AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೊಚ್ಚಿಗೆದ್ದ ರೈತರಿಂದ ವಿಮಾ ಕಂಪನಿ ‌ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ

ಗದಗ: ಬೆಳೆ ವಿಮೆ ಹಣ ಪಾವತಿಸಲು ಇನ್ಶೂರೆನ್ಸ್ ಕಂಪನಿ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ರೈತ ವಿಮಾ ಕಂಪನಿ ‌ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮುಳಗುಂದ ರಸ್ತೆಯಲ್ಲಿರೋ ಬಜಾಜ್ ಅಲಿಯಾಂಜ್ ವಿಮಾ‌ ಕಂಪನಿ ಕಚೇರಿಯಲ್ಲಿ ನಡೆದಿದೆ. ಗದಗ ಜಿಲ್ಲೆಯಲ್ಲಿ ನಿರಂತರ ಮಳೆ, ಪ್ರವಾಹಕ್ಕೆ ಹೆಸರು ಬೆಳೆ ಹಾನಿಯಾಗಿದೆ. ಹೀಗಾಗಿ ಕಂಗಾಲಾದ ರೈತರು ಹೆಸರು ಬೆಳೆ ವಿಮೆ ಹಣ ಪಡೆಯಲು ಕಚೇರಿಗೆ ಹೋಗಿದ್ದಾರೆ. ಈ ವೇಳೆ ಕೃಷಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಕ್ಕೆ ರೈತರು ಕಿಡಿಕಾಡಿದ್ದಾರೆ. ನಂತರ ಅರ್ಧ ಗಂಟೆಯಾದ್ರೂ […]

ರೊಚ್ಚಿಗೆದ್ದ ರೈತರಿಂದ ವಿಮಾ ಕಂಪನಿ ‌ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ
ಸಾಧು ಶ್ರೀನಾಥ್​
|

Updated on: Oct 15, 2020 | 3:43 PM

Share

ಗದಗ: ಬೆಳೆ ವಿಮೆ ಹಣ ಪಾವತಿಸಲು ಇನ್ಶೂರೆನ್ಸ್ ಕಂಪನಿ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ರೈತ ವಿಮಾ ಕಂಪನಿ ‌ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಮುಳಗುಂದ ರಸ್ತೆಯಲ್ಲಿರೋ ಬಜಾಜ್ ಅಲಿಯಾಂಜ್ ವಿಮಾ‌ ಕಂಪನಿ ಕಚೇರಿಯಲ್ಲಿ ನಡೆದಿದೆ.

ಗದಗ ಜಿಲ್ಲೆಯಲ್ಲಿ ನಿರಂತರ ಮಳೆ, ಪ್ರವಾಹಕ್ಕೆ ಹೆಸರು ಬೆಳೆ ಹಾನಿಯಾಗಿದೆ. ಹೀಗಾಗಿ ಕಂಗಾಲಾದ ರೈತರು ಹೆಸರು ಬೆಳೆ ವಿಮೆ ಹಣ ಪಡೆಯಲು ಕಚೇರಿಗೆ ಹೋಗಿದ್ದಾರೆ. ಈ ವೇಳೆ ಕೃಷಿ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಇಲ್ಲದಕ್ಕೆ ರೈತರು ಕಿಡಿಕಾಡಿದ್ದಾರೆ.

ನಂತರ ಅರ್ಧ ಗಂಟೆಯಾದ್ರೂ ಕಚೇರಿಗೆ ಅಧಿಕಾರಿಗಳು ಬಂದಿಲ್ಲ. ಹಾಗೂ ಹೆಸರು ಬೆಳೆ ವಿಮೆ ಹಣ ನೀಡಲು ನಿರಾಕರಿಸಿದ್ದಕ್ಕೆ ವಿಮಾ ಕಂಪನಿ ಕಚೇರಿ ಶಟರ್ ಎಳೆದು ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಧಿಕಾರಿ ಹೇಳಿದ್ದಾರೆ ಯಾಕೆ ವಿಮಾ ಕಂಪನಿ ಹಣ ನೀಡಲ್ಲ ಅಂತ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Follow Us