AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೇಕಪ್ ನಂತರ ಇನ್ನೊಂದು ಸಂಬಂಧದ ನಿರೀಕ್ಷೆಯಲ್ಲಿದ್ದೀರಾ? ಈ ಸಲಹೆಗಳು ನಿಮಗಾಗಿ

ಹಿಂದೆ ನಡೆದ ಘಟನೆಗಳು, ವ್ಯಕ್ತಿಯೊಂದಿಗಿನ ಒಡನಾಟ ಎಲ್ಲವನ್ನು ಮರೆತು ಮತ್ತೊಬ್ಬರೊಂದಿಗೆ ಜೀವನ ಮುಂದುವರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಹೇಗೆ ಮುಂದುವರಿಯಬಹುದು? ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ಸೂಕ್ತ ಸಲಹೆ ಇಲ್ಲಿದೆ ಗಮನಿಸಿ.

ಬ್ರೇಕಪ್ ನಂತರ ಇನ್ನೊಂದು ಸಂಬಂಧದ ನಿರೀಕ್ಷೆಯಲ್ಲಿದ್ದೀರಾ? ಈ ಸಲಹೆಗಳು ನಿಮಗಾಗಿ
ಪ್ರಾತಿನಿಧಿಕ ಚಿತ್ರ
TV9 Web
| Updated By: preethi shettigar|

Updated on: Dec 13, 2021 | 8:00 AM

Share

ಜೀವನದಲ್ಲಿ ಅನೇಕ ಬಾರಿ ನಾವು ತಪ್ಪಾದ ವ್ಯಕ್ತಿಯನ್ನು ಆಯ್ಕೆ ಮಾಡುತ್ತೇವೆ ಅಥವಾ ಅಂತಹ ಕೆಲವು ಸಂದರ್ಭಗಳು ಉದ್ಭವಿಸುತ್ತವೆ. ಇದರಿಂದಾಗಿ ನಾವು ಪ್ರೀತಿಸುವ ವ್ಯಕ್ತಿಯಿಂದಲೇ ದೂರವಾಗಬೇಕಾಗುತ್ತದೆ. ಇದಕ್ಕೆ ಇತ್ತೀಚೆಗೆ ಬ್ರೇಕಪ್ ಎಂಬ ನಾಮಫಲಕವನ್ನು ನೀಡಲಾಗುತ್ತದೆ. ಹಾಗಿದ್ದರೆ ಒಮ್ಮೆ ಬ್ರೇಕಪ್ (Love breakup) ಆದ ಮೇಲೆ ಅವರನ್ನೇ ನೆನೆದು ಕೊರಗಬೇಕೆ ಅಥವಾ ಸರಿಯಾದ ಸಂಗಾತಿಯ ಆಯ್ಕೆಯಲ್ಲಿ ಮತ್ತೆ ಮುಂದುವರಿಯಬೇಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹೀಗಾಗಿ ಮುಂದಿನ ಜೀವನ ಸುಖಕರವಾಗಿರಲು ಹಳೆಯ ಘಟನೆಗಳನ್ನು ಮರೆತು ಮುನ್ನಡೆಯುವುದು ಸೂಕ್ತ. ಹಿಂದೆ ನಡೆದ ಘಟನೆಗಳು, ವ್ಯಕ್ತಿಯೊಂದಿಗಿನ ಒಡನಾಟ ಎಲ್ಲವನ್ನು ಮರೆತು ಮತ್ತೊಬ್ಬರೊಂದಿಗೆ ಜೀವನ ಮುಂದುವರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಹೇಗೆ ಮುಂದುವರಿಯಬಹುದು? ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಇದಕ್ಕೆ ಸೂಕ್ತ ಸಲಹೆ ಇಲ್ಲಿದೆ ಗಮನಿಸಿ.

1. ಕ್ಷಮಿಸುವ ಗುಣ ಎದುರಿಗಿರುವವರು ಮೋಸ ಮಾಡಿದ್ದರೆ ಆ ಮೋಸದ ಬಗ್ಗೆ ಯೋಚಿಸಿದಾಗಲೆಲ್ಲ ನಿಮಗೆ ಹೆಚ್ಚು ನೋವಾಗುತ್ತದೆ. ನೀವು ಅವರನ್ನು ನಿಜವಾಗಿಯೂ ಪ್ರೀತಿಸಿದ್ದರೆ ಅವರ ತಪ್ಪನ್ನು ಕ್ಷಮಿಸಿ. ನಂತರ ಆ ವ್ಯಕ್ತಿಯು ನಿಮಗೆ ಯೋಗ್ಯನಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಜೀವನದಲ್ಲಿ ನೀವು ಅವನಿಗಿಂತ ಅಥವಾ ಅವಳಿಗಿಂತ ಉತ್ತಮರು. ಮೋಸ ಮಾಡುವುದು ಅವರ ಸ್ವಭಾವ, ನಿಮ್ಮದಲ್ಲ ಎಂದು ಭಾವಿಸಿ. ಕ್ಷಮಿಸಿದ ನಂತರ ಮನಸ್ಸಿನಲ್ಲಿ ಯಾವುದೇ ರೀತಿಯ ವಿಷಾದವಿರುವುದಿಲ್ಲ ಮತ್ತು ಆ ವ್ಯಕ್ತಿಯನ್ನು ನಾವು ಮರೆಯುವುದು ಸುಲಭ. ಇದರ ಹೊರತಾಗಿ, ಯಾರಾದರೂ ನಿಮ್ಮಿಂದ ಯಾವುದೇ ಸಂದರ್ಭದಲ್ಲಿ ಬೇರ್ಪಟ್ಟಿದ್ದರೂ, ಆಗ ಏನಾಯಿತೋ ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ ಎಂದು ನೀವೇ ಮನವರಿಕೆ ಮಾಡಿಕೊಳ್ಳಬೇಕು. ಇದರಿಂದ ಮಿಂಚಿ ಹೋದ ಕಾಲದ ಬಗ್ಗೆ ನೀವು ಯೋಚಿಸಿ ಸಮಯ ಹಾಳು ಮಾಡುತ್ತಿದ್ದೀರಾ ಎಂಬುವುದು ನಿಮಗೆ ಕ್ರಮೇಣ ಅರ್ಥವಾಗುತ್ತದೆ.

2. ನಿಮ್ಮನ್ನು ನೀವು ಪ್ರೀತಿಸಿ ನಾವು ಯಾರನ್ನಾದರೂ ಪ್ರೀತಿಸಿದಾಗ ನಾವು ಎಲ್ಲವನ್ನೂ ಅವರಿಗೆ ಅರ್ಪಿಸುತ್ತೇವೆ. ಆ ಮೂಲಕ ನಮ್ಮನ್ನು ನಾವು ಮರೆತುಬಿಡುತ್ತೇವೆ. ಇದು ಸಂಪೂರ್ಣವಾಗಿ ತಪ್ಪು. ನಿಮ್ಮನ್ನು ಮೊದಲು ಪ್ರೀತಿಸಲು ಕಲಿಯಿರಿ. ಜೀವನದಲ್ಲಿ ನಿಮಗೆ ಯಾವುದು ಮುಖ್ಯ ಎಂದು ತಿಳಿಯಲು ಪ್ರಯತ್ನಿಸಿ. ನಿಮಗೆ ಏನು ಬೇಕು? ನಿಮ್ಮ ಖುಷಿ ಯಾವುದರಲ್ಲಿದೆ ಎಂದು ಅರ್ಥ ಮಾಡಿಕೊಳ್ಳಿ

3. ಸ್ನೇಹಿತರೊಂದಿಗೆ ಅತಿಹೆಚ್ಚು ಬೆರೆಯಿರಿ ನೀವು ಬ್ರೇಕಪ್​ನಿಂದ ಹೊರಬರಲು ಸಾಧ್ಯವಾದಷ್ಟು ಜನರೊಂದಿಗೆ ಮಾತನಾಡಿ. ಇದು ನಿಮಗೆ ಸಾಕಷ್ಟು ನೆಮ್ಮದಿ ನೀಡುತ್ತದೆ. ಸ್ನೇಹಿತರನ್ನು ಭೇಟಿಯಾಗುವುದು ನಿಮ್ಮ ಸಾಮಾಜಿಕ ವಲಯವನ್ನು ಹೆಚ್ಚಿಸುತ್ತದೆ ಮತ್ತು ನೀವು ನಿಮ್ಮ ನೋವಿನಿಂದ ಹೊರಬರಲು ಸಹಾಯ ಮಾಡುವ ಎಲ್ಲಾ ರೀತಿಯ ಹೊಸ ಅನುಭವಗಳನ್ನು ಪಡೆಯುತ್ತೀರಿ. ನಿಮ್ಮ ಮನಸ್ಸು ಕೂಡ ವಿಚಲಿತವಾಗಿರುತ್ತದೆ.

4. ಡೇಟಿಂಗ್ ಮಾಡುವ ಮುನ್ನ ಎಚ್ಚರ ಒಬ್ಬರನ್ನು ಇಷ್ಟಪಟ್ಟ ಮೇಲೆ ಅವರ ಬಗ್ಗೆ ಇನ್ನಷ್ಟು ತಿಳಿಯಲು ಇತ್ತೀಚೆಗೆ ಡೇಟಿಂಗ್ ಹೋಗುವುದು ಹೊಸ ಟ್ರೆಂಡ್ ಆಗಿದೆ. ಹೀಗಾಗಿಯೇ ಡೇಟಿಂಗ್ ಹೋಗುವ ಮೊದಲು ಹೀಗೆ ಇರುತ್ತೇನೆ ಅಥವಾ ಹೀಗೆ ಮಾತನಾಡುತ್ತೇನೆ ಎಂಬ ನಿಯಮವನ್ನು ಮುಂಚಿತವಾಗಿ ಮಾಡಿಕೊಳ್ಳಬೇಡಿ. ಆದಷ್ಟು ಮುಕ್ತವಾಗಿರಿ.

ಇದನ್ನೂ ಓದಿ: ನೆಚ್ಚಿನ ಸಂಗಾತಿಯೊಂದಿಗೆ ಗೋವಾದ ಕಡಲತೀರದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ಪೂರ್ಣ ಮಾಹಿತಿ

Health Tips: ಕ್ಯಾನ್ಸರ್​ ತಡೆಗಟ್ಟುವ ಗುಣವಿರುವ ಈ ಹಣ್ಣುಗಳನ್ನು ಸೇವಿಸಿ: ಆರೋಗ್ಯಯುತವಾಗಿರಿ

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ