AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ

ಉಪ್ಪು, ಹುಳಿ ಹಾಗೂ ಖಾರವಿದ್ದಾಗಲೇ ಆ ಅಡುಗೆಯು ರುಚಿಸುವುದು. ಕೆಲವರಿಗೆ ಅಡುಗೆಯು ಖಾರವಾಗಿ ಇರಲೇಬೇಕು, ಸ್ವಲ್ಪ ಖಾರ ಕಡಿಮೆಯಾದರೂ ಆಹಾರವು ಬಾಯಿಗೆ ಹಿಡಿಸುವುದೇ ಇಲ್ಲ. ಎಲ್ಲರಿಗೂ ಅಡುಗೆಯು ಖಾರವಾಗಿರಲೆಂದು ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಈ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಸುಡುವಂತಹ ಅನುಭವವು ಬಹುತೇಕರಿಗೆ ಆಗಿರಬಹುದು. ಮೆಣಸಿನಕಾಯಿ ಕತ್ತರಿಸಿದ ನಂತರ ಕೈ ಉರಿಯುತ್ತಿದ್ದರೆ ಮನೆಯಲ್ಲೇ ಈ ಮನೆ ಮದ್ದನ್ನು ಮಾಡಿದರೆ ಉರಿಯೆಲ್ಲವು ಮಾಯಾವಾಗುತ್ತದೆ.

Kitchen Tips in Kannada : ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ
ಸಾಯಿನಂದಾ
| Edited By: |

Updated on: May 07, 2024 | 12:54 PM

Share

ಖಾರವಾದ ಪದಾರ್ಥವನ್ನು ತಿಂದ ನಂತರ ಬಾಯಿ ಹೇಗೆ ಉರಿಯುತ್ತದೆಯೋ ಅದೇ ರೀತಿ ಮೆಣಸಿನಕಾಯಿಯನ್ನು ಕತ್ತರಿಸಿದ ಬಳಿಕ ಕೈ ಕೂಡ ಕೆಂಡದಂತೆ ಸುಡಲು ಪ್ರಾರಂಭವಾಗುತ್ತದೆ. ಕೈಯನ್ನು ತಣ್ಣನೆಯ ನೀರಿನಲ್ಲಿ ಎಷ್ಟೇ ಕೈ ತೊಳೆದರೂ ಕೈ ಉರಿ ಮಾತ್ರ ಕಡಿಮೆಯಾಗುವುದಿಲ್ಲ. ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶವಿದ್ದು, ಇದು ಚರ್ಮಕ್ಕೆ ತಾಗಿದಾಗ ಸುಡುವ ಅನುಭವವಾಗುತ್ತದೆ. ಹೀಗಾದಾಗ ಮನೆಯಲ್ಲಿರುವ ಈ ಕೆಲವು ಪದಾರ್ಥಗಳೇ ರಾಮಬಾಣವಾಗಿ ಕೆಲಸ ಮಾಡುತ್ತದೆ.

* ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಐಸ್ ನಿಂದ ಮಸಾಜ್ ಮಾಡಿದರೆ ಉರಿ ಕಡಿಮೆಯಾಗುತ್ತದೆ.

* ಮೆಣಸಿನ ಕಾಯಿ ಕತ್ತರಿಸಿ ನಂತರ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಅಲೊವೆರಾ ಜೆಲ್ ಅನ್ನು ಹಚ್ಚಿ ಸ್ವಲ್ಪ ಹೊತ್ತು ಹಾಗೆ ಬಿಡುವುದರಿಂದ ಉರಿಯು ನಿವಾರಣೆಯಾಗುತ್ತದೆ.

* ನಿಂಬೆಯನ್ನು ಕೈಗಳ ಮೇಲೆ ತಿಕ್ಕಿ ಕೊಳ್ಳುವುದರಿಂದಲೂ ಉರಿಯು ಕಡಿಮೆಯಾಗುತ್ತದೆ..

* ಮೆಣಸಿನ ಕಾಯಿಯನ್ನು ಕತ್ತರಿಸಿದ ಬಳಿಕ ಕೈಗಳಲ್ಲಿ ಉರಿ ಹಾಗೂ ಸುಡುವ ಅನುಭವವಾದರೆ ಕೈಗಳಿಗೆ ಹಿಟ್ಟನ್ನು ಬೆರೆಸುವುದರಿಂದ ಈ ಉರಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

* ತಣ್ಣನೆಯ ಹಾಲು ಅಥವಾ ಮೊಸರನ್ನು ಕೈಗಳಿಗೆ ಹಚ್ಚುವುದರಿಂದ ಉರಿಯು ಶಮನವಾಗುತ್ತದೆ.

* ಬೇಕಿಂಗ್ ಪೌಡರನ್ನು ನೀರಿನೊಂದಿಗೆ ಬೆರೆಸಿ ಕೈಗಳಿಗೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

* ಕೈ ಸುಡುವ ಅನುಭವವಾಗುತ್ತಿದ್ದರೆ ವ್ಯಾಸ್ಲಿನ್‌ ಅಥವಾ ಆಲಿವ್ ಎಣ್ಣೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!