ನೀರು ತುಂಬಿದ ಕ್ವಾರಿಯಲ್ಲಿ ಒದ್ದಾಡ್ತಿದ್ದ ಎತ್ತು ರಕ್ಷಿಸಲು ಹೋಗಿ ಯುವಕ ನೀರುಪಾಲು
ಯಾದಗಿರಿ: ಕ್ವಾರಿಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಹುಲ್ಕಲ್. ಜೆ ಗ್ರಾಮದಲ್ಲಿ ನಡೆದಿದೆ. ಹುಲ್ಕಲ್. ಜೆ ಗ್ರಾಮದ ಬಳಿ ಯುವಕ ಮಲ್ಲಿಕಾರ್ಜುನ (21) ನೀರುಪಾಲಾಗಿದ್ದಾನೆ. ಮಳೆ ಬಂದು ನೀರು ತುಂಬಿರುವ ಕಲ್ಲಿನ ಕ್ವಾರಿಯಲ್ಲಿ ಎತ್ತು ತೊಳೆಯಲು ಯುವಕ ಹೋಗಿದ್ದನು. ಇದೇ ವೇಳೆ ಕಾಲು ಸಿಲುಕಿ ಒದ್ದಾಡುತ್ತಿದ್ದ ಎತ್ತಿನ ರಕ್ಷಣೆಗೆ ತೆರಳಿದಾಗ ಮಲ್ಲಿಕಾರ್ಜುನ ನೀರುಪಾಲಾಗಿದ್ದಾನೆ. ಯುವಕನಿಗಾಗಿ ಅಗ್ನಿಶಾಮಕ ದಳ, ಸ್ಥಳೀಯರಿಂದ ಶೋಧಕಾರ್ಯ ನಡೆದಿದೆ.

ಸಾಂದರ್ಭಿಕ ಚಿತ್ರ
ಯಾದಗಿರಿ: ಕ್ವಾರಿಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಹುಲ್ಕಲ್. ಜೆ ಗ್ರಾಮದಲ್ಲಿ ನಡೆದಿದೆ. ಹುಲ್ಕಲ್. ಜೆ ಗ್ರಾಮದ ಬಳಿ ಯುವಕ ಮಲ್ಲಿಕಾರ್ಜುನ (21) ನೀರುಪಾಲಾಗಿದ್ದಾನೆ.
ಮಳೆ ಬಂದು ನೀರು ತುಂಬಿರುವ ಕಲ್ಲಿನ ಕ್ವಾರಿಯಲ್ಲಿ ಎತ್ತು ತೊಳೆಯಲು ಯುವಕ ಹೋಗಿದ್ದನು. ಇದೇ ವೇಳೆ ಕಾಲು ಸಿಲುಕಿ ಒದ್ದಾಡುತ್ತಿದ್ದ ಎತ್ತಿನ ರಕ್ಷಣೆಗೆ ತೆರಳಿದಾಗ ಮಲ್ಲಿಕಾರ್ಜುನ ನೀರುಪಾಲಾಗಿದ್ದಾನೆ. ಯುವಕನಿಗಾಗಿ ಅಗ್ನಿಶಾಮಕ ದಳ, ಸ್ಥಳೀಯರಿಂದ ಶೋಧಕಾರ್ಯ ನಡೆದಿದೆ.



