Hanuman Temples: ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಪ್ರಸಿದ್ಧ ಹನುಮಂತನ ದೇವಾಲಯಗಳ ಮಾಹಿತಿ ಇಲ್ಲಿವೆ
ಈ ಬಾರಿ ಹನುಮಾನ್ ಜಯಂತಿಯನ್ನು ಎಪ್ರಿಲ್ 6 ರಂದು ಆಚರಿಸಲಾಗುವುದು. ಆದ್ದರಿಂದ ಈ ಮಂಗಳಕರ ದಿನದಂದು ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಪ್ರಸಿದ್ಧ ಹನುಮಂತನ ದೇವಾಲಯಗಳ ಮಾಹಿತಿ ಇಲ್ಲಿವೆ.

ಮುಖ್ಯಾಂಶಗಳು
- ಹನುಮಂತನ ದೇವಾಲಯಗಳಿಗೆ ಭೇಟಿ ನೀಡಲು ಶನಿವಾರ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.
- ಈ ಬಾರಿ ಹನುಮಾನ್ ಜಯಂತಿಯನ್ನು ಎಪ್ರಿಲ್ 6 ರಂದು ಆಚರಿಸಲಾಗುವುದು. ಆದ್ದರಿಂದ ಈ ಮಂಗಳಕರ ದಿನದಂದು ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಪ್ರಸಿದ್ಧ ಹನುಮಂತನ ದೇವಾಲಯಗಳ ಮಾಹಿತಿ ಇಲ್ಲಿವೆ.
- ಇಲ್ಲಿರುವ ಹನುಮಂತನ ಪ್ರತಿಮೆಯು ಸುಮಾರು 18 ಅಡಿಗಳಷ್ಟಿದ್ದು, ಇದು ಬೆಂಗಳೂರಿನಲ್ಲೇ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ.
ಹನುಮಂತನ ದೇವಾಲಯಗಳಿಗೆ ಭೇಟಿ ನೀಡಲು ಶನಿವಾರ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಪ್ರತೀ ವರ್ಷ ಚೈತ್ರ ಪೂರ್ಣಿಮೆಯ ದಿನದಂದು ಹನುಮ ಜಯಂತಿ(Hanuman Jayanti) ಯನ್ನು ಆಚರಿಸಲಾಗುತ್ತದೆ. ಈ ಬಾರಿ ಹನುಮಾನ್ ಜಯಂತಿಯನ್ನು ಎಪ್ರಿಲ್ 6 ರಂದು ಆಚರಿಸಲಾಗುವುದು. ಆದ್ದರಿಂದ ಈ ಮಂಗಳಕರ ದಿನದಂದು ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಪ್ರಸಿದ್ಧ ಹನುಮಂತನ ದೇವಾಲಯಗಳ ಮಾಹಿತಿ ಇಲ್ಲಿವೆ.
1. ಹನುಮಂತನ ಗುಡ್ಡ:
ಈ ದೇವಾಲಯದ ಇನ್ನೊಂದು ಜನಪ್ರಿಯ ಹೆಸರು ರಾಮಾಂಜನೇಯ ಗುಡ್ಡ, ಇದರ ಅರ್ಥ “ಹನುಮಂತನ ಬೆಟ್ಟ”. ಜನಪ್ರಿಯ ಪ್ರದೇಶವಾದ ಹನುಮಂತನಗರದಲ್ಲಿರುವ ಇದು ಬೆಂಗಳೂರಿನ ಅತ್ಯಂತ ಹಳೆಯ ಹನುಮಾನ್ ದೇವಾಲಯಗಳಲ್ಲಿ ಒಂದಾಗಿದೆ. ಆತನ ದೇವಾಲಯದ ಮೂಲಕ ಈ ಪ್ರದೇಶಕ್ಕೆ ಈ ಹೆಸರು ಬಂದಿದೆ ಎಂದೂ ಹೇಳಲಾಗುತ್ತದೆ. ಇದಲ್ಲದೆ, ದೇವಾಲಯವು 9 ಮೀಟರ್ ಉದ್ದದ ಹನುಮಂತ ಮತ್ತು ರಾಮ ಪರಸ್ಪರ ತಬ್ಬಿಕೊಂಡಿರುವ ಬೃಹತ್ ಪ್ರತಿಮೆಯನ್ನು ಕಾಣಬಹುದು.
ಸ್ಥಳ – ಹನುಮಂತ ನಗರ, ಬನಶಂಕರಿ ಹಂತ I, ಬೆಂಗಳೂರು, ಕರ್ನಾಟಕ 560019
2. ಶ್ರೀ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ:
ಇಲ್ಲಿರುವ ಹನುಮಂತನ ಪ್ರತಿಮೆಯು ಸುಮಾರು 18 ಅಡಿಗಳಷ್ಟಿದ್ದು, ಇದು ಬೆಂಗಳೂರಿನಲ್ಲೇ ಅತಿ ಎತ್ತರದ ಪ್ರತಿಮೆಗಳಲ್ಲಿ ಒಂದಾಗಿದೆ. ಈ ದೇವಾಲಯವು ರಾಮಾಯಣಕ್ಕೆ ನೇರವಾಗಿ ಸಂಬಂಧಿಸಿದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಲ್ಲಿ ನೀವು ಹನುಮಂತನ ಕೈಯಲ್ಲಿ ಚೂಡಾಮಣಿಯನ್ನು ನೋಡಬಹುದು. ಇದು ಭಾರತದ ಶ್ರೇಷ್ಠ ಸಂಸ್ಕೃತ ಮಹಾಕಾವ್ಯದ ದೃಶ್ಯವನ್ನು ಚಿತ್ರಿಸುತ್ತದೆ.
ಸ್ಥಳ – ಆಂಜನೇಯ ದೇವಸ್ಥಾನ ಸೇಂಟ್, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು, ಕರ್ನಾಟಕ 560004
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ, ಸರಯೂ ನದಿಯ ದರ್ಶನಕ್ಕೆ ಹೆಲಿಕಾಪ್ಟರ್ ಸೇವೆ
3. ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನ:
ಮೈಸೂರು ರಸ್ತೆಯಲ್ಲಿರುವ ಜನಪ್ರಿಯ ದೇವಾಲಯ. ಈ ಹನುಮಾನ್ ದೇವಾಲಯವನ್ನು ಸುಮಾರು 600 ವರ್ಷಗಳ ಹಿಂದೆ ಕನಕದಾಸರ ಗುರು, ಶ್ರೀ ವ್ಯಾಸ ರಾಯರು ನಿರ್ಮಿಸಿದರು ಎಂದು ಉಲ್ಲೇಖವಿದೆ. ಇಲ್ಲಿನ ದೇವಾಲಯವು ಎತ್ತರದ ಗೋಪುರವನ್ನು ಹೊಂದಿದ್ದು, ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ.
ಸ್ಥಳ – ಎ ಕ್ರಾಸ್, ವಿಬಿ ಬಡವಣೆ, ಮೈಸೂರು ರಸ್ತೆ, ಬ್ಯಾಟರಾಯನಪುರ, ಬೆಂಗಳೂರು, ಕರ್ನಾಟಕ 560026
4. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ:
ಈ ದೇವಾಲಯವು ಬೆಂಗಳೂರಿನ ಉತ್ತರ ಭಾಗದಲ್ಲಿದೆ ಮತ್ತು 150 ವರ್ಷಗಳಷ್ಟು ಹಳೆಯದು. ಅಲ್ಲದೆ, ದೇವಾಲಯವನ್ನು ವಿಶಿಷ್ಟ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಗುರು ಶ್ರೀ ವ್ಯಾಸರಾಯರು ಸ್ಥಾಪಿಸಿದರು ಎಂದು ಉಲ್ಲೇಖವಿದೆ. ಈ ದೇವಾಲಯವು ಬೆಂಗಳೂರಿನ ಅತ್ಯಂತ ಹಳೆಯ ಹನುಮಾನ್ ದೇವಾಲಯಗಳಲ್ಲಿ ಒಂದಾಗಿದೆ.
ಸ್ಥಳ – ದೊಡ್ಡ ಬಾಣಸವಾಡಿ ರಸ್ತೆ, ಬಾಣಸವಾಡಿ, ಬೆಂಗಳೂರು – 560043, BBMP ಕಚೇರಿ ಹಿಂಭಾಗ
5. ಪ್ರಸನ್ನ ವೀರಾಂಜನೇಯ ದೇವಸ್ಥಾನ:
ಈ ದೇವಾಲಯದಲ್ಲಿ ಹನುಮಂತನ ಅದ್ಭುತ ವಿಗ್ರಹವು 22 ಅಡಿ ಎತ್ತರ ಮತ್ತು 16 ಅಡಿ ಅಗಲವಿದೆ. ಈ ದೇವಾಲಯದ ಪ್ರಮುಖ ಆಕರ್ಷಣೆ “ಬೆಣ್ಣೆ ಅಲಂಕಾರ” ಇದು ಪ್ರತಿ ವರ್ಷ ಆಗಸ್ಟ್ನಲ್ಲಿ ನಡೆಯುತ್ತದೆ. ವಾಸ್ತವವಾಗಿ, ಕೆಳಗಿನ ಚಿತ್ರದಲ್ಲಿ ನೋಡಿದಂತೆ ವಿಗ್ರಹವನ್ನು ಬೆಣ್ಣೆಯಿಂದ ಅಲಂಕರಿಸಲಾಗಿದೆ.
ಸ್ಥಳ – 4 ನೇ ಮುಖ್ಯ ರಸ್ತೆ, ಮಹಾಲಕ್ಷ್ಮಿಪುರಂ ಲೇಔಟ್, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು, ಕರ್ನಾಟಕ 560086
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:33 am, Thu, 6 April 23




