AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಅ.2ರಂದು ರೂಕ್ ಆ್ಯಪ್ ಬಿಡುಗಡೆ ಮಾಡಲಿರುವ ಪೀಸ್ ಆಟೋ ಯೂನಿಯನ್

Bangalore News: ಓಲಾ, ಉಬರ್ ಮತ್ತು ರಾಪಿಡೋದಂತಹ ಅಗ್ರಿಗೇಟರ್‌ಗಳು ಪ್ರಸ್ತುತ ಪ್ರಾಬಲ್ಯ ಹೊಂದಿರುವ ಅಪ್ಲಿಕೇಶನ್ ಆಧಾರಿತ ಆಟೋ ವಿಭಾಗಕ್ಕೆ ನಗರ ಮೂಲದ ಆಟೋರಿಕ್ಷಾ ಯೂನಿಯನ್ ಪ್ರವೇಶಿಸಲು ಸಿದ್ಧವಾಗಿದೆ.

ಬೆಂಗಳೂರು: ಅ.2ರಂದು ರೂಕ್ ಆ್ಯಪ್ ಬಿಡುಗಡೆ ಮಾಡಲಿರುವ ಪೀಸ್ ಆಟೋ ಯೂನಿಯನ್
ಅ.2ರಂದು ರೂಕ್ ಆ್ಯಪ್ ಬಿಡುಗಡೆ ಮಾಡಲಿರುವ ಪೀಸ್ ಆಟೋ ಯೂನಿಯನ್Image Credit source: deccanherald
TV9 Web
| Edited By: |

Updated on:Sep 17, 2022 | 12:17 PM

Share

ಬೆಂಗಳೂರು: ಓಲಾ, ಉಬರ್ ಮತ್ತು ರಾಪಿಡೋದಂತಹ ಅಗ್ರಿಗೇಟರ್‌ಗಳು ಪ್ರಸ್ತುತ ಪ್ರಾಬಲ್ಯ ಹೊಂದಿರುವ ಅಪ್ಲಿಕೇಶನ್ ಆಧಾರಿತ ಆಟೋ ವಿಭಾಗಕ್ಕೆ ನಗರ ಮೂಲದ ಆಟೋರಿಕ್ಷಾ ಯೂನಿಯನ್ ಪ್ರವೇಶಿಸಲು ಸಿದ್ಧವಾಗಿದೆ. ನಗರದಲ್ಲಿ ಸುಮಾರು 10,000 ಸದಸ್ಯ ಚಾಲಕರನ್ನು ಹೊಂದಿರುವ ಪೀಸ್ ಆಟೋ ಯೂನಿಯನ್, ಬೆಂಗಳೂರು ಮೂಲದ ಮೊಬಿಲಿಟಿ ಸ್ಟಾರ್ಟ್‌ಅಪ್ ಜೊತೆಗೆ ರೂಕ್ ಹೆಸರಿನ ಅಪ್ಲಿಕೇಶನ್‌ನೊಂದಿಗೆ ಬರಲು ಯೋಜಿಸಿದೆ. ಬೆಳ್ಳಂದೂರು ಪ್ರದೇಶದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಹೊರ ವರ್ತುಲ ರಸ್ತೆಯ ಬೆಳ್ಳಂದೂರಿನಿಂದ ಸೇವೆ ಆರಂಭಿಸುತ್ತಿದ್ದು, ನಾಗವಾರ, ಎಲೆಕ್ಟ್ರಾನಿಕ್ಸ್ ಸಿಟಿ, ವೈಟ್‌ಫೀಲ್ಡ್‌, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌ಗೆ ವಿಸ್ತರಿಸಲಾಗುವುದು ಎಂದು ಪೀಸ್‌ ಆಟೋದ ರಘುನಾರಾಯಣಗೌಡ ಹೇಳಿದರು. ಅಕ್ಟೋಬರ್ 2 ರಂದು ನಗರದಾದ್ಯಂತ ಸೇವೆಗಳನ್ನು ಸುಗಮಗೊಳಿಸಲು ಅಪ್ಲಿಕೇಶನ್‌ನ ಪೂರ್ಣ ಪ್ರಮಾಣದ ಬಿಡುಗಡೆ ನಡೆಯಲಿದೆ. 2013ರ ಅಕ್ಟೋಬರ್ 2 ರಂದು ಪೀಸ್ ಆಟೋವನ್ನು ಸಂಘಟನೆಯನ್ನು ಆರಂಭಿಸಿದ ಹಿನ್ನೆಲೆ ಅದೇ ದಿನದಂದು ‘ರೂಕ್’ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಿದ್ದೇವೆ ಎಂದರು.

“ನಾವು ಮೊದಲ ಹಂತದಲ್ಲಿ ಈ ಪ್ಲಾಟ್‌ಫಾರ್ಮ್‌ಗೆ ನಮ್ಮ ಸದಸ್ಯರನ್ನು ಮಾತ್ರ ನೋಂದಾಯಿಸುತ್ತಿದ್ದೇವೆ. ನಮ್ಮ ಒಕ್ಕೂಟವು ಸವಾರಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಯಾವುದೇ ರದ್ದತಿಗಳಿಲ್ಲ ಎಂದು ಖಚಿತಪಡಿಸುತ್ತದೆ. ಈಗಾಗಲೇ 2,000 ಚಾಲಕರು ಪ್ಲಾಟ್‌ಫಾರ್ಮ್‌ಗೆ ಸೇರಿದ್ದಾರೆ” ಎಂದು ತಿಳಿಸಿದ್ದಾರೆ.

ರೂಕ್ ಅಪ್ಲಿಕೇಶನ್ ಅಥವಾ ಕಾಲ್ ಸೆಂಟರ್ ಮೂಲಕ ಗ್ರಾಹಕರು ಆಟೋ ಬುಕ್ ಮಾಡಲು ಸಾಧ್ಯವಾಗುತ್ತದೆ. ಅವರು ನಗದು ರಹಿತ ಕ್ರಮದಲ್ಲಿ ಶುಲ್ಕ ಪಾವತಿಸಬಹುದಾಗಿದೆ. ಕಾಲ್ ಸೆಂಟರ್‌ನಲ್ಲಿ ಚಾಲಕರ ಕುಟುಂಬದ ಸದಸ್ಯರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ರಘುನಾರಾಯಣಗೌಡ ಹೇಳಿದರು.

“ಚಾಲಕರು ದಿನಕ್ಕೆ 15 ಟ್ರಿಪ್‌ಗಳನ್ನು ಪೂರ್ಣಗೊಳಿಸಿದರೆ ಅಗ್ರಿಗೇಟರ್‌ಗಳು 500 ರೂ. ಪ್ರೋತ್ಸಾಹಕವನ್ನು ನೀಡುತ್ತಿದ್ದಾರೆ. ದೂರದ ಪ್ರಯಾಣವನ್ನು ಪಡೆದರೆ ಹೆಚ್ಚಿನವರು 12 ಕ್ಕಿಂತ ಹೆಚ್ಚು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚಾಲಕರು ಈ ಪ್ರೋತ್ಸಾಹಕವನ್ನು ಪಡೆಯುವ ನಿಟ್ಟಿನಲ್ಲಿ ದೂರದ ಪ್ರಯಾಣವನ್ನು ನಿರಾಕರಿಸುತ್ತಾರೆ” ಎಂದರು.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Sat, 17 September 22

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್