AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!

ಪ್ರತಿ ಶುಕ್ರವಾರ ಸಿನಿಮಾ ರಿಲೀಸ್​ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್​ ಮೈ ಶೋ ಕೂಡ ಅನುಸರಿಸುತ್ತಿದೆ.

BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!
ಬುಕ್​ಮೈಶೋ ಆ್ಯಪ್​ನಲ್ಲಿ ಖರೀದಿಗೆ ಲಭ್ಯವಿರುವ ಸಿನಿಮಾ
ರಾಜೇಶ್ ದುಗ್ಗುಮನೆ
| Edited By: |

Updated on: Feb 08, 2021 | 9:28 PM

Share

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಚಿತ್ರಮಂದಿರ ಸಂಪೂರ್ಣ ಬಂದ್​ ಆಗಿತ್ತು. ಈ ಸಮಯದಲ್ಲಿ ಒಟಿಟಿ​ಗೆ ತುಂಬಾನೇ ಬೇಡಿಕೆ ಹೆಚ್ಚಿತ್ತು. ಈ ಬೆಳವಣಿಗೆ ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳದೆ ಆನ್​ಲೈನ್​ನಲ್ಲೇ​ ಸಿನಿಮಾ ವೀಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಆರಂಭಿಸಿದ್ದಾರೆ. ಹೀಗಾಗಿ, ಟಿಕೆಟ್​ ಬುಕಿಂಗ್​ ತಾಣ BookMyShow ಸೇರಿ ಸಾಕಷ್ಟು ಆ್ಯಪ್​ಗಳು ನಷ್ಟ ಅನುಭವಿಸಲು ಆರಂಭಿಸಿದ್ದವು. ಆದರೆ, ಬುಕ್​ ಮೈ ಶೋ ಈ ಬೆಳವಣಿಗೆಯಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಒಟಿಟಿ ಮಾದರಿಯಲ್ಲೇ ಹಣ ಕೊಟ್ಟು ಸಿನಿಮಾ ವೀಕ್ಷಣೆ ಮಾಡುವ ಆಯ್ಕೆಯನ್ನು ಬುಕ್​ಮೈ ಶೋ ತಂದಿದೆ.

ಇತ್ತೀಚೆಗೆ ರಿಲೀಸ್​ ಆದ ಕ್ರಿಸ್ಟೋಫರ್​ ನೋಲನ್​ ಅವರ ಟೆನೆಟ್​, ವಂಡರ್​ ವುಮನ್​ 1984 ಸೇರಿ ಸುಮಾರು 600 ಸಿನಿಮಾಗಳು ಬುಕ್​ ಮೈ ಶೋನಲ್ಲಿದೆ. ಕೆಲ ಸಿನಿಮಾಗಳನ್ನು ನೀವು ಕೊಂಡು ನೋಡಬಹುದು, ಇಲ್ಲವೇ ರೆಂಟ್​ ಕೂಡ ಪಡೆಯಬಹುದು.

ಪ್ರತಿ ಶುಕ್ರವಾರ ಸಿನಿಮಾ ರಿಲೀಸ್​ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್​ ಮೈ ಶೋ ಕೂಡ ಅನುಸರಿಸುತ್ತಿದೆ. ಅಂದರೆ, ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬುಕ್​ ಮೈ ಶೋನಲ್ಲಿ ರಿಲೀಸ್​ ಆಗಲಿವೆ.

ಉಳಿದ ಒಟಿಟಿಗೆ ಹೋಲಿಸಿದರೆ ಬುಕ್​ಮೈಶೋ ನೀಡುತ್ತಿರುವ ಆಯ್ಕೆ ತುಂಬಾನೇ ಭಿನ್ನವಾಗಿದೆ. ಏಕೆಂದರೆ, ಉಳಿದ ಒಟಿಟಿಗಳಲ್ಲಿ ಒಂದು ಸಿನಿಮಾ ನೋಡಬೇಕು ಎಂದರೂ ನೀವು ಕನಿಷ್ಠ ಒಂದು ತಿಂಗಳ ಚಂದಾದಾರತ್ವ ಪಡೆಯಲೇಬೇಕು. ಆದರೆ, ಬುಕ್​ ಮೈ ಶೋನಲ್ಲಿ ನೀವು ಒಂದು ಸಿನಿಮಾವನ್ನು ಕೂಡ ಕೊಂಡು ನೋಡಬಹುದು. ಒಂದು ಸಿನಿಮಾ ಬೆಲೆ ಕನಿಷ್ಠ 40 ರೂಪಾಯಿಯಿಂದ ಗರಿಷ್ಠ 700 ರೂಪಾಯಿ ವರೆಗೂ ಇದೆ.

Book-My-Show

ಬುಕ್​ಮೈಶೋ ಆ್ಯಪ್​ನಲ್ಲಿ ಖರೀದಿಗೆ ಲಭ್ಯವಿರುವ ಸಿನಿಮಾ

ನೋಡೋದು ಹೇಗೆ?

  • ನೀವು ಮೊದಲಿಗೆ ಬುಕ್​ ಮೈ ಶೋ ಆ್ಯಪ್​ ಅಪ್​​ಡೇಟ್​ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ನಿಮಗೆ ಸ್ಟ್ರೀಮ್​ ಆಯ್ಕೆ ಸಿಗಲಿದೆ.
  • ಅಪ್​ಡೇಟ್​ ಮಾಡಿಕೊಂಡ ನಂತರ ಸ್ಟ್ರೀಮ್​ ಆಯ್ಕೆ ಕ್ಲಿಕ್​ ಮಾಡಬೇಕು.
  • ಸ್ಟ್ರೀಮ್​ ಆಯ್ಕೆ ಕ್ಲಿಕ್​ ಮಾಡಿದ ನಂತರ ಅಲ್ಲಿ ಸಿಗುವ ಸಿನಿಮಾಗಳನ್ನು ನೀವು ರೆಂಟ್​ ಅಥವಾ ಕೊಂಡುಕೊಂಡು ಸಿನಿಮಾ ನೋಡಬಹುದಾಗಿದೆ.

ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು: ಕೇಂದ್ರದ ಮಹತ್ವದ ಘೋಷಣೆ

Follow Us
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ