AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಡ್ಡ ಏರಲು ಹೋಗಿ ಅವಘಡ: ಎರಡು ದಿನಗಳಾದರೂ ಯಾರ ಕಣ್ಣಿಗೂ ಬೀಳದ ಫ್ರಾನ್ಸ್ ಪ್ರವಾಸಿಗ ಬದುಕುಳಿದಿದ್ದೇಗೆ ಗೊತ್ತಾ?

ಹಂಪಿಯ ಯುನೆಸ್ಕೋ ತಾಣದಲ್ಲಿ ಅಷ್ಟಭುಜ ಸ್ನಾನಘಟಕದ ಬಳಿ ಜಾರಿಬಿದ್ದು ಗಾಯಗೊಂಡಿದ್ದ 52 ವರ್ಷದ ಫ್ರೆಂಚ್ ಪ್ರವಾಸಿಗನನ್ನು ಎರಡು ದಿನಗಳ ಬಳಿಕ ರಕ್ಷಿಸಲಾಗಿದೆ. ರೈತರು ನೀಡಿದ ಮಾಹಿತಿ ಮೇರೆಗೆ ಸ್ಥಳೀಯ ಪೊಲೀಸರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ರಕ್ಷಣೆ ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಂಪಿಯ ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಗುಡ್ಡ ಏರಲು ಹೋಗಿ ಅವಘಡ: ಎರಡು ದಿನಗಳಾದರೂ ಯಾರ ಕಣ್ಣಿಗೂ ಬೀಳದ ಫ್ರಾನ್ಸ್ ಪ್ರವಾಸಿಗ ಬದುಕುಳಿದಿದ್ದೇಗೆ ಗೊತ್ತಾ?
ಗುಡ್ಡ ಏರಲು ಹೋಗಿ ಜಾರಿ ಬಿದ್ದ ಫ್ರಾನ್ಸ್ ಪ್ರವಾಸಿಗ
ಭಾವನಾ ಹೆಗಡೆ
|

Updated on:Dec 28, 2025 | 9:58 AM

Share

ವಿಜಯನಗರ, ಡಿಸೆಂಬರ್ 28: ಫ್ರಾನ್ಸ್‌ನ 52 ವರ್ಷದ ಪ್ರವಾಸಿಗರೊಬ್ಬರು ಹಂಪಿಯ (Hampi) ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿರುವ ಐತಿಹಾಸಿಕ ಅಷ್ಟಭುಜ ಸ್ನಾನಘಟಕದ ಸಮೀಪದಲ್ಲಿ ಜಾರಿಬಿದ್ದಿದ್ದು, ಸುಮಾರು ಎರಡು ದಿನಗಳ ಬಳಿಕ ರಕ್ಷಿಸಲಾಗಿದೆ. ಗಾಯಾಳುವನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸುಧಾರಿಸಿದೆ.

ತೆವಳುತ್ತಾ ಬಾಳೆ ತೋಟ ತಲುಪಿದ್ದ ಬ್ರೂನೋ

ಡಿಸೆಂಬರ್ 24ರ ಸಂಜೆ ಸುಮಾರು 6 ಗಂಟೆಗೆ ಫ್ರಾನ್ಸ್‌ನ ಬ್ರುನೋ ರೋಜರ್ ಎಂಬವರು ಸ್ಮಾರಕದ ಸಮೀಪದ ಗುಡ್ಡವನ್ನು ಏರಲು ಯತ್ನಿಸುತ್ತಿದ್ದ ವೇಳೆ ಕಲ್ಲುಗಳಿರುವ ಪ್ರದೇಶದಲ್ಲಿ ಜಾರಿ ಬಿದ್ದು ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದರು. ಸಂಜೆ ಸಮಯದಲ್ಲಿ ಆ ಪ್ರದೇಶದಲ್ಲಿ ಜನಸಂಚಾರ ಕಡಿಮೆ ಇರುವುದರಿಂದ ಯಾರ ಕಣ್ಣಿಗೂ ಬೀಳದ ಅವರು, ಎರಡು ದಿನಗಳು ಅಲ್ಲಿಯೇ ಸಿಲುಕಿದ್ದರು. ಆಹಾರ ನೀರು ಸಿಗದೆ, ಗಾಯದ ತೀವ್ರ ನೋವಿನ ನಡುವೆಯೂ ಬದುಕುಳಿಯಲು ಪ್ರಯತ್ನಿಸಿದ ಬ್ರುನೋ, ತೆವಳುತ್ತ ಬಾಳೆ ತೋಟದೊಳಗೆ ತಲುಪಿದರು. ಅವರನ್ನು ಗಮನಿಸಿದ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಒಂಟಿಯಾಗಿ ಪ್ರವಾಸಕ್ಕೆ ಬಂದಿದ್ದ ರೋಜರ್

ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ರೋಜರ್ ಅವರು ಒಂಟಿಯಾಗಿ ಭಾರತಕ್ಕೆ ಬಂದಿದ್ದು, ಹಂಪಿ ಸಮೀಪದ ಕಡ್ಡಿರಾಂಪುರ ಗ್ರಾಮದಲ್ಲಿ ಹೋಮ್‌ಸ್ಟೇಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.  ಘಟನೆ ವೇಳೆ ಅವರು ಒಬ್ಬರೇ ಅನ್ವೇಷಣೆಗೆ ತೆರಳಿದ್ದರು ಎನ್ನಲಾಗಿದೆ. ಹಂಪಿಯ ಕಲ್ಲುಮಯ ಹಾಗೂ ಏಕಾಂಗಿ ಪ್ರದೇಶಗಳಲ್ಲಿ, ವಿಶೇಷವಾಗಿ ಸಂಜೆ ಸಮಯದಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸಿ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:10 am, Sun, 28 December 25

Follow Us
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ