ಭತ್ತ ಕಟಾವು ಮಾಡುವ ಯಂತ್ರ ಕದ್ದಿದ್ದ ಆರೋಪಿ ಬಂಧನ; 25 ಲಕ್ಷ ರೂ. ಮೌಲ್ಯದ ಯಂತ್ರ ಪೊಲೀಸ್ ವಶಕ್ಕೆ

ಲಕ್ಷ್ಮಣ್ ಚೌಹಾಣ್ ಬಂಧಿತ ಆರೋಪಿ. ಕಳ್ಳತನಕ್ಕೆ ಬಳಸಿದ್ದ ಕ್ಯಾಂಟರ್ ಲಾರಿಯನ್ನು ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಭತ್ತ ಕಟಾವು ಮಾಡುವ ಯಂತ್ರ ಕದ್ದಿದ್ದ ಆರೋಪಿ ಬಂಧನ; 25 ಲಕ್ಷ ರೂ. ಮೌಲ್ಯದ ಯಂತ್ರ ಪೊಲೀಸ್ ವಶಕ್ಕೆ
ಲಕ್ಷ್ಮಣ್ ಚೌಹಾಣ್
Follow us
| Edited By: preethi shettigar

Updated on:Jan 16, 2022 | 9:55 PM

ಯಾದಗಿರಿ: ಭತ್ತ ಕಟಾವು ಮಾಡುವ ಯಂತ್ರ ಕದ್ದಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ. 15 ದಿನದ ಹಿಂದೆ ರಾಜು ರಾಠೋಡ್​ಗೆ ಸೇರಿದ್ದ 25 ಲಕ್ಷ ರೂ. ಮೌಲ್ಯದ ಭತ್ತ (Paddy) ಕಟಾವು ಯಂತ್ರ ಕದ್ದಿದ್ದ ಆರೋಪಿಯನ್ನು ಹುಣಸಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಚೌಹಾಣ್ ಬಂಧಿತ ಆರೋಪಿ. ಕಳ್ಳತನಕ್ಕೆ ಬಳಸಿದ್ದ ಕ್ಯಾಂಟರ್ ಲಾರಿಯನ್ನು (Lorry) ಸಹ ಪೊಲೀಸರು ಜಪ್ತಿ ಮಾಡಿದ್ದಾರೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ (police station) ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಮಿಳುನಾಡು: ಜಲ್ಲಿಕಟ್ಟು ಸ್ಪರ್ಧೆ ವೇಳೆ ಯುವಕನನ್ನು ಎಳೆದೊಯ್ದ ಹೋರಿ

ಜಲ್ಲಿಕಟ್ಟು ಸ್ಪರ್ಧೆ ವೇಳೆ ಯುವಕನನ್ನು ಹೋರಿ ಎಳೆದೊಯ್ದ ಘಟನೆ ತಮಿಳುನಾಡಿನ‌ ವೆಲ್ಲೂರಿನಲ್ಲಿ ನಿನ್ನೆ ನಡೆದಿದೆ. ಯುವಕನ ಕತ್ತಿಗೆ ಹಗ್ಗ ಉರುಳಾಗಿ ಸುಮಾರು 100 ಮೀಟರ್ ದೂರ ಹೋರಿ ಎಳೆದೊಯ್ದಿದೆ. ಕೂಡಲೇ ಹೋರಿ ತಡೆದು ಯುವಕನನ್ನು ಜನರು ರಕ್ಷಿಸಿದ್ದಾರೆ. ಎತ್ತು ಯುವಕನನ್ನು ಎಳೆದುಕೊಂಡು ಓಡುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಚಿಕ್ಕಮಗಳೂರು: ಸರ್ಕಾರದ ನಿಯಮ ಗಾಳಿಗೆ ತೂರಿ ಧಾರಾವಾಹಿ ಚಿತ್ರೀಕರಣ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 234ರ ಪಕ್ಕದಲ್ಲಿರುವ ಕೆಫೆಯಲ್ಲಿ ವೀಕೆಂಡ್​ ಕರ್ಫ್ಯೂ ಉಲ್ಲಂಘಿಸಿ ರಾಜಾರೋಷವಾಗಿ ಧಾರಾವಾಹಿ ಚಿತ್ರೀಕರಣ ನಡೆಸಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿದ್ದು, ಠಾಣಾಧಿಕಾರಿ ಗಾಯಿತ್ರಿ ಎಚ್ಚರಿಕೆ ನೀಡಿ ಶೂಟಿಂಗ್​ ಪ್ಯಾಕಪ್​​ ಮಾಡಿಸಿದ್ದಾರೆ.

ಬೆಂಗಳೂರು: ಸ್ನೇಹಿತರ ರೂಂನಲ್ಲೇ ನೇಣುಹಾಕಿಕೊಂಡು ಯುವತಿ ಆತ್ಮಹತ್ಯೆ

ಸ್ನೇಹಿತರ ರೂಂನಲ್ಲೇ ನೇಣುಹಾಕಿಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ನಡೆದಿದೆ. ಶಿಲ್ಪಾ(22) ಮೃತ ದುರ್ದೈವಿ. ಸ್ನೇಹಿತರಾದ ಅಮಿತ್, ಉದಯ್, ಮುರುಳಿ, ಧೃತಿನ್, ಸ್ನೇಹಾ ಎಂಬುವವರ ಜೊತೆ ಯುವತಿ ಶಿಲ್ಪಾ ವಾಸವಿದ್ದರು. ಸ್ನೇಹಿತರ ವಿರುದ್ಧ ಶಿಲ್ಪಾ ಪೋಷಕರು ಸದ್ಯ ದೂರು ನೀಡಿದ್ದಾರೆ. ಸ್ನೇಹಿತರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಎರಡು ಕೋಟಿ ಮೌಲ್ಯದ ವಾಚ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ ಮಾಡಿದ ಇಂದಿರಾನಗರ ಪೊಲೀಸರು

ಕಳ್ಳತನಕ್ಕೆ ಹೋದಾಗ ಹಸಿವೆಯಾಗಿ ಕಿಚಡಿ ಮಾಡಿದ ಕಳ್ಳ: ಈಗ ಪೊಲೀಸರ ಅತಿಥಿ

Published On - 9:24 pm, Sun, 16 January 22

ತಾಜಾ ಸುದ್ದಿ