AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rabies Symptoms: ನಾಯಿ ಕಚ್ಚಿದರೆ ಎಷ್ಟು ಗಂಟೆಗಳ ಒಳಗೆ ಚಿಕಿತ್ಸೆ ನೀಡಬೇಕು?

ರೇಬೀಸ್ ರೋಗಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ, ಅದು ಮಾರಣಾಂತಿಕವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ರೇಬೀಸ್ ಪೀಡಿತರು ಸಾಯಬಹುದು. ಹಾಗಾದರೆ ಹುಚ್ಚು ನಾಯಿ ಕಚ್ಚಿದ ಎಷ್ಟು ದಿನಗಳಲ್ಲಿ ರೋಗದ ತೀವ್ರತೆ ಅರಿವಿಗೆ ಬರುತ್ತದೆ? ಹೇಗೆ ತಪ್ಪಿಸಬೇಕು ಇಲ್ಲಿದೆ ಮಾಹಿತಿ.

Rabies Symptoms: ನಾಯಿ ಕಚ್ಚಿದರೆ ಎಷ್ಟು ಗಂಟೆಗಳ ಒಳಗೆ ಚಿಕಿತ್ಸೆ ನೀಡಬೇಕು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jun 15, 2024 | 2:25 PM

Share

ಪ್ರಾಣಿಗಳ ಕಡಿತವು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆ ಸಾಲಿನಲ್ಲಿ ರೇಬೀಸ್ ಕೂಡ ಸೇರಿಕೊಳ್ಳುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ, ಅದು ಮಾರಣಾಂತಿಕವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ರೇಬೀಸ್ ಪೀಡಿತರು ಸಾಯಬಹುದು. ಹಾಗಾದರೆ ಹುಚ್ಚು ನಾಯಿ ಕಚ್ಚಿದ ಎಷ್ಟು ದಿನಗಳಲ್ಲಿ ರೋಗದ ತೀವ್ರತೆ ಅರಿವಿಗೆ ಬರುತ್ತದೆ? ಹೇಗೆ ತಪ್ಪಿಸಬೇಕು ಇಲ್ಲಿದೆ ಮಾಹಿತಿ.

ರೇಬೀಸ್ ಎಂದರೇನು?

ರೇಬಿಸ್ ಸೋಂಕು ಮುಖ್ಯವಾಗಿ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಪ್ರಾಣಿಗೆ ಈ ರೋಗ ಬಂದು ಅದು ಮನುಷ್ಯನಿಗೆ ಕಚ್ಚಿದರೆ ಆ ವ್ಯಕ್ತಿಗೂ ಈ ರೋಗ ಹರಡುತ್ತದೆ. ಸೋಂಕಿತ ಪ್ರಾಣಿಗಳ ಲಾಲಾರಸದಲ್ಲಿ ಈ ವೈರಸ್ ಇರುತ್ತದೆ. ಈ ಕಾಯಿಲೆಗೆ ತುತ್ತಾದ ಪ್ರಾಣಿಯು ಮನುಷ್ಯನನ್ನು ಕಚ್ಚಿದಾಗ, ವೈರಸ್ ಲಾಲಾರಸದ ಮೂಲಕ ಮನುಷ್ಯನ ರಕ್ತವನ್ನು ಪ್ರವೇಶಿಸುತ್ತದೆ. ರೋಗಲಕ್ಷಣಗಳು ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಮತ್ತು ಸರಿಯಾದ ಚುಚ್ಚುಮದ್ದನ್ನು ನೀಡದಿದ್ದರೆ ಸಾವಿನ ಅಪಾಯವಿದೆ. ಇನ್ನು ನಾಯಿ, ಬೆಕ್ಕು ಮತ್ತು ಮಂಗಗಳ ಕಡಿತದಿಂದ ರೇಬೀಸ್ ರೋಗ ಹರಡುತ್ತದೆ. ವಾಸ್ತವವಾಗಿ, ಇವುಗಳಲ್ಲಿ ಯಾವುದಾದರೂ ಪ್ರಾಣಿಗಳಿಗೆ ರೇಬೀಸ್ ಕಾಯಿಲೆ ಇದ್ದರೆ, ಅದು ಮನುಷ್ಯನನ್ನು ಕಚ್ಚಿದರೆ ಅದು ಆ ಮನುಷ್ಯನಿಗೂ ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸೋಂಕಿತ ಪ್ರಾಣಿ ಕಚ್ಚಿದರೆ ಮೊದಲು ಏನು ಮಾಡಬೇಕು?

ನಾಯಿ, ಬೆಕ್ಕು ಅಥವಾ ಕೋತಿ ಕಚ್ಚಿದರೆ ಮೊದಲು ಆ ಪ್ರದೇಶವನ್ನು ಚೆನ್ನಾಗಿ ತೊಳೆದುಕೊಳ್ಳಿ. ಗಾಯ ತುಂಬಾ ಆಳವಾಗಿದ್ದರೆ, ಚೆನ್ನಾಗಿ ಆ ಜಾಗವನ್ನು ಸ್ವಚ್ಛ ಮಾಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸರಿಯಾದ ಲಸಿಕೆ ತೆಗೆದುಕೊಳ್ಳಿ. ಯಾವುದೇ ಪ್ರಾಣಿ ಕಚ್ಚಿದ 24 ಗಂಟೆಗಳ ಒಳಗೆ ನೀವು ಲಸಿಕೆ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ವಿವಾಹಿತ ಹೆಣ್ಣು ತನ್ನ ಗಂಡನ ಬಳಿ ಈ ವಿಚಾರಗಳ ಬಗ್ಗೆ ಬಾಯಿ ಬಿಡುವುದೇ ಇಲ್ವಂತೆ

ರೇಬೀಸ್ ರೋಗದ ಮುಖ್ಯ ಲಕ್ಷಣಗಳೇನು?

ರೇಬಿಸ್ ರೋಗದ ಮುಖ್ಯ ಲಕ್ಷಣಗಳೆಂದರೆ ನೋವು, ಆಯಾಸ, ತಲೆನೋವು, ಜ್ವರ, ಸ್ನಾಯು ಬಿಗಿತ, ಕಿರಿಕಿರಿ, ಆಕ್ರಮಣಕಾರಿ ನಡವಳಿಕೆ, ವಿಚಿತ್ರ ಚಟುವಟಿಕೆಗಳು, ಪಾರ್ಶ್ವವಾಯು, ಬಾಯಿಯಲ್ಲಿ ನೀರು ಬರುವುದು, ಪ್ರಕಾಶಮಾನವಾದ ಬೆಳಕು ಅಥವಾ ಶಬ್ದಕ್ಕೆ ಕಿರಿಕಿರಿಯಾಗುವುದು, ಮಾತನಾಡಲು ತೊಂದರೆಯಾಗುವುದು.

ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಪ್ರಾಣಿಗಳನ್ನು ಸಾಕಿದ್ದರೆ, ಆ ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕುವುದು ಬಹಳ ಮುಖ್ಯ. ಇದರಿಂದ ಅದು ಯಾರನ್ನಾದರೂ ಪರಚಿದರೂ ಅಥವಾ ಕಚ್ಚಿದರೂ ಮನೆಯಲ್ಲಿ ವಾಸಿಸುವವರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ