AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಹಾರ್ದಿಕ್ ಪಾಂಡ್ಯಗೆ ಭುಜನೋವು ಮರುಕಳಿಸಿರುವುದರಿಂದ ಬೌಲ್​ ಮಾಡುತ್ತಿಲ್ಲ: ಜಹೀರ್ ಖಾನ್

ಮುಂಬೈ ಟೀಮಿಗೆ ಆರನೇ ಬೌಲಿಂಗ್ ಆಪ್ಷನ್​ ಆಗಿ ವೆಸ್ಟ್ ಇಂಡೀಸ್ ಆಲ್​ರೌಂಡರ್ ಕೈರನ್ ಪೊಲ್ಲಾರ್ಡ್​ ಲಭ್ಯರಿದ್ದಾರೆಂದು ಜಹೀರ್​ ಖಾನ್ ಹೇಳಿದರು.

IPL 2021: ಹಾರ್ದಿಕ್ ಪಾಂಡ್ಯಗೆ ಭುಜನೋವು ಮರುಕಳಿಸಿರುವುದರಿಂದ ಬೌಲ್​ ಮಾಡುತ್ತಿಲ್ಲ: ಜಹೀರ್ ಖಾನ್
ಹಾರ್ದಿಕ್ ಪಾಂಡ್ಯ
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: Apr 13, 2021 | 7:49 AM

Share

ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಮತ್ತೆ ಭುಜದ ಸಮಸ್ಯೆ ಎದುರಾಗಿದೆಯೇ? ಶುಕ್ರವಾರದಂದು ರಾಯಲ್​ ಚಾಲೆಂಜರ್ಸ್​ ವಿರುದ್ಧ ಅಡಿದ ಪಂದ್ಯದಲ್ಲಿ ಹಾರ್ದಿಕ್ ಬೌಲ್ ಮಾಡಲಿಲ್ಲ. ಮುಂಬೈ ಟೀಮಿನ ಮೂಲಗಳ ಪ್ರಕಾರ ಅವರಿಗೆ ಭುಜನೋವು ಮರುಕಳಿಸಿದ್ದರಿಂದ ಬೌಲಿಂಗ್​ನಿಂದ ದೂರ ಉಳಿದಿದ್ದಾರೆ. ಅದರೆ ಅವರು ಇಷ್ಟರಲ್ಲೇ ಬೌಲಿಂಗ್ ಆರಂಭಿಸಲಿದ್ದಾರೆ ಎಂದು ಟೀಮಿನ ಬೌಲಿಂಗ್ ಕೋಚ್ ಮತ್ತು ಮುಂಬೈ ಇಂಡಿಯನ್ಸ್ ಕ್ರಿಕೆಟ್​ ಆಪರೇಶನ್​ಗಳ ನಿರ್ದೇಶಕರಾಗಿರುವ ಜಹೀರ್ ಖಾನ್ ಹೇಳಿದ್ದಾರೆ. ಐದು ಬಾರಿ ಚಾಂಪಿಯನ್​ಶಿಪ್​ ಗೆದ್ದಿರುವ ಮುಂಬೈ ತಂಡವು ತನ್ನ ಉದ್ಘಾಟನಾ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಎರಡು ವಿಕೆಟ್​ಗಳಿಂದ ಸೋತಿತ್ತು.

ಸೋಮವಾರದಂದು ಕ್ರೀಡಾ ವೆಬ್​ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜಹೀರ್ ಅವರು,‘ ಹಾರ್ದಿಕ್ ಅವರು ಒಂದು ಇಡೀ ಪ್ಯಾಕೇಜ್ ಆಗಿ ತಂಡಕ್ಕೆ ಅಮೂಲ್ಯವಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅವರಿಗೆ ವರ್ಕ್​ಲೋಡ್​ ಸಂಬಂಧಿಸಿದ ಸಮಸ್ಯೆಯಾಗಿತ್ತು,’ ಎಂದು ಹೇಳಿದರು.

‘ಇಂಗ್ಲೆಂಡ್​ ವಿರುದ್ಧ ನಡೆದ ಸೀಮಿತ ಓವರ್​​ಗಳ ಸರಣಿಯಲ್ಲಿ ಹಾರ್ದಿಕ್ ಬೌಲ್ ಮಾಡಿದರು, ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವರು ಒಂಬತ್ತು ಓವರ್​ಗಳನ್ನು ಬೌಲ್ ಮಾಡಿದರು. ಅವರಿಗೆ ವರ್ಕ್​ಲೋಡ್​ ಜಾಸ್ತಿ ಎಂದು ಭಾವಿಸಿ ಟೀಮಿನ ಫಿಸಿಯೋ ಅವರ ಸಲಹೆಯನ್ನು ನಾವು ತೆಗದೆಕೊಂಡಾಗ ಅಲ್ಪಾವಧಿಗೆ ಅವರು ಬೌಲ್ ಮಾಡದಿರುವುದು ಒಳಿತು ಎಂದು ಹೇಳಿದರು. ಹಾಗಾಗೇ ಅವರಿಗೆ ಬೌಲ್ ಮಾಡಲು ಹೇಳುತ್ತಿಲ್ಲ,’ ಎಂದು ಜಹೀರ್​ ಹೇಳಿದರು.

‘ಅವರಿಗೆ ಭುಜನೋವಿನ ಸಮಸ್ಯೆಯಿದೆ ಅದನ್ನು ಅಲ್ಲಗಳೆಯಲಾಗದು. ಆದರೆ ಸಮಾಧಾನಕರ ಸಂಗತಿಯೆಂದರೆ ಅತಂಕಪಡುವಂಥದ್ದೇನೂ ಇಲ್ಲ. ಅವರು ಆದಷ್ಟು ಬೇಗ ಬೌಲಿಂಗ್ ಮಾಡುವುದನ್ನು ಆರಂಭಿಸಲಿದ್ದಾರೆ. ಅವರು ಆ ಮೂಲಕವೂ ತಂಡಕ್ಕೆ ಉತ್ತಮ ಕಾಣಿಕೆ ನೀಡಲಿದ್ದಾರೆ ಎಂಬ ಭರವಸೆ ನಮಗಿದೆ,’ ಎಂದು ತಮ್ಮ ಎಡಗೈ ವೇಗದ ಬೌಲಿಂಗ್ ಮೂಲಕ ಭಾರತದ ರಾಷ್ಟ್ರೀಯ ತಂಡಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ ಜಹೀರ್ ಹೇಳಿದರು.

ಮುಂಬೈ ಟೀಮಿಗೆ ಆರನೇ ಬೌಲಿಂಗ್ ಆಪ್ಷನ್​ ಆಗಿ ವೆಸ್ಟ್ ಇಂಡೀಸ್ ಆಲ್​ರೌಂಡರ್ ಕೈರನ್ ಪೊಲ್ಲಾರ್ಡ್​ ಲಭ್ಯರಿದ್ದಾರೆಂದು ಹೇಳಿದ ಜಹೀರ್​, ‘ಪೊಲ್ಲಾರ್ಡ್ ಅವರು ನಮ್ಮ ಆರನೇ ಬೌಲಿಂಗ್ ಆಪ್ಷನ್ ಆಗಿದ್ದಾರೆ, ಹಾಗಾಗಿ ಬೌಲಿಂಗ್ ವಿಭಾಗದಲ್ಲಿ ನಮಗೆ ಯಾವುದೇ ಚಿಂತೆಯಿಲ್ಲ. ನಾವು ಒಂದಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೆಕಿದೆ, ಅಷ್ಟೇ.’ ಎಂದು ತಿಳಿಸಿದರು.

ಈ ವರ್ಷದ ಫಾರ್ಮಾಟ್​ ಭಿನ್ನವಾಗಿದೆ. ಆ ದೃಷ್ಟಿಯ ಹಿನ್ನೆಲೆಯಿಂದ ಟೀಮಿನಲ್ಲಿ ಸ್ಥಾನ ಮತ್ತು ಜವಾಬ್ದಾರಿಗಳ ಬಗ್ಗೆ ನಾವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿರುವುದು ಅತ್ಯವಶ್ಯಕವಾಗಿದೆ. ನಮ್ಮ ಹೋಮ್​ ಗ್ರೌಂಡ್​ನಲ್ಲಿ ನಾವು ಆಡುತ್ತಿಲ್ಲ, ಈ ಅಂಶವನ್ನು ಅಂಗೀಕರಿಸಬೇಕಿದೆ ಮತ್ತು ನಾವು ಆಡಲಿರುವ ಮೈದಾನಗಳ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆಗಳನ್ನು ಮಾಡಿಕೊಂಡು ಮುಂದೆ ಸಾಗಬೇಕಿದೆ,’ ಎಂದು ಜಹೀರ್ ಹೇಳಿದರು.

ಆರಂಭ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಲಭ್ಯತೆ ಕುರಿತು ಮಾತಾಡಿದ ಮಾತಾಡಿದ ಜಹೀರ್, ‘ಕ್ವಿಂಟನ್​ ಅವರ ಕ್ವಾಂರಟೈನ್ ಅವಧಿ ಮುಗಿದಿದೆ, ನಿನ್ನೆಯಿಂದ ಅವರು ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ, ಹಾಗಾಗಿ ನಾಳೆ ಕೆಕೆಆರ್​ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅವರು ಲಭ್ಯರಿದ್ದಾರೆ,’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Manish Pandey IPL 2021 SRH Team Player: ಐಪಿಎಲ್​ನಲ್ಲಿ ಭಾರತದ ಪರ ಮೊಟ್ಟಮೊದಲ ಶತಕ ಬಾರಿಸಿದ ಮನೀಷ್​ ಪಾಂಡೆ ಮೇಲೆ ಎಸ್​ಆರ್​ಹೆಚ್​ಗೆ ಅಪಾರ ವಿಶ್ವಾಸ!

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?