AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಡವೆಯಿಂದ ಮುಕ್ತಿ ಪಡೆಯಲು 7 ದಿನ ಹೀಗೆ ಮಾಡಿ

ಮೊಡವೆ ಮುಖವನ್ನು ತುಂಬಾ ಬದಲಾವಣೆಯನ್ನು ಮಾಡುತ್ತದೆ. ಅದೆಷ್ಟೋ ಯುವಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಇದನ್ನು ಮೂಲದಿಂದಲ್ಲೇ ತೆಗೆದು ಹಾಕಬಹುದು ಎಂದು ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಹೇಳಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 7 ರೀತಿಯ ಕ್ರಮಗಳನ್ನು ಅನುಸರಿಸಿದ್ರೆ ಖಂಡಿತ ಈ ಮೊಡವೆಯಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ಮೊಡವೆಯಿಂದ ಮುಕ್ತಿ ಪಡೆಯಲು 7 ದಿನ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
|

Updated on: Jun 24, 2025 | 7:54 PM

Share

ಮೊಡವೆಗೆ (Pimple) ಕೇವಲ ಬಾಹ್ಯ ಕಾರಣ ಎಂದು ತಿಳಿದುಕೊಳ್ಳುವುದು ತಪ್ಪು.  ಮೊಡವೆಗಳು ಕಾಣಿಸಿಕೊಳ್ಳುವುದು ಕೇವಲ ಬಾಹ್ಯ ಸಮಸ್ಯೆಯಲ್ಲ, ಕೆಲವೊಮ್ಮೆ ಅವು ನಿಮ್ಮ ದೇಹದೊಳಗಿನ ಗುಪ್ತ ಅಸಮತೋಲನದ ಸಂಕೇತ ಎಂದು  ಆಯುರ್ವೇದ ಹೇಳುತ್ತದೆ. ವಿಶೇಷವಾಗಿ ಪಿತ್ತ ದೋಷದ ಹೆಚ್ಚಳದಿಂದಾಗಿ ಮೊಡವೆಗಳ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸಂಪೂರ್ಣವಾಗಿ ಹೇಳಿಕೊಂಡಿದ್ದು, ಈ ವೀಡಿಯೊದಲ್ಲಿ ಅವರು ಪಿತ್ತ ದೋಷವನ್ನು ಶಾಂತಗೊಳಿಸಲು ಮತ್ತು ಒಳಗಿನಿಂದ ಚರ್ಮವನ್ನು ಸ್ವಚ್ಛಗೊಳಿಸಲು ಕೆಲವೊಂದು ಪಾಕ ವಿಧಾನವನ್ನು ಹೇಳಿದ್ದಾರೆ.

ಆಯುರ್ವೇದದ ಪ್ರಕಾರ, ದೇಹದಲ್ಲಿ ಶಾಖ (ಪಿತ್ತ) ಹೆಚ್ಚಾದಾಗ, ಅದು ರಕ್ತದಲ್ಲಿ ವಿಷ ಹರಡಲು ಪ್ರಾರಂಭಿಸುತ್ತದೆ, ಇದು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಹೀಗೆ ಆಗುವಾಗ ದದ್ದುಗಳು, ಮೊಡವೆಗಳು, ಊತ ಅಥವಾ ಕಿರಿಕಿರಿಯ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಇದು ದೊಡ್ಡಮಟ್ಟದ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಇದನ್ನು ಸುಲಭವಾಗಿ ತೆಗೆದು ಹಾಕಬಹುದು.

ಇದನ್ನೂ ಓದಿ
Image
ಅಂಡರ್‌ವೇರ್‌ಗೂ ಇದ್ಯಾ ಎಕ್ಸ್‌ಪೈರಿ ಡೇಟ್?
Image
ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ
Image
ನೀವು ವಯಸ್ಸಾದವರಂತೆ ಕಾಣಿಸಲು ಈ ಕೆಟ್ಟ ಜೀವನಶೈಲಿಯೇ ಕಾರಣ
Image
ಮಳೆಗಾಲದಲ್ಲಿ ಈ ರೀತಿಯ ಬಟ್ಟೆ ಧರಿಸುವುದು ಬೆಸ್ಟ್‌

ವಿಡಿಯೋ ಇಲ್ಲಿದೆ ನೋಡಿ:

7 ದಿನಗಳಲ್ಲಿ ಮೊಡವೆಗಳನ್ನು ನಿವಾರಿಸುತ್ತದೆ

ಕೇವಲ 7 ದಿನಗಳ ಕಾಲ ವಿಶೇಷ ಪರಿಹಾರವನ್ನು ಅನುಸರಿಸಿದರೆ ಈ ಮೊಡವೆಗಳ ಸಮಸ್ಯೆಯನ್ನು ಮೂಲದಿಂದಲ್ಲೇ ತೆಗೆದು ಹಾಕಬಹುದು. ಜತೆಗೆ ಚರ್ಮವನ್ನು ಒಳಗಿನಿಂದ ಶುದ್ಧೀಕರಿಸಿ, ಪಿತ್ತರಸವನ್ನು ಶಾಂತಗೊಳಿಸುತ್ತದೆ ಎಂದು ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಹೇಳಿದ್ದಾರೆ.

ಏನು ಮಾಡಬೇಕು?

  • ರಾತ್ರಿಯಿಡೀ 3 ರಿಂದ 4 ಲವಂಗವನ್ನು ನೀರಿನಲ್ಲಿ ನೆನೆಸಿಡಿ.
  • ಮರುದಿನ ಬೆಳಿಗ್ಗೆ ನೆನೆಸಿದ ಲವಂಗವನ್ನು ರುಬ್ಬಿಕೊಳ್ಳಿ.
  • ಅದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ.
  • ಒಂದು ಚಿಟಿಕೆ ತಾಜಾ ಬೇವಿನ ಎಲೆಗಳ ಪೇಸ್ಟ್ ಅನ್ನು ಕೂಡ ಸೇರಿಸಬಹುದು.
  • ಈ ಮಿಶ್ರಣವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿರಿ.

ಇದನ್ನೂ ಓದಿ: ಗ್ಯಾಸ್‌ ಸ್ಟವ್‌ ಬಳಿ ತಪ್ಪಿಯೂ ಈ ವಸ್ತುಗಳನ್ನು ಇಡಲು ಹೋಗಬೇಡಿ

ಹೇಗೆ ಪ್ರಯೋಜನ?

  • ರಕ್ತ ಶುದ್ಧೀಕರಣ: ಲವಂಗ ಮತ್ತು ಬೇವು ಎರಡೂ ಶಕ್ತಿಶಾಲಿ ರಕ್ತ ಶುದ್ಧೀಕರಣಕಾರಕಗಳಾಗಿವೆ. ಅವು ದೇಹದಿಂದ ವಿಷವನ್ನು ತೆಗೆದುಹಾಕುತ್ತವೆ, ಇದರಿಂದಾಗಿ ಚರ್ಮವನ್ನು ಶುದ್ಧೀಕರಿಸುತ್ತವೆ.
  • ಪಿತ್ತ ದೋಷದಲ್ಲಿ ಶಾಂತಿ : ಲವಂಗ ಮತ್ತು ನಿಂಬೆ ದೇಹದೊಳಗಿನ ಶಾಖವನ್ನು ಶಮನಗೊಳಿಸುತ್ತದೆ. ಪಿತ್ತವು ಶಾಂತವಾದಾಗ, ಚರ್ಮದ ಕಿರಿಕಿರಿ, ಊತವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ.
  • ಮೂಲದ ಮೇಲೆ ಪರಿಣಾಮ: ಈ ವಿಧಾನವು ಹೊರಗಿನಿಂದ ಸಹಾಯ ಮಾಡುವುದಲ್ಲದೆ, ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮೊಡವೆಗಳು ರೂಪುಗೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸುತ್ತದೆ
  • ನಯವಾದ ಚರ್ಮ: ಬೇವು ಮತ್ತು ಜೇನುತುಪ್ಪವು ಚರ್ಮವನ್ನು ಒಳಗಿನಿಂದ ತೇವಗೊಳಿಸುತ್ತದೆ. ಮುಖವನ್ನು ಹೆಚ್ಚು ಸ್ವಚ್ಛ, ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ