AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್​ಮಿಟರ್ ಟ್ಯಾಗ್ ಹೊಂದಿದ ರಣಹದ್ದು

ಕಾರವಾರದ ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ ರಣಹದ್ದು ಕಂಡು ಜನರಲ್ಲಿ ಆತಂಕ ಮೂಡಿತ್ತು. ಆದರೆ, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಸಂಶೋಧನಾ ಯೋಜನೆಯ ಭಾಗವಾಗಿ ಈ ರಣಹದ್ದನ್ನು ತಾಡೋಬಾ ಅರಣ್ಯದಿಂದ ಬಿಡಲಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ವಿಷಯ ತಿಳಿದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್​ಮಿಟರ್ ಟ್ಯಾಗ್ ಹೊಂದಿದ ರಣಹದ್ದು
ಕಾರವಾರದಲ್ಲಿ ಆತಂಕ ಸೃಷ್ಠಿಸಿದ ಜಿಪಿಎಸ್ ಟ್ರಾನ್ಸ್‌ಮೀಟರ್ ಟ್ಯಾಗ್ ಹೊಂದಿದ ರಣಹದ್ದು
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Nov 11, 2024 | 12:30 PM

Share

ಕಾರವಾರ, ನವೆಂಬರ್​ 10: ನಗರದಲ್ಲಿ ಅದೊಂದು ರಣಹದ್ದಿನಿಂದಾಗಿ (Vulture) ಜನರಲ್ಲಿ ಆತಂಕ ಮನೆ ಮಾಡಿದೆ. ಜಿಪಿಎಸ್ ಟ್ರಾನ್ಸ್​ಮಿಟರ್, ಟ್ಯಾಗ್ ಹೊಂದಿದ್ದ ರಣಹದ್ದು ಕಾರವಾರ ಬಳಿಯ ಕೋಡಿಭಾಗ್‌ನ ನದಿ ಸುತ್ತ ಕಳೆದ 5 ದಿನದಿಂದ ಹಾರಾಟ ನಡೆಸುತ್ತಿದೆ. ಕ್ಯಾಮರಾ ಮೂಲಕ ಜೂಮ್‌ ಮಾಡಿ ನೋಡಿದಾಗ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿರುವುದು ಬಹಿರಂಗವಾಗಿದೆ.

ಶತ್ರು ದೇಶ, ಉಗ್ರರು ಹಾರಿಸಿರಬಹುದೆಂದು ಜನರ ಶಂಕೆ

ರಣಹದ್ದಿನ ಕಾಲಿನಲ್ಲಿ ಟ್ಯಾಗ್‌, ಬೆನ್ನಿನ ಮೇಲೆ ಟ್ರಾನ್ಸ್​ಮಿಟರ್​ ನೋಡಿದ ಸ್ಥಳೀಯರು ಆತಂಕಗೊಂಡಿದ್ದು, ಶತ್ರು ದೇಶದವರು, ಉಗ್ರರು ಹಾರಿಸಿರಬಹುದೆಂದು ಶಂಕಿಸಿದ್ದಾರೆ. ಕಾರವಾರದಲ್ಲಿ ಅಣುಸ್ಥಾವರ, ನೌಕಾನೆಲೆ ಇರುವುದಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಉತ್ತರ ಕನ್ನಡ: ಟಿವಿ9 ವರದಿ ಫಲಶ್ರುತಿ, ಜೋಯಿಡಾದ ಆ ಗ್ರಾಮಗಳಿಗೆ ಕೊನೆಗೂ ಬಂತು ಬಸ್

ಇನ್ನು ಪೊಲೀಸರು, ಅರಣ್ಯ ಇಲಾಖೆ, ರಾಜ್ಯ, ಕೇಂದ್ರ ಐಬಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧನೆ ಉದ್ದೇಶಕ್ಕಾಗಿ ತಾಡೋಬಾ-ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ರಣಹದ್ದು ಹಾರಿಸಲಾಗಿತ್ತು ಎಂಬುವುದು ತಿಳಿದು ಬಂದಿದೆ.

ರಣಹದ್ದುಗಳ ಜೀವನದ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ Mahaforest.gov.in ಎಂದು ಬರೆದಿರುವ ಟ್ರಾನ್ಸ್​ಮಿಟರ್​ ಅಳವಡಿಕೆ ಮಾಡಿ ಹಾರಿಬಿಡಲಾಗಿದೆ. ವಿಚಾರ ತಿಳಿದ ಬಳಿಕ ಸದ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ರಣಹದ್ದಿಗೆ ಆಹಾರ ನೀಡಲು ಮುಂದಾಗಿದ್ದಾರೆ. ಸ್ಥಳೀಯರು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಸುಂದರ ಪರಿಸರದಲ್ಲಿ ಗೀಜಗ ಹಕ್ಕಿಯ ಕಲರವ

ಬೀದರ್: ಬೀದರ್ ತಾಲೂಕಿನ ಕಾಶೆಂಪುರ ಗ್ರಾಮಕ್ಕೆ ಹೋಗು ರಸ್ತೆಯುದ್ದಕ್ಕೂ ನೂರಾರು ಗೀಜಗನ ಹಕ್ಕಿಗಳು ಗಿಡಗಳಿಗೆ ಗೂಡು ಕಟ್ಟುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ. ಚಿಲಿಪಿಲಿ ಗುಟ್ಟುತ್ತಾ ಅತ್ತಿಂದಿತ್ತ ಓಡುವ ಈ ಹಕ್ಕಿಯ ಗೆಳೆಯರ ಸೊಬಗು ಜನರ ಮನಸ್ಸಿಗೆ ಹಿತ ನೀಡುತ್ತದೆ.

ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಉತ್ತರ ಕನ್ನಡ ಜಿಲ್ಲೆ ಜನರ ಪರಿಸ್ಥಿತಿ: ಯಾಕೆ ಗೊತ್ತಾ? ಈ ಸ್ಟೋರಿ ಓದಿ

ರಸ್ತೆಯಲ್ಲಿ ಹೋಗುವ ಜನರು ವಾಹನ ಸವಾರರು ಒಂದಿಷ್ಟು ಸಮಯ ದಾರಿಯಲ್ಲಿ ನಿಂತುಕೊಂಡು ಈ ಹಕ್ಕಿಗಳ ಗೂಡು ಕಟ್ಟುವುದನ್ನ ಅವುಗಳು ಚಿಲಿಪಿಲಿ ಗುಟ್ಟುವ ಸೌಂಡ್ ನೋಡುತ್ತಾ ತಮ್ಮನೇ ತಾವು ಮರೆತು ಬಿಡುತ್ತಿದ್ದಾರೆ. ಇನ್ನೂ ಕೆಲವರು ಅವುಗಳ ಗೂಡುಕಟ್ಟುವುದನ್ನ ವಿಡಿಯೋ ಮಾಡಿ ಖಷಿ ಪಟ್ಟರೆ ಇನ್ನೂ ಕೆಲವರು ಅವುಗಳು ಕಟ್ಟಿದ ಗೂಡಿನ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:43 pm, Sun, 10 November 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್