ಬಾಂಬ್ ಬೆದರಿಕೆ ಕರೆಗಳು ಬಂದರೆ ಭಯ ಪಡಬೇಡಿ, ಈ ಕೆಲಸವನ್ನು ಮೊದಲು ಮಾಡಿ

ಮನುಷ್ಯನು ಅಭಿವೃದ್ಧಿ ಹೊಂದುತ್ತಿದ್ದಂತೆ ತಂತ್ರಜ್ಞಾನಗಳನ್ನು ದುರಪಯೋಗ ಪಡಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಸ್ಮಾರ್ಟ್ ಫೋನ್ ಅನ್ನು ಮನೋರಂಜನೆಯ ಜೊತೆಗೆ ಬೇಡದ ಚಟುವಟಿಕೆಗಳಿಗೆ ಬಳಸುತ್ತಿದ್ದಾನೆ. ಇತ್ತೀಚೆಗಿನ ದಿನಗಳಲ್ಲಿ ಜನಸಾಮಾನ್ಯರಿಗೆ ಬ್ಲಾಕ್ ಮೇಲ್ ಸೇರಿದಂತೆ ಬಾಂಬ್ ಬೆದರಿಕೆ ಕರೆಗಳು ಬರುವುದು ಹೆಚ್ಚಾಗುತ್ತಿದೆ. ಇಂತಹ ಕರೆಗಳು ಬಂದಾಗ ಭಯ ಪಡದೇ ಆ ಸಮಯದಲ್ಲಿ ಏನು ಮಾಡಬೇಕೆನ್ನುವುದು ತಿಳಿದಿದ್ದರೆ ನಿಮ್ಮವರನ್ನು ಅಪಾಯದಿಂದ ಪಾರು ಮಾಡಿದ್ದಂತಾಗುತ್ತದೆ.

ಬಾಂಬ್ ಬೆದರಿಕೆ ಕರೆಗಳು ಬಂದರೆ ಭಯ ಪಡಬೇಡಿ, ಈ ಕೆಲಸವನ್ನು ಮೊದಲು ಮಾಡಿ
Bomb threat calls
Follow us
| Updated By: ಅಕ್ಷತಾ ವರ್ಕಾಡಿ

Updated on: Feb 15, 2024 | 8:02 PM

ಮಾನವನ ಅಭಿವೃದ್ಧಿಯಿಂದಾಗಿ ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಅಭಿವೃದ್ಧಿಯ ನೆರಳಿನಲ್ಲಿ ಮನುಷ್ಯನು ಸ್ವಾರ್ಥನಾಗುತ್ತಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಬೆದರಿಸುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾನೆ. ಹೀಗಾಗಿ ನಕಲಿ ಸಿಮ್ ಕಾರ್ಡ್ ಬಳಸಿ ಬೆದರಿಕೆ ಕರೆಗಳ ಮೂಲಕ ಹಣ ವಸೂಲಿ ಮಾಡುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇನ್ನಿತರ ಪ್ರಮುಖ ನಗರದ ಪ್ರದೇಶಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದೆ. ಹೀಗಾಗಿ ನಗರದ ಜನರು ಇಂತಹ ಕರೆಗಳಿಂದ ಭಯ ಪಟ್ಟುಕೊಂಡಿದ್ದಾರೆ. ಒಂದು ವೇಳೆ ಇಂತಹ ಬೆದರಿಕೆಯ ಕರೆಗಳು ಬಂದಾಗ ಸ್ವಲ್ಪ ಬುದ್ಧಿವಂತಿಕೆಯಿಂದ ಎಲ್ಲವನ್ನು ನಿಭಾಯಿಸುವ ಕಲೆಯು ಗೊತ್ತಿರಬೇಕು.

ಬಾಂಬ್ ಬೆದರಿಕೆ ಕರೆ ಬಂದ ಕೂಡಲೇ ಈ ಕೆಲಸಗಳನ್ನು ಮೊದಲು ಮಾಡಿ:

  1. ನಿಮ್ಮ ಎಲ್ಲಾ ಫೋನ್‌ಗಳು ಕಾಲರ್ ಐಡಿ ಮತ್ತು ಕರೆಗಳ ಸ್ವಯಂಚಾಲಿತ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿರುವುದು ಮುಖ್ಯ.
  2. ಬಾಂಬ್ ಬೆದರಿಕೆ ಕರೆ ಮಾಡುವವರಿಗೆ ಶಾಂತ ಪ್ರತಿಕ್ರಿಯೆ ನೀಡುವುದರಿಂದ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯ.
  3. ಮೊದಲಿಗೆ ಕರೆ ಮಾಡಿದ ವ್ಯಕ್ತಿಯು ಮಾತನಾಡುವ ಪ್ರತಿಯೊಂದು ಪದವನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಿ.
  4. ಕರೆ ಮಾಡಿದವರು ಬಾಂಬ್ ಇರುವ ಸ್ಥಳ, ಸ್ಫೋಟದ ಸಮಯವನ್ನು ಸೂಚಿಸದಿದ್ದರೆ, ಈ ಮಾಹಿತಿಯನ್ನು ಕೇಳಿ ಪಡೆಯುವುದನ್ನು ಮರೆಯಬೇಡಿ.
  5. ಬಾಂಬ್ ಸ್ಫೋಟಿಸುವುದರಿಂದ ಸಾವು ಅಥವಾ ಅನೇಕ ಮುಗ್ಧ ಜನರಿಗೆ ಗಂಭೀರವಾದ ಗಾಯವಾಗಬಹುದು ಎಂದು ಕರೆ ಮಾಡಿದವರಿಗೆ ತಿಳಿಸಿ.
  6. ಮೋಟಾರ್ ಚಾಲನೆಯಲ್ಲಿರುವಿಕೆ, ಮ್ಯೂಸಿಕ್ ಪ್ಲೇಯಿಂಗ್ ಮತ್ತು ಕರೆ ಮಾಡುವವರ ಸ್ಥಳದ ಬಗ್ಗೆ ಸುಳಿವು ನೀಡುವ ಯಾವುದೇ ಶಬ್ದಗಳು ಕೇಳಿಸಿದರೆ ಸರಿಯಾಗಿ ಆಲಿಸಿ.
  7. ಕರೆ ಮಾಡಿದ ವ್ಯಕ್ತಿಯ ಧ್ವನಿಯು ಪುರುಷ ಅಥವಾ ಮಹಿಳೆಯದ್ದೆ ಎಂದು ಗಮನಿಸಿ. ಧ್ವನಿ ಗುಣಮಟ್ಟ, ಮಾತಿನ ಅಡೆತಡೆಗಳನ್ನು ಸೂಕ್ಷ್ಮವಾಗಿ ಆಲಿಸಿ.
  8. ಲಿಖಿತ ಬೆದರಿಕೆ ಬಂದಾಗ ಕೈಬರಹ ಅಥವಾ ಬೆರಳಚ್ಚು, ಕಾಗದ ಮತ್ತು ಅಂಚೆ ಗುರುತುಗಳಂತಹ ಪುರಾವೆಗಳನ್ನು ಉಳಿಸಿಕೊಳ್ಳುವುದನ್ನು ಮರೆಯಬೇಡಿ. ಈ ಎಲ್ಲಾ ದಾಖಲೆಗಳು ಪೊಲೀಸರಿಗೆ ತನಿಖೆಗೆ ಸಹಾಯಕವಾಗಲಿದೆ.
  9. ಕರೆ ಸ್ಥಗಿತಗೊಂಡ ತಕ್ಷಣವೇ ಪೊಲೀಸರಿಗೆ ವರದಿ ಮಾಡಿ ಮಾಹಿತಿಯನ್ನು ನೀಡಿ. ಇದರಿಂದ ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಪೊಲೀಸರು ಆಗುವ ಅಪಾಯವನ್ನು ತಡೆಯಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ