AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solo Bike Ride: ಡಯಾಬಿಟಿಸ್ ವಿರುದ್ದ ಎಚ್ಚರಿಸಲೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದು Solo ಬೈಕ್ ರೈಡ್!

ವೃತ್ತಿ ಜೀವನದಲ್ಲಿ ಯಾವೊತ್ತೂ ಹೆಚ್ಚು ಲಾಭಕೋರತನ ಅಥವಾ ಮೋಸಗಳು ಇರಬಾರದೆಂದು ಹೇಳುತ್ತಿದ್ದ ತನ್ನ ತಾಯಿಯ ಮಾತುಗಳನ್ನು ಶಿರಸಾವಹಿಸಿ ಪಾಲಿಸಲು ಬೆಂಗಳೂರಿನವರೇ ಆದ ಕ್ರಾಂತಿ ಕೆ. ಆರ್ ಅಣಿಯಾಗುತ್ತಿದ್ದಾರೆ. ಮೇಲಿಂದ ಆ ತಾಯಿ ತಥಾಸ್ತು ಅನ್ನದೇ ಇರಲಾರಳು ಎಂಬ ನಂಬಿಕೆ ಆತನ ತಂದೆಯದು. ಮುಂದೆ ಓದಿ...

Solo Bike Ride: ಡಯಾಬಿಟಿಸ್ ವಿರುದ್ದ ಎಚ್ಚರಿಸಲೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದು Solo ಬೈಕ್ ರೈಡ್!
ಡಯಾಬಿಟಿಸ್ ವಿರುದ್ದ ಎಚ್ಚರಿಸಲೆಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದು Solo ಬೈಕ್ ರೈಡ್!
TV9 Web
| Edited By: |

Updated on:Jun 20, 2022 | 2:00 PM

Share

Fathers Day ಸಂದರ್ಭದಲ್ಲಿ ಮಗನ ಸಾಮಾಜಿಕ ಕಳಕಳಿ ನೆನೆದು ಅಪ್ಪನ ಸ್ವಗತ ಮಾತುಗಳು ಇಲ್ಲಿವೆ. ಮಧುಮೇಹವೆಂಬ ರಾಕ್ಷಸ ಅನಾರೋಗ್ಯಕ್ಕೆ 4 ತಿಂಗಳ ಹಿಂದೆ ಅಮ್ಮ ಸತ್ತಾಗ ಕಂಗಾಲಾದ ಮಗ, ಅಪ್ಪನ ಪಾತ್ರಧಾರಿಯಾಗಿ ತಾಯಿಯಂತೆ ತನ್ನ ಏಕಾಂಗಿ ಅಪ್ಪನನ್ನು ಸಲಹುವ ಪರಿಯ ಪರಿಚಯ ಇಲ್ಲಿದೆ. ನನ್ನ ಬಾಳ ಸಂಗಾತಿ ಸತ್ತ ಮೇಲೆ ನನ್ನ ಮಗನೇ ನನಗೆ ತಾಯಿಯಾಗಿ ಸಲಹುತ್ತಿದ್ದಾನೆ- ಇದು ಬಹುತೇಕ ಅಪ್ಪಂದಿರ ಹೃದಯತುಂಬಿದ ಮಾತು. ಲೇಖಕ ಕೇಶವ ರೆಡ್ಡಿ ಹಂದ್ರಾಳ ಅವರು (Keshava Reddy Handrala) ತುಮಕೂರು ಜಿಲ್ಲೆಯವರು. ಕೆಎಎಸ್ ಅಧಿಕಾರಿಯಾಗಿ ನಿವೃತ್ತರಾದವರು. ಅವರು ಬರೆದ ಸುಮಾರು ಐನೂರು ಕಥೆಗಳು, ಮುನ್ನೂರು ಪ್ರಬಂಧಗಳು ಕನ್ನಡದಲ್ಲಿ ಪ್ರಕಟಗೊಂಡಿವೆ.

ಸ್ನೇಹಿತರೇ ಇವನು ನನ್ನ ಮಗ ಕ್ರಾಂತಿ ಕೆ. ಆರ್ (Kranti K R) ತನ್ನ ವೃತ್ತಿಯ ಜೊತೆ ಜೊತೆಗೆ ಈ ಹತ್ತು ವರ್ಷಗಳಿಂದಲೂ ಸಮಾಜದ ಅಸಹಾಯಕ ವರ್ಗಕ್ಕೆ ( ವೃದ್ಧರು, ಅಂಗವಿಕಲರು, ಅನಾಥ ರೋಗಿಗಳು) ಒಂದಿಷ್ಟು ಸಹಾಯ ಮಾಡಿಕೊಂಡು ಬಂದವನು. ನಾಲ್ಕು ತಿಂಗಳ ಹಿಂದೆ ಅವನ ಪ್ರೀತಿಯ ಅಮ್ಮ ಅಂದರೆ ನನ್ನ ಹೆಂಡತಿ ಕಾರ್ಡಿಯಾಕ್ ಅರೆಸ್ಟ್ ನಿಂದ ಸಾಯಲು ಸಕ್ಕರೆ ಕಾಯಿಲೆ ಕೂಡ ತನ್ನ ಪಾಲು ಕೊಟ್ಟಿತ್ತು. ಆ ಕಾರಣದಿಂದಾಗಿ ಇವನು 14 -07- 2022 ರಿಂದ ಒಂದು ತಿಂಗಳ ಕಾಲ ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ ರಾಯಲ್ ಎನ್ಫೀಲ್ಡ್ ಮೋಟಾರ್ ಬೈಕಿನಲ್ಲಿ ಸಂಚರಿಸುತ್ತಾ (ಸೋಲೋ ಬೈಕ್ ರೈಡ್), ಸಕ್ಕರೆ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶ ಹೊಂದಿದ್ದಾನೆ. ಇವನ ಈ ಅಭಿಯಾನದಲ್ಲಿ ಅವನೊಂದಿಗಿರುವ ಬಯಸುವವರು ಅವನ ರೈಡ್​ ಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬಹುದು. ಈ ಮೂಲಕ ಸಕ್ಕರೆ ಕಾಯಿಲೆ ವಿರುದ್ದದ ಜಾಗೃತಿ ಅಭಿಯಾನದಲ್ಲಿ ನೀವೂ ಭಾಗವಹಿಸಬಹುದು. ಇದಕ್ಕೆ THE GOD RIDE ಎಂದು ಹೆಸರಿಸಲಾಗಿದೆ. GOD ಎಂದರೆ GO DIABETES ಎಂದು ಅರ್ಥ. ಇದೊಂದು ದೇವರ ಕೆಲಸವೇ ಸರಿ.

ಸೋಲೋ ಬೈಕ್ ರೈಡ್ ಹೊರಟಿರುವ ಕ್ರಾಂತಿ ಕೆ. ಆರ್. ನನ್ನ ದೊಡ್ಡ ಮಗ. ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಆದರೆ ಕೃಷಿ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಒಲವು ತೋರಿದವ. ಇವನದು ಪ್ರಯೋಗ ಮತ್ತು ಸಾಹಸ ಪ್ರವೃತ್ತಿ. ಇವನ ಸಾಹಸ ಪ್ರವೃತ್ತಿಗಳಿಗೆ ಇವನ ಅಮ್ಮ (ನನ್ನ ಹೆಂಡತಿ) ಸದಾ ಪ್ರೋತ್ಸಾಹಕ್ಕೆ ನಿಲ್ಲುತ್ತಿದ್ದಳು. ಕಾಲೇಜು ದಿನಗಳಿಂದಲೂ ಬೈಕ್ ಮತ್ತು ಕಾರ್ ರೈಡಿಂಗ್ ನಲ್ಲಿ ಪಂಟರ್ ಇವನು. ಕರ್ನಾಟಕ ಮತ್ತು ದಕ್ಷಿಣ ಭಾರತಗಳಲ್ಲಿ ಕೆಲವು ಬೈಕ್ ರೈಡ್ ಗಳನ್ನು ಮಾಡಿದ್ದಾನೆ.

ನಾಲ್ಕು ತಿಂಗಳ ಹಿಂದೆ ಇವರ ಅಮ್ಮ ಹೃದಯಸ್ಥಂಭನದಿಂದ ಮೃತಪಟ್ಟಾಗ 35ರ ವಯಸ್ಸಿನಲ್ಲಿ ಪುಟ್ಟ ಮಗುವಿನಂತೆ ಬಿಕ್ಕಳಿಸಿ ಅತ್ತಿದ್ದ. ಒಂದೂವರೆ ವರ್ಷದ ಹಿಂದೆ ತನ್ನ ತಾಯಿಗೆ ಕೋವಿಡ್ ಬಂದಾಗ ತಾನೇ ತಾಯಿಯಂತೆ ಉಪಚರಿಸಿ, ಆರೈಕೆ ಮಾಡಿದ್ದ. ಕೋವಿಡ್ ನಿಂದಾಗಿ ಡಯಾಬಿಟಿಸ್ ಬಂದಿತ್ತು. ಮತ್ತು ಇದೀಗ ಹೃದಯಸ್ಥಂಭನಕ್ಕೆ ಅದೂ ಒಂದು ಕಾರಣವೆಂದು ಡಾಕ್ಟರ್ ಹೇಳಿದ್ದರು.

Bangalorean on solo bike ride from kanyakumari to kashmir to educate on diabetes

ತಾಯಿಯ ಸ್ಮರಣಾರ್ಥ ಡಯಾಬಿಟಿಸ್ ಬಗ್ಗೆ ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ರೈಡ್

ಹಾಗಾಗಿ ಇವನು ತನ್ನ ತಾಯಿಯ ಸ್ಮರಣಾರ್ಥ ಡಯಾಬಿಟಿಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 10 ಸಾವಿರ ಕಿಲೋ ಮೀಟರ್ ಬೈಕ್ ರೈಡ್ ಹೊರಟಿದ್ದಾನೆ. 2022 ಜುಲೈ 14 ನೇ ತಾರೀಖಿಗೆ ಸೋಲೋ ರೈಡ್ ಶುರುವಾಗಿ 31 ದಿನಗಳಲ್ಲಿ ಮುಗಿಯತ್ತದೆಂದು ಅಂದಾಜಿಸಲಾಗಿದೆ. ತನ್ನ ವೃತ್ತಿ ಜೀವನದಲ್ಲಿ ಯಾವೊತ್ತೂ ಹೆಚ್ಚು ಲಾಭಕೋರತನ ಅಥವಾ ಮೋಸಗಳು ಇರಬಾರದೆಂದು ಹೇಳುತ್ತಿದ್ದ ತನ್ನ ತಾಯಿಯ ಮಾತುಗಳನ್ನು ಶಿರಸಾವಹಿಸಿ ಪಾಲಿಸಲು ಅಣಿಯಾಗುತ್ತಿದ್ದಾನೆ. ಮೇಲಿಂದ ಆ ತಾಯಿ ತಥಾಸ್ತು ಅನ್ನದೇ ಇರಲಾರಳು ಎಂಬ ನಂಬಿಕೆ ನನ್ನದು. ಒಂದಿಷ್ಟು ವೈಯಕ್ತಿಕ ತೊಂದರೆ ತಾಪತ್ರಯಗಳಲ್ಲೂ.. ಬೇರೆಯವರು ತೊಂದರೆಯಲ್ಲಿರೋವಾಗ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಾ ಅದರಲ್ಲೇ ಖುಷಿ ಮತ್ತು ಥ್ರಿಲ್ ಪಡೆಯುವ ಸ್ವಭಾವ ಇವನದು. ಇದರಿಂದ ನನಗೂ, ಮನೆಯ ಎಲ್ಲಾ ಸದಸ್ಯರಿಗೂ ಇವನು ಆಪ್ಯಾಯಮಾನ. ಆಲ್ ದಿ ಬೆಸ್ಟ್​ ಮಗನೇ…

Published On - 1:54 pm, Mon, 20 June 22

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ