AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ದ್ವೀಪ, ಬೆಕ್ಕಿನ ಮುಖ; ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದು ತಿಳಿಯಿರಿ

ನಮ್ಮ ನಡವಳಿಕೆ ಮಾತ್ರವಲ್ಲದೆ ಕೆಲವೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳ ಮೂಲಕವೂ ನಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಇಂತಹ ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಫೋಟೋವೊಂದು ಹರಿದಾಡುತ್ತಿದ್ದು, ಬೆಕ್ಕಿನ ಮುಖ ಅಥವಾ ದ್ವೀಪ ಆ ಚಿತ್ರದಲ್ಲಿ ನಿಮಗೆ ಮೊದಲು ಏನು ಕಾಣಿಸಿತು ಅನ್ನೋದರ ಮೇಲೆ ನೀವು ಇತರರೊಂದಿಗೆ ಬೇಗ ಬೆರೆಯುವ ವ್ಯಕ್ತಿಯೇ ಅಥವಾ ಶಾಂತ ಸ್ವಭಾವದವರೇ ಎಂಬುದನ್ನು ತಿಳಿಯಿರಿ.

Personality Test: ದ್ವೀಪ, ಬೆಕ್ಕಿನ ಮುಖ; ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದು ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆImage Credit source: Instagram
Follow us
ಮಾಲಾಶ್ರೀ ಅಂಚನ್​
|

Updated on: May 05, 2025 | 5:12 PM

ಸಾಮಾನ್ಯವಾಗಿ ಜನ ನಮ್ಮ ನಡವಳಿಕೆ, ನಾವು ಹಾಕಿಕೊಳ್ಳುವ ಬಟ್ಟೆಯಿಂದಲೇ ನಮ್ಮ ವ್ಯಕ್ತಿತ್ವವನ್ನು ಅಳೆಯುತ್ತಾರೆ. ಜೊತೆಗೆ ನಮ್ಮ ಕಣ್ಣು, ಮೂಗು, ಕಿವಿ, ಕೈ ಹೀಗೆ ದೇಹಾಕಾರದಿಂದಲೂ ನಮ್ಮ ನಿಗೂಢ ವ್ಯಕ್ತಿತ್ವ (Personality) ಹೇಗಿದೆ ಎಂಬುದನ್ನು ನಾವು ತಿಳಿಯಬಹುದಾಗಿದೆ. ಇಂತಹ ವ್ಯಕ್ತಿತ್ವ ಪರೀಕ್ಷೆಯ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಫೋಟೋವೊಂದು (Photo)  ಹರಿದಾಡುತ್ತಿದ್ದು, ಆ ಒಗಟಿನ ಚಿತ್ರದಲ್ಲಿ ಮೊದಲು ನಿಮ್ಮ ಕಣ್ಣಿಗೆ ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ  ಹೇಗಿದೆ ಪರೀಕ್ಷಿಸಿ. ಹೌದು ನಿಮಗೆ ಈ ಚಿತ್ರದಲ್ಲಿ ಬೆಕ್ಕು ಅಥವಾ ದ್ವೀಪ ಇವೆರಡರಲ್ಲಿ ಮೊದಲು ಕಾಣಿಸಿದ್ದೇನು ಅನ್ನೋದರ ಮೇಲೆ ನೀವು ಇತರರೊಂದಿಗೆ ಬೇಗ ಬೆರೆಯುವ ವ್ಯಕ್ತಿಯೇ ಅಥವಾ ಶಾಂತ ಸ್ವಭಾವದವರೇ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದು ತಿಳಿಯಿರಿ:

ವ್ಯಕ್ತಿತ್ವ ಪರೀಕ್ಷೆಯ ಈ ಫೋಟೋವನ್ನು recoverytraumaltd ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಫೋಟೋದಲ್ಲಿ ಕೆಲವರಿಗೆ ದ್ವೀಪ ಮೊದಲು ಕಾಣಿಸಿದರೆ, ಕೆಲವರಿಗೆ ಬೆಕ್ಕಿನ ಮುಖ ಮೊದಲಿಗೆ ಕಾಣಿಸಬಹುದು. ಹೀಗೆ ಈ ಚಿತ್ರದಲ್ಲಿ ಮೊದಲು ನಿಮಗೇನು ಕಾಣಿಸಿತು ಅನ್ನೋದರ ಮೇಲೆ ನೀವು ಇತತರರೊಂದಿಗೆ ಬೇಗ ಬೆರೆಯುವ ವ್ಯಕ್ತಿಯೇ ಅಥವಾ ಶಾಂತ ಸ್ವಭಾವದವರೇ ತಿಳಿಯಿರಿ.

ಇದನ್ನೂ ಓದಿ
Image
ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
Image
ಬುದ್ಧ ಪೂರ್ಣಿಮೆಯ ದಿನಾಂಕ, ಮಹತ್ವ ಮತ್ತು ಮಂತ್ರ ಪಠಣೆಯ ಮಾಹಿತಿ ಇಲ್ಲಿದೆ
Image
ರೈಲಿನ ಈ ಬೋಗಿಗಳಲ್ಲಿ ವೇಟಿಂಗ್‌ ಲಿಸ್ಟ್‌ ಪ್ರಯಾಣಿಕರಿಗೆ ನೋ ಎಂಟ್ರಿ
Image
ದಕ್ಷಿಣ ಭಾರತದ ಸ್ಟೈಲ್​​ನಲ್ಲಿ ಕಾಂಗರೂ ಬಿರಿಯಾನಿ

ವಿಡಿಯೋ ಇಲ್ಲಿದೆ ನೋಡಿ:

ಮೊದಲು ದ್ವೀಪವನ್ನು ನೋಡಿದರೆ: ಈ ವೈರಲ್‌ ಆಪ್ಟಿಕಲ್‌ ಇಲ್ಯೂಷನ್‌ ಫೋಟೋದಲ್ಲಿ ನೀವೇನಾದರೂ ಮೊದಲು ದ್ವೀಪವನ್ನು ನೋಡಿದರೆ ನೀವು ಸಾಮಾಜಿಕವಾಗಿ ಬೆರೆಯುವ ವ್ಯಕ್ತಿಯಾಗಿರುತ್ತೀರಿ. ಹೌದು ಇತರರೊಂದಿಗೆ ಬಹು ಬೇಗನೇ ಬೆರೆಯುವ ನೀವು ಒಂಟಿಯಾಗಿರಲು ಇಷ್ಟಪಡುವುದಿಲ್ಲ. ಹೊಂದಾಣಿಕೆ ಇಲ್ಲದಿದ್ದರೂ ಸಹ ನೀವು ಸ್ನೇಹ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತೀರಿ. ಎಲ್ಲರೊಂದಿಗೆ ಬೆರೆಯುವ ನೀವು ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿಂಜರಿಯುತ್ತೀರಿ. ಅದು ಕೂಡ ಪ್ರಮುಖವಾಗಿ ನೀವು ಒತ್ತಡದಲ್ಲಿರುವ ಸಂದರ್ಭದಲ್ಲಿ. ಅದಲ್ಲದೆ ಉತ್ತಮ ಸಂಭಾಷಣಾಕಾರರಾದ ನೀವು ಭಿನ್ನವಾದ ದೃಷ್ಟಿಕೋನವನ್ನು ಸ್ವೀಕರಿಸಲು ಕಷ್ಟಪಡುತ್ತೀರಿ.

ಇದನ್ನೂ ಓದಿ: ಈ ಪ್ರಶ್ನೆಗಳಿಗೆ ನೀವು ನೀಡುವ ಉತ್ತರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ

ಮೊದಲು ಬೆಕ್ಕಿನ ಮುಖ ನೋಡಿದರೆ: ಈ ವೈರಲ್‌ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವೇನಾದರೂ ಮೊದಲು ಬೆಕ್ಕಿನ ಮುಖವನ್ನು ನೋಡಿದರೆ ನೀವು ತುಂಬಾ ಶಾಂತ ಸ್ವಭಾವದ ವ್ಯಕ್ತಿಯೆಂದು ಅರ್ಥ. ಹೆಚ್ಚಿನ ಸಂದರ್ಭದಲ್ಲಿ ತುಂಬಾನೇ ಶಾಂತವಾಗಿರುವ ನೀವು ಸಂಘರ್ಷಗಳನ್ನು ಇಷ್ಟಪಡುವುದಿಲ್ಲ. ಆದರೆ ಯಾರಾದರೂ ನಿಮ್ಮ ಮಿತಿಗಳನ್ನು ದಾಟಿದರೆ ಅಥವಾ ನಿಮಗೆ ನೋವುಂಟು ಮಾಡಿದರೆ, ನೀವು ಕೋಪಗೊಳ್ಳಬಹುದು. ಜೊತೆಗೆ  ಪ್ರಬುದ್ಧ ಮತ್ತು ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ಸ್ವಭಾವವನ್ನು ಹೊಂದಿರುವ ನೀವು, ನಿಮ್ಮ ಕಡೆಯಿಂದ ತಪ್ಪುಗಳಾದಾಗ ಆ ತಪ್ಪನ್ನು ಒಪ್ಪಿಕೊಳ್ಳಲು ಕೂಡಾ ಸಿದ್ಧರಿರುವವರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
ಅವಳೇ ನನ್ನ ಹೆಂಡತಿ, ತಾಳೆ ಕಟ್ಟಿದ್ದೇನೆ: ಮಡೆನೂರು ಮನು ಶಾಕಿಂಗ್ ಆಡಿಯೋ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?