Sign In

By signing in or creating an account, you agree with Associated Broadcasting Company's Terms & Conditions and Privacy Policy.

Dates Face Scrub: ಆರೋಗ್ಯಯುತ ಚರ್ಮಕ್ಕೆ ಖರ್ಜೂರವನ್ನು ಫೇಸ್​ ಸ್ಕ್ರಬ್ ಆಗಿ ಬಳಸಿ!

ನಮ್ಮಲ್ಲಿ ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವವರೇ ಕಡಿಮೆ. ನಮ್ಮ ಚರ್ಮ ಆರೋಗ್ಯಯುತವಾಗಿರಬೇಕೆಂದರೆ ನೈಸರ್ಗಿಕವಾಗಿಯೇ ಲಭ್ಯವಿರುವ ಕೆಲವು ವಸ್ತುಗಳನ್ನು ಬಳಸುವುದು ಉತ್ತಮ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ನೀವು ಎಂದಾದರೂ ಖರ್ಜೂರವನ್ನು ಫೇಸ್​ ಸ್ಕ್ರಬ್ ರೀತಿ ಬಳಸಿದ್ದೀರಾ?

Dates Face Scrub: ಆರೋಗ್ಯಯುತ ಚರ್ಮಕ್ಕೆ ಖರ್ಜೂರವನ್ನು ಫೇಸ್​ ಸ್ಕ್ರಬ್ ಆಗಿ ಬಳಸಿ!
ಖರ್ಜೂರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 24, 2024 | 12:49 PM

ನಮ್ಮ ಅನೇಕ ಚರ್ಮದ ಸಮಸ್ಯೆಗಳಿಗೆ ಸರಳವಾದ, ಗಿಡಮೂಲಿಕೆಗಳ ಪದಾರ್ಥಗಳನ್ನು ಬಳಸಬಹುದು. ಆಲೂಗೆಡ್ಡೆ, ಅರಿಶಿನ, ಶ್ರೀಗಂಧ, ಮತ್ತು ಇಂತಹ ಅನೇಕ ಪದಾರ್ಥಗಳನ್ನು ಬಳಸುವಾಗ ಚರ್ಮದ ಆರೋಗ್ಯಕ್ಕೆ ಖರ್ಜೂರದ ಪೇಸ್ಟ್ ಅನ್ನು ಯಾಕೆ ಬಳಸಬಾರದು? ನೀವು ಈ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಪೌಷ್ಟಿಕತಜ್ಞರಾದ ಸೋನಿಯಾ ನಾರಂಗ್ ಅವರು ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಫೇಸ್ ಸ್ಕ್ರಬ್ ಮತ್ತು ಫೇಸ್​ ಪ್ಯಾಕ್ ಆಗಿ ಬಳಸುವ ವಿಧಾನದ ಬಗ್ಗೆ ತಿಳಿಸಿದ್ದಾರೆ.

ಖರ್ಜೂರದ ಫೇಸ್​ ಸ್ಕ್ರಬ್ ತಯಾರಿಸಲು ಖರ್ಜೂರವನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಡಿ. ಇದನ್ನು ಕೆನೆಯೊಂದಿಗೆ ಬೆರೆಸಿ ಮತ್ತು ಗ್ರೈಂಡರ್‌ನಲ್ಲಿ ನಯವಾದ ಪೇಸ್ಟ್ ಮಾಡಿ. ಇದಕ್ಕೆ ನಿಂಬೆ ರಸವನ್ನು ಸೇರಿಸಿ ಮತ್ತು ವೃತ್ತಾಕಾರವಾಗಿ ಮುಖದ ಮೇಲೆ ಮಸಾಜ್ ಮಾಡಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಸಮವಾಗಿ ಹಚ್ಚಿಕೊಳ್ಳಿ. ಇದು ಉತ್ತಮ ಫೇಸ್ ಸ್ಕ್ರಬ್ ಮತ್ತು ಫೇಸ್ ಪ್ಯಾಕ್ ಆಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: ಪಪ್ಪಾಯಿ ಫೇಸ್​ಪ್ಯಾಕ್ ಬಳಸಿದರೆ ಮೊಡವೆ ಕಡಿಮೆಯಾಗುತ್ತಾ?

ಚರ್ಮ ರೋಗ ತಜ್ಞರಾದ ಡಾ. ರಿಂಕಿ ಕಪೂರ್ ಕೂಡ ಖರ್ಜೂರದ ಫೇಸ್ ಪ್ಯಾಕ್ ಬಗ್ಗೆ ತಿಳಿಸಿದ್ದಾರೆ. ಖರ್ಜೂರ, ಹಾಲು, ಕೆನೆ ಮತ್ತು ನಿಂಬೆ ರಸದಿಂದ ತಯಾರಿಸಿದ ಫೇಸ್ ಪ್ಯಾಕ್ ತ್ವಚೆಗೆ ಹಿತವಾದ ಪೋಷಣೆಯ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಜಲಸಂಚಯನ ಮತ್ತು ಪೋಷಣೆ:

ಖರ್ಜೂರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಚರ್ಮಕ್ಕೆ ಜಲಸಂಚಯನ ಮತ್ತು ಪೋಷಣೆಯನ್ನು ನೀಡುತ್ತದೆ. ಹಾಲು ಮತ್ತು ಕೆನೆಯ ಘಟಕಗಳು ಹೆಚ್ಚುವರಿ ಆರ್ಧ್ರಕ ಗುಣಲಕ್ಷಣಗಳನ್ನು ನೀಡುತ್ತವೆ. ಚರ್ಮದ ಮೇಲೆ ಈ ಪದಾರ್ಥಗಳ ಪರಿಣಾಮಕಾರಿತ್ವವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂದು ಡಾ. ಕಪೂರ್ ಹೇಳಿದ್ದಾರೆ.

ಎಕ್ಸ್ಫೋಲಿಯೇಶನ್:

ಫೇಸ್​ ಪ್ಯಾಕ್ ಅನ್ನು ಮುಖಕ್ಕೆ ಹಚ್ಚುವ ಸಮಯದಲ್ಲಿ ವೃತ್ತಾಕಾರದ ಮಸಾಜ್ ಮಾಡಿ. ಇದು ಖರ್ಜೂರದ ಹರಳಿನ ವಿನ್ಯಾಸದೊಂದಿಗೆ ಸೇರಿಕೊಂಡು, ಮೃದುವಾದ ಎಕ್ಸ್‌ಫೋಲಿಯಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಎಕ್ಸ್ಫೋಲಿಯೇಶನ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಮತ್ತು ಮೃದುವಾದ ಮೈಬಣ್ಣವನ್ನು ನೀಡಲು ಸಹಾಯ ಮಾಡುತ್ತದೆ. ಆದರೆ, ಸೂಕ್ಷ್ಮ ಚರ್ಮ ಹೊಂದಿರುವ ವ್ಯಕ್ತಿಗಳು ಈ ಬಗ್ಗೆ ಎಚ್ಚರ ವಹಿಸಬೇಕು. ಏಕೆಂದರೆ ಅತಿಯಾದ ಎಕ್ಸ್‌ಫೋಲಿಯೇಶನ್ ಅವರ ಚರ್ಮಕ್ಕೆ ಕಿರಿಕಿರಿಯನ್ನು ಉಂಟುಮಾಡಬಹುದು.

ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಸಾಮರ್ಥ್ಯ:

ಖರ್ಜೂರಗಳು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ. ಅದು ಸ್ವತಂತ್ರ ರಾಡಿಕಲ್​ಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ವಯಸ್ಸಾದ ವಿರೋಧಿ ಪ್ರಯೋಜನಗಳನ್ನು ಒದಗಿಸುತ್ತದೆ. ನಿಂಬೆ ರಸವು ವಿಟಮಿನ್ ಸಿಯ ಮೂಲವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಹೊಳಪು ನೀಡುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಘಟಕಗಳು ಆರೋಗ್ಯಕರವಾಗಿ ಕಾಣುವ ಮೈಬಣ್ಣವನ್ನು ನೀಡುತ್ತದೆ.

ಇದನ್ನೂ ಓದಿ: Ayurvedic Facepack: ಆಯುರ್ವೇದಿಕ್ ಫೇಸ್​ಪ್ಯಾಕ್​ನಿಂದ ಚರ್ಮದ ಕಾಂತಿ ಹೆಚ್ಚಿಸಿ

pH ಸಮತೋಲನಕ್ಕೆ ಸಹಕಾರಿ:

ಚರ್ಮದ pH ಸಮತೋಲನವನ್ನು ಪರಿಗಣಿಸುವುದು ಬಹಳ ಮುಖ್ಯ. ಡಾ. ಕಪೂರ್ ಪ್ರಕಾರ, ನಿಂಬೆ ರಸವು ಆಮ್ಲೀಯವಾಗಿದೆ ಮತ್ತು ಇದು ಸೌಮ್ಯವಾದ ಎಫ್ಫೋಲಿಯೇಶನ್ ಅನ್ನು ಒದಗಿಸುತ್ತದೆ. ಇದರ ಅತಿಯಾದ ಬಳಕೆಯು ಚರ್ಮದ ನೈಸರ್ಗಿಕ pH ಅನ್ನು ಅಡ್ಡಿಪಡಿಸಿ, ಕಿರಿಕಿರಿಯನ್ನು ಉಂಟುಮಾಡುತ್ತದೆ. ಸೂಕ್ಷ್ಮ ಚರ್ಮ ಹೊಂದಿರುವ ವ್ಯಕ್ತಿಗಳು, ಎಸ್ಜಿಮಾ ಅಥವಾ ರೋಸಾಸಿಯಾದಂತಹ ಸಮಸ್ಯೆಗಳನ್ನು ಹೊಂದಿರುವವರು ಆಮ್ಲೀಯ ಪದಾರ್ಥಗಳೊಂದಿಗೆ ಜಾಗರೂಕರಾಗಿರಬೇಕು ಎಂದು ಡಾ. ಕಪೂರ್ ಹೇಳಿದ್ದಾರೆ.

ಅಲರ್ಜಿಯ ಪ್ರತಿಕ್ರಿಯೆಗಳು:

ಕೆಲವು ವ್ಯಕ್ತಿಗಳು ಕೆಲವು ಪದಾರ್ಥಗಳಿಗೆ ಅಲರ್ಜಿಯನ್ನು ಹೊಂದಿರಬಹುದು. ಹೀಗಾಗಿ, ಸಂಪೂರ್ಣ ಮುಖಕ್ಕೆ ಈ ಮಿಶ್ರಣವನ್ನು ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆಯನ್ನು ನಡೆಸುವುದರಿಂದ ಅಲರ್ಜಿಗಳನ್ನು ಗುರುತಿಸಲು ಸಹಾಯಕವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ