AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಸಿಟಿವ್‌ ಇಲ್ಲದಿದ್ರೂ ‘ಚಿಕಿತ್ಸೆ’ ನೀಡಿ ಹಣ ದೋಚಿದ ಬೆಂಗಳೂರಿನ 2 ಖಾಸಗಿ ಆಸ್ಪತ್ರೆ

ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸಿಕ್ಕವನಿಗೆ ಸೀರುಂಡೆ ಅಂತಾ ಕೆಲ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆಗೆ ಇಳಿದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. ಬೆಂಗಳೂರಿನ 70 ವರ್ಷದ ಕಾಂತರಾಜು ಅನ್ನೋರು ನಾಗರಭಾವಿಯ ಜಿಎಂ ಆಸ್ಪತ್ರೆಗೆ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದರು. ಐಸಿಯುನಲ್ಲಿ ದಾಖಲಿಸಿಕೊಂಡ ಆಸ್ಪತ್ರೆ ಕೋವಿಡ್‌ ಟೆಸ್ಟ್‌ ಮಾಡಿದ್ದೇವೆ, ಸೋಮವಾರ ರಿಪೋರ್ಟ್‌ ಬರುತ್ತೆ ಅಂತಾ ದುಡ್ಡು ಕಟ್ಟಿಸಿಕೊಂಡಿದ್ದಾರೆ. ನಂತರ ಸಂಜೆ ಕೊವಿಡ್‌ ಪಾಸಿಟಿವ್‌ ಬಂದಿದೆ, ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಿ ಅಂತಾ ಒಂದು ಲಕ್ಷ ಹಣ ಕಟ್ಟಿಸಿಕೊಂಡು […]

ಪಾಸಿಟಿವ್‌ ಇಲ್ಲದಿದ್ರೂ ‘ಚಿಕಿತ್ಸೆ’ ನೀಡಿ ಹಣ ದೋಚಿದ ಬೆಂಗಳೂರಿನ 2 ಖಾಸಗಿ ಆಸ್ಪತ್ರೆ
Guru
| Updated By: ಸಾಧು ಶ್ರೀನಾಥ್​|

Updated on: Jul 06, 2020 | 11:15 AM

Share

ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸಿಕ್ಕವನಿಗೆ ಸೀರುಂಡೆ ಅಂತಾ ಕೆಲ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆಗೆ ಇಳಿದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.

ಬೆಂಗಳೂರಿನ 70 ವರ್ಷದ ಕಾಂತರಾಜು ಅನ್ನೋರು ನಾಗರಭಾವಿಯ ಜಿಎಂ ಆಸ್ಪತ್ರೆಗೆ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದರು. ಐಸಿಯುನಲ್ಲಿ ದಾಖಲಿಸಿಕೊಂಡ ಆಸ್ಪತ್ರೆ ಕೋವಿಡ್‌ ಟೆಸ್ಟ್‌ ಮಾಡಿದ್ದೇವೆ, ಸೋಮವಾರ ರಿಪೋರ್ಟ್‌ ಬರುತ್ತೆ ಅಂತಾ ದುಡ್ಡು ಕಟ್ಟಿಸಿಕೊಂಡಿದ್ದಾರೆ. ನಂತರ ಸಂಜೆ ಕೊವಿಡ್‌ ಪಾಸಿಟಿವ್‌ ಬಂದಿದೆ, ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಿ ಅಂತಾ ಒಂದು ಲಕ್ಷ ಹಣ ಕಟ್ಟಿಸಿಕೊಂಡು ಯಶವಂತಪುರದ ಪೀಪಲ್‌ ಟ್ರಿ ಆಸ್ಪತ್ರೆಗೆ ಕಳಿಸಿದ್ದಾರೆ.

ಆದ್ರೆ ಅಲ್ಲಿ ಈಗ ಬೆಡ್‌ ಖಾಲಿ ಇಲ್ಲ ಅಂತಾ ವಾಪಸ್‌ ಕಳಿಸಿದ್ದಾರೆ. ಹೀಗಾಗಿ ಮತ್ತೆ ವಾಪಸ್‌ ಜಿಎಂ ಆಸ್ಪತ್ರೆಗೆ ವಾಪಸ್‌ ಬಂದ್ರೆ, ಆಸ್ಪತ್ರೆ ಕೋವಿಡ್‌ ನೆಪ ಹೇಳಿ ಅಡ್ಮಿಟ್‌ ಮಾಡಿಕೊಳ್ಳಲು ನಿರಾಕರಿಸಿದೆ. ನಂತರ ಮಂಗಳವಾರ ರಾತ್ರಿ ಮೈಸೂರು ರಸ್ತೆಯಲ್ಲಿರುವ ಆರ್ ಆರ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ 30,000 ಹಣ ಕಟ್ಟಿಸಿಕೊಂಡಿದ್ದಾರೆ.

ಎರಡು ದಿನಗಳ ನಂತರ ಮತ್ತೆ 20,000 ಹಣ ಕಟ್ಟಲು ಹೇಳಿದ್ದಾರೆ. ಆಗ ಕುಟುಂಬಸ್ಥರು ಜಿ.ಎಂ ಆಸ್ಪತ್ರೆಯಲ್ಲಿಯೂ ರೋಗಿಗೆ ಕೊರೊನಾ ಪಾಸಿಟಿವ್ ಅಂತ ಹಣ ಕಟ್ಟಿಸಿಕೊಂಡರು ರಿಪೋರ್ಟ್ ಕೊಡಲಿಲ್ಲ. ನೀವು ಹಣ ಕಟ್ಟಿ ಅಂತಿದ್ದೀರಾ, ರಿಪೋರ್ಟ್ ಮಾತ್ರ ಕೊಡ್ತಿಲ್ಲ ಅಂತ ಗಲಾಟೆ ಮಾಡಿದಕ್ಕೆ ಹಣ ಕಟ್ಟಿಸಿಕೊಳ್ಳದೆ ಸುಮ್ಮನಾಗಿದ್ದಾರೆ.

ಇದಾದ ನಂತರ ಆಸ್ಪತ್ರೆಯವರು ರೋಗಿಗೆ ನೆಗೆಟಿವ್ ಇದೆ, ಇವತ್ತು ಡಿಸ್ಚಾರ್ಜ್ ಮಾಡ್ತಿವಿ ಅಂದಿದ್ದಾರಂತೆ. ಈ ನಡುವೆ ವ್ಯಕ್ತಿಗೆ ಕೋವಿಡ್‌ ಇದೆ ಎಂದಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ಕಾಂತರಾಜು ಅವರ ಮನೆಯನ್ನ ಭಾನುವಾರ ರಿಪೋರ್ಟ್‌ ಬರುವುದಕ್ಕಿಂತ ಮುನ್ನವೇ ಸೀಲ್‌ಡೌನ್‌ ಮಾಡಿದೆ.

ಒಂದೆಡೆ ಮನೆ ಸೀಲ್‌ಡೌನ್,‌ ಮತ್ತೊಂದೆಡೆ ಕೋರೋನಾ ಇಲ್ಲದಿದ್ರೂ ಪಾಸಿಟಿವ್‌ ಇದೆ ಎಂದು ಖಾಸಗಿ ಆಸ್ಪತ್ರೆಗಳಾದ ಜಿ.ಎಂ ಆಸ್ಪತ್ರೆ ಮತ್ತು ಆರ್ ಆರ್‌ ಆಸ್ಪತ್ರೆಗಳ ಸುಲಿಗೆ. ಕುಟುಂಬ ಈಗ ಕಂಗಾಲಾಗಿ ಹೋಗಿದೆ. ಖಾಸಗಿ ಆಸ್ಪತ್ರೆಗಳು ಕೊರೊನಾದಂಥ ಸಮಯದಲ್ಲೂ ಜನರ ರಕ್ತ ಹೀರುತ್ತಿರುವುದು ಜನರಲ್ಲಿ ಆಘಾತ ಮೂಡಿಸಿದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ