AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ದೇವಾಲಯದ ಅರ್ಚಕರಿಗೆ, ಸಿಬ್ಬಂದಿಗಳಿಗೆ ಸುಹರ್ತ್ ಫೌಂಡೇಶನ್​ನಿಂದ ಉಚಿತ ಪಡಿತರ ಕಿಟ್ ವಿತರಣೆ

Free Rations for Priests: ಸಚಿನ್ ತಂತ್ರಿ ಎಂಬವರು ಇತ್ತೀಚೆಗೆ ಆರಂಭಿಸಿದ ಸುಹರ್ತ್ ಫೌಂಡೇಶನ್​ವತಿಯಿಂದ 100 ಅರ್ಚಕರಿಗೆ ಮತ್ತು ದೇವಾಲಯದ ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಿಸಲಾಗಿದೆ.

ಬೆಂಗಳೂರಿನ ದೇವಾಲಯದ ಅರ್ಚಕರಿಗೆ, ಸಿಬ್ಬಂದಿಗಳಿಗೆ ಸುಹರ್ತ್ ಫೌಂಡೇಶನ್​ನಿಂದ ಉಚಿತ ಪಡಿತರ ಕಿಟ್ ವಿತರಣೆ
ರೇಷನ್ ಕಿಟ್ ವಿತರಣೆ (ಕೃಪೆ: ಸಚಿನ್ ತಂತ್ರಿ ಅವರ ಟ್ವಿಟರ್ ಖಾತೆ)
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jun 10, 2021 | 6:22 PM

Share

ಬೆಂಗಳೂರು: ಬೆಂಗಳೂರು ಮೂಲದ ಸಾರ್ವಜನಿಕ ನೀತಿ ರೂಪಿಸುವ ವೃತ್ತಿಯ ಸಚಿನ್ ತಂತ್ರಿ ಎಂಬವರು ಇತ್ತೀಚೆಗೆ ಆರಂಭಿಸಿದ ಸುಹರ್ತ್ ಫೌಂಡೇಶನ್​ ವತಿಯಿಂದ 100 ಅರ್ಚಕರಿಗೆ ಮತ್ತು ದೇವಾಲಯದ ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಿಸಲಾಗಿದೆ. ಲಾಕ್‌ಡೌನ್ ಅರ್ಚಕ ವೃತ್ತಿಗೆ ಯಾವ ರೀತಿ ಹೊಡೆತ ನೀಡಿದೆ ಎಂಬುದನ್ನು ಮನಗಂಡ ತಂತ್ರಿ ಮೂರು ದಿನಗಳಲ್ಲಿ 1.3 ಲಕ್ಷ ರೂ ದೇಣಿಗೆ ಸಂಗ್ರಹಿಸಿದ್ದಾರೆ. ಇದರಲ್ಲಿ ಹೆಚ್ಚಿನ ದೇಣಿಗೆಗಳು ಸ್ನೇಹಿತರು ಮತ್ತು ಕುಟುಂಬದಿಂದ ಬಂದವು.

ದೈನಂದಿನ ಕೂಲಿ ಕಾರ್ಮಿಕರು, ಆಟೋ ಚಾಲಕರು ಮತ್ತು ಇತರರಿಗೆ ಜೀವನೋಪಾಯಕ್ಕೆ ಸಹಾಯ ಮಾಡುವ ಅನೇಕ ಜನರಿದ್ದಾರೆ. ಆದರ ಅರ್ಚಕರು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇತರರನ್ನು ನಿರ್ಲಕ್ಷಿಸಲಾಗಿದೆ ಎಂದು ತಂತ್ರಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹಣವನ್ನು ಸಂಗ್ರಹಿಸಿದ ನಂತರ, ತಂತ್ರ ಅವರು ಸುಹರ್ತ್ ಫೌಂಡೇಶನ್ ಎಂಬ ಟ್ರಸ್ಟ್ ಆರಂಭಿಸಿದರು. ಸುಹರ್ತ್ ಎಂದರೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಇತರರಿಗೆ ಸಹಾಯ ಮಾಡುವುದು. ಬೆಂಗಳೂರಿನ ಗಿರಿನಗರದಲ್ಲಿ ಎರಡು ಪ್ರತ್ಯೇಕ ಡ್ರೈವ್‌ಗಳಲ್ಲಿ 100 ಜನರಿಗೆ ಪಡಿತರ ಕಿಟ್ ನೀಡಲಾಗಿದೆ. ಧಾರ್ಮಿಕ ಸಂದರ್ಭಗಳಲ್ಲಿ ಅರ್ಚಕರು ಉಪವಾಸ ಮಾಡುತ್ತಿರುವುದರಿಂದ ನಾವು ಮಂಡಕ್ಕಿ ಕೂಡಾ ನೀಡಿದ್ದೇವೆ. ಏಕಾದಶಿಯಂದು ಅವರು ಅಕ್ಕಿ ಸೇವಿಸುವುದಿಲ್ಲ” ಎಂದು ತಂತ್ರಿ ಹೇಳಿದರು.

ಸುಹರ್ತ್ ಫೌಂಡೇಶನ್ ಗುರುವಾರ ತಮ್ಮ ಮುಂದಿನ ಡ್ರೈವ್ ಅನ್ನು ಕೈಗೊಳ್ಳಲಿದ್ದು, ಬೆಂಗಳೂರಿನಲ್ಲಿ ಅರ್ಚಕರಿಗೆ ವ್ಯಾಕ್ಸಿನೇಷನ್ ಡ್ರೈವ್ ಸಹ ಯೋಜಿಸುತ್ತಿದೆ.

B.Pac ಸಿವಿಕ್ ನಾಯಕರೂ ಆಗಿರುವ ತಂತ್ರಿ , “ಈ ಜನರಲ್ಲಿ ಅನೇಕರು ಲಾಕ್ ಡೌನ್ ಇಲ್ಲದೆ ತಿಂಗಳಿಗೆ 3,000 ರೂ.ಗಳಿಸುವುದು ಕಷ್ಟ. ದೇವಾಲಯಗಳನ್ನು ಅಡುಗೆ ಮಾಡುವ, ಬಡಿಸುವ ಅಥವಾ ಸ್ವಚ್ಛ ಗೊಳಿಸುವಂತಹ ಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡಲಾಗುವುದಿಲ್ಲ. ಅವರಿಗೆ ಸಹಾಯ ಬೇಕು ಎಂದಿದ್ದಾರೆ.

ಗಿರಿನಗರದ ಶ್ರೀ ವಾದಿರಾಜ ವಿಜಯ ಧಾರ್ಮಿಕ ಮಂದಿರದ ಅರ್ಚಕ ಜಿ. ಮೋಹನ ಉಪಾಧ್ಯಾಯ, ಎರಡನೇ ಲಾಕ್‌ಡೌನ್ ಹೆಚ್ಚಿನ ಪುರೋಹಿತರಿಗೆ ತೀವ್ರಹ ಹೊಡೆತ ನೀಡಿದೆ ಎಂದಿದ್ದಾರೆ. ಮದುವೆ, ನಾಮಕರಣ, ಗೃಹ ಪ್ರವೇಶ ನಡೆಯುವ ಸಮಯ ಇದು . “ಈ ತಿಂಗಳುಗಳಲ್ಲಿ ನಾವು ಗಳಿಸುವ ಮೊತ್ತದಿದಂದ ಉಳಿದ ಎಂಟು ತಿಂಗಳುಗಳವರೆಗೆ ಜೀವನ ಸಾಗಿಸುತ್ತೇವೆ.

ಉಪಾಧ್ಯಾಯ ಅವರ ಅಣ್ಣ ಕೂಡ ಅರ್ಚಕರಾಗಿದ್ದಾರೆ. “ನಾವು ಆರು ಜನರಿರುವ ಕುಟುಂಬ ಮತ್ತು ನಾವಿಬ್ಬರೂ ಪುರೋಹಿತರಾಗಿರುವುದರಿಂದ, ನಾವು ಈಗ ಉತ್ತಮ ಸ್ಥಿತಿಯಲ್ಲಿಲ. ಸುಹರ್ತ್ ಫೌಂಡೇಶನ್‌ನ ಉಪಕ್ರಮವು ಸಮಯೋಚಿತ, ನಮಗೆ ಮತ್ತು ನಮ್ಮ ಸಮುದಾಯಕ್ಕೆ ಉತ್ತಮ ಸಹಾಯವಾಗಿದೆ ಎಂದು ಅವರು ಹೇಳಿದ್ದಾರೆ .

ಇದನ್ನೂ ಓದಿ: ನಟ ಚೇತನ್ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ನೋವು ತಂದಿದೆ, ಅವರು ಕ್ಷಮೆ ಕೇಳಬೇಕು; ಪೊಲೀಸ್ ಆಯುಕ್ತರಿಗೆ ದೂರು

(Suhrt Foundation provided Free ration kits to about 100 priests and temple employees in Bengaluru)

Published On - 6:20 pm, Thu, 10 June 21

Follow Us
TV9 Web
TV9 Web

TV9 Kannada

Read More
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಮೋದಿ ಅಧಿಕಾರ ಸಾಕು ಅಂದಿದ್ರು; ಅಚ್ಚರಿಯ ಸಂಗತಿ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
ಕಾಕ್ರೋಜ್‌ ಪಾರ್ಟಿ ಸಂಸ್ಥಾಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
RSS ವಿವರಣೆ ಕೇಳಿದ ಪ್ರಿಯಾಂಕ್ ಖರ್ಗೆಗೆ ತೇಜಸ್ವಿ ಸೂರ್ಯ ಖಡಕ್ ಉತ್ತರ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ಜಮೀರ್‌ಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು: ಪಾದರಾಯನಪುರದಲ್ಲಿ ಹೈಡ್ರಾಮಾ
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ತಾಯಿಯಿಂದ ಬೇರ್ಪಟ್ಟು ಗ್ರಾಮಕ್ಕೆ ಬಂದ ಮರಿಯಾನೆ: ಆಹಾರ ನೀಡಿದ ಗ್ರಾಮಸ್ಥರು!
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ಶಾಸಕ ಇಕ್ಬಾಲ್ ಹುಸೇನ್
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಅಮೆರಿಕ-ಇರಾನ್ ಶಾಂತಿ ಒಪ್ಪಂದ, ಪ್ರಮುಖ ಷರತ್ತುಗಳೇನು?
ಸೋಮವಾರ ಅಮಾವಾಸ್ಯೆ: ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ
ಸೋಮವಾರ ಅಮಾವಾಸ್ಯೆ: ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಹೆಚ್​​ಡಿಕೆ
ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಹೆಚ್​​ಡಿಕೆ