AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!

ಪ್ರತಿ ಶುಕ್ರವಾರ ಸಿನಿಮಾ ರಿಲೀಸ್​ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್​ ಮೈ ಶೋ ಕೂಡ ಅನುಸರಿಸುತ್ತಿದೆ.

BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!
ಬುಕ್​ಮೈಶೋ ಆ್ಯಪ್​ನಲ್ಲಿ ಖರೀದಿಗೆ ಲಭ್ಯವಿರುವ ಸಿನಿಮಾ
ರಾಜೇಶ್ ದುಗ್ಗುಮನೆ
| Edited By: |

Updated on: Feb 08, 2021 | 9:28 PM

Share

ಕೊರೊನಾ ವೈರಸ್​ ಕಾಣಿಸಿಕೊಂಡ ನಂತರ ಚಿತ್ರಮಂದಿರ ಸಂಪೂರ್ಣ ಬಂದ್​ ಆಗಿತ್ತು. ಈ ಸಮಯದಲ್ಲಿ ಒಟಿಟಿ​ಗೆ ತುಂಬಾನೇ ಬೇಡಿಕೆ ಹೆಚ್ಚಿತ್ತು. ಈ ಬೆಳವಣಿಗೆ ನಂತರ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳದೆ ಆನ್​ಲೈನ್​ನಲ್ಲೇ​ ಸಿನಿಮಾ ವೀಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಆರಂಭಿಸಿದ್ದಾರೆ. ಹೀಗಾಗಿ, ಟಿಕೆಟ್​ ಬುಕಿಂಗ್​ ತಾಣ BookMyShow ಸೇರಿ ಸಾಕಷ್ಟು ಆ್ಯಪ್​ಗಳು ನಷ್ಟ ಅನುಭವಿಸಲು ಆರಂಭಿಸಿದ್ದವು. ಆದರೆ, ಬುಕ್​ ಮೈ ಶೋ ಈ ಬೆಳವಣಿಗೆಯಿಂದ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಒಟಿಟಿ ಮಾದರಿಯಲ್ಲೇ ಹಣ ಕೊಟ್ಟು ಸಿನಿಮಾ ವೀಕ್ಷಣೆ ಮಾಡುವ ಆಯ್ಕೆಯನ್ನು ಬುಕ್​ಮೈ ಶೋ ತಂದಿದೆ.

ಇತ್ತೀಚೆಗೆ ರಿಲೀಸ್​ ಆದ ಕ್ರಿಸ್ಟೋಫರ್​ ನೋಲನ್​ ಅವರ ಟೆನೆಟ್​, ವಂಡರ್​ ವುಮನ್​ 1984 ಸೇರಿ ಸುಮಾರು 600 ಸಿನಿಮಾಗಳು ಬುಕ್​ ಮೈ ಶೋನಲ್ಲಿದೆ. ಕೆಲ ಸಿನಿಮಾಗಳನ್ನು ನೀವು ಕೊಂಡು ನೋಡಬಹುದು, ಇಲ್ಲವೇ ರೆಂಟ್​ ಕೂಡ ಪಡೆಯಬಹುದು.

ಪ್ರತಿ ಶುಕ್ರವಾರ ಸಿನಿಮಾ ರಿಲೀಸ್​ ಆಗುವ ಸಂಪ್ರದಾಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದೇ ಪದ್ಧತಿಯನ್ನು ಬುಕ್​ ಮೈ ಶೋ ಕೂಡ ಅನುಸರಿಸುತ್ತಿದೆ. ಅಂದರೆ, ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬುಕ್​ ಮೈ ಶೋನಲ್ಲಿ ರಿಲೀಸ್​ ಆಗಲಿವೆ.

ಉಳಿದ ಒಟಿಟಿಗೆ ಹೋಲಿಸಿದರೆ ಬುಕ್​ಮೈಶೋ ನೀಡುತ್ತಿರುವ ಆಯ್ಕೆ ತುಂಬಾನೇ ಭಿನ್ನವಾಗಿದೆ. ಏಕೆಂದರೆ, ಉಳಿದ ಒಟಿಟಿಗಳಲ್ಲಿ ಒಂದು ಸಿನಿಮಾ ನೋಡಬೇಕು ಎಂದರೂ ನೀವು ಕನಿಷ್ಠ ಒಂದು ತಿಂಗಳ ಚಂದಾದಾರತ್ವ ಪಡೆಯಲೇಬೇಕು. ಆದರೆ, ಬುಕ್​ ಮೈ ಶೋನಲ್ಲಿ ನೀವು ಒಂದು ಸಿನಿಮಾವನ್ನು ಕೂಡ ಕೊಂಡು ನೋಡಬಹುದು. ಒಂದು ಸಿನಿಮಾ ಬೆಲೆ ಕನಿಷ್ಠ 40 ರೂಪಾಯಿಯಿಂದ ಗರಿಷ್ಠ 700 ರೂಪಾಯಿ ವರೆಗೂ ಇದೆ.

Book-My-Show

ಬುಕ್​ಮೈಶೋ ಆ್ಯಪ್​ನಲ್ಲಿ ಖರೀದಿಗೆ ಲಭ್ಯವಿರುವ ಸಿನಿಮಾ

ನೋಡೋದು ಹೇಗೆ?

  • ನೀವು ಮೊದಲಿಗೆ ಬುಕ್​ ಮೈ ಶೋ ಆ್ಯಪ್​ ಅಪ್​​ಡೇಟ್​ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ನಿಮಗೆ ಸ್ಟ್ರೀಮ್​ ಆಯ್ಕೆ ಸಿಗಲಿದೆ.
  • ಅಪ್​ಡೇಟ್​ ಮಾಡಿಕೊಂಡ ನಂತರ ಸ್ಟ್ರೀಮ್​ ಆಯ್ಕೆ ಕ್ಲಿಕ್​ ಮಾಡಬೇಕು.
  • ಸ್ಟ್ರೀಮ್​ ಆಯ್ಕೆ ಕ್ಲಿಕ್​ ಮಾಡಿದ ನಂತರ ಅಲ್ಲಿ ಸಿಗುವ ಸಿನಿಮಾಗಳನ್ನು ನೀವು ರೆಂಟ್​ ಅಥವಾ ಕೊಂಡುಕೊಂಡು ಸಿನಿಮಾ ನೋಡಬಹುದಾಗಿದೆ.

ಇನ್ಮುಂದೆ ಒಟಿಟಿಗೂ ಬರಲಿದೆ ಕಟ್ಟುಪಾಡು: ಕೇಂದ್ರದ ಮಹತ್ವದ ಘೋಷಣೆ

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ