No Money: ಆ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ದತಿಯಲ್ಲಿ ತರಕಾರಿ, ಇತರೆ ವಸ್ತುಗಳ ಮಾರಾಟ ನಡೆಯುತ್ತದೆ! ಅರೇ ಇಂಥಾ ಕಾಲದಲ್ಲಿಯೂ…

Barter system: ಆಧುನಿಕತೆಗೂ ಮುಂಚೆ ವಸ್ತುಗಳನ್ನು ಪರಸ್ಪರ ಹೇಗೆ ವಿನಿಮಯ ಮಾಡಿಕೊಂಡು ಜೀವನ ಮಾಡಲಾಗುತ್ತಿತ್ತೋ ಅದೇ ಮಾದರಿಯಲ್ಲಿ ಸಾರವಾಡ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯೋ ಮಾರುಕಟ್ಟೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ. ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆವರೆಗೆ ನಡೆಯೋ ಈ ಸಂತೆಯಲ್ಲಿ ಏನೇ ವಸ್ತುಗಳು ಬೇಕೆಂದರೆ ಅದಕ್ಕೆ ಪ್ರತಿಯಾಗಿ ಜೋಳವನ್ನು ನೀಡಬೇಕು. ಇಲ್ಲಿ ಹಣ ಪ್ರಮುಖ ಪಾತ್ರ ವಹಿಸಿಲ್ಲಾ.

No Money: ಆ ಗ್ರಾಮದಲ್ಲಿ ಇಂದಿಗೂ ವಿನಿಮಯ ಪದ್ದತಿಯಲ್ಲಿ ತರಕಾರಿ, ಇತರೆ ವಸ್ತುಗಳ ಮಾರಾಟ ನಡೆಯುತ್ತದೆ! ಅರೇ ಇಂಥಾ ಕಾಲದಲ್ಲಿಯೂ...
Follow us
| Updated By: ಸಾಧು ಶ್ರೀನಾಥ್​

Updated on: Nov 11, 2023 | 4:43 PM

ಅಲೆಮಾರಿಯಾಗಿ ಅಲೆದಾಡುತ್ತಾ ಮನುಷ್ಯ ನಾಗರಿಕ ಸಮಾಜದತ್ತ ಮುಖ ಮಾಡಿದಾಗ ಸಹಬಾಳ್ವೆ ಹಾಗೂ ವಿನಿಮಯ ಪದ್ದತಿ ಮೂಲಕ ಜೀವನ ಮಾಡುತ್ತಿದ್ದ. ನಗನಾಣ್ಯ ನೋಟುಗಳು ಇಲ್ಲದ ಕಾಲದಲ್ಲಿ ಪರಸ್ಪರ ಕೊಡು-ಕೊಳ್ಳುವಿಕೆಯ ಮೂಲಕ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದ. ಅವಶ್ಯಕ ವಸ್ತುಗಳನ್ನು ಪಡೆಯಲು ತನ್ನ ಬಳಿಯಿದ್ದ ವಸ್ತುಗಳನ್ನು ನೀಡಿ, ಪಡೆಯುತ್ತಿದ್ದ. ಇಂಥ ಪದ್ದತಿ ಆಧುನಿಕತೆ ಬೆಳೆದಂತೆಲ್ಲಾ ಮಾಯವಾಗಿದೆ. ಹಣವಿದ್ದರೆ ಸಾಕು ಎಲ್ಲವೂ ಸಿಗುತ್ತದೆ ಎಂಬಂತಾಗಿದೆ. ಇಷ್ಟೆಲ್ಲಾ ಆಧುನಿಕತೆ ವೈಜ್ಞಾನಿಕತೆಯ ಮಧ್ಯೆ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಇಂದಿಗೂ ವಿನಿಮಯ ಪದ್ದತಿ ಮೂಲಕ ತರಕಾರಿ ಹಾಗೂ ಇತರೆ ವಸ್ತುಗಳು ಮಾರುಕಟ್ಟೆ ನಡೆಯುತ್ತದೆ. ಅರೇ ಇಂಥಾ ಕಾಲದಲ್ಲಿಯೂ ಇದು ಸಾಧ್ಯಾನಾ? ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ. ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಮಾರುಕಟ್ಟೆ… ಮಾರುಕಟ್ಟೆಯಲ್ಲಿ ವಿನಿಮಯ ಪದ್ದತಿ ಇನ್ನೂ ಜೀವಂತ… ನಾಣ್ಯ-ನೋಟುಗಳ ಚಲಾವಣೆಗಿಂತ ಇಲ್ಲಿ ವಿನಿಮಯ ಪದ್ದತಿಯಲ್ಲೇ ತರಕಾರಿ ಹಣ್ಣು ಇತರೆ ವಸ್ತುಗಳು ಖರೀದಿ ಸಾಧ್ಯ… ಜೋಳ ನೀಡಿದರೆ ಸಾಕು ನಿಮಗಿಷ್ಟವಾದುದನ್ನಾ ಖರೀದಿ ಮಾಡಬಹುದು.. ಇಂಥದೊಂದು ವಿಶೇಷ ಮಾರುಕಟ್ಟೆ ಪ್ರತಿ ವಾರ ನಡೆಯುತ್ತಿರೋದು ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ!

ತಲೆತಲೆಮಾರುಗಳಿಂದೂ ಸಾರವಾಡ ಗ್ರಾಮದಲ್ಲಿ ನಡೆಯೋ ವಾರದ ಸಂತೆ ಜೋಳದ ವಿನಿಮಿಯದೊಂದಿಗೆ ಇತರೆ ವಸ್ತುಗಳನ್ನು ತರಕಾರಿ ಹಣ್ಣುಗಳನ್ನು ಕೊಳ್ಳಬಹುದಾಗಿದೆ. ಇಲ್ಲಿ ಹಣದ ಬದಲಾಗಿ ಜೋಳವೇ ಪ್ರಮುಖವಾದುದಾಗಿದೆ. ಆಧುನಿಕತೆಗೂ ಮುಂಚೆ ವಸ್ತುಗಳನ್ನು ಪರಸ್ಪರ ಹೇಗೆ ವಿನಿಮಯ ಮಾಡಿಕೊಂಡು ಜೀವನ ಮಾಡಲಾಗುತ್ತಿತ್ತೋ ಅದೇ ಮಾದರಿಯಲ್ಲಿ ಸಾರವಾಡ ಗ್ರಾಮದಲ್ಲಿ ಪ್ರತಿ ಶನಿವಾರ ನಡೆಯೋ ಮಾರುಕಟ್ಟೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ. ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆವರೆಗೆ ನಡೆಯೋ ಈ ಸಂತೆಯಲ್ಲಿ ಏನೇ ವಸ್ತುಗಳು ಬೇಕೆಂದರೆ ಅದಕ್ಕೆ ಪ್ರತಿಯಾಗಿ ಜೋಳವನ್ನು ನೀಡಬೇಕು. ಇಲ್ಲಿ ಹಣ ಪ್ರಮುಖ ಪಾತ್ರ ವಹಿಸಿಲ್ಲ. ಇಂಥಹ ವಿಶಿಷ್ಟ ಸಂತೆ ನಡೆಯೋದು ಸಾರವಾಡ ಗ್ರಾಮದಲ್ಲಿ ಮಾತ್ರ ಎಂಬುದೂ ಸಹ ವಿಶೇಷವೇ ಆಗಿದೆ.

ಇಂದಿನ ಕಾಲದಲ್ಲಿ ಹಣವಿಲ್ಲದೇ ಯಾವ ಕೆಲಸ ಕಾರ್ಯಗಳೂ ಸಹ ಆಗಲ್ಲಾ. ಅಂತದ್ದರಲ್ಲಿ ಸಾರವಾಡದ ಸಂತೆಯಲ್ಲಿ ಹಣಕ್ಕಿಂತ ಜೋಳಕ್ಕೆ ಹೆಚ್ಚು ಬೇಡಿಕೆಯಿದೆ. ಸಾರವಾಡ ಗ್ರಾಮದ ಭಾಗದಲ್ಲಿ ಬೆಳೆದ ಜೋಳ ರುಚಿಕರ ಹಾಗೂ ಆರೋಗ್ಯಕರ ಎಂಬ ಮಾತಿದೆ. ಜೊತೆಗೆ ಬರದ ಕಾರಣ ಜೋಳದ ದರವೂ ಏರಿಕೆಯಾಗಿದೆ. ಜೋಳದ ದರ ಏರಿಕೆಯಾಗದ ಆ ಕಾಲದಲ್ಲೂ ಇಲ್ಲಿನ ಸಂತೆ ಜೋಳದ ವಿನಿಮಯದೊಂದಿಗೆ ನಡೆಯುತ್ತದೆ.

Also Read: ಇದು ಒಂದು ಗ್ರಾಮದ, ಒಬ್ಬ ರೈತನ ಯಶಸ್ಸಿನ ಕತೆಯಲ್ಲ-ಊರಿಗೇ ಊರು ಯಶಸ್ಸು ಕಂಡಿರುವ ಸುಂದರ ಬದುಕಿನ ಕತೆ! ಯಾವೂರು ಅದು?

ಒಂದೊಂದು ತರಕಾರಿಗೂ ಇಂತಿಷ್ಟು ಜೋಳ ಎಂದು ವ್ಯವಹಾರ ಮಾಡಿ ಕೊಡು ಕೊಳ್ಳುವಿಕೆ ನಡೆಯುತ್ತಿದೆ. ಹಣ್ಣಿರಲಿ ತರಕಾರಿ ಇರಲಿ ಅಥವಾ ಇತರೆ ಯಾವುದೇ ವಸ್ತುವಿರಲಿ ಅದಕ್ಕೆ ಇಂತಿಷ್ಟು ಜೋಳವೆಂದು ತೀರ್ಮಾನ ಮಾಡಿ ಜೋಳ ನೀಡುವ ಮೂಲಕ ಕೊಳ್ಳುವಿಕೆ ಮಾಡುತ್ತಾರೆ. ಸಮಪಾಲು, ಎರಡು ಪಟ್ಟು ಪಾಲು, ಎರಡು ಪಟ್ಟು ಪಾಲು ಜೋಳ ನೀಡಲಾಗುತ್ತದೆ. ತೂಕದ ಜೊತೆಗೆ ಅಳತೆಯ ಮೇಲೂ ಇಲ್ಲಿ ಜೋಳ ವಿನಿಮಯವಾಗುತ್ತದೆ.

ಸಾರವಾಡದ ಸಂತೆಗೆ ಜೋಳವನ್ನು ಸಂಗ್ರಹಿಸಲು ವಿವಿಧ ಗ್ರಾಮಗಳ ಜನರು ಸಹ ತರಕಾರಿ ಹಣ್ಣುಗಳು ಸೇರಿದಂತೆ ಇತರೆ ವಸ್ತುಗಳನ್ನು ತಂದು ವಿನಿಮಯ ಮದ್ದತಿಯ ಮೂಲಕ ಮಾರಾಟ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಹೇಗೆ ವಿನಿಮಯ ಪದ್ದತಿ ಮೂಲಕ ವ್ಯಾಪಾರ ವಹಿವಾಟು ನಡೆಯುತ್ತಿತ್ತೋ ಹಾಗೇ ನಮ್ಮೂರಿನ ಸಂತೆಯೂ ನಡೆಯುತ್ತದೆ ಎಂದು ಗ್ರಾಮದ ಜನರು ಹೆಮ್ಮೆ ಪಡುತ್ತಾರೆ.

Also read: ಗಾಂಧಿ ಗ್ರಾಮ ಪುರಸ್ಕಾರ ಹುಡುಕಿಕೊಂಡು ಬಂದಿದೆ ಮುಧೋಳ ಗ್ರಾಮಕ್ಕೆ! ಏನಿದರ ವಿಶೇಷ?

ವಿಜಯಪುರ ಜಿಲ್ಲೆಯಲ್ಲಿ ಸಾರಾವಾಡದ ಸಂತೆಯನ್ನು ಜೋಳದ ಸಂತೆಯೆಂದು, ವಿನಿಮಯ ಪದ್ದತಿಯ ಸಂತೆಯೆಂದು ಕರೆಯುತ್ತಾರೆ. ಎಷ್ಟೇ ಆಧುನಿಕತೆ ಬೆಳೆದರೂ ಸಹ ಹಿಂದಿನ ಪದ್ದತಿಯನ್ನು ಇಲ್ಲಿ ಉಳಿಸಿಕೊಂಡು ಬರಲಾಗಿದೆ. ಗ್ರಾಮದ ಜನರಷ್ಟೇಯಲ್ಲಾ ಸುತ್ತಮುತ್ತಲ ಗ್ರಾಮಗಳ ಜನರೂ ಸಹ ಇದೇ ಪದ್ದತಿಯಲ್ಲಿ ಈ ಮಾರುಕಟ್ಟೆಯಲ್ಲಿ ಭಾಗಿಯಾಗುತ್ತಾರೆ. ತೀರಾ ಅನಿವಾರ್ಯವೆಂಬಂತೆ ರೈತರಲ್ಲದವರು, ನೌಕರರು ಜೋಳದ ಬದಲಾಗಿ ಹಣಕಾಸಿನ ಮೂಲಕ ವ್ಯವಹಾರ ಮಾಡುತ್ತಾರೆ. ಆದರೆ ಅದುನ ತೀರಾ ಕಡಿಮೆ ಪ್ರಮಾಣದಲ್ಲಿ ನಡೆಯುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ