ಸ್ಟೇರಿಂಗ್ ಕಟ್, ದಡದಲ್ಲಿ ಬಂಡೆಗೆ ಡಿಕ್ಕಿ! ಮೀನುಗಾರಿಕೆ ಬೋಟ್ ನೀರುಪಾಲು

ಸಾಧು ಶ್ರೀನಾಥ್​

|

Updated on: May 20, 2020 | 12:37 PM

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿರುವ ಘಟನೆ ನಡೆದಿದೆ. ಮೀನುಗಾರಿಕೆ ಮುಗಿಸಿ ವಾಪಸ್ ಬರುವಾಗ ಮಲ್ಪೆ ಬಂದರು ಸಮೀಪಿಸುವ ವೇಳೆ ಬಂಡೆಗೆ ಬಡಿದು ಅವಘಡ ಸಂಭವಿಸಿದೆ. ರೇಷ್ಮಾ ಖಾರ್ವಿ ಎಂಬುವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಲ ಸಮುದ್ರ ಬೋಟ್ ಇದಾಗಿದೆ. ಮೇ 14 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಬೋಟ್ ತೆರಳಿತ್ತು. ಮೇ 19 ರಂದು ವಾಪಾಸ್ ಆಗುವಾಗ ಬೋಟ್​ನ‌ ಸ್ಟೇರಿಂಗ್ ಕಟ್ ಆಗಿ, ನಿಯಂತ್ರಣ ತಪ್ಪಿ, ಬಂಡೆಗೆ ಡಿಕ್ಕಿ ಹೊಡೆದಿತ್ತು. ಪಕ್ಕದಲ್ಲಿದ್ದ ಇನ್ನೊಂದು […]

ಸ್ಟೇರಿಂಗ್ ಕಟ್, ದಡದಲ್ಲಿ ಬಂಡೆಗೆ ಡಿಕ್ಕಿ! ಮೀನುಗಾರಿಕೆ ಬೋಟ್ ನೀರುಪಾಲು

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿರುವ ಘಟನೆ ನಡೆದಿದೆ. ಮೀನುಗಾರಿಕೆ ಮುಗಿಸಿ ವಾಪಸ್ ಬರುವಾಗ ಮಲ್ಪೆ ಬಂದರು ಸಮೀಪಿಸುವ ವೇಳೆ ಬಂಡೆಗೆ ಬಡಿದು ಅವಘಡ ಸಂಭವಿಸಿದೆ.

ರೇಷ್ಮಾ ಖಾರ್ವಿ ಎಂಬುವರಿಗೆ ಸೇರಿದ ಶ್ರೀ ಸ್ವರ್ಣರಾಜ್ ಆಲ ಸಮುದ್ರ ಬೋಟ್ ಇದಾಗಿದೆ. ಮೇ 14 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಬೋಟ್ ತೆರಳಿತ್ತು. ಮೇ 19 ರಂದು ವಾಪಾಸ್ ಆಗುವಾಗ ಬೋಟ್​ನ‌ ಸ್ಟೇರಿಂಗ್ ಕಟ್ ಆಗಿ, ನಿಯಂತ್ರಣ ತಪ್ಪಿ, ಬಂಡೆಗೆ ಡಿಕ್ಕಿ ಹೊಡೆದಿತ್ತು.

ಪಕ್ಕದಲ್ಲಿದ್ದ ಇನ್ನೊಂದು ದೋಣಿಯವರಿಂದ ಬೋಟ್​ನಲ್ಲಿದ್ದ 6 ಜನರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 5 ಲಕ್ಷ ಮೌಲ್ಯದ ಮೀನು, ಬಲೆ ಹಾಗೂ ಡೀಸೆಲ್ ಸಮುದ್ರ ಪಾಲಾಗಿದೆ. ಘಟನೆಯಿಂದ ಅಂದಾಜು 80 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಈ ಸಂಬಂಧ ಕರಾವಳಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada