
ಮೊಡವೆಗೆ (Pimple) ಕೇವಲ ಬಾಹ್ಯ ಕಾರಣ ಎಂದು ತಿಳಿದುಕೊಳ್ಳುವುದು ತಪ್ಪು. ಮೊಡವೆಗಳು ಕಾಣಿಸಿಕೊಳ್ಳುವುದು ಕೇವಲ ಬಾಹ್ಯ ಸಮಸ್ಯೆಯಲ್ಲ, ಕೆಲವೊಮ್ಮೆ ಅವು ನಿಮ್ಮ ದೇಹದೊಳಗಿನ ಗುಪ್ತ ಅಸಮತೋಲನದ ಸಂಕೇತ ಎಂದು ಆಯುರ್ವೇದ ಹೇಳುತ್ತದೆ. ವಿಶೇಷವಾಗಿ ಪಿತ್ತ ದೋಷದ ಹೆಚ್ಚಳದಿಂದಾಗಿ ಮೊಡವೆಗಳ ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸಂಪೂರ್ಣವಾಗಿ ಹೇಳಿಕೊಂಡಿದ್ದು, ಈ ವೀಡಿಯೊದಲ್ಲಿ ಅವರು ಪಿತ್ತ ದೋಷವನ್ನು ಶಾಂತಗೊಳಿಸಲು ಮತ್ತು ಒಳಗಿನಿಂದ ಚರ್ಮವನ್ನು ಸ್ವಚ್ಛಗೊಳಿಸಲು ಕೆಲವೊಂದು ಪಾಕ ವಿಧಾನವನ್ನು ಹೇಳಿದ್ದಾರೆ.
ಆಯುರ್ವೇದದ ಪ್ರಕಾರ, ದೇಹದಲ್ಲಿ ಶಾಖ (ಪಿತ್ತ) ಹೆಚ್ಚಾದಾಗ, ಅದು ರಕ್ತದಲ್ಲಿ ವಿಷ ಹರಡಲು ಪ್ರಾರಂಭಿಸುತ್ತದೆ, ಇದು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಹೀಗೆ ಆಗುವಾಗ ದದ್ದುಗಳು, ಮೊಡವೆಗಳು, ಊತ ಅಥವಾ ಕಿರಿಕಿರಿಯ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಇದು ದೊಡ್ಡಮಟ್ಟದ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಇದನ್ನು ಸುಲಭವಾಗಿ ತೆಗೆದು ಹಾಕಬಹುದು.
ಕೇವಲ 7 ದಿನಗಳ ಕಾಲ ವಿಶೇಷ ಪರಿಹಾರವನ್ನು ಅನುಸರಿಸಿದರೆ ಈ ಮೊಡವೆಗಳ ಸಮಸ್ಯೆಯನ್ನು ಮೂಲದಿಂದಲ್ಲೇ ತೆಗೆದು ಹಾಕಬಹುದು. ಜತೆಗೆ ಚರ್ಮವನ್ನು ಒಳಗಿನಿಂದ ಶುದ್ಧೀಕರಿಸಿ, ಪಿತ್ತರಸವನ್ನು ಶಾಂತಗೊಳಿಸುತ್ತದೆ ಎಂದು ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಸ್ಟವ್ ಬಳಿ ತಪ್ಪಿಯೂ ಈ ವಸ್ತುಗಳನ್ನು ಇಡಲು ಹೋಗಬೇಡಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ