AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

National Doctor’s Day 2021: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊವಿಡ್​ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಎದುರಿಸಿದ ಕೆಲವು ಸಮಸ್ಯೆಗಳು

ರಾಷ್ಟ್ರೀಯ ವೈದ್ಯರ ದಿನ: ತಮ್ಮ ಜೀವವನ್ನೇ ಪಣಕ್ಕಿಟ್ಟು ನಿಸ್ವಾರ್ಥ ಭಾವದಿಂದ ಜನರ ಜೀವ ಕಾಪಾಡುತ್ತಿರುವ ಅದೆಷ್ಟೋ ವೈದ್ಯರಿಗೆ ಇಂದು ಮನಸ್ಪೂರ್ವಕವಾಗಿ ಕೃತಜ್ಞತೆ ಹೇಳಲೇಬೇಕಾದ ದಿನ

National Doctor's Day 2021: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊವಿಡ್​ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರು ಎದುರಿಸಿದ ಕೆಲವು ಸಮಸ್ಯೆಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 01, 2021 | 11:09 AM

Share

ಇಂದು ರಾಷ್ಟ್ರೀಯ ವೈದ್ಯರ ದಿನವನ್ನು ಎಲ್ಲಡೆ ಆಚರಿಸಲಾಗುತ್ತಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ನಿಸ್ವಾರ್ಥ ಭಾವದಿಂದ ಜನರ ಜೀವ ಕಾಪಾಡುತ್ತಿರುವ ಅದೆಷ್ಟೋ ವೈದ್ಯರಿಗೆ ಇಂದು ಮನಸ್ಪೂರ್ವಕವಾಗಿ ಕೃತಜ್ಞತೆ ಹೇಳಲೇಬೇಕಾದ ದಿನ. ಪ್ರಸ್ತುತದಲ್ಲಿನ ಸಾಂಕ್ರಾಮಿಕ ಸಮಯದಲ್ಲಂತೂ ದಿನದ 24 ಗಂಟೆಯೂ ತಮ್ಮ ಕೆಲಸವನ್ನು ನಿರ್ವಹಿಸುತ್ತಾ ಇಂತಹ ಬಿಕ್ಕಟ್ಟಿನ ಸಮಯದಲ್ಲಿಯೂ ಪಟ್ಟುಬಿಡದೆ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಆರೋಗ್ಯ ಸಂಸ್ಥೆಗಳು ಸವಾಲನ್ನೂ ಎದುರಿಸುತ್ತ ಹೋರಾಡುತ್ತಿದೆ.

ದೇಶದಲ್ಲಿ ಕೊರೊನಾವೈರಸ್​ ಎರಡನೇ ಅಲೆಯ ಸಮಯದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆಗಳ ಕೊರತೆ ಕಂಡು ಬಂತು. ಅನೇಕ ವೈದ್ಯರು ಈ ಕುರಿತಾಗಿ ಚಿಂತಿಸತೊಡಗಿದರು. ಇರುವ ಕಡಿಮೆ ಮೂಲಕಸೌಕರ್ಯದಲ್ಲಿಯೇ ಕೆಲಸ ಮಾಡುತ್ತಿರುವುದು ಕಂಡುಬಂತು. ಅಪಾರ ಒತ್ತಡದ ಮಧ್ಯೆಯೂ ಕೆಲವು ರೋಗಿಗಳ ಕುಟುಂಬದವರಿಂದ ದೈಹಿಕವಾಗಿಯೂ ಹಲ್ಲೆ ಪ್ರಕರಣಗಳು ದಾಖಲಾದವು. ಹೀಗಿರುವಾಗ ಮಾರಣಾಂತಿಕ ಸಾಂಕ್ರಾಮಿಕದ ಮಧ್ಯೆ ವೈದ್ಯರ ಸಮುದಾಯವು ಎದುರಿಸುತ್ತಿರುವ ಕೆಲವು ಅಡೆತಡೆಗಳ ಬಗ್ಗೆ ನೋಡೋಣ.

ವೈದ್ಯಕೀಯ ಮೂಲಸೌಕರ್ಯದ ಕೊರತೆ ದೇಶದಲ್ಲಿ ಕೊರೊನಾವೈರಸ್​ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿದ್ದಂತೆಯೇ ಆಸ್ಪತ್ರೆಗಳಲ್ಲಿ ಮೂಲಕಸೌಕರ್ಯದ ಕೊರತೆ ಕಾಣಲಾರಂಭಿಸಿತು. ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ, ಆಮ್ಲಜನಕ ವ್ಯವಸ್ಥೆಗಾಗಿ ಹುಡುಕಾಟ ಪ್ರಾರಂಭವಾಯಿತು. ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯ ರೋಗಿಗಗಳನ್ನು ಪಡೆಯುತ್ತಿದ್ದಂತೆಯೇ ಅನೇಕ ಆಸ್ಪತ್ರೆಗಳು ಸರ್ಕಾರದ ಮೊರೆಹೋಗಬೇಕಾಯಿತು. ಆಮ್ಲಜನಕ ಪೂರೈಸಬೇಕೆಂದು ಒತ್ತಾಯಿಸಿ ಹೈಕೋರ್ಟ್​ಗೆ ಹೋಗಬೇಕಾಯಿತು.

ಕೊರೊನಾ ವೈರಸ್​ನಿಂದ ಬಲಿಯಾದ ಅದೆಷ್ಟೋ ಕುಟುಂಬಗಳು ವೈದ್ಯರ ಮೇಲೆ ತಿರುಗಿ ಬಿದ್ದರು. ವೈಯಕ್ತಿಕ ಹಸ್ತಕ್ಷೇಪವನ್ನು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಯಿತು. ಯಾವುದೇ ಭಯವಿಲ್ಲದೇ ವೈದ್ಯರು ಕೆಲಸ ಮಾಡಬಹುದು ಎಂಬ ತೀರ್ಮಾನದ ಬಳಿಕ ವೈದ್ಯರು ಪುನಃ ಕೆಲಸದಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿಗಳು ಎದುರಾಗಿದ್ದವು.

ತಪ್ಪು ಮಾಹಿತಿ ಸಾಂಕ್ರಾಮಿಕದ ನಿಯಂತ್ರಣಕ್ಕೆ ನೀಡುತ್ತಿರುವ ವ್ಯಾಕ್ಸಿನ್​ ಕುರಿತಾಗಿ ಜನರು ಭಯಗೊಂಡಿದ್ದಾರೆ. ಹರಡುತ್ತಿರುವ ತಪ್ಪಾದ ಮಾಹಿತಿಗಳು ಜನರು ವ್ಯಾಕ್ಸಿನ್​ ಪಡೆಯಲು ಹಿಂದೇಟು ಹಾಕುವಂತೆ ಮಾಡುತ್ತಿದೆ. ಈ ಕುರಿತಾಗಿ ಜನರಿಗೆ ತಿಳಿಹೇಳಿ ಜನರನ್ನು ಮನವೊಲಿಸುವ ಪ್ರಯತ್ನವನ್ನು ವೈದ್ಯ ಸಮುದಾಯ ಮಾಡುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಮೂಡಿಸುವ ಅದೆಷ್ಟೋ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದೆ. ಇಂತಹ ಪರಿಸ್ಥಿತಿಯನ್ನೂ ಸಹ ಎದುರಿಸಿ ವೈದ್ಯ ಸಂಘ ವೈರಸ್​ ವಿರುದ್ಧ ಸತತ ಪ್ರಯತ್ನದಿಂದ ಹೋರಾಡುತ್ತಾ ಮುನ್ನುಗ್ಗುತ್ತಿದೆ.

ಸಂಬಳ ಸರಿಯಾದ ಸಮಯದಲ್ಲಿ ಜನರಿಗೆ ಚಿಕಿತ್ಸೆ ನೀಡುತ್ತಾ ತಮ್ಮ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದರೂ ಸಹ ಕೆಲವು ವೈದ್ಯರು ಕಡಿಮೆ ಸಂಬಳವನ್ನು ಪಡೆಯುತ್ತಿದ್ದಾರೆ. ದಿನದ 24 ಗಂಟೆಯೂ ದುಡಿದು ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿರುವ ವೈದ್ಯರ ಸಂಬಳ ಕಡಿಮೆ ಇದೆ. ಈ ನಡುವೆಯೂ ಸಹ ವೈದ್ಯರು ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:

National Doctor’s Day 2021: ಭಾರತದ ಮೊದಲ ಮಹಿಳಾ ವೈದ್ಯೆಯ ಸ್ಪೂರ್ತಿದಾಯಕ ಕಥೆಯನ್ನು ಇಂದು ತಿಳಿಯಲೇಬೇಕು

National Doctor’s Day 2021: ಯುವ ವೈದ್ಯರೆಲ್ಲರೂ ಕೊರೊನಾ ಚಿಕಿತ್ಸೆಗೇ ಮೀಸಲು; ಮುಂದಿನ ದಿನಗಳಲ್ಲಿ ತಜ್ಞ ವೈದ್ಯರ ಕೊರತೆಯೇ ದೊಡ್ಡ ಸವಾಲಾಗಬಹುದು

Follow Us
TV9 Web
TV9 Web

TV9 Kannada

Read More
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!
ಬ್ಯಾಂಕ್​ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ!