AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ

ಉಪ್ಪು, ಹುಳಿ ಹಾಗೂ ಖಾರವಿದ್ದಾಗಲೇ ಆ ಅಡುಗೆಯು ರುಚಿಸುವುದು. ಕೆಲವರಿಗೆ ಅಡುಗೆಯು ಖಾರವಾಗಿ ಇರಲೇಬೇಕು, ಸ್ವಲ್ಪ ಖಾರ ಕಡಿಮೆಯಾದರೂ ಆಹಾರವು ಬಾಯಿಗೆ ಹಿಡಿಸುವುದೇ ಇಲ್ಲ. ಎಲ್ಲರಿಗೂ ಅಡುಗೆಯು ಖಾರವಾಗಿರಲೆಂದು ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಈ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಸುಡುವಂತಹ ಅನುಭವವು ಬಹುತೇಕರಿಗೆ ಆಗಿರಬಹುದು. ಮೆಣಸಿನಕಾಯಿ ಕತ್ತರಿಸಿದ ನಂತರ ಕೈ ಉರಿಯುತ್ತಿದ್ದರೆ ಮನೆಯಲ್ಲೇ ಈ ಮನೆ ಮದ್ದನ್ನು ಮಾಡಿದರೆ ಉರಿಯೆಲ್ಲವು ಮಾಯಾವಾಗುತ್ತದೆ.

Kitchen Tips in Kannada : ಮೆಣಸಿನ ಖಾರಕ್ಕೆ ಕೈ ಉರಿದ್ರೆ ಈ ಸರಳ ಮನೆ ಮದ್ದು ಬಳಸಿ
ಸಾಯಿನಂದಾ
| Edited By: |

Updated on: May 07, 2024 | 12:54 PM

Share

ಖಾರವಾದ ಪದಾರ್ಥವನ್ನು ತಿಂದ ನಂತರ ಬಾಯಿ ಹೇಗೆ ಉರಿಯುತ್ತದೆಯೋ ಅದೇ ರೀತಿ ಮೆಣಸಿನಕಾಯಿಯನ್ನು ಕತ್ತರಿಸಿದ ಬಳಿಕ ಕೈ ಕೂಡ ಕೆಂಡದಂತೆ ಸುಡಲು ಪ್ರಾರಂಭವಾಗುತ್ತದೆ. ಕೈಯನ್ನು ತಣ್ಣನೆಯ ನೀರಿನಲ್ಲಿ ಎಷ್ಟೇ ಕೈ ತೊಳೆದರೂ ಕೈ ಉರಿ ಮಾತ್ರ ಕಡಿಮೆಯಾಗುವುದಿಲ್ಲ. ಮೆಣಸಿನ ಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶವಿದ್ದು, ಇದು ಚರ್ಮಕ್ಕೆ ತಾಗಿದಾಗ ಸುಡುವ ಅನುಭವವಾಗುತ್ತದೆ. ಹೀಗಾದಾಗ ಮನೆಯಲ್ಲಿರುವ ಈ ಕೆಲವು ಪದಾರ್ಥಗಳೇ ರಾಮಬಾಣವಾಗಿ ಕೆಲಸ ಮಾಡುತ್ತದೆ.

* ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಐಸ್ ನಿಂದ ಮಸಾಜ್ ಮಾಡಿದರೆ ಉರಿ ಕಡಿಮೆಯಾಗುತ್ತದೆ.

* ಮೆಣಸಿನ ಕಾಯಿ ಕತ್ತರಿಸಿ ನಂತರ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಅಲೊವೆರಾ ಜೆಲ್ ಅನ್ನು ಹಚ್ಚಿ ಸ್ವಲ್ಪ ಹೊತ್ತು ಹಾಗೆ ಬಿಡುವುದರಿಂದ ಉರಿಯು ನಿವಾರಣೆಯಾಗುತ್ತದೆ.

* ನಿಂಬೆಯನ್ನು ಕೈಗಳ ಮೇಲೆ ತಿಕ್ಕಿ ಕೊಳ್ಳುವುದರಿಂದಲೂ ಉರಿಯು ಕಡಿಮೆಯಾಗುತ್ತದೆ..

* ಮೆಣಸಿನ ಕಾಯಿಯನ್ನು ಕತ್ತರಿಸಿದ ಬಳಿಕ ಕೈಗಳಲ್ಲಿ ಉರಿ ಹಾಗೂ ಸುಡುವ ಅನುಭವವಾದರೆ ಕೈಗಳಿಗೆ ಹಿಟ್ಟನ್ನು ಬೆರೆಸುವುದರಿಂದ ಈ ಉರಿ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಎಳನೀರು ಕುಡಿಯುವವರ ಗಮನಕ್ಕೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

* ತಣ್ಣನೆಯ ಹಾಲು ಅಥವಾ ಮೊಸರನ್ನು ಕೈಗಳಿಗೆ ಹಚ್ಚುವುದರಿಂದ ಉರಿಯು ಶಮನವಾಗುತ್ತದೆ.

* ಬೇಕಿಂಗ್ ಪೌಡರನ್ನು ನೀರಿನೊಂದಿಗೆ ಬೆರೆಸಿ ಕೈಗಳಿಗೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

* ಕೈ ಸುಡುವ ಅನುಭವವಾಗುತ್ತಿದ್ದರೆ ವ್ಯಾಸ್ಲಿನ್‌ ಅಥವಾ ಆಲಿವ್ ಎಣ್ಣೆ ಹಚ್ಚುವುದು ಕೂಡ ಪರಿಣಾಮಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ