AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡ ಮೈ ಕೊರೆಯುವ ಚಳಿಯಲ್ಲಿ ಸಿಕ್ಕಿ ಹಾಕಿಕೊಂಡು ನಡುಗುತ್ತಿರುವ ಸಾರಿಗೆ ನೌಕರರು

ಭೀಕರ ಚಳಿಯ ಮಧ್ಯೆ ಕಂಡಕ್ಟರ್ ಹಾಗೂ ಡ್ರೈವರ್ಗಳು ಬಸ್​ನಲ್ಲಿ ನಡುಗುತ್ತಲೇ ದಿನದೂಡುತ್ತಿದ್ದಾರೆ. ಹಾಸಿಕೊಳ್ಳಲು ಹಾಸಿಗೆ ಇಲ್ಲದೇ, ಹೊದ್ದು ಮಲಗಲು ದಪ್ಪನೆಯ ಬೆಡ್​ಶೀಟ್, ರಗ್ ಕೂಡ ಇಲ್ಲದೇ, ಕೊರೆವ ಚಳಿ ನಡುವೆಯೂ ಇರುವ ಸೊಳ್ಳೆ ಕಾಟದಲ್ಲಿ ರಾತ್ರಿ ಕಳೆಯುವುದೇ ಹರಸಾಹಸ.

ಕಾಫಿನಾಡ ಮೈ ಕೊರೆಯುವ ಚಳಿಯಲ್ಲಿ ಸಿಕ್ಕಿ ಹಾಕಿಕೊಂಡು ನಡುಗುತ್ತಿರುವ ಸಾರಿಗೆ ನೌಕರರು
ಚಿಕ್ಕಮಗಳೂರಿನ ಚಳಿಗೆ ನಡುಗಿದ ಸಾರಿಗೆ ಸಿಬ್ಬಂದಿ
Skanda
| Edited By: |

Updated on: Dec 14, 2020 | 6:15 AM

Share

ಚಿಕ್ಕಮಗಳೂರು: ಸಾರಿಗೆ ನೌಕರರ ಮುಷ್ಕರ ಅಂತೂ ಇಂತೂ ಅಂತ್ಯ ಕಂಡಿತು ಎನ್ನುವಷ್ಟರಲ್ಲಿ ಮತ್ತೆ ಮುಂದುವರೆಯಲಿದೆ ಎಂಬ ಸುದ್ದಿ ಬಿದ್ದಿದೆ. ಉತ್ತರ ಕರ್ನಾಟಕ ಕಡೆಯಿಂದ ಮೂರು ದಿನಗಳ ಹಿಂದೆ ಚಿಕ್ಕಮಗಳೂರಿಗೆ ಬಂದ ಕಂಡಕ್ಟರ್ ಹಾಗೂ ಡ್ರೈವರ್​ಗಳು ಕೊಂಚ ನಿರಾಳರಾಗುವಷ್ಟರಲ್ಲಿ ಮುಷ್ಕರ ಮುಂದುವರೆಯುವ ಸುದ್ದಿ ಮತ್ತೆ ನಡುಕ ಹುಟ್ಟಿಸಿದೆ. ಈ ನಡುಕಕ್ಕೆ ಕಾರಣ ಮಲೆನಾಡಿನ ಕೊರೆಯುವ ಚಳಿ. ಮೂರು ದಿನಗಳಿಂದ ಚಿಕ್ಕಮಗಳೂರಿನ ಕೊರೆವ ಚಳಿಯಲ್ಲಿ ಬಸ್ಸಿನಲ್ಲೇ ದಿನದೂಡುತ್ತಿರುವ ಅವರ ಪರಿಸ್ಥಿತಿ ನಿಜಕ್ಕೂ ಅಯ್ಯೋ.. ಪಾಪ!

ಬಸ್ ನಿಲ್ದಾಣದಲ್ಲೇ ಮುಖ ತೊಳೆದುಕೊಂಡು, ನಿಲ್ದಾಣದಲ್ಲೇ ಊಟ-ತಿಂಡಿ ಮಾಡಿ ರಾತ್ರಿ ಬಸ್ಸಿನೊಳಗೆ ಕಾಲ ಕಳೆಯುತ್ತಿರುವ ಡ್ರೈವರ್ ಹಾಗೂ ಕಂಡಕ್ಟರ್​ಗಳ ಅವಸ್ಥೆ ಯಾರಿಗೂ ಬೇಡ ಎನ್ನುವಂತಾಗಿದೆ. ಒಂದೆಡೆ ಜೋರಾಗಿ ಬೀಸುವ ಗಾಳಿ. ಇನ್ನೊಂದೆಡೆ ಮೈಕೊರೆವ ರಣ ಚಳಿ. ಸಂಜೆ ಆರರಿಂದ ಬೆಳಗ್ಗೆ 9 ಗಂಟೆಯವರೆಗೆ ಚಳಿಯನ್ನು ತಡೆದುಕೊಳ್ಳುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಬಸ್ಸಿನಲ್ಲಿ ಮಲಗಿ ರಾತ್ರಿ ಕಳೆಯುತ್ತಿರುವ ಡ್ರೈವರ್​, ಕಂಡಕ್ಟರ್​ಗಳಿಗೆ ‘ಪ್ರತಿಭಟನೆಯ ಚಳಿ’ ಜೋರಾಗಿಯೇ ತಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಭೀಕರ ಚಳಿಯ ಮಧ್ಯೆ ಕಂಡಕ್ಟರ್ ಹಾಗೂ ಡ್ರೈವರ್ಗಳು ಬಸ್​ನಲ್ಲಿ ನಡುಗುತ್ತಲೇ ದಿನದೂಡುತ್ತಿದ್ದಾರೆ. ಹಾಸಿಕೊಳ್ಳಲು ಹಾಸಿಗೆ ಇಲ್ಲದೇ, ಹೊದ್ದು ಮಲಗಲು ದಪ್ಪನೆಯ ಬೆಡ್​ಶೀಟ್, ರಗ್ ಕೂಡ ಇಲ್ಲದೇ, ಕೊರೆವ ಚಳಿ ನಡುವೆಯೂ ಇರುವ ಸೊಳ್ಳೆ ಕಾಟದಲ್ಲಿ ರಾತ್ರಿ ಕಳೆಯಲು ಹರಸಾಹಸ ಪಡುತ್ತಿದ್ದಾರೆ.

ಡ್ರೈವರ್ ಪ್ಲಾಸ್ಟಿಕ್ ಚಾಪೆ ಹಾಸಿಕೊಂಡು ಮಲಗಿದ್ರೆ, ಕಂಡಕ್ಟರ್ ರಟ್ಟಿನ ಬಾಕ್ಸ್​ ಹಾಸಿಕೊಂಡು ಮಲಗುತ್ತಿದ್ದಾರೆ. ಚಳಿಯಲ್ಲಿ ನಡುಗುತ್ತಾ ಕಾಲ ದೂಡುವ ಮಧ್ಯೆ ಏಕಾಏಕಿ ಬೀಸುವ ಗಾಳಿ ಡ್ರೈವರ್, ಕಂಡಕ್ಟರ್​ಗಳನ್ನ ಕಂಗಾಲಾಗಿಸುತ್ತಿದೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಸಿಬ್ಬಂದಿಗಳು ಇಡೀ ರಾತ್ರಿ ನಿದ್ದೆ ಬರಲ್ಲ ಸಾರ್, ಭಾರೀ ಚಳಿ ಇದೆ ಎಂದು ಅಳಲು ತೋಡಿಕೊಂಡರು. ಈಗ ಪ್ರತಿಭಟನೆ ಮತ್ತೆ ಮುಂದುವರೆಯುವ ನಿರ್ಧಾರ ಹೊರಬಿದ್ದಿರುವುದರಿಂದ ಚಿಕ್ಕಮಗಳೂರಿನಲ್ಲಿ ದಿನ ಕಳೆಯುತ್ತಿರುವ ಡ್ರೈವರ್​, ಕಂಡಕ್ಟರ್​ಗಳಿಂತೂ ಚಳಿ ಹಿಡಿದಿರುವುದು ಸುಳ್ಳಲ್ಲ.

ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್​: ನಾಳೆಯಿಂದ ಬಸ್​ ರೈಟ್​.. ರೈಟ್​!

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ