AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋನ್ಸಾಯ್​ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ; ಪರಿಸರ ಸಂರಕ್ಷಣೆಗೆ ಮುಂದಾದ ನಿವೃತ್ತ ಅರಣ್ಯಾಧಿಕಾರಿ

ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವರಮಹೀರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿ ವನ, ರಾಶಿ ವನ, ಪಂಚಫಲ ವನ, ನಕ್ಷತ್ರ ವನ, ನವಗ್ರಹ ವನ ಹೀಗೆ ಸುಮಾರು 175 ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ, ಬಹುವರ್ಷ ಬಾಳುವ ಮರಗಳನ್ನು ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.

ಬೋನ್ಸಾಯ್​ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ; ಪರಿಸರ ಸಂರಕ್ಷಣೆಗೆ ಮುಂದಾದ ನಿವೃತ್ತ ಅರಣ್ಯಾಧಿಕಾರಿ
ಬೋನ್ಸಾಯಿ ಪದ್ಧತಿ
TV9 Web
| Edited By: |

Updated on:Feb 10, 2022 | 12:06 PM

Share

ಉತ್ತರ ಕನ್ನಡ: ಆಧುನಿಕ ಯುಗದಲ್ಲಿ ಪರಿಸರ ಸಂರಕ್ಷಣೆಗಿಂತ ಅದನ್ನು ಹಾಳು ಮಾಡುವವರೇ ಹೆಚ್ಚು. ಇಂಥವರ ಮಧ್ಯದಲ್ಲಿ ಪರಿಸರ ಸಂರಕ್ಷಣೆಯ ಕಲ್ಪನೆಯೊಂದಿಗೆ ಇಳಿ ವಯಸ್ಸಿನಲ್ಲೂ ಬೋನ್ಸಾಯಿ(Bonsai) ಕೃಷಿ ಪದ್ಧತಿಯಲ್ಲಿ ಸಪ್ತರ್ಷಿ ವನ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೂರಾರು ವರ್ಷಗಳ ಕಾಲ ಬಾಳುವ ಮರಗಳು(Trees), ಔಷಧಿ ಗುಣವುಳ್ಳ ಗಿಡಗಳನ್ನು ನೆಟ್ಟು ಮನೆಯ(House) ಮುಂದೆ ವನ ನಿರ್ಮಾಣ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರುಕಲ್ಲಬ್ಬೆ ಗ್ರಾಮದ ಎಲ್.ಆರ್. ಹೆಗಡೆ ಅವರು, ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆಸಲ್ಲಿದ್ದರು. ಸದ್ಯ ಇವರು ಅರಣ್ಯವಲಯ ಅಧಿಕಾರಿಯಾಗಿ ನಿವೃತ್ತಿಯಾಗಿದ್ದಾರೆ. ಈಗಲೂ ತಮ್ಮ ಇಳಿ ವಯಸ್ಸಿನಲ್ಲಿ ಕಾಡು ಸಂರಕ್ಷಣೆ ಮಾಡುವ, ಮರ ಬೆಳೆಸುವ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆ ಮುಂದೆ 7 ವರ್ಷದಿಂದ ಬೋನ್ಸಾಯ್​ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು ವರಮಹೀರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿ ವನ, ರಾಶಿ ವನ, ಪಂಚಫಲ ವನ, ನಕ್ಷತ್ರ ವನ, ನವಗ್ರಹ ವನ ಹೀಗೆ ಸುಮಾರು 175 ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ, ಬಹುವರ್ಷ ಬಾಳುವ ಮರಗಳನ್ನು ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ.

ಬೋನ್ಸಾಯ್ ಪದ್ಧತಿ ಎಂದರೆ ಆನೆಯನ್ನು ಕನ್ನಡಿಯಲ್ಲಿ ನೋಡಿದಂತೆ. ಮರವು ತನ್ನ ಮೂಲ ಗುಣದಲ್ಲಿಯೇ ಬೆಳೆಯುತ್ತದೆ. ಆದರೆ ಕುಬ್ಜವಾಗಿರುತ್ತದೆ. ಈ ವನವನ್ನು ನೋಡಿದರೆ ದೈವಿ ಭಾವನೆ ಬರುತ್ತದೆ. ಇದನ್ನು ಪಾರಂಪರಿಕ ಪ್ರವಾಸಿ ತಾಣ ಮಾಡುವ ಆಸೆಯಿದೆ ಎಂದು ನಿವೃತ್ತಿ ಅರಣ್ಯಾಧಿಕಾರಿ ಎಲ್.ಆರ್. ಹೆಗಡೆ ಹೇಳಿದ್ದಾರೆ.

L.R.Hegde

ಎಲ್.ಆರ್. ಹೆಗಡೆ

ಕಲ್ಲಬ್ಬೆಯ ತಮ್ಮ ಮನೆ ಆವರಣದಲ್ಲೆ ಕಲಾನಿಕೇತನ ಕುಬ್ಜವನ ನಿರ್ಮಾಣ ಮಾಡಿದ್ದಾರೆ. ನೂರಾರು ವರ್ಷಗಳ ಕಾಲ ಬದುಕುವ ಮರಗಳನ್ನು ಬೆಳೆದಿದ್ದಾರೆ. ಧಾರ್ಮಿಕ ಆಚರಣೆಗೆ ಅನುಕೂಲವಾಗುವ ನವಗ್ರಹ ವನ, ರಾಶಿ ವನ ಬೆಳೆಯುವುದರ ಜೊತೆಗೆ ಔಷಧಿ ಗುಣವುಳ್ಳ ಗಿಡಗಳನ್ನು ಬೆಳೆದಿದ್ದಾರೆ. ಇದರಿಂದ ಜನರಿಗೂ ಅನುಕೂಲ ವಾಗಲಿದೆ. ಇನ್ನೂ ಈ ವನದಲ್ಲಿ ಆಲ, ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ಶಿವಣಿ, ದೇವಕೃಕ್ಷ ಹೀಗೆ ಸುಮಾರು 175 ಕ್ಕಿಂತ ಹೆಚ್ಚು ಜಾತಿಯ 400 ಗಿಡಗಳನ್ನು ಬೆಳೆಯಲಾಗಿದೆ.

ಅತೀ ಕಡಿಮೆ ನೀರು, ಕಡಿಮೆ ಜಾಗದಲ್ಲಿ ಮಾಡಬಹುದಾದ ಬೋನ್ಸಾಯ್ ಕೃಷಿ ಇದಾಗಿದೆ. ವನ ಮತ್ತು ವನ್ಯಜೀವಿ ಹೇಗೆ ಜೀವನ ಮಾಡುತ್ತವೆ ಎನ್ನುವ ನಿದರ್ಶನ ಇಟ್ಟಿಕೊಂಡು ವನ ನಿರ್ಮಾಣ ಮಾಡಲಾಗಿದೆ. ಎಲ್.ಆರ್. ಹೆಗಡೆಯವರು ಮಾರಾಟ ಮಾಡಲಿಕ್ಕೆ ಅಥವಾ ಇದರಿಂದ ಲಾಭ ಗಳಿಸಲು ಈ ವನ ನಿರ್ಮಾಣ ಮಾಡಿಲ್ಲ ಬದಲಿಗೆ. ಕಾಡು ಬೆಳಸಿ ನಾಡು ಉಳಿಸಿ ಎಂಬ ಸಾರಾಂಶ ಸಾರಲು ಈ ಕಾರ್ಯ ಮಾಡಿದ್ದಾರೆ. ಜೊತೆಗೆ ಇಲ್ಲಿ ಬಂದು ಬೋನ್ಸಾಯಿ ಕೃಷಿ ಪದ್ಧತಿ ಬಗ್ಗೆ ಉಚಿತವಾಗಿ ಮಾಹಿತಿ ಪಡೆಯಬಹುದು ಎಂದು ಸ್ಥಳೀಯರಾದ ಸುರೇಶ ಭಟ್ ಹೇಳಿದ್ದಾರೆ.

ಒಟ್ಟಾರೆಯಾಗಿ ಆಧುನಿಕ ಯುಗದಲ್ಲಿ ಗಿಡಮರಗಳನ್ನು ಬೆಳೆಸುವವರ ಸಂಖ್ಯೆ ಕಡಿಮೆಯಾಗಿದ್ದು, ಇಂತವರ ಮಧ್ಯದಲ್ಲಿ ವನ ನಿರ್ಮಾಣ ಮಾಡಿ ಭಾರತೀಯ ಸಂಸ್ಕೃತಿಯ ಸಂಪ್ರದಾಯವನ್ನು ತೋರಲು ಹೋರಟಿದ್ದಾರೆ. ಮನೆ ಮುಂದೆ, ಕಟ್ಟಡದ ಮೇಲೆ ಬೋನ್ಸಾಯ್ ಪದ್ಧತಿಯ ಗಿಡಗಳನ್ನು ನೆಟ್ಟು ಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ವರದಿ: ವಿನಾಯಕ ಬಡಿಗೇರ

ಇದನ್ನೂ ಓದಿ: ಯಾದಗಿರಿ: ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಅಪರೂಪದ ಸಸ್ಯಸಂಕುಲ ರಕ್ಷಣೆ; ವಿಶೇಷ ವರದಿ ಇಲ್ಲಿದೆ

ಬ್ಯಾಂಕ್ ಅಧಿಕಾರಿ, ಪಿಎಸ್ಐ ನೌಕರಿ ನಿರಾಕರಣೆ ಮಾಡಿದ ಮಹಿಳೆ; ಕುರಿ ಸಾಕಾಣಿಕೆ ಮಾಡಿ ಲಕ್ಷಾಂತರ ರೂ. ಆದಾಯ ಗಳಿಕೆ

Published On - 12:04 pm, Thu, 10 February 22

Follow Us
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು