AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಲ್ಲಿ ಕೊರೊನಾ ಸಂಕಷ್ಟಕ್ಕೆ ‘ನಾಟಿ’ ಮದ್ದು!

ಚಿಕ್ಕಮಗಳೂರು: ಇಷ್ಟು ದಿನ ನೆಮ್ಮದಿಯಿಂದ ಇದ್ದ ಕಾಫಿನಾಡಿನ ಜನರಿಗೆ ಇದೀಗ ಕೊರೊನಾ ಹೆಮ್ಮಾರಿಯ ಬಿಸಿ ತಟ್ಟಲು ಶುರುವಾಗಿದೆ. ಈ ನಡುವೆ ಜಿಲ್ಲೆಯಿಂದ ನೌಕರಿ ಅರಸಿ ಸಿಲಿಕಾನ್​ ಸಿಟಿ ಸೇರಿದ್ದ ಯುವಕರು ಇದೀಗ ಸೋಂಕಿನ ಭೀತಿಯಿಂದ ತಮ್ಮತಮ್ಮ ಗ್ರಾಮಗಳಗೆ ಮರಳಿದ್ದರು. ಇದಲ್ಲದೆ, ದೇಶಾದ್ಯಂತ ಘೋಷಿಸಲಾದ ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟಗಳಿಂದ ಜಿಲ್ಲೆಯ ರೈತರು ಸಹ ಬೇಸತ್ತು ಹೋಗಿದ್ದರು. ಜೆಡಿಎಸ್ ಯುವ ಕಾರ್ಯಕರ್ತರ ವಿನೂತನ ಪ್ರಯತ್ನ ಹೀಗಾಗಿ, ಇವರಿಬ್ಬರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಜಿಲ್ಲೆಯ ಯುವ ಜೆಡಿಎಸ್ ಕಾರ್ಯಕರ್ತರು ಮುಂದಾದರು. ಆದ್ದರಿಂದ, ಇಂದು […]

ಕಾಫಿನಾಡಲ್ಲಿ ಕೊರೊನಾ ಸಂಕಷ್ಟಕ್ಕೆ ‘ನಾಟಿ’ ಮದ್ದು!
KUSHAL V
| Updated By: |

Updated on:Jul 24, 2020 | 3:07 PM

Share

ಚಿಕ್ಕಮಗಳೂರು: ಇಷ್ಟು ದಿನ ನೆಮ್ಮದಿಯಿಂದ ಇದ್ದ ಕಾಫಿನಾಡಿನ ಜನರಿಗೆ ಇದೀಗ ಕೊರೊನಾ ಹೆಮ್ಮಾರಿಯ ಬಿಸಿ ತಟ್ಟಲು ಶುರುವಾಗಿದೆ. ಈ ನಡುವೆ ಜಿಲ್ಲೆಯಿಂದ ನೌಕರಿ ಅರಸಿ ಸಿಲಿಕಾನ್​ ಸಿಟಿ ಸೇರಿದ್ದ ಯುವಕರು ಇದೀಗ ಸೋಂಕಿನ ಭೀತಿಯಿಂದ ತಮ್ಮತಮ್ಮ ಗ್ರಾಮಗಳಗೆ ಮರಳಿದ್ದರು. ಇದಲ್ಲದೆ, ದೇಶಾದ್ಯಂತ ಘೋಷಿಸಲಾದ ಲಾಕ್​ಡೌನ್​ ತಂದೊಡ್ಡಿದ ಸಂಕಷ್ಟಗಳಿಂದ ಜಿಲ್ಲೆಯ ರೈತರು ಸಹ ಬೇಸತ್ತು ಹೋಗಿದ್ದರು.

ಜೆಡಿಎಸ್ ಯುವ ಕಾರ್ಯಕರ್ತರ ವಿನೂತನ ಪ್ರಯತ್ನ ಹೀಗಾಗಿ, ಇವರಿಬ್ಬರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಜಿಲ್ಲೆಯ ಯುವ ಜೆಡಿಎಸ್ ಕಾರ್ಯಕರ್ತರು ಮುಂದಾದರು. ಆದ್ದರಿಂದ, ಇಂದು ಜೆಡಿಎಸ್ ಕಾರ್ಯಕರ್ತರು ಯುವಕರು ಮತ್ತು ರೈತ ಮಹಿಳೆಯರೊಂದಿಗೆ ಸೇರಿ ಭತ್ತ ನಾಟಿ ಮಾಡುವ ಕಾರ್ಯಕ್ರಮವನ್ನ ಆಯೋಜಿಸಿದ್ದರು.

ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ವಿನಯ್ ರಾಜ್ ನೇತೃತ್ವದಲ್ಲಿ ಮೂಡಿಗೆರೆ ತಾಲೂಕಿನ ಪುರ ಗ್ರಾಮದಲ್ಲಿ ಈ ವಿಶೇಷ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಜೀವನೋಪಾಯದ ದಾರಿ ಕಳೆದುಕೊಂಡು ಊರು ಸೇರಿದ್ದ ಯುವಕರಿಗೆ ಹಾಗೂ ಲಾಕ್​ಡೌನ್​ನಿಂದ ನಷ್ಟ ಅನುಭವಿಸಿದ್ದ ರೈತರಿಗೆ ಸ್ಫೂರ್ತಿ ನೀಡಲು ಇದರ ಆಯೋಜನೆ ಮಾಡಲಾಗಿತ್ತು.

ಹಾಗಾಗಿ, ಸೋಂಕಿನ ಭೀತಿಗೆ ಸೆಡ್ಡು ಹೊಡೆದು ಹತ್ತಾರು ಯುವಕರು ಕಾರ್ಯಕರ್ತರೊಂದಿಗೆ ಸೇರಿ ಆನಂದದಿಂದ ಹಾಡುತ್ತಾ ಹುಮ್ಮಸ್ಸಿನಿಂದ ನಾಟಿ ಕೆಲಸದಲ್ಲಿ ಪಾಲ್ಗೊಂಡರು. ಪಕ್ಷದ ಯುವ ಕಾರ್ಯಕರ್ತರಿಗೆ ಮಾಜಿ ಸಚಿವ ಬಿ.ಬಿ ನಿಂಗಯ್ಯ, ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಸೇರಿದಂತೆ ಇತರೆ ಸ್ಥಳೀಯರು ಸಾಥ್​ ನೀಡಿದರು.

Published On - 7:33 pm, Wed, 22 July 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!