Sign In

By signing in or creating an account, you agree with Associated Broadcasting Company's Terms & Conditions and Privacy Policy.

KSRTC BMTC Strike: ಸರ್ಕಾರ ನಮ್ಮ ಗೋಳು ಏಕೆ ಕೇಳಿಸಿಕೊಳ್ಳುತ್ತಿಲ್ಲ? ಡಿಪೋದಲ್ಲಿ ಸಾರಿಗೆ ನೌಕರನ ಕಣ್ಣೀರು

KSRTC BMTC Bus Strike: ಸರ್ಕಾರ ನಮ್ಮ ಗೋಳು ಏಕೆ ಕೇಳಿಸಿಕೊಳ್ಳುತ್ತಿಲ್ಲ? ಮಂಗಳೂರು ಡಿಪೋದಲ್ಲಿ ಕಂಡ್ಟರ್ ಶಿವಣ್ಣ ಕಣ್ಣೀರು.

KSRTC BMTC Strike: ಸರ್ಕಾರ ನಮ್ಮ ಗೋಳು ಏಕೆ ಕೇಳಿಸಿಕೊಳ್ಳುತ್ತಿಲ್ಲ? ಡಿಪೋದಲ್ಲಿ ಸಾರಿಗೆ ನೌಕರನ ಕಣ್ಣೀರು
ಕಂಡಕ್ಟರ್​ ಶಿವಣ್ಣ
Follow us
shruti hegde
|

Updated on:Apr 08, 2021 | 11:14 AM

ಯಾದಗಿರಿ: ಸರ್ಕಾರವು ತಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಇಂದು ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅದೆಷ್ಟೋ ಸಾರಿಗೆ ನೌಕರರು ಕಡಿಮೆ ಸಂಬಳವಿದೆ, ಅದರಲ್ಲಿ ನಮ್ಮ ಜೀವನವನ್ನು ನಡೆಸುವುದು ಹೇಗೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನಷ್ಟು ಮಂದಿ ನೌಕರರು ಡಿಪೋ ಬಳಿ ತಮ್ಮ ನೋವನ್ನು ಹಂಚಿಕೊಂಡು ಕಣ್ಣೀರಿಡುತ್ತಿದ್ದಾರೆ.

ನಿನ್ನೆಯಿಂದ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಅದೆಷ್ಟೋ ಕಡೆಗಳಲ್ಲಿ ಇಲ್ಲಿಯವರೆಗೂ ಸಾರಿಗೆ ಬಸ್​ಗಳು ರಸ್ತೆಗಿಳಿದಿಲ್ಲ. ಬಸ್ ಓಡಿಸುವಂತೆ ಚಾಲಕ ಮತ್ತು ನಿರ್ವಾಹಕನಿಗೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಯಾದಗಿರಿ ಬಸ್ ಡಿಪೋದಲ್ಲಿ ನಿರ್ವಾಹ ಶಿವಣ್ಣನ ಬಳಿ ಅಧಿಕಾರಿಗಳು ಬಸ್​ ಓಡಿಸುವಂತೆ ಮನವೊಲಿಸುತ್ತಿರುವಾಗ, ಮೊನ್ನೆ 6 ನೇ ತಾರೀಕಿನಂದು ಯಾದಗಿರಿಯಿಂದ ಬೆಂಗಳೂರು ಬಸ್​ನ ಡ್ಯೂಟಿಗೆ ಹೋಗಿದ್ದೆ. ನಿನ್ನೆ ಸಂಜೆ ಬೆಂಗಳೂರಿನಿಂದ ಬಸ್ ವಾಪಸ್ ಬಂದಿದ್ದು ಇಂದು ಬೆಳಿಗ್ಗೆ ಯಾದಗಿರಿಗೆ ಬಂದು ತಲುಪಿದೆ. ಬಸ್ ಇಂದ ಕೆಳಗೆ ಇಳಿದು ಹಣ ಕೊಡಲು ಹೋಗಿದ್ದೆ. ಹಣ ಕೊಡಲು ಹೋಗಿದ್ದ ನನಗೆ ಡ್ಯೂಟಿ ಮಾಡಲು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ನಮ್ಮ ಎಲ್ಲಾ ನೌಕರರು ಮುಷ್ಕರ ಮಾಡುತ್ತಿದ್ದಾರೆ, ನಾನೊಬ್ಬ ಒಬ್ಬ ಹೇಗೆ ಡ್ಯೂಟಿ ಮಾಡಬೇಕು? ಸರ್ಕಾರ ನಮ್ಮ ಗೋಳು ಯಾಕೆ ಕೇಳಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ನಾನು 20 ವರ್ಷ ಸೇವೆ ಸಲ್ಲಿಸಿದ್ದೇನೆ ಆದರೆ ನನಗೆ 16 ಸಾವಿರ ಸಂಬಳ ಇದೆ. ಇದರಲ್ಲಿ ಹೇಗೆ ಕುಟುಂಬ ನಿರ್ವಹಣೆ ಮಾಡಬೇಕು? ಎಂದು ಡಿಪೋದಲ್ಲಿ ಕಂಡ್ಟರ್ ಶಿವಣ್ಣ ಕಣ್ಣೀರು ಹಾಕಿದ್ದಾರೆ.

ಕೆಎಸ್​ಆರ್​ಟಿ ಬಸ್​ ನೌಕರರಿಗೆ ಬಲವಂತವಾಗಿ ಕೆಲಸ ಮಾಡಲು ಹೇಳುತ್ತಿದ್ದಾರೆ. ಒಟ್ಟು 44 ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಬೆದರಿಕೆ ಒಡ್ಡಿದ್ದಾರೆ. ನಿನ್ನೆ ಬಸ್​ ನಿಲ್ಲಿಸಿ ಹಣ ಡೆಪಾಸಿಟ್​ ಮಾಡಲು ಬಂದಾಗ ನೋಟಿಸ್​ ನೀಡಿದ್ದಾರೆ. 22 ಬಸ್​ನ 44 ಸಿಬ್ಬಂದಿಗೆ ನೋಟಿಸ್​​ ನೀಡಲಾಗಿದೆ ಎಂದು ಟಿವಿ9ಗ ಬಳಿ ಕಂಡಕ್ಟರ್ ಮಾರುತಿ ತಮ್ಮ ನೋವು ಹಂಚಿಕೊಂಡಿದ್ದಾರೆ.

ದಾವಣಗೆರೆ: ತರಬೇತಿ ನೌಕರರಿಗೆ ಅಧಿಕಾರಿಗಳಿಂದ ಎಚ್ಚರಿಕೆ ಪತ್ರ ಜಿಲ್ಲೆಯ ತರಬೇತಿ ಸಾರಿಗೆ ನೌಕರರಿಗೆ ಅಧಿಕಾರಿಗಳು ಎಚ್ಚರಿಗೆ ಪತ್ರ ನೀಡಿದ್ದಾರೆ. ಮುಷ್ಕರಕ್ಕೆ ಇಳಿದರೆ ಕ್ರಮ ಕೈಗೊಳ್ಳಲಾಗುವುದು. ತರಬೇತಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಸೂಚನೆ ತಪ್ಪಿದರೆ ಆಯ್ಕೆ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಕೆಎಸ್​ಆರ್​ಟಿಸಿ ಡಿಸಿ ಅವರು ಎಚ್ಚರಿಕೆ ಪತ್ರ ನೀಡಿದ್ದಾರೆ. ಜಿಲ್ಲೆಯ 40 ತರಬೇತಿ ನೌಕರರಿಗೆ ನೊಟೀಸ್​ ನೀಡಲಾಗಿದೆ.

ಮಂಗಳೂರು: 44 ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಬೆದರಿಕೆ ಕೆಎಸ್​ಆರ್​ಟಿ ಬಸ್​ ನೌಕರರಿಗೆ ಬಲವಂತವಾಗಿ ಕೆಲಸ ಮಾಡಲು ಹೇಳುತ್ತಿದ್ದಾರೆ. ಒಟ್ಟು 44 ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಬೆದರಿಕೆ ಒಡ್ಡಿದ್ದಾರೆ. ನಿನ್ನೆ ಬಸ್​ ನಿಲ್ಲಿಸಿ ಹಣ ಡಿಪಾಸಿಟ್​ ಮಾಡಲು ಬಂದಾಗ ನೋಟಿಸ್​ ನೀಡಿದ್ದಾರೆ. 22 ಬಸ್​ನ 44 ಸಿಬ್ಬಂದಿಗೆ ನೋಟಿಸ್​ ನೀಡಲಾಗಿದೆ ಎಂದು ಟಿವಿಗೆ ಬಳಿ ಕಂಡಕ್ಟರ್ ಮಾರುತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್​ ಸಂಚಾರ

Bus Strike: ಇತಿಹಾಸದಲ್ಲೇ ಮೊದಲ ಬಾರಿಗೆ ನಾಲ್ಕು ತಿಂಗಳ ಅಂತರದಲ್ಲಿ ಎರಡು ಬಾರಿ ಸಾರಿಗೆ ನೌಕರರ ಮುಷ್ಕರ; ಇಂದು ಸಹ ಪ್ರಯಾಣಿಕರ ಪರದಾಟ

Published On - 11:11 am, Thu, 8 April 21

‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ