AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಈ ಟಿಪ್ಸ್‌ ಪಾಲಿಸಿ

ಮನೆಯ ಶುಚಿತ್ವದ ದೃಷ್ಟಿಯಿಂದ ಪ್ರತಿದಿನ ನೆಲ ಒರೆಸುವುದು ಅತ್ಯಗತ್ಯ. ನಿತ್ಯ ನೆಲ ಒರೆಸಿದರೂ ಸಹ ಕೆಲವೊಂದು ಬಾರಿ ಟೈಲ್ಸ್‌, ಗ್ರಾನೈಟ್‌ ಮೇಲೆ ಅಂಟಿರುವ ಹಠಮಾರಿ ಕಲೆ, ಕೊಳೆಗಳು ಹೋಗೋದೇ ಇಲ್ಲ. ಅದರಲ್ಲೂ ತಿಳಿ ಬಣ್ಣದ ಟೈಲ್ಸ್‌ಗಳ ಮೇಲೆ ಈ ಕಲೆಗಳು ಎದ್ದು ಕಾಣುತ್ತವೆ. ಹೀಗಿರುವಾಗ ನೆಲ ಒರೆಸುವ ನೀರಿಗೆ ಈ ಕೆಲವೊಂದು ವಸ್ತುಗಳನ್ನು ಬೆರೆಸುವ ಮೂಲಕ ಕಲೆಗಳನ್ನು ನಿಮಿಷದಲ್ಲಿ ಹೋಗಲಾಡಿಸಬಹುದು.

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಜಸ್ಟ್‌ ಈ ಟಿಪ್ಸ್‌ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Feb 15, 2026 | 4:43 PM

Share

ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಹೌದು ಅದರಲ್ಲೂ ಸ್ವಚ್ಛತೆಯ ದೃಷ್ಟಿಯಿಂದ ಪ್ರತಿನಿತ್ಯ ನೆಲವನ್ನು (Floor Cleaning) ಗುಡಿಸಿ ಒರೆಸಲೇಬೇಕು. ಇಲ್ಲದಿದ್ದರೆ ಕೀಟಾಣು, ಸೂಕ್ಷ್ಮಜೀವಿಗಳು ನೆಲದಲ್ಲಿಯೇ ನೆಲೆಗೊಳ್ಳುವುದು ಮಾತ್ರವಲ್ಲದೆ, ಕಲೆ, ಕೊಳೆಗಳಿಂದಾಗಿ ಟೈಲ್ಸ್‌, ಗ್ರಾನೈಟ್‌ನ ಸೌಂದರ್ಯವೇ ಹಾಳಾಗಿ ಹೋಗುತ್ತದೆ. ಅದಕ್ಕಾಗಿ ಪ್ರನಿತ್ಯ ಎಲ್ಲರೂ ನೆಲ ಒರೆಸುತ್ತಾರೆ. ಆದ್ರೆ ನಿತ್ಯ ನೆಲ ಒರೆಸಿದರೂ ಟೈಲ್ಸ್‌ ಮೇಲೆ ಅಂಟಿರುವ ಕಲೆಗಳು ಹೋಗುತ್ತಿಲ್ಲ ಎಂದು ಹಲವರು ದೂರುತ್ತಿರುತ್ತಾರೆ. ಹೀಗಿರುವಾಗ ದುಬಾರಿ ಕ್ಲೀನರ್‌ಗಳನ್ನು ಬಲಸುವ ಬದಲು ಮನೆಯಲ್ಲಿಯೇ ಲಭ್ಯವಿರುವ ಈ ಕೆಲವೊಂದು ವಸ್ತುಗಳನ್ನು ನೆಲ ಒರೆಸುವ ನೀರಿಗೆ ಸೇರಿಸಿ ನೆಲ ಕ್ಲೀನ್‌ ಮಾಡುವುದರಿಂದ ಹಠಮಾರಿ ಕಲೆಗಳನ್ನೂ ನಿಮಿಷದಲ್ಲಿ ಹೋಗಲಾಡಿಸಬಹುದು.  ಜೊತೆಗೆ ನೆಲ ಪಳಪಳನೆ ಹೊಳೆಯುತ್ತದೆ.

ನೆಲದ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸುವುದು ಹೇಗೆ?

ಉಪ್ಪು ಮತ್ತು ಶಾಂಪೂ: ನೆಲ ಒರೆಸುವ ನೀರಿಗೆ ಒಂದು ಟೀಚಮಚ ಕಲ್ಲು ಉಪ್ಪನ್ನು ಹಾಗೂ ಶಾಂಪೂ ಸೇರಿಸಿ ಶಾಂಪೂ ಬದಲಿಗೆ ಲಿಕ್ವಿಡ್ ಹ್ಯಾಂಡ್ ವಾಶ್ ಅನ್ನು ಸಹ ಬಳಸಬಹುದು. ಇವು ನೆಲದ ಮೇಲೆ ಅಂಟಿರುವ ಕಲೆಯನ್ನು ಹಾಗೂ ವಾಸನೆಯನ್ನು ಸುಲಭವಾಗಿ ತೆಗೆದು ಹಾಕುತ್ತದೆ. ಮತ್ತು ನೆಲದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಟೈಲ್ಸ್‌ ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯಬಹುದು.

ಅಡಿಗೆ ಸೋಡಾ ಪೇಸ್ಟ್:  ನೆಲದ ಮೇಲೆ ಹಳೆಯ ಮೊಂಡುತನದ ಕಲೆಗಳಿದ್ದರೆ ಅವುಗಳನ್ನು ಹೋಗಲಾಡಿಸಲು, ಒಂದು ಕಪ್‌ನಲ್ಲಿ ಸ್ವಲ್ಪ ನೀರು ಮತ್ತು ಅಡಿಗೆ ಸೋಡಾವನ್ನು ಬೆರೆಸಿ ದಪ್ಪ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕಲೆ ಇರುವ ಪ್ರದೇಶಕ್ಕೆ ಹಚ್ಚಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಒದ್ದೆಯಾದ ಬಟ್ಟೆ ಸ್ಕ್ರಬ್ ಮಾಡಿ. ಇದು ಪರಿಣಾಮಕಾರಿಯಾಗಿ ಕಲೆಗಳನ್ನು ತೊಡೆದುಹಾಕುತ್ತದೆ.

ಉಗುರು ಬೆಚ್ಚಗಿನ ನೀರು:  ಉಗುರು ಬೆಚ್ಚಗಿನ ನೀರಿನಿಂದ ನೆಲ ಒರೆಸುವುದರಿಂದ  ನೆಲದ ಸಂಗ್ರಹವಾದ ಧೂಳು ಬೇಗನೆ ನಿವಾರಣೆಯಾಗುತ್ತದೆ ಮತ್ತು ನೆಲವು ಸ್ವಚ್ಛವಾಗಿ ಕಾಣುವಂತೆ ಮಾಡುತ್ತದೆ. ಈ ವಿಧಾನವು ದೈನಂದಿನ ಶುಚಿಗೊಳಿಸುವಿಕೆಗೆ ಒಳ್ಳೆಯದು. ಬಯಸಿದಲ್ಲಿ, ನೀವು ಈ ನೀರಿಗೆ  ಕೆಲವು ಹನಿ ನಿಂಬೆ ರಸವನ್ನು ಕೂಡ ಸೇರಿಸಬಹುದು, ಇದು ಸೌಮ್ಯವಾದ, ತಾಜಾ ಪರಿಮಳವನ್ನು ನೀಡುತ್ತದೆ.

ಇದನ್ನೂ ಓದಿ: ನೀರಿನ ಬಾಟಲಿಯಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸರಳ ಸಲಹೆ ಪಾಲಿಸಿ

ವಿನೆಗರ್: ವಿನೆಗರ್ ಒಂದು ನೈಸರ್ಗಿಕ ಕ್ಲೀನರ್ ಆಗಿದೆ. ಇದನ್ನು ನೆಲ ಒರೆಸುವ ನೀರಿಗೆ ಬೆರೆಸಿ ನೆಲ ಕ್ಲೀನ್‌ ಮಾಡುವುದರಿಂದ  ಕಲೆ, ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಇದು ಟೈಲ್ಸ್ ಮತ್ತು ಮಾರ್ಬಲ್‌ ಮೇಲೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಸಾರಭೂತ ತೈಲಗಳು: ನಿಮ್ಮ ಮನೆಯಲ್ಲಿ ನಿರಂತರ ಸುಗಂಧ ಬೇಕಾದರೆ, ಒರೆಸುವ ನೀರಿಗೆ ಕೆಲವು ಹನಿ ಲ್ಯಾವೆಂಡರ್ ಅಥವಾ ಇತರ ಸಾರಭೂತ ತೈಲಗಳನ್ನು ಸೇರಿಸಿ. ಇದು  ಮನೆಗೆ ಸುಗಂಧ ಮತ್ತು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ
ಪಾಕ್ ಸೇನಾ ಮುಖ್ಯಸ್ಥರ ಬಳಿ ಐಡಿ ಕೇಳಿದ ಮ್ಯೂನಿಕ್ ಭದ್ರತಾ ಸಿಬ್ಬಂದಿ
ಕೊನೆಗೂ ಯುರೋಪಿಯನ್ ತಂಡದ ವಿರುದ್ಧ ಗೆದ್ದ ಇಂಗ್ಲೆಂಡ್
ಕೊನೆಗೂ ಯುರೋಪಿಯನ್ ತಂಡದ ವಿರುದ್ಧ ಗೆದ್ದ ಇಂಗ್ಲೆಂಡ್
Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ
Video: ಬುರ್ಖಾ ಧರಿಸಿ ಕನ್ವರ್ ಯಾತ್ರೆ ಕೈಗೊಂಡ ತಮನ್ನಾ
ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ
ಮಕ್ಕಳು ಬೀಚ್​​ನಲ್ಲಿ ಆಟವಾಡುತ್ತಿದ್ದಾಗ ಬಂದೇ ಬಿಡ್ತು ಭಯಾನಕ ಅಲೆ