೂರು: ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು 

Bus Strike: ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ತಿಂಗಳ ಅಂತರದಲ್ಲಿ ಎರಡು ಬಾರಿ ಸಾರಿಗೆ ನೌಕರರ ಮುಷ್ಕರ; ಇಂದು ಸಹ ಪ್ರಯಾಣಿಕರ ಪರದಾಟ

(Street dogs suffering from hunger as there is no Passengers in KSRTC BMTC stand due to strike)

Published On - 8:43 am, Thu, 8 April 21

ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?