AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತರೂ, ನಕ್ಕರೂ ಓಡೋಡಿ ಬರುತ್ತೆ ಈ ಶ್ವಾನ.. ಇದರ ಬೆಲೆ ಎಷ್ಟು ಗೊತ್ತಾ?

ಕೆಲವರಿಗೆ ಮನೆಯಲ್ಲಿ ಶ್ವಾನ ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರುವುದಿಲ್ಲ. ಅಂಥವರು ಈ ರೋಬಾಟ್​ಶ್ವಾನ ಸಾಕಬಹುದು.

ಅತ್ತರೂ, ನಕ್ಕರೂ ಓಡೋಡಿ ಬರುತ್ತೆ ಈ ಶ್ವಾನ.. ಇದರ ಬೆಲೆ ಎಷ್ಟು ಗೊತ್ತಾ?
ರೋಬಾಟ್​ ಶ್ವಾನ
ರಾಜೇಶ್ ದುಗ್ಗುಮನೆ
| Edited By: |

Updated on: Jan 27, 2021 | 3:32 PM

Share

ಮಲಯಾಳಂನಲ್ಲಿ ‘ಆ್ಯಂಡ್ರಾಯ್ಡ್​ ಕುಂಜಪ್ಪನ್​ ವರ್ಷನ್​ 5.25’ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಮನೆಯಲ್ಲಿ ಒಬ್ಬಂಟಿಯಾಗಿರುವ ತಂದೆಗೆ ವಿದೇಶದಲ್ಲಿರುವ ಮಗ ರೋಬಾಟ್​ ಒಂದನ್ನು ತಂದುಕೊಡುತ್ತಾನೆ. ಆ ರೋಬಾಟ್​ ಮನೆಯಲ್ಲಿ ಒಂಟಿಯಾಗಿರುವ ತಂದೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಆತನ ಭಾವನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ/ ಪ್ರತಿಕ್ರಿಯಿಸುತ್ತದೆ. ಈಗ ವಿಜ್ಞಾನಿಗಳು ಇದೇ ಮಾದರಿಯಲ್ಲಿ ರೋಬಾಟ್​ ನಾಯಿಯನ್ನು ಕಂಡು ಹಿಡಿದಿದ್ದಾರೆ. ಈ ಶ್ವಾನ ಮನುಷ್ಯನ ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ!

ಹೌದು, ಕೊಡಾ ಸಂಸ್ಥೆ (Koda) ಹೊಸ ರೋಬಾಟ್​ ಒಂದನ್ನು ಅನ್ವೇಷಣೆ ಮಾಡಿದೆ. ಶ್ವಾನದಂತೆ ಇರುವ ಈ ರೋಬಾಟ್​, ವ್ಯಕ್ತಿಯ ಭಾವನೆಯನ್ನು ಗ್ರಹಿಸುತ್ತದೆ. ಬೇಸರ, ಸಂತೋಷ, ಉತ್ಸುಕತೆ, ಖಿನ್ನತೆ ಇವುಗಳನ್ನು ಸರಿಯಾದ ರೀತಿಯಲ್ಲಿ ಸೆನ್ಸ್​ ಮಾಡುವ ಈ ಶ್ವಾನ, ಅದಕ್ಕೆ ತಕ್ಕನಾಗಿ ಪ್ರತಿಕ್ರಿಯಿಸುತ್ತದೆ.

ಕೆಲವರಿಗೆ ಮನೆಯಲ್ಲಿ ಶ್ವಾನ ಸಾಕಬೇಕು ಎನ್ನುವ ಆಸೆ ಇರುತ್ತದೆ. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರುವುದಿಲ್ಲ. ಅಂಥವರು ಈ ರೋಬಾಟ್​ಶ್ವಾನ ಸಾಕಬಹುದು. ಇನ್ನು, ಮನೆಯನ್ನು ಕಾಯುವ ಕೆಲಸವನ್ನು ಕೂಡ ಈ ರೋಬಾಟ್​ ಮಾಡಲಿದೆ.

ನಾಯಿಗಳಿಗೆ ಶೇಕ್​ ಹ್ಯಾಂಡ್​ ಮಾಡುವುದು ಸೇರಿ ಸಾಕಷ್ಟು ವಿಚಾರಗಳನ್ನು ನೀವು ಕಲಿಸಿಕೊಟ್ಟಿರುತ್ತೀರಿ. ಈ ರೋಬಾಟ್​ ಶ್ವಾನಕ್ಕೂ ನೀವು ಈ ರೀತಿ ವಿಚಾರಗಳನ್ನು ಕಲಿಸಿಕೊಡಬಹುದು. ನೀವು ಕಲಿಸುವ ಹೊಸ ಅಂಶಗಳನ್ನು ಅದು ಸುಲಭವಾಗಿ ಕಲಿತುಕೊಳ್ಳುತ್ತದೆ.

ಈ ರೋಬೋಟ್​ ನಿತ್ಯ ನಿಮ್ಮನ್ನು ಪರಮಾರ್ಶಿಸುತ್ತದೆ. ನಿಮ್ಮಲ್ಲಿ ಆಗುವ ಬದಲಾವಣೆಯ  ಮಾಹಿತಿಯನ್ನು ಅದು ತನ್ನಲ್ಲಿಯೇ ಇಟ್ಟುಕೊಳ್ಳುತ್ತದೆ. ಈ ರೀತಿ ಸಂಗ್ರಹವಾದ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದ್ದು, ಇದನ್ನು ಹ್ಯಾಕ್​ ಮಾಡಲು ಸಾಧ್ಯವಿಲ್ಲ. ಈ ಶ್ವಾನದ ಬೆಲೆ ಕೇಳಿದರೆ ನೀವು ಸ್ವಲ್ಪ ಭಯ ಬೀಳಬಹುದು. ಏಕೆಂದರೆ ಈ ರೋಬಾಟ್​ ನಾಯಿಯ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ.

ಕನ್ನಡಕ್ಕೆ ಸಿಕ್ತು ತಂತ್ರಜ್ಞಾನದ ಬಲ: ‘ಕ-ನಾದ’ ಕೀಲಿಮಣೆಯಿಂದ ಈಗ ಕನ್ನಡ ಟೈಪಿಂಗ್​ ಬಹು ಸುಲಭ!

tecnoa

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ