AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ಬೆವರುವುದನ್ನು ತಡೆಯುವುದು ಹೇಗೆ ಇಲ್ಲಿದೆ ಓದಿ

ಕೆಲವರು ಏಕೆ ಹೆಚ್ಚು ಬೆವರುತ್ತಾರೆ  ಎಂಬ ಪ್ರಶ್ನೆಗೆ ಅನೇಕರು ದೇಹದ ಉಷ್ಣತೆಯು ಹೆಚ್ಚಾದಾಗ ಬೆವರುತ್ತಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಮತ್ತೆ ಬೇರೆ ಕಾರಣಗಳಿವೆ ಅವು  ಇಲ್ಲಿವೆ

ಅತಿಯಾಗಿ ಬೆವರುವುದನ್ನು ತಡೆಯುವುದು ಹೇಗೆ ಇಲ್ಲಿದೆ ಓದಿ
ಸಾಂಧರ್ಬಿಕ ಚಿತ್ರImage Credit source: Times Now
TV9 Web
| Updated By: ವಿವೇಕ ಬಿರಾದಾರ|

Updated on:Jul 02, 2022 | 11:00 PM

Share

ಕೆಲ ಜನರು ಅತಿಯಾಗಿ ಬೆವರುತ್ತಾರೆ (Sweat) ಇದರಿಂದ ದೇಹ ವಾಸನೆ ಬರುತ್ತದೆ ಹೀಗಾಗಿ ಮುಜುಗರಗೊಂಡು ಜನರ ಮಧ್ಯದಿಂದ ದೂರವಿರಲು ಪ್ರಯತ್ನಿಸುತ್ತಾರೆ. ಅತಿಯಾಗಿ ಬೆವರುವುದು ಬೇಸಿಗೆ (Summer) ಕಾಲದಲ್ಲಿ ಅಥವಾ ದೈಹಿಕ ವ್ಯಾಯಾಮಗಳನ್ನು ಅತಿಯಾಗಿ ಮಾಡಿದಾಗ ಬೆವರುವುದು ಸಹಜ ವಿದ್ಯಮಾನವಾಗಿದೆ. ಇದು ನಿಮ್ಮ ದೇಹ ತಂಪಾಗುತ್ತಿದೆ ಎಂದು ಸೂಚಿಸುತ್ತದೆ.

ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಲವಣಗಳ ಜೊತೆಗೆ ನೀರನ್ನು ಒಳಗೊಂಡಿರುವ ಬೆವರುವಿಕೆಯು ದೇಹದಿಂದ ಶಾಖವನ್ನು ಬಿಡುಗಡೆ ಮಾಡುತ್ತದೆ. ಅಂದರೆ 98.6 ಎಫ್  ನಿಮ್ಮ ಬೆವರು ಕೆಟ್ಟ ವಾಸನೆಯನ್ನು ಹೊಂದಿದ್ದರೆ ಅದು ನಿಮ್ಮ ದೇಹದಲ್ಲಿನ ಉಪ್ಪಿನ ಅಂಶವನ್ನು ಹೊರಹಾಕುತ್ತಿದೆ ಎಂದು ಸೂಚಿಸುತ್ತದೆ. ಈ ಸಂದರ್ಭದಲ್ಲಿ ನೀವು ನೀರನ್ನು ಸೇವಿಸ ಬೇಕು ಇಲ್ಲದಿದ್ದೆರೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.

ಇದನ್ನು ಓದಿ: Personality: ನಿಮ್ಮ ಧ್ವನಿಗೂ ನಿಮ್ಮ ವ್ಯಕ್ತಿತ್ವಕ್ಕೂ ಸಂಬಂಧ ಇದೆಯೆ?

ಕೆಲವರು ಏಕೆ ಹೆಚ್ಚು ಬೆವರುತ್ತಾರೆ  ಎಂಬ ಪ್ರಶ್ನೆಗೆ ಅನೇಕರು ದೇಹದ ಉಷ್ಣತೆಯು ಹೆಚ್ಚಾದಾಗ ಬೆವರುತ್ತಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಮತ್ತೆ ಬೇರೆ ಕಾರಣಗಳಿವೆ ಅವು  ಇಲ್ಲಿವೆ

1. ದೇಹದ ಗಾತ್ರ:  ಅಧಿಕ ದೇಹದ ತೂಕ ಮತ್ತು ಬೊಜ್ಜು ಹೊಂದಿರುವ ಜನರು ತಮ್ಮ ದೇಹದಲ್ಲಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿದ್ದು, ಹೀಗಾಗಿ ಹೆಚ್ಚು ಬೆವರುತ್ತಾರೆ.

2. ಫಿಟ್ನೆಸ್ : ನಿಯಮಿತವಾಗಿ ವ್ಯಾಯಾಮ, ಆಟ, ಆಗಾಗ್ಗೆ ತಿರುಗಾಡುವ ಮತ್ತು ಫಿಟ್ ಆಗಿರುವ ಜನರು ಹೆಚ್ಚು ಬೆವರುತ್ತಾರೆ.

3. ವಯಸ್ಸಿನ ಅಂಶ: ನಿಮಗೆ ವಯಸ್ಸಾದಂತೆ ಬೆವರು ಗ್ರಂಥಿಗಳು ಹೆಚ್ಚಾಗಿ ಬದಲಾಗುತ್ತವೆ.  ಆದ್ದರಿಂದ ಮಗುವಿಗೆ ಹೋಲಿಸಿದರೆ ವಯಸ್ಸಾದ ವ್ಯಕ್ತಿಯ  ದೇಹವು ಹೆಚ್ಚು ಬೆವರುತ್ತದೆ.

4.ಆರೋಗ್ಯ ಪರಿಸ್ಥಿತಿಗಳು: ವೈಯಕ್ತಿಕ ಆರೋಗ್ಯ ಪರಿಸ್ಥಿತಿಗಳಿಂದ ಕೂಡ ಬೆವರುತ್ತೀರಿ. ನೆಗಡಿ ಮತ್ತು ಕೆಮ್ಮಿಗೆ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳುವವರು ಹೆಚ್ಚು ಬೆವರುತ್ತಾರೆ.  ಮತ್ತು ಒತ್ತಡ ಮತ್ತು ಆತಂಕಕ್ಕೆ ಔಷಧಿಯನ್ನು ಸೇವಿಸುವವರೂ ಸಹ ಬೆವರುತ್ತಾರೆ. ಹಾರ್ಮೋನುಗಳ ಏರಿಳಿತಗಳು ಮತ್ತು ಬದಲಾವಣೆಗಳು ದೇಹದ ಉಷ್ಣತೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತವೆ.

ಅತಿಯಾದ ಬೆವರುವಿಕೆಯು ತೀವ್ರವಾದ ನಿರ್ಜಲೀಕರಣವನ್ನು ಉಂಟುಮಾಡುತ್ತದೆ ಮತ್ತು ಆದ್ದರಿಂದ ಬೆಚ್ಚಗಿನ ವಾತಾವರಣದಲ್ಲಿ ಅಥವಾ ವ್ಯಾಯಾಮ ಮಾಡುವಾಗ ಸಾಕಷ್ಟು ನೀರನ್ನು ಕುಡಿಯುವುದು ಒಳ್ಳೆಯದು . ಅನೇಕ ಜನರು ತಮ್ಮ ಬಟ್ಟೆಗಳನ್ನು ಕಲೆ ಹಾಕುವುದನ್ನು ನಿಲ್ಲಿಸಲು ತಮ್ಮ ತೋಳುಗಳ ಕೆಳಗೆ ಬೆವರು ಪ್ಯಾಡ್ಗಳನ್ನು ಬಳಸುತ್ತಾರೆ.

ಇದನ್ನು ಓದಿ: Nail Care: ನಿಮಗೆ ಉಗುರು ಕಚ್ಚುವ ಅಬ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ

ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ಅರ್ಥೈಸಿಕೊಳ್ಳಬಾರದು. ಯಾವುದೇ ಫಿಟ್‌ನೆಸ್ ಪ್ರೋಗ್ರಾಂ ಅನ್ನು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.

Published On - 11:00 pm, Sat, 2 July 22

‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಶೂಟಿಂಗ್ ಶುರು ಮಾಡಿದ ಡಾರ್ಲಿಂಗ್​ ಕೃಷ್ಣ
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಬಿಬಿಎಂಪಿ ಕಚೇರಿ ಎದುರೇ ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನಿಸಿದ ವಾಟಾಳ್!
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಧರ್ಮಶಾಲಾ: ಪ್ಯಾರಾಗ್ಲೈಡಿಂಗ್ ವೇಳೆ ಅಪಘಾತ, ವ್ಯಕ್ತಿ ಸಾವು
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ