ಅಳಿವಿನಂಚಿನಲ್ಲಿದೆ ವಿಶ್ವದ ಈ ಬುಡಕಟ್ಟು ಜನಾಂಗಗಳು, ಈ ಜನರ ಸಂಪ್ರದಾಯಗಳೇ ವಿಚಿತ್ರ

International Day Of The World’s Indigenous Peoples 2024: ಪ್ರತಿ ವರ್ಷ ಆಗಸ್ಟ್​ 9 ರಂದು ವಿಶ್ವ ಬುಡಕಟ್ಟು ದಿನವಾಗಿ ಆಚರಿಸಲಾಗುತ್ತಿದೆ. 1994ರಲ್ಲಿ ವಿಶ್ವ ಸಂಸ್ಥೆ ಆಗಸ್ಟ್​ 9 ಅನ್ನು ವಿಶ್ವ ಸ್ಥಳೀಯ ಜನರ ನಿವಾಸ ಎಂದು ಘೋಷಿಸಿತು. ವಿಶ್ವದ ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವು ಅಸ್ತಿತ್ವದಲ್ಲಿದೆ. ಹಾಗಾದ್ರೆ ಈ ದಿನದ ಮಹತ್ವ ಹಾಗೂ ಅಳಿವಿನಂಚಿರುವ ಬುಡಕಟ್ಟು ಜನಾಂಗ ಹಾಗೂ ಈ ಮೂಲನಿವಾಸಿಗಳ ವಿಚಿತ್ರ ಆಚರಣೆಗಳ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಅಳಿವಿನಂಚಿನಲ್ಲಿದೆ ವಿಶ್ವದ ಈ ಬುಡಕಟ್ಟು ಜನಾಂಗಗಳು, ಈ ಜನರ ಸಂಪ್ರದಾಯಗಳೇ ವಿಚಿತ್ರ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 09, 2024 | 9:55 AM

ಪ್ರಪಂಚದ 90 ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ಬುಡಕಟ್ಟು ಸಮುದಾಯಗಳ ಜನರು ನೆಲೆಸಿದ್ದಾರೆ. ಒಟ್ಟು ಬುಡಕಟ್ಟು ಸಮುದಾಯಗಳ ಜನಸಂಖ್ಯೆಯು ಸುಮಾರು 370 ಮಿಲಿಯನ್ ನಷ್ಟಿವೆ. ಸರಿಸುಮಾರು ಏಳು ಸಾವಿರ ಬುಟ್ಟುಕಟ್ಟು ಜನಾಂಗದ ಬಾಷೆಗಳಿವೆ. ಕೆಲವು ಬುಡಕಟ್ಟು ಜನಾಂಗಗಳು ಕಣ್ಮರೆಯಾಗುತ್ತಿದೆ. ಈ ಆದಿವಾಸಿಗಳು ತಮ್ಮ ಅಸ್ತಿತ್ವ, ಸಂಸ್ಕೃತಿ, ಗೌರವವನ್ನು ಉಳಿಸಿಕೊಳ್ಳಲು ವಿಶ್ವ ಬುಡಕಟ್ಟು ದಿನವನ್ನು ಆಚರಿಸಲಾಗುತ್ತಿದೆ. ಜಿನೀವಾ ನಗರದಲ್ಲಿ ಆಗಸ್ಟ್ 9, 1994 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು “ಮೊದಲ ಅಂತರಾಷ್ಟ್ರೀಯ ಮೂಲ ನಿವಾಸಿಗಳ ದಿನ” ಸಮ್ಮೇಳನವನ್ನು ಆಯೋಜಿಸಿತು. ವಿಶ್ವಸಂಸ್ಥೆಯ ಪ್ರಕಾರ ಸ್ಥಳೀಯ ಬುಡಕಟ್ಟು ಜನರು ವಿಶ್ವದ ಜನಸಂಖ್ಯೆಯ ಶೇಕಡಾ 5 ಕ್ಕಿಂತ ಕಡಿಮೆ ಇದ್ದ ಕಾರಣ, ಅವರ ಅಸ್ತಿತ್ವ ಹಾಗೂ ಸಂಸ್ಕೃತಿಯನ್ನು ಉಳಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಯಿತು.

ಅಳಿವಿನಂಚಿನಲ್ಲಿರುವ ಬುಡಕಟ್ಟು ಜನಾಂಗಗಳಿವು

* ಜರಾವಾ : ಭಾರತದ ಅಂಡಮಾನ್ ದ್ವೀಪಗಳಲ್ಲಿ ವಾಸಿಸುವ ಜರಾವಾ ಬುಡಕಟ್ಟು ಜನಾಂಗದವರ ಸಂಖ್ಯೆ ಕೇವಲ 400 ಮಾತ್ರ. 1998ರವರೆಗೆ ಆಧುನಿಕ ಸಮಾಜದಿಂದ ಸಂಪೂರ್ಣ ದೂರವೇ ಉಳಿದಿದ್ದ ಈ ಬುಡಕಟ್ಟು ಸಮುದಾಯವು ಕಣ್ಮರೆಯತ್ತ ಸಾಗುತ್ತಿದೆ.

* ಬಟಕ್ ಬುಡಕಟ್ಟು : ಫಿಲಿಪೈನ್ಸ್‌ನಲ್ಲಿರುವ ಈ ಬುಡಕಟ್ಟು ಕೂಡ ಅಳಿವಿನಂಚಿನಲ್ಲಿದೆ. 300 ಜನರು ಮಾತ್ರ ಜನರನ್ನು ಈ ಸಮುದಾಯದಲ್ಲಿ ಕಾಣಬಹುದು.

* ಅಕುಂಟ್ಸು: ಈ ಅಕುಂಟ್ಸು ಬ್ರೆಜಿಲ್ ಬುಡಕಟ್ಟು ಸಮುದಾಯವು ಅವನತಿಯತ್ತ ಸಾಗುತ್ತಿದೆ. ಈ ಬುಡಕಟ್ಟಿನಲ್ಲಿ ಕೇವಲ 4 ಜನರು ವಾಯುವ್ಯ ಬ್ರೆಜಿಲ್‌ನಲ್ಲಿ ವಾಸಿಸುತ್ತಿದ್ದಾರೆ. 1980 ರವರೆಗೆ ಅವರ ಸಂಖ್ಯೆ ಹೆಚ್ಚಿತ್ತು, ಆದರೆ ಕ್ರಮೇಣವಾಗಿ ಈ ಬುಡಕಟ್ಟಿನ ಜನಸಂಖ್ಯೆಯು ಕಡಿಮೆಯಾಗುತ್ತ ಹೋಯಿತು.

* ಸಾವೋಚ್: ಕಾಂಬೋಡಿಯಾದಲ್ಲಿ ಸಾವೋಚ್ ಬುಡಕಟ್ಟಿನ ಜನಸಂಖ್ಯೆಯು 110 ಮಾತ್ರ. ಈ ಬುಡಕಟ್ಟಿನ ಜನರಿಗೆ ತಮ್ಮದೇ ಭಾಷೆಯಲ್ಲಿ ಮಾತನಾಡುವುದಕ್ಕಾಗಿ ಮರಣದಂಡನೆ ವಿಧಿಸಲಾಯಿತು. ಇದೇ ಈ ಬುಡಕಟ್ಟಿನ ಜನಸಂಖ್ಯೆಯು ಕಡಿಮೆಯಾಗಲು ಮುಖ್ಯ ಕಾರಣವಂತೆ.

* ಎಲ್ ಮೊಲೊ ಬುಡಕಟ್ಟು : ಕೀನ್ಯಾದಲ್ಲಿ ಕಾಣಸಿಗುವ ಈ ಎಲ್ ಮೊಲೊ ಬುಡಕಟ್ಟು ಕೂಡ ಅಳಿವಿನಂಚಿನಲ್ಲಿದೆ. ಸದ್ಯಕ್ಕೆ ಈ ಬುಡಕಟ್ಟಿನಲ್ಲಿ ಸುಮಾರು 800 ಮಂದಿ ಮಾತ್ರ ಇದ್ದಾರೆ ಎನ್ನಲಾಗಿದೆ.

* ಲಿವೊನಿಯನ್ನರು : ಲಾಟ್ವಿಯಾದಲ್ಲಿ ಈ ಬುಡಕಟ್ಟು ಜನಾಂಗದವರು ನೆಲೆಸಿದ್ದು, ಗ್ರಾಮಗಳು ನಾಶವಾದ ಪರಿಣಾಮ ಜನಸಂಖ್ಯೆಯು ಕಡಿಮೆಯಾಯಿತು. ಸದ್ಯಕ್ಕೆ ಈ ಬುಡಕಟ್ಟಿನಲ್ಲಿರುವವರು 200 ಜನರು ಮಾತ್ರ ಎನ್ನಲಾಗಿದೆ.

ಇದನ್ನೂ ಓದಿ: ಪುರುಷರೇ ಈ ರಹಸ್ಯ ತಿಳಿದಿದ್ದರೆ ನಿಮ್ಮ ಲೈಂಗಿಕ ಜೀವನ ಸೂಪರ್

ಈ ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಆಚರಣೆ

* ಆಫ್ರಿಕನ್ ವುಡಾಬೆ ಬುಡಕಟ್ಟು ಜನಾಂಗದಲ್ಲಿ ವಿಚಿತ್ರ ಆಚರಣೆಯಿದೆ. ಈ ಬುಡಕಟ್ಟಿನವರು ಸಪ್ಟೆಂಬರ್‌ನಲ್ಲಿ ಗೆರೆವಾಲ್ ಎನ್ನುವ ಹಬ್ಬವನ್ನು ಆಚರಿಸುತ್ತಾರೆ. ಮಹಿಳೆಯರನ್ನು ಮೆಚ್ಚಿಸುವ ಸಲುವಾಗಿ ಆರು ಗಂಟೆಗಳ ಕಾಲ ಪುರುಷರು ಯಾಕಿ ನೃತ್ಯ ಮಾಡುತ್ತಾರೆ. ಈ ವೇಳೆಯಲ್ಲಿ ತಮಗಿಷ್ಟವಾದ ಪುರುಷರನ್ನು ಮಹಿಳೆಯರು ಆಯ್ಕೆ ಮಾಡಿ ಅವರೊಂದಿಗೆ ಸಂಸಾರ ಮಾಡುತ್ತಾರೆ.

* ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವಾಸಿಸುವ ಗರಾಸಿಯಾ ಬುಡಕಟ್ಟು ಜನಾಂಗದಲ್ಲಿ ಲಿವ್-ಇನ್ ಸಂಬಂಧವನ್ನು ಹೊಂದಿ ಮದುವೆಗೂ ಮೊದಲೇ ತಾಯಿಯಾಗುವ ವಿಚಿತ್ರ ಸಂಪ್ರದಾಯವಿದೆ. ಆ ಬಳಿಕವೇನಾದರೂ ಮದುವೆಯಾಗಲು ಇಷ್ಟವಿದ್ದರೆ ಪೋಷಕರು ಬಹಳ ಆಡಂಬರ ಮತ್ತು ಪ್ರದರ್ಶನದಿಂದ ಮದುವೆ ಮಾಡುತ್ತಾರೆ.

* ಆಫ್ರಿಕನ್ ಬುಡಕಟ್ಟು ಜನಾಂಗದಲ್ಲಿ ಮದುವೆಯಾದ ದಂಪತಿಗಳು ಮೊದಲ ರಾತ್ರಿಯನ್ನು ವಧುವಿನ ತಾಯಿಯೊಂದಿಗೆ ಕಳೆಯುಬೇಕು. ಈ ಸಮಯದಲ್ಲಿ ಮೊದಲ ರಾತ್ರಿ ವಧು ಏನು ಮಾಡಬೇಕು ಎಂದು ತಾಯಿಯು ಹೇಳಿಕೊಡುತ್ತಾಳಂತೆ.

* ಇಂಡೋನೇಷ್ಯಾದ ಟಿಡಾಂಗ್ ಬುಡಕಟ್ಟು ಜನಾಂಗದಲ್ಲಿ ನವ ವಿವಾಹಿತ ದಂಪತಿಗಳು ಸ್ನಾನಗೃಹವನ್ನು ಬಳಸದೆ ಮೂರು ದಿನಗಳವರೆಗೆ ಒಟ್ಟಿಗೆ ಇರುವ ವಿಚಿತ್ರ ಸಂಪ್ರದಾಯವಿದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:54 am, Fri, 9 August 24

ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
ಪಿತೃಪಕ್ಷದ ಮಹತ್ವ ತಿಳಿಯಲು ಈ ವಿಡಿಯೋದಲ್ಲಿ ನೋಡಿ
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
Nithya Bhavishya: ಈ ರಾಶಿಯವರಿಗೆ ಸ್ವ ಉದ್ಯೋಗವು ಇಂದು ಕೈ ಹಿಡಿಯುವುದು
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್