AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ; ಜಡಜೀವನ ಹೋಗಲಾಡಿಸಲು ಇಲ್ಲಿದೆ ಕೆಲವು ಟಿಪ್ಸ್

ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಜಡವನ್ನು ಹೋಲಾಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು.

ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ; ಜಡಜೀವನ ಹೋಗಲಾಡಿಸಲು ಇಲ್ಲಿದೆ ಕೆಲವು ಟಿಪ್ಸ್
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jul 18, 2022 | 6:29 AM

Share

ಅಧಿಕ ತೂಕದ ಜನರು, ಸ್ಥೂಲಕಾಯರು ಅಥವಾ ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿರುವವರಿಗೆ ತೆಳ್ಳಗಿರುವುದು ವರವಾಗಿ ಕಾಣುತ್ತದೆ.  ಏಕೆಂದರೆ ತೆಳ್ಳಗಿರುವುದು ಯಾವಾಗಲೂ ಫಿಟ್ ಮತ್ತು ಆರೋಗ್ಯಕರವಾಗಿರುತ್ತಾರೆ. ಆದರೂ ಕೆಲವು ತೆಳ್ಳಗಿನ ಜನರು ಹೈಪೋಥೈರಾಯ್ಡಿಸಮ್, ಒಳಾಂಗಗಳ ಕೊಬ್ಬು, ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮತ್ತು ಮಧುಮೇಹದಂತಹ ಪರಿಸ್ಥಿತಿಗಳಿಂದ ಬಳಲುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ಹೊಸ ಸಂಶೋಧನೆಯ ಪ್ರಕಾರ, ತೆಳ್ಳಗಿನ ವಯಸ್ಕರು ಸಾಮಾನ್ಯ ವ್ಯಕ್ತಿಗಿಂತ ಸೋಮಾರಿಯಾಗಿರುತ್ತಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಜಡವನ್ನು ಹೋಲಾಡಿಸುವುದು ಹೇಗೆ? ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಸಂಖ್ಯೆ ಸಣ್ಣ ಪ್ರಮಾಣದಲ್ಲಿ ಇದ್ದರೂ 25 ಜನರಲ್ಲಿ ಒಬ್ಬರು ತೆಳ್ಳಗಿರುತ್ತಾರೆ ಮತ್ತು ಅವರ ಜೀವನಶೈಲಿ ಮತ್ತು ಆಹಾರದ ಆಯ್ಕೆಗಳಿಂದ ತೂಕವನ್ನು ಹೆಚ್ಚಿಸಲು ಹೆಣಗಾಡುತ್ತಾರೆ. ನಿಮ್ಮ ಸ್ನೇಹ ಬಳಗದಲ್ಲಿ ತೆಳ್ಳಗಿನವರು ಇದ್ದರೆ ಹೇಳುವುದನ್ನು ಕೇಳಬಹುದು, “ಎಷ್ಟು ತಿಂದರೂ ನಾನು ಹೀಗೇ, ದಪ್ಪ ಆಗುವುದಿಲ್ಲ” ಎಂದು. ಅದಾಗ್ಯೂ ತೆಳ್ಳಿನ ವ್ಯಕ್ತಿಗಳು ಸಮಾರಂಭಗಳಿಗೆ ಹೋದಾಗ ಮುಜುಗರಕ್ಕೀಡಾಗುತ್ತಾರೆ. ಹಿರಿಯರು, ಸ್ನೇಹಿತರು ಬಂದು, ನಿನಗೇನು ಮನೆಯಲ್ಲಿ ತಿನ್ನಲು ಕೊಡುವುದಿಲ್ವಾ? ನೀನೇನು ಇಷ್ಟು ಸಪೂರ ಆಗಿದ್ದೀ? ಎಂದು ಪ್ರಶ್ನಿಸುತ್ತಾರೆ. ಇನ್ನು ಕೆಲವರು ನೈಜವಾಗಿ ಒಂಟೆಯನ್ನು ನೋಡದಿದ್ದರೂ ಫೋಟೋದಲ್ಲಿ ಒಂಟೆಯನ್ನು ನೋಡಿದ ಕೆಲವರು ಬಂದು, ಏನ ನೀಡನು ಒಂಟೆ ರೀತಿ ಆಗಿದ್ದೀ ಎಂದು ಹೇಳುವುದು ಕೂಡ ಇದೆ. ಹೀಗೆ ಸಾರ್ವಜನಿಕವಾಗಿ ದೇಹದ ಮಾನಹರಾಜು ಹಾಕುಲಾಗುತ್ತದೆ.

ಇದೆಲ್ಲಾ ತಮಾಷೆಯಾಗಿದ್ದರೆ, ಇದರ ಹೊರತಾಗಿ ತೆಳ್ಳಗಿನ ವ್ಯಕ್ತಿಗಳು ಸೋಮಾರಿಯಾಗಿರುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಇದು ಗಂಭೀರ ವಿಚಾರವಾಗಿದೆ. ಏಕೆಂದರೆ ಜಡ ಜೀವನಶೈಲಿ ಕೆಲವು ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಿದ್ದರೆ ಈ ಜಡ ಜೀವನಶೈಲಿಯನ್ನು ಹೋಗಲಾಡಿವುದು ಅಥವಾ ಬದಲಾಯಿಸುವುದು ಹೇಗೆ? ನೀವು ತೆಳ್ಳಗಿನವರಾಗಿದ್ದರೆ ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಬಹುದು.

ಜಡ ಜೀವನಶೈಲಿಯನ್ನು ಹೇಗೆ ಸೋಲಿಸುವುದು?

  • ಊಟದ ನಂತರ ಸ್ವಲ್ಪ ಹೊತ್ತು ವಾಕಿಂಗ್ ಮಾಡಿ
  • ಕೂತಲ್ಲೇ ಕೂರದೆ ಪ್ರತಿ 90 ನಿಮಿಷಗಳಿಗೊಮ್ಮೆ ದೇಹವು ಚಲನೆಯಲ್ಲಿರುವಂತೆ ನೋಡಿಕೊಳ್ಳಿ
  • ಮನೆಯಿಂದ ಹೊರಬನ್ನಿ ಮತ್ತು ಕಡಿಮೆ ದೂರಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಪ್ರಯತ್ನಿಸಿ.
  • ಕೊಂಚ ದೂರದಲ್ಲಿ ಕಚೇರಿ ಅಥವಾ ಅಂಗಡಿಗಳಿದ್ದರೆ ಅಲ್ಲಿಗೆ ಹೋಗುವಾಗ ವಾಹನಗಳನ್ನು ಬಳಸಬೇಡಿ. ಕಾಲ್ನಡಿಗೆಯಲ್ಲೇ ಹೋಗಿ
  • ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ, ಯೋಗಾಭ್ಯಾಸ ಮಾಡಿ
  • ಮೌನವಾಗಿ ಕುಳಿತುಕೊಳ್ಳಬೇಡಿ, ಸ್ನೇಹಿತರೊಂದಿಗೆ, ಮನೆಯವರೊಂದಿಗೆ, ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ, ನಗುತ್ತಾ ಇರಿ
  • ಮೊಬೈಲ್​​ನಲ್ಲಿ ಮಾತನಾಡುವಾಗ ಆಕಡೆ ಈಕಡೆ ನಡೆದಾಡಿ
  • ಬಸ್​ನಲ್ಲಿ ಓಡಾಡುವಾಗ ಕುಳಿತುಕೊಳ್ಳಬೇಡಿ, ಆದಷ್ಟು ನಿಂತುಕೊಂಡೇ ಪ್ರಯಾಣಿಸಿ

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ಫಿಟ್‌ನೆಸ್ ಕಾರ್ಯವನ್ನು ಪ್ರಾರಂಭಿಸುವ ಮೊದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ