AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಡತೆ ಆಯ್ತು, ಇದೀಗ ರೈತರಿಗೆ ಭಯ ಹುಟ್ಟಿಸಿದೆ ಬಸವನ ಹುಳು

ಮಂಗಳೂರು: ಮಿಡತೆ ಭಯ ಸದ್ಯ ದೂರವಾಗಿದೆ. ಆದ್ರೆ ಕರಾವಳಿಯಲ್ಲಿ ಈಗ ಆಫ್ರಿಕನ್ ಸ್ನೈಲ್ ಅನ್ನೋ ಹುಳುವಿನ ಕಾಟ ರೈತರನ್ನು ಕಾಡುತ್ತಿದೆ. ಹೌದು ಬಸವನಹುಳು ಮಾದರಿಯ ಆಫ್ರಿಕನ್ ಸ್ನೈಲ್ ಈಗ ರೈತರ ತಲೆನೋವಿಗೆ ಕಾರಣವಾಗಿದೆ. ಕೃಷಿ ವಿಜ್ಞಾನಿಗಳು ಇದಕ್ಕೆ ಪರಿಹಾರ ಕಂಡು ಹಿಡಿದಿದ್ರೂ ಕೂಡ ಅದು ರೈತರ ಪಾಲಿಗೆ ದುಬಾರಿ ಎನಿಸಿದೆ. ಮಳೆಗಾಳ ಆರಂಭವಾಯ್ತು ಅಂದ್ರೆ ಸಾಕು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬಸವನ ಹುಳುಗಳ ದರ್ಬಾರ್ ಶುರುವಾಗುತ್ತೆ. ಆದ್ರೆ ಇದೇ ಮಾದರಿಯ ಆಫ್ರಿಕನ್ ಬಸವನ ಹುಳುಗಳು ದಕ್ಷಿಣ […]

ಮಿಡತೆ ಆಯ್ತು, ಇದೀಗ ರೈತರಿಗೆ ಭಯ ಹುಟ್ಟಿಸಿದೆ ಬಸವನ ಹುಳು
ಆಯೇಷಾ ಬಾನು
|

Updated on:Aug 24, 2020 | 7:32 AM

Share

ಮಂಗಳೂರು: ಮಿಡತೆ ಭಯ ಸದ್ಯ ದೂರವಾಗಿದೆ. ಆದ್ರೆ ಕರಾವಳಿಯಲ್ಲಿ ಈಗ ಆಫ್ರಿಕನ್ ಸ್ನೈಲ್ ಅನ್ನೋ ಹುಳುವಿನ ಕಾಟ ರೈತರನ್ನು ಕಾಡುತ್ತಿದೆ. ಹೌದು ಬಸವನಹುಳು ಮಾದರಿಯ ಆಫ್ರಿಕನ್ ಸ್ನೈಲ್ ಈಗ ರೈತರ ತಲೆನೋವಿಗೆ ಕಾರಣವಾಗಿದೆ. ಕೃಷಿ ವಿಜ್ಞಾನಿಗಳು ಇದಕ್ಕೆ ಪರಿಹಾರ ಕಂಡು ಹಿಡಿದಿದ್ರೂ ಕೂಡ ಅದು ರೈತರ ಪಾಲಿಗೆ ದುಬಾರಿ ಎನಿಸಿದೆ.

ಮಳೆಗಾಳ ಆರಂಭವಾಯ್ತು ಅಂದ್ರೆ ಸಾಕು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಬಸವನ ಹುಳುಗಳ ದರ್ಬಾರ್ ಶುರುವಾಗುತ್ತೆ. ಆದ್ರೆ ಇದೇ ಮಾದರಿಯ ಆಫ್ರಿಕನ್ ಬಸವನ ಹುಳುಗಳು ದಕ್ಷಿಣ ಕನ್ನಡ ಜಿಲ್ಲೆಯ ರೈತರ ನಿದ್ದೆಗೆಡಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ವಿವಿಧ ಕಡೆ ಈ ಹುಳುವಿನ ಅಬ್ಬರ ಜೋರಾಗಿದೆ. ರಬ್ಬರ್, ಅಡಿಕೆ, ತೆಂಗಿನಮರ ಸೇರಿದಂತೆ ಹಲವು ಬೆಳೆಯನ್ನ ಇವು ತಿಂದು ಹಾಕುತ್ತಿವೆ. ಸಹಸ್ರಾರು ಸಂಖ್ಯೆಯಲ್ಲಿ ದಾಳಿ ಇಟ್ಟಿರುವ ಬಸವನಹುಳುಗಳು ಎಕರೆಗಟ್ಟಲೆ ಸಸ್ಯವನ್ನು ನಾಶಪಡಿಸುತ್ತಿವೆ.

ಬಸವನ ಹುಳುಗಳ ಆರ್ಭಟಕ್ಕೆ ಬೇಸತ್ತ ರೈತರು ಕೃಷಿ ಅಧಿಕಾರಿಗಳ ಮೊರೆ ಹೋಗಿದ್ದಾರೆ. ಈ ಬಗ್ಗೆ ಅಧ್ಯಯನ ನಡೆಸಿದ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಪರಿಹಾರ ಕಂಡುಕೊಂಡಿದ್ದಾರೆ. ಬಸವನ ಹುಳುಗಳಿರುವ ಪ್ರದೇಶ ಪತ್ತೆ ಹಚ್ಚಿ 100 ಚದರ ಅಡಿ ಪ್ರದೇಶದಲ್ಲಿ 50 ರಿಂದ 80 ಗ್ರಾಂ ಮೆಟಾಲ್ಡಿಹೈಡ್ ರಾಸಾಯನಿಕದ ಸಣ್ಣ ಸಣ್ಣ ತುಂಡುಗಳನ್ನು 1 ಎಕರೆ ತೋಟದಲ್ಲಿ ಹಾಕಿದ್ದಾರೆ.

ಅಷ್ಟೇ ಅಲ್ಲ ಪಪ್ಪಾಯಿ, ಎಲೆ ಕೋಸು ತುಂಡುಗಳನ್ನು ಕೀಟನಾಶಕದಲ್ಲಿ ಮುಳುಗಿಸಿ ಇಟ್ಟಿದ್ದಾರೆ. ಇದರಿಂದ ಹುಳುಗಳ ಕಾಟದಿಂದ ಮುಕ್ತಿ ಸಿಗುತ್ತಿದೆ. ಆದ್ರೆ ರೈತರಿಗೆ ಈ ಪರಿಹಾರ ಬಹಳ ದುಬಾರಿಯಾಗಿದೆ. ಮೆಟಾಲ್ಡಿಹೈಡ್ ರಾಸಾಯನಿಕ ಬಳಸಬೇಕೆಂದ್ರೆ ಹತ್ತು ಎಕರೆ ಪ್ರದೇಶಕ್ಕೆ 44,500 ರೂಪಾಯಿ ಖರ್ಚು ಬೀಳಲಿದೆಯಂತೆ.

ಒಂದು ಬಾರಿ ಬಳಸಿ ಸುಮ್ಮನಾಗುವುದಾದ್ರೆ ಖರ್ಚು ಮಾಡಬಹುದು. ಆದ್ರೆ ಇದು ನಿರಂತರ ಪ್ರಕ್ರಿಯೆ ಹಾಗಾಗಿ ಬೇರೆ ಏನಾದ್ರೂ ಮಾರ್ಗಕಂಡುಕೊಡಬೇಕು ಅನ್ನೋದು ರೈತರ ಮನವಿ. ಇನ್ನು ಬಸವನ ಹುಳುವಿನಿಂದ ನಾಶವಾಗಿರುವ ಬೆಳೆಗೆ ಸರ್ಕಾರ ಪರಿಹಾರ ಕೊಡಬೇಕು ಎನ್ನವುದು ಕರಾವಳಿ ಭಾಗದ ರೈತರ ಮನವಿಯಾಗಿದೆ.

Published On - 7:29 am, Mon, 24 August 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ