AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಇಮ್ಮಡಿ ಪುಲಿಕೇಶಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಭಾಗ್ಯ

ಬಹು ವರ್ಷಗಳ ಬೇಡಿಕೆ ಮೇರೆಗೆ ಹೃದಯ ಯೋಜನೆಯ ಅಡಿಯ ಒಂದು ಕಾರ್ಯದಲ್ಲಿ ಇಮ್ಮಡಿ‌ ಪುಲಿಕೇಶಿ ಪ್ರತಿಮೆ ನಿರ್ಮಾಣ ‌ಮಾಡಲಾಗಿದೆ. ಆದರೆ ಪ್ರತಿಷ್ಠಾಪನೆ ಭಾಗ್ಯ ದೊರೆತ್ತಿಲ್ಲ. ಇದು ಸ್ಥಳೀಯರಿಗೆ ಅಸಮಾಧಾನ ತಂದಿದೆ. ವಿವಿಧ ಕಾರಣ ನೀಡುತ್ತಲೇ ಪ್ರತಿಮೆಗಳು ಸಿಮೆಂಟ್ ಯಾರ್ಡ್​ನಲ್ಲೇ ಧೂಳು ಹಿಡಿಯುವಂತೆ ಮಾಡಲಾಗಿದೆ.

ಬಾಗಲಕೋಟೆಯಲ್ಲಿ ಇಮ್ಮಡಿ ಪುಲಿಕೇಶಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಭಾಗ್ಯ
ಬಾಗಲಕೋಟೆಯಲ್ಲಿ ಇಮ್ಮಡಿ ಪುಲಿಕೇಶಿ, ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗಿಲ್ಲ ಭಾಗ್ಯ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Nov 13, 2024 | 7:57 PM

Share

ಬಾಗಲಕೋಟೆ, ನವೆಂಬರ್​ 13: ಅದು ಚಾಲುಕ್ಯ ಅರಸರು ಆಳಿದ ಐತಿಹಾಸಿಕ‌ ನಾಡು. ದಕ್ಷಿಣ ಪಥೇಶ್ವರ ಎಂದು ಹೆಸರಾದ ಇಮ್ಮಡಿ ಪುಲಿಕೇಶಿ (Immadi Pulikeshi) ಅಳಿದ ಸಾಮ್ರಾಜ್ಯ‌‌ ಚಾಲುಕ್ಯರ ರಾಜಧಾನಿ. ಅಂತಹ ನಾಡಲ್ಲಿ ಇದುವರೆಗೂ ಒಂದೇ ಒಂದು ಇಮ್ಮಡಿ‌ ಪುಲಿಕೇಶಿ ಪ್ರತಿಮೆ ಅನಾವರಣ ಆಗಿಲ್ಲ. ಪ್ರತಿಮೆ ನಿರ್ಮಾಣವಾಗಿ ಐದು ವರ್ಷ ಕಳೆದರೂ ಪ್ರತಿಷ್ಠಾಪನೆ ಭಾಗ್ಯ ಸಿಕ್ಕಿಲ್ಲ. ಇನ್ನು ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆಗೂ ಗ್ರಹಣ ಹಿಡಿದಿದೆ. ಪ್ರತಿಮೆ ಯಾಕೆ‌ ಪ್ರತಿಷ್ಠಾಪನೆ ಆಗಿಲ್ಲ. ಯಾಕೆ ಇಷ್ಟೊಂದು ನಿರ್ಲಕ್ಷ್ಯ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಮ್ಮಡಿ ಪುಲಿಕೇಶಿ, ಬಸವೇಶ್ವರ ಪ್ರತಿಮೆಗಿಲ್ಲ ಪ್ರತಿಷ್ಠಾಪನೆ ಭಾಗ್ಯ 

ಬಹು ವರ್ಷಗಳ ಬೇಡಿಕೆ ಮೇರೆಗೆ ಹೃದಯ ಯೋಜನೆಯ ಅಡಿಯ ಒಂದು ಕಾರ್ಯದಲ್ಲಿ ಇಮ್ಮಡಿ‌ ಪುಲಿಕೇಶಿ ಪ್ರತಿಮೆ ನಿರ್ಮಾಣ ‌ಮಾಡಲಾಗಿದೆ. ಆದರೆ ಪ್ರತಿಷ್ಠಾಪನೆ ಭಾಗ್ಯ ದೊರೆತ್ತಿಲ್ಲ. ಇದು ಸ್ಥಳೀಯರಿಗೆ ಅಸಮಾಧಾನ ತಂದಿದೆ. ಇಮ್ಮಡಿ ಪುಲಿಕೇಶಿ ಪ್ರತಿಮೆಯನ್ನು ಪುಲಿಕೇಶಿ ಸರ್ಕಲ್​ನಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಬಸವೇಶ್ವರ ಪ್ರತಿಮೆಯನ್ನು ಬಸವೇಶ್ವರ ಸರ್ಕಲ್​ನಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂಬ ಬೇಡಿಕೆ ಇಂದಿಗೂ ಈಡೇರುತ್ತಿಲ್ಲ.

ಇದನ್ನೂ ಓದಿ: ಸರಳ ಮದುವೆ: ಉಳಿದ ಹಣದಿಂದ 26 ಶಾಲೆಗೆ ಶುದ್ಧ ನೀರಿನ ಯಂತ್ರ ನೀಡಿದ ನವಜೋಡಿ

ಸುಪ್ರೀಂ ಕೋರ್ಟ್ ಆದೇಶ, ಲೋಕೋಪಯೋಗಿ ಇಲಾಖೆ ಅಡಚಣೆ, ಪುರಸಭೆ ಜಾಗವಿಲ್ಲ ಅಂತ ವಿವಿಧ ಕಾರಣ ನೀಡುತ್ತಲೇ ಪ್ರತಿಮೆಗಳು ಸಿಮೆಂಟ್ ಯಾರ್ಡ್​ನಲ್ಲೇ ಧೂಳು ಹಿಡಿಯುವಂತೆ ಮಾಡಲಾಗಿದೆ. ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು, ಪುರಸಭೆ, ತಹಸೀಲ್ದಾರ, ಜಿಲ್ಲಾಧಿಕಾರಿಗಳು, ಎಲ್ಲ ಜನಪ್ರತಿನಿಧಿಗಳಿಗೂ ಪ್ರತಿಮೆ ಪ್ರತಿಷ್ಠಾಪನೆ ಬೇಗ ಮಾಡಿ ಅಂದರೂ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಕೆರಳಿದ ಜನರು ಆದಷ್ಟು ಬೇಗ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕು ಇಲ್ಲದಿದ್ದರೆ ‌ಮುಂದೆ ಉಗ್ರ ಹೋರಾಟ ಮಾಡುವಾಗಿ ಬಾದಾನಿ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರಾದ ಇಷ್ಟಲಿಂಗ ನರೇಗಲ್ ಹೇಳಿದ್ದಾರೆ.

ಬಾದಾಮಿ ಪಟ್ಟಣದ ಪುಲಿಕೇಶಿ ಸರ್ಕಲ್​ಗೆ ರಾಮದುರ್ಗ ಸರ್ಕಲ್ ಅಂತಲೂ ಕೂಡ ಕರೆಯುತ್ತಾರೆ. ಅದೇ ಜಾಗದಲ್ಲಿ ಇಮ್ಮಡಿ ಪುಲಿಕೇಶಿ ಪ್ರತಿಮೆ ಪ್ರತಿಷ್ಠಾಪನೆ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಆದರೆ ಇದಕ್ಕೆ ಕಾನೂನು ಅಡ್ಡಿ, ಲೋಕೋಪಯೋಗಿ ಇಲಾಖೆಯವರು ನಡುರಸ್ತೆಯಲ್ಲಿ ಅವಕಾಶ ಕೊಡುತ್ತಿಲ್ಲ. ಪುರಸಭೆಯವರು ಜಾಗ ನೀಡುತ್ತಿಲ್ಲ. ಇನ್ನು ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳನ್ನು ಕೇಳಿದರೆ, ಈ ಪ್ರೊಪೋಜಲ್ ನಮಗೆ ಬಂದಿದೆ. ಆದರೆ ಲೋಕೋಪಯೋಗಿ ಇಲಾಖೆ ಅವಕಾಶ ಕೊಡುತ್ತಿಲ್ಲ ಎಂದಿದ್ದಾರೆ.

ಇನ್ನು ಪುರಸಭೆ ಜಾಗ ಅಲ್ಲಿ ಸಮರ್ಪಕವಾಗಿಲ್ಲ. ನಮಗೆ ಸಂಸದರು ಶಾಸಕರು ಸೂಕ್ತ ಜಾಗ ಸರ್ವೆ ಮಾಡಲು ಹೇಳಿದ್ದಾರೆ. ಜಾಗ ಸರ್ವೆ ಕಾರ್ಯ ಆದಷ್ಟು ಬೇಗ ಮುಗಿಸಿ ವರದಿ ಕೊಡುತ್ತೇವೆ. ನಂತರ ಶಾಸಕರು, ಸಂಸದರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಬಾದಾಮಿ ಬಿ ಎ ಡಾಂಗೆ ಹೇಳಿದ್ದಾರೆ.

ಸಂಸದ ಪಿಸಿ ಗದ್ದಿಗೌಡರ ಹೇಳಿದ್ದಿಷ್ಟು

ಸಂಸದ ಪಿಸಿ ಗದ್ದಿಗೌಡರ ಮಾತನಾಡಿ, ನಾವು ಪುಲಿಕೇಶಿ ಸರ್ಕಲ್​ನಲ್ಲಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದೆವು. ಆದರೆ ಸುಪ್ರೀಂ ಕೋರ್ಟ್ ಆದೇಶ ರಸ್ತೆ ಮೇಲೆ ಪ್ರತಿಮೆಗೆ ನಿರ್ಬಂಧ ಹೇರಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಹಾಗೂ ಡಿಸಿ ಅವರ ಜೊತೆ ಸಭೆ ಮಾಡಲಾಗಿದೆ. ಪುರಸಭೆ ಜಾಗ ಗುರುತಿಸಿ‌‌ ಹೇಳಿದ ನಂತರ ಆದಷ್ಟು ಬೇಗ ಇಮ್ಮಡಿ ಪುಲಿಕೇಶಿ ಹಾಗೂ ಬಸವೇಶ್ವರ ಎರಡು ಪ್ರತಿಮೆ ಪ್ರತಿಷ್ಠಾಪನೆ ‌ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಬೇಟೆ: ವಿಜಯಪುರದ ಅಂಧ ಬಾಲಕನಿಂದ ಸಾಧನೆ

ವಿವಿಧ ಕಾರಣ ನೆಪವೊಡ್ಡಿ ಪ್ರತಿಮೆ ಪ್ರತಿಷ್ಠಾಪನೆ ‌ಮುಂದೂಡಲಾಗುತ್ತಿದೆ. ಇದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದ್ದು, ಆದಷ್ಟು ಬೇಗ ಎರಡು ಪ್ರತಿಮೆ ಅನಾವರಣ ಮಾಡುವ ಕಾರ್ಯ ಆಗಬೇಕಿದೆ ಎನ್ನುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ