ದೀಪಾವಳಿಯ 3 ದಿನವೂ ಪಟಾಕಿ ಹಚ್ತೀನಿ, ಜೈಲಿಗೆ ಹಾಕಿದ್ರೂ OK -ಸರ ಸಿಡಿಸಿ ವಾಟಾಳ್ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸರ್ಕಾರ ಕೆಲ ನಿರ್ಬಂಧ ಹೇರಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಪಟಾಕಿ ಸಿಡಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಾಟಾಳ್ ಇಂದು ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಸರ್ಕಾರ ನಿಷೇಧ ಮಾಡಿರುವ 2 ಸಾವಿರದ ಸರಪಟಾಕಿ ಸಿಡಿಸಿ ಪ್ರತಿಭಟನೆ ನಡೆಸಿದರು. ದೀಪಾವಳಿ ಅಂದ್ರೆ ಪಟಾಕಿ ಹೊಡೆಯಲೇ ಬೇಕು. […]

ಬೆಂಗಳೂರು: ರಾಜ್ಯದಲ್ಲಿ ಪಟಾಕಿ ಮಾರಾಟ ಮತ್ತು ಬಳಕೆ ಮೇಲೆ ಸರ್ಕಾರ ಕೆಲ ನಿರ್ಬಂಧ ಹೇರಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಪಟಾಕಿ ಸಿಡಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಾಟಾಳ್ ಇಂದು ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಸರ್ಕಾರ ನಿಷೇಧ ಮಾಡಿರುವ 2 ಸಾವಿರದ ಸರಪಟಾಕಿ ಸಿಡಿಸಿ ಪ್ರತಿಭಟನೆ ನಡೆಸಿದರು. ದೀಪಾವಳಿ ಅಂದ್ರೆ ಪಟಾಕಿ ಹೊಡೆಯಲೇ ಬೇಕು. ಸರ್ಕಾರ ನಿರ್ಬಂಧ ಹೇರಿರೋದು ಸರಿಯಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.
ಸರ್ಕಾರ ದೀಪಾವಳಿಗೆ ಪಟಾಕಿ ಹೊಡೆಯಬಾರದು ಅಂತಾ ಹೇಳಿದೆ. ಇದು ಇಡೀ ದೇಶದ ಹಬ್ಬ. ಸರ್ಕಾರಕ್ಕೆ ಬುದ್ಧಿಯಿಲ್ಲ. ಪಟಾಕಿ ಹೊಡೆದಿಲ್ಲ ಅಂದ್ರೆ ದೀಪಾವಳಿ ಹಬ್ಬ ಪರಿಪೂರ್ಣವಾಗಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು. ಜನ ಇಷ್ಟು ವರ್ಷಗಳಿಂದ ಹಬ್ಬ ಮಾಡಿಕೊಂಡು ಬಂದಿದ್ದಾರೆ. ಕಣ್ಣಿಗೆ ತೊಂದರೆ ಆಗಬಹುದು. ಹಾಗಾಗಿ, ಎಚ್ಚರಿಕೆಯಿಂದ ಎಲ್ಲರೂ ಪಟಾಕಿ ಹಚ್ಚಿ. ಪಟಾಕಿ ಯುವಕರ ಹಬ್ಬ. ಸರ್ಕಾರ ಎಲ್ಲಾ ಬೋಗಸ್, ಸುಳ್ಳು ಹೇಳುತ್ತದೆ. ಅವರಿಗೆ ಬುದ್ಧಿಯಿಲ್ಲ. ಸಿಗರೇಟ್ನಿಂದ ತೊಂದರೆ ಅಗಲ್ವಾ? ಬಾರ್ನಲ್ಲಿ ಕುಡಿಯೋದ್ರಿಂದ ಕೊರೊನಾ ಬರಲ್ವಾ? ಸಿನಿಮಾ, ಮಾಲ್ ಎಲ್ಲಾ ಒಪೆನ್ ಮಾಡಿದ್ದಾರೆ. 3 ದಿನ ಪಟಾಕಿ ಹೊಡೆದರೆ ಬೆಂಗಳೂರು ಏನು ಹಾಳಾಗಿ ಹೋಗಲ್ಲ ಎಂದು ವಾಟಾಳ್ ಕಿಡಿಕಾರಿದರು.
ಜೊತೆಗೆ, ಪಟಾಕಿಯಿಂದ ಕೊರೊನಾ ಬರುತ್ತೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ. ಹಸಿರು ಪಟಾಕಿ ಅಂದ್ರೆ ಸುರ್ಸುರ್ ಬತ್ತಿ. ಅದು ಲೆಕ್ಕಕ್ಕೆ ಇಲ್ಲ. ನಾನು 3 ದಿನ ಕೂಡ ಪಟಾಕಿ ಹಚ್ಚುತ್ತೇನೆ. ನನ್ನನ್ನ ಜೈಲಿಗೆ ಹಾಕಿದ್ರು ಪರವಾಗಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.



