AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಮರಗಳು, ಬೇರುಗಳು ಅಥವಾ ತುಟಿ ನಿಮಗೆ ಮೊದಲು ಕಾಣಿಸಿದ್ದೇನು? ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ

ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಒಂದಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕ ನಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಬಹುದು. ಇದೀಗ ಅಂತಹದ್ದೇ ವ್ಯಕ್ತಿತ್ವ ಪರೀಕ್ಷೆಯ ಚಿತ್ರವೊಂದು ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಮರಗಳು, ಬೇರು, ತುಟಿ ಈ ಮೂರರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ಅಂತರ್ಮುಖಿಯೇ ಅಥವಾ ಬಹಿರ್ಮುಖಿ ವ್ಯಕ್ತಿತ್ವದವರೇ ಎಂಬುದನ್ನು ತಿಳಿದುಕೊಳ್ಳಿ.

Personality Test: ಮರಗಳು, ಬೇರುಗಳು ಅಥವಾ ತುಟಿ ನಿಮಗೆ ಮೊದಲು ಕಾಣಿಸಿದ್ದೇನು? ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ
ವ್ಯಕ್ತಿತ್ವ ಪರೀಕ್ಷೆImage Credit source: Recovery Trauma Ltd/ Instagram
Follow us
ಮಾಲಾಶ್ರೀ ಅಂಚನ್​
|

Updated on: Apr 25, 2025 | 4:28 PM

ನಮ್ಮ ನಡವಳಿಕೆ, ನಾವು ಇನ್ನೊಬ್ಬರ ಜೊತೆ ನಡೆದುಕೊಳ್ಳುವ ರೀತಿ, ನಮ್ಮ ಮಾತು, ಹಾವಭಾವ ಇವೆಲ್ಲವೂ ನಮ್ಮ ವ್ಯಕ್ತಿತ್ವ (Personality) ಹೇಗೆ ಎಂಬ ಬಗ್ಗೆ ವಿವರಣೆಯನ್ನು ನೀಡುತ್ತವೆ. ಅದೇ ರೀತಿ ನಮ್ಮ ಕಣ್ಣುಗಳ ಬಣ್ಣ, ಕೂದಲಿನ ಉದ್ದ, ಆಕಾರದಿಂದ ಹಿಡಿದು, ಮೂಗಿನ ಅಕಾರದವರೆಗೆ ನಮ್ಮ ದೇಹಾಕಾರಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಕೂಡಾ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಆಪ್ಟಿಕಲ್‌ ಇಲ್ಯೂಷನ್‌ (Optical illusion) ಚಿತ್ರಗಳ ಮೂಲಕವೂ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವು ಪರೀಕ್ಷೆ ಮಾಡಿಕೊಳ್ಳಬಹುದು. ಅಂತಹದ್ದೊಂದು ಫೋಟೋ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ತುಟಿ, ಮರ ಅಥವಾ ಬೇರು ಈ ಮೂರರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ಅಂತರ್ಮುಖಿಯೇ  (introvert) ಅಥವಾ ಬಹಿರ್ಮುಖಿ ವ್ಯಕ್ತಿತ್ವದವರೇ ಎಂಬುದನ್ನು ಪರೀಕ್ಷಿಸಿ.

ಮರಗಳು, ಬೇರುಗಳು ಅಥವಾ ತುಟಿ ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು?

recoverytraumaltd ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಹಂಚಿಕೊಳ್ಳಲಾಗಿದೆ.  ಆ ಚಿತ್ರದಲ್ಲಿ ತುಟಿ, ಮರ ಅಥವಾ ಬೇರು ಈ ಮೂರರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ಅಂತರ್ಮುಖಿಯೇ ಅಥವಾ ಬಹಿರ್ಮುಖಿ ವ್ಯಕ್ತಿತ್ವದವರೇ ಅಥವಾ ಶಾಂತ ಸ್ವಭಾವದ ವ್ಯಕ್ತಿತ್ವದವರೇ ಎಂಬುದನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ
Image
ಮೇ 25 ರಿಂದ ಬದಲಾಗಲಿದೆ ತತ್ಕಾಲ್‌ ಟಿಕೆಟ್‌ ವ್ಯವಸ್ಥೆ
Image
ಈ ಬೇಸಿಗೆಯಲ್ಲಿ ಬರುವ ತಲೆನೋವಿಗೆ ರಾಮಬಾಣ ಮಜ್ಜಿಗೆ
Image
ಬಸ್ಸಿನಲ್ಲಿ ವೃದ್ಧನಿಗೆ ಸೀಟ್ ಬಿಟ್ಟುಕೊಟ್ಟ ಪ್ರಯಾಣಿಕ
Image
ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸಲು ಮರೆಯದಿರಿ

ವಿಡಿಯೋ ಇಲ್ಲಿದೆ ನೋಡಿ:

ಈ ಚಿತ್ರದಲ್ಲಿ ನೀವು ಮೊದಲು ಮರಗಳನ್ನು ನೋಡಿದರೆ:

ನಿಮಗೇನಾದರೂ ಈ ಚಿತ್ರದಲ್ಲಿ ಮೊದಲು ಮರಗಳು ಕಾಣಿಸಿಕೊಂಡರೆ ನೀವು ಬಹಿರ್ಮುಖಿ ವ್ಯಕ್ತಿತ್ವದವರು ಎಂದು ಅರ್ಥ. ಹೊರಗೆ ಹೋಗಲು ಹೆಚ್ಚು ಇಷ್ಟಪಡುವ ನೀವು ಇತರರೊಂದಿಗೆ ಬಹು ಬೇಗನೆ ಬೆರೆಯುತ್ತೀರಿ. ಸಾಮಾಜಿಕ ಸಂದರ್ಭಗಳಲ್ಲಿ ಅಂದರೆ ಹೊರಗಡೆ ಹೋದಾಗ ನೀವು ತುಂಬಾನೇ ಸಭ್ಯ ವರ್ತನೆಯನ್ನು ತೋರುತ್ತೀರಿ. ಈ ವಿಷಯಗಳಿಂದಲೇ ಜನ ನಿಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ನೀವು ಬಹಿರ್ಮುಖಿಯಾಗಿದ್ದರೂ ಕೂಡಾ ನೀವು ಏನನ್ನು ಯೋಚಿಸುತ್ತೀರಿ ಎಂಬುದನ್ನು ಜನರಿಗೆ ಅರ್ಥ ಮಾಡಿಕೊಳ್ಳಲು ಕಷ್ಟಸಾಧ್ಯ.

ಇದನ್ನೂ ಓದಿ: ರೈಲ್ವೆ ಪ್ರಯಾಣಿಕರ ಗಮನಕ್ಕೆ… ಬದಲಾಗ್ತಿದೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ; ಟೈಮಿಂಗ್ಸ್‌, ಮಾರ್ಗಸೂಚಿಗಳನ್ನು ಪರಿಶೀಲಿಸಿ

ಚಿತ್ರದಲ್ಲಿ ನೀವು ಮೊದಲು ಬೇರುಗಳನ್ನು ನೋಡಿದರೆ:

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೊದಲು ನಿಮಗೆ ಬೇರುಗಳು ಕಣ್ಣಿಗೆ ಬಿದ್ದರೆ ನೀವು ಅಂತರ್ಮುಖಿ ವ್ಯಕ್ತಿತ್ವದವರು ಎಂದರ್ಥ. ತುಂಬಾನೇ ಸೌಮ್ಯ ಸ್ವಭಾವದವರಾದ ನೀವು ಬಲವಾದ ಇಚ್ಛಾಶಕ್ತಿಯುಳ್ಳವರು ಮತ್ತು ಹಠಮಾರಿಗಳಾಗಿರುತ್ತೀರಿ. ಜನರು ನಿಮ್ಮನ್ನು ಮೊದಲು ಅನರ್ಹರೆಂದು ಭಾವಿಸಿದರೂ ಅವರು ನಿಮ್ಮನ್ನು ಸಂಪೂರ್ಣವಾಗಿ ತಿಳಿದುಕೊಂಡ ಬಳಿಕ, ನಿಮ್ಮ ಸಮರ್ಥತೆಯ ಬಗ್ಗೆ ಅವರಿಗೆ ಅರ್ಥವಾಗುತ್ತದೆ.

ಚಿತ್ರದಲ್ಲಿ ಮೊದಲು ತುಟಿಯನ್ನು ನೋಡಿದರೆ:

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವೇನಾದರೂ ಮೊದಲು ತುಟಿಯನ್ನು ಕಂಡರೆ ನೀವು ತುಂಬಾನೇ ಶಾಂತ ಸ್ವಭಾವದ ವ್ಯಕ್ತಿಗಳು ಎಂದರ್ಥ. ಸರಳತೆಯನ್ನು ಆನಂದಿಸುವ ನೀವು ಶಾಂತ ಮತ್ತು ಸ್ಥಿರ ವ್ಯಕ್ತಿಯಾಗಿರುತ್ತೀರಿ. ನಾಟಕೀಯತೆಯನ್ನು ಇಷ್ಟಪಡದ ನೀವು ಶಾಂತಿಯುತ ಮತ್ತು ಸಮತೋಲಿತ ಜೀವನವನ್ನು ನಡೆಸಲು ಇಷ್ಟಪಡುವವರಾಗಿರುತ್ತೀರಿ. ಜೊತೆಗೆ ಒತ್ತಡಗಳಿಂದ ಸುಲಭವಾಗಿ ಪ್ರಭಾವಿತರಾಗದ ನೀವು ಭಾವನಾತ್ಮಕ ಸ್ಥಿರತೆ, ಆತ್ಮ ವಿಶ್ವಾಸಕ್ಕೆ ಹೆಚ್ಚು ಬೆಲೆ ಕೊಡುವವರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ