AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dark Knees And Elbows : ಮೊಣಕೈ, ಮೊಣಕಾಲಿನ ಕಪ್ಪಾದ ಭಾಗಗಳು ನಿಮ್ಮ ಅಂದಕ್ಕೆ ಕಪ್ಪುಚುಕ್ಕೆ, ಇಲ್ಲಿದೆ ಸರಳ ಮನೆ ಮದ್ದು

ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ತಮ್ಮ ಸೌಂದರ್ಯದ ವಿಚಾರದಲ್ಲಿ ವಿಶೇಷವಾದ ಕಾಳಜಿಯನ್ನು ವಹಿಸುತ್ತಾರೆ. ಆದರೆ ಈ ಕಣ್ಣುಗಳು, ಕೈ ಕಾಲುಗಳ ಅಂದವನ್ನು ಹೇಗೆ ಕಾಪಾಡಿಕೊಳ್ಳುವುದು ಎನ್ನುವತ್ತ ಗಮನಹರಿಸುವುದೇ ಕಡಿಮೆ. ಹೀಗಾಗಿ ಹೆಚ್ಚಿನವರ ಮೊಣಕೈ ಹಾಗೂ ಮೊಣಕಾಲನ್ನು ನೋಡಿರಬಹುದು. ಕೆಲವರ ಕೈ ಹಾಗೂ ಕಾಲಿನ ಭಾಗವು ವಿಪರೀತವಾಗಿ ಕಪ್ಪಾಗಿರುತ್ತದೆ. ಎಷ್ಟು ತಿಕ್ಕಿ ತೊಳೆದರೂ ಈ ಕಪ್ಪಾದ ಚರ್ಮವು ಬಿಳಿಯಾಗುವುದೇ ಇಲ್ಲ. ಈ ಸಮಸ್ಯೆಗೆ ಮನೆಯಲ್ಲೇ ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಬಹುದು.

Dark Knees And Elbows : ಮೊಣಕೈ, ಮೊಣಕಾಲಿನ ಕಪ್ಪಾದ ಭಾಗಗಳು ನಿಮ್ಮ ಅಂದಕ್ಕೆ ಕಪ್ಪುಚುಕ್ಕೆ, ಇಲ್ಲಿದೆ ಸರಳ ಮನೆ ಮದ್ದು
ಸಾಯಿನಂದಾ
| Edited By: |

Updated on: Mar 18, 2024 | 12:16 PM

Share

ದೇಹದ ಎಲ್ಲಾ ಭಾಗಳು ಬಿಳಿ ಯಾಗಿದ್ದು ಮೊಣಕಾಲು ಹಾಗೂ ಮೊಣಕೈ ಭಾಗ ಕಪ್ಪಾಗಿದ್ದರೆ ಎಲ್ಲರ ಮುಂದೆ ಹೋಗುವುದಕ್ಕೂ ಮುಜುಗರವಾಗುತ್ತದೆ. ಇಷ್ಟದ ಬಟ್ಟೆಯನ್ನು ತೊಡುವ ಎಂದರೆ ಕೈ ಹಾಗೂ ಕಾಲಿನ ಕಪ್ಪಾದ ಭಾಗವು ಎದ್ದು ಕಾಣುತ್ತದೆ. ಈ ಭಾಗದ ಚರ್ಮವು ಕಪ್ಪಾಗಿ ಒರಟಾಗಿರುವುದರಿಂದ ಕೈ ಹಾಗೂ ಕಾಲು ಅಂದಗೆಡುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಎಷ್ಟೇ ದುಬಾರಿ ಉತ್ಪನ್ನಗಳನ್ನು ಬಳಸಿದರೂ ಈ ಡೆಡ್ ಸ್ಕಿನ್ ಗಳು ಮಾತ್ರ ಹೋಗುವುದೇ ಇಲ್ಲ. ಹೀಗಾದಾಗ ಮನೆಯಲ್ಲಿರುವ ಈ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಕೈ ಹಾಗೂ ಕಾಲಿನ ಚರ್ಮವನ್ನು ಬಿಳುಪಾಗಿಸಿಕೊಳ್ಳಬಹುದು.

  1. ಟೂತ್ ಪೇಸ್ಟ್ ಮತ್ತು ಬೇಕಿಂಗ್‌ ಸೋಡಾವನ್ನು ಮಿಕ್ಸ್‌ ಮಾಡಿ ನಿಮ್ಮ ಮೊಣಕೈ ಮತ್ತು ಮೊಣಕಾಲಿಗೆ ಹಚ್ಚಿ ಎರಡು ನಿಮಿಷಗಳ ಕಾಲ ಚೆನ್ನಾಗಿ ಉಜ್ಜಿ, ಉಗುರು ಬೆಚ್ಚಿಗಿನ ನೀರಿನಿಂದ ತೊಳೆಯುತ್ತ ಬಂದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
  2. ನಿಂಬೆ ರಸವನ್ನು ತೆಗೆದುಕೊಂಡು ಕಪ್ಪಾದ ಪ್ರದೇಶಕ್ಕೆ ಹೆಚ್ಚಿ ಸ್ವಲ್ಪ ಸಮಯದ ನಂತರ ತೊಳೆಯುವುದರಿಂದ ಚರ್ಮವು ಬಿಳುಪಾಗಿಸುತ್ತದೆ.
  3. ಮುಳ್ಳು ಸೌತೆಯ ಹೋಳಿಗೆ ನಿಂಬೆರಸ, ಅರಿಶಿಣ ಬೆರೆಸಿ ಚೆನ್ನಾಗಿ ರುಬ್ಬಿಕೊಂಡು ಇದನ್ನು ಕಪ್ಪಾದ ಭಾಗಗಳಿಗೆ ಹಚ್ಚುವುದು ಪರಿಣಾಮಕಾರಿಯಾಗಿದೆ.
  4. ಕಡಲೆ ಹಿಟ್ಟಿನಲ್ಲಿ ಅರಿಶಿನ ಬೆರೆಸಿ ಹಚ್ಚಿದರೆ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು.
  5. ಆಲೂಗಡ್ಡೆಯನ್ನು ರುಬ್ಬಿ ಅದಕ್ಕೆ ಜೇನು ಮತ್ತು ಹಸಿ ಹಾಲು ಹಾಕಿ ಮೊಣ ಕೈ ಹಾಗೂ ಮೊಣಕಾಲಿನ ಕಪ್ಪಾದ ಭಾಗಕ್ಕೆ ಹಚ್ಚುತ್ತಿದ್ದರೆ ಆ ಭಾಗದ ಚರ್ಮವು ಬಿಳಿಯಾಗುತ್ತದೆ.
  6. ಹಾಲಿನ ಕೆನೆಯನ್ನು ನಿಯಮಿತವಾಗಿ ಕಪ್ಪಾದ ಕೈ ಹಾಗೂ ಕಾಲಿನ ಭಾಗಕ್ಕೆ ಹಚ್ಚುವುದು ಪರಿಣಾಮಕಾರಿಯಾಗಿದೆ.
  7. ಒಂದು ಚಮಚ ಅಡುಗೆ ಸೋಡಾಕ್ಕೆ ಹಾಲನ್ನು ಬೆರೆಸಿ ಮಿಶ್ರಣಮಾಡಿಕೊಂಡು, ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ ಒಣಗಿದ ಬಳಿಕ ಸ್ಕ್ರಬ್ ಮಾಡಿದರೆ ಈ ಕಪ್ಪಾದ ಚರ್ಮವನ್ನು ತೊಡೆದುಹಾಕಬಹುದು.
  8. ರಾತ್ರಿ ಮಲಗುವ ಮೊದಲು ಮೊಣಕಾಲು ಹಾಗೂ ಮೊಣಕೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿ ಬೆಳಗ್ಗೆ ತೊಳೆಯುವುದು ಪರಿಣಾಮಕಾರಿಯಾಗಿದೆ.
  9. ಈರುಳ್ಳಿ ಮತ್ತು ನಿಂಬೆರಸವನ್ನು ಈ ಕಪ್ಪಾದ ಚರ್ಮಕ್ಕೆ ಹಚ್ಚುವುದು ಉತ್ತಮ ಮನೆ ಮದ್ದಾಗಿದೆ.
  10. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ರೋಸ್‌ ವಾಟರ್‌ ಬೆರೆಸಿ ಹಚ್ಚಿ ಒಣಗಿದ ಬಳಿಕ ತೊಳೆಯುವುದರಿಂದ ಕಪ್ಪಾದ ಚರ್ಮವು ಬಿಳಿಯಾಗುತ್ತದೆ.
  11. ಒಂದು ಚಮಚ ಕಡಲೆ ಬೇಳೆ ಹಿಟ್ಟು ಎರಡು ಚಮಚ ಹಾಲನ್ನು ಮಿಶ್ರಣ ಮಾಡಿ, ಇದನ್ನು ಮೊಣಕಾಲುಗಳು ಮತ್ತು ಮೊಣಕೈಗಳ ಮೇಲೆ ಹಚ್ಚಿ ಸ್ವಲ್ಪ ಸಮಯದ ಬಳಿಕ ತಣ್ಣೀರಿನಿಂದ ತೊಳೆಯುವುದರಿಂದ ಈ ಕಪ್ಪಾದ ಚರ್ಮದಿಂದ ಮುಕ್ತಿ ಪಡೆಯಬಹುದು.
  12. ಲೋಳೆಸರವನ್ನು ಕಪ್ಪಾದ ಭಾಗಗಳಿಗೆ ಅನ್ವಯಿಸಿ ಸ್ವಲ್ಪ ಸಮಯದ ನಂತರದಲ್ಲಿ ತೊಳೆಯುವುದರಿಂದ ಈ ಸಮಸ್ಯೆಯನ್ನು ದೂರವಾಗಿಸಿಕೊಳ್ಳಬಹುದು.
  13. ಒಂದು ಚಮಚ ವಿನೆಗರ್, ಒಂದು ಚಮಚ ಮೊಸರು ಹಾಗೂ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮೊಣಕೈ ಹಾಗೂ ಮೊಣಕಾಲಿನ ಕಪ್ಪಾದ ಭಾಗಕ್ಕೆ ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುತ್ತ ಬಂದರೆ ಈ ಡೆಡ್ ಸ್ಕಿನ್ ಗಳು ದೂರವಾಗುತ್ತವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ