AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ […]

ಮಗನ ಪರೀಕ್ಷೆಗಾಗಿ.. 105 ಕಿಲೋಮೀಟರ್​ ಸೈಕಲ್​ ತುಳಿದ ಕೂಲಿ ಕಾರ್ಮಿಕ
KUSHAL V
|

Updated on: Aug 20, 2020 | 7:30 PM

Share

ಭೋಪಾಲ್​: ಮಗನನ್ನ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ತಂದೆಯೊಬ್ಬ ಸೈಕಲ್​ ಮೇಲೆ ಆತನನ್ನ ಹೊತ್ತು ಸರಿಸುಮಾರು 105 ಕಿಲೋಮೀಟರ್​ ಕ್ರಮಿಸಿರುವ ರೋಚಕ ಪ್ರಸಂಗ ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶೋಭಾರಾಂ ಎಂಬ ಬಡ ಕೂಲಿ ಕಾರ್ಮಿಕನ ಈ ಕಾರ್ಯಕ್ಕೆ ದೇಶದ ಹಲವೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಧಾರ್​ ಜಿಲ್ಲೆಯ ಮನಾವರ್​ ತಾಲೂಕಿನ ಬಾಯಾಡಿಪುರ ನಿವಾಸಿಯಾದ ಶೋಭಾರಾಂನ ಮಗ ಆಶೀಶ್​ಗೆ ಕಳೆದ ಮಂಗಳವಾರದಿಂದ10ನೇ ಕ್ಲಾಸ್​ನ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಆದರೆ, ಪರೀಕ್ಷಾ ಕೇಂದ್ರವನ್ನ ಕಾರ್ಮಿಕನ ಗ್ರಾಮದಿಂದ ಸುಮಾರು 100 ಕಿಲೋಮೀಟರ್​ ದೂರವಿರುವ ಜಿಲ್ಲಾಕೇಂದ್ರಲ್ಲಿ ಗೊತ್ತುಮಾಡಲಾಗಿತ್ತು. ಲಾಕ್​ಡೌನ್​ ಬಳಿಕ ಆತನ ಹಳ್ಳಿಯಿಂದ ಜಿಲ್ಲಾಕೇಂದ್ರಕ್ಕೆ ಬಸ್​ ವ್ಯವಸ್ಥೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ಹಳ್ಳಿಯ ಇತರ ಗ್ರಾಮಸ್ಥರ ಬಳಿ ಯಾವುದೇ ವಾಹನವಿಲ್ಲದ ಕಾರಣ ಶೋಭಾರಾಂ ಮಗನನ್ನು ಪರೀಕ್ಷೆಗೆ ಸೈಕಲ್​ ಮೇಲೆ ಕರೆದುಕೊಂಡು ಹೋಗಲು ನಿರ್ಧರಿಸಿದ.

ಸೈಕಲ್​ ಮೇಲೇ 105 ಕಿ.ಮಿ. ಪಯಣ ಭಾನುವಾರ ರಾತ್ರಿ ಸೈಕಲ್​ ಮೇಲೆ ಹೊರಟ ತಂದೆ ಮತ್ತು ಮಗ ಪರೀಕ್ಷೆ ಪ್ರಾರಂಭವಾಗಲು ಕೇವಲ 15 ನಿಮಿಷಗಳು ಬಾಕಿ ಇರುವಾಗ ಪರೀಕ್ಷಾ ಕೇಂದ್ರಕ್ಕೆ ತಲುಪಿದರು. ಇದೀಗ ಆಶೀಶ್​ ಪರೀಕ್ಷೆ ಪ್ರಾರಂಭವಾಗಿದ್ದು ಅತನ ಪರೀಕ್ಷೆ ಮುಗಿಯುವವರೆಗೂ ಶೋಭಾರಾಂ ಅಲ್ಲೇ ಉಳಿದುಕೊಳ್ಳಲು ಬೇಕಾದ ಅಗತ್ಯ ಅಕ್ಕಿ ಮತ್ತು ದಿನಸಿ ಪದಾರ್ಥಗಳನ್ನು ಮನೆಯಿಂದಲೇ ಹೊತ್ತು ತಂದಿದ್ದಾನೆ.

ಕಾರ್ಮಿಕನ ಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳು ಇನ್ನು ಈ ಸಂಗತಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅಪ್ಪ ಹಾಗೂ ಮಗನಿಗೆ ಉಳಿದುಕೊಳ್ಳಲು ವಸತಿ ಮತ್ತು ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ದಾರೆ. ಜೊತೆಗೆ, ಪರೀಕ್ಷೆಯ ನಂತರ ವಾಪಸ್​ ಊರು ತಲುಪಲು ವ್ಯವಸ್ಥೆ ಸಹ ಮಾಡಿಕೊಟ್ಟಿದ್ದಾರೆ.

ನೀವು ಸೈಕಲ್​ ತುಳಿದುಕೊಂಡು ಮಗನನ್ನ ಕರೆದುಕೊಂಡು ಬರೋಕೆ ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದಕ್ಕೆ ಶೋಭಾರಾಂ ನಾನಂತೂ ಓದೋಕಾಗಲಿಲ್ಲ. ಆದರೆ, ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಆಫೀಸರ್​ ಆಗಬೇಕು ಎಂಬ ಆಸೆ ಇದೆ. ನನ್ನ ಮಗ ಒಳ್ಳೇ ವಿದ್ಯಾರ್ಥಿ. ಆದರೆ, ನಮ್ಮೂರಲ್ಲಿ ಶಾಲೆಯಿದ್ದರೂ ಶಿಕ್ಷಕರಿಲ್ಲ. ಟ್ಯೂಷನ್​ ಸೆಂಟರ್​ ಸಹ ಇಲ್ಲ. ಹಾಗಾಗಿ, ನನ್ನ ಮಗ ಮೂರು ವಿಷಯಗಳಲ್ಲಿ ಫೇಲ್​ ಆಗಿಬಿಟ್ಟ. ಪರೀಕ್ಷೆ ಮಿಸ್​ ಆಗಿದ್ರೇ ಒಂದು ವರ್ಷ ಕಳೆದುಕೊಳ್ಳುವನು. ಆದ್ದರಿಂದ ಅವನು ಶತಾಯಗತಾಯ ಪರೀಕ್ಷೆ ಬರೆಯಲೇ ಬೇಕೆಂದು ಕರೆದುಕೊಂಡು ಬಂದೆ ಎಂದಿದ್ದಾರೆ.

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?