AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toxic Relationship: ನಾವು ಮಾಡುವ ಕೆಲಸಗಳು ನಮ್ಮ ಮಾನಸಿಕ, ಭಾವನಾತ್ಮಕ ದುಃಖವನ್ನು ಹೆಚ್ಚಿಸುತ್ತವೆ, ಯಾಕೆ ಗೊತ್ತಾ?

ವಾಸ್ತವವನ್ನು ನಿರಾಕರಿಸುವುದರಿಂದ ಹಿಡಿದು ಬೇಡದ ಸಂಬಂಧಗಳಲ್ಲಿ ಉಳಿಯುವವರೆಗೆ, ನಾವು ನಮ್ಮ ದುಃಖವನ್ನು ಕಡಿಮೆ ಮಾಡಿಕೊಳ್ಳುವುದರ ಬದಲು ಮತ್ತಷ್ಟು ವಿಸ್ತರಿಸಿಕೊಳ್ಳುತ್ತೇವೆ. ಆ ಕೆಲವು ಮಾರ್ಗಗಳ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Toxic Relationship: ನಾವು ಮಾಡುವ ಕೆಲಸಗಳು ನಮ್ಮ ಮಾನಸಿಕ, ಭಾವನಾತ್ಮಕ ದುಃಖವನ್ನು ಹೆಚ್ಚಿಸುತ್ತವೆ, ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 09, 2023 | 11:03 AM

Share

ನಾವು ಜೀವನದುದ್ದಕ್ಕೂ ಸಾಗುವಾಗ, ನಮಗೆ ದುಃಖ ನೀಡುವ ಸಂದರ್ಭಗಳನ್ನು ಎದುರಿಸುತ್ತೇವೆ. ಅದು ಶಾರೀರಿಕವಾಗಿರಲಿ, ಮಾನಸಿಕವಾಗಿರಲಿ ಅಥವಾ ಭಾವನಾತ್ಮಕವಾಗಿರಲಿ, ಬದುಕಿನಲ್ಲಿ ದುಃಖ ಎನ್ನುವುದು ಅನಿವಾರ್ಯ. ಆದರೆ ನಾವು ಅದನ್ನು ವ್ಯವಹರಿಸುವ ವಿಧಾನವು ನಮ್ಮ ನಿಯಂತ್ರಣದಲ್ಲಿರಬೇಕು. “ಭಾವನಾತ್ಮಕ ಯಾತನೆಯು ಮನುಷ್ಯನಾಗಿರುವುದರ ಅನಿವಾರ್ಯ ಭಾಗವಾಗಿದೆ. ಆದರೆ ಇದನ್ನು ದೀರ್ಘ ಕಾಲದವರೆಗೆ ವಿಸ್ತರಿಸಬೇಕು ಎಂದು ಅರ್ಥವಲ್ಲ. ಚಿಕಿತ್ಸಕಿ ದಿವ್ಯಾ ರಾಬಿನ್ ಹೇಳಿರುವ ಪ್ರಕಾರ, ಭಾವನಾತ್ಮಕ ಮತ್ತು ಮಾನಸಿಕ ಯಾತನೆಯನ್ನು ದೀರ್ಘಕಾಲದವರೆಗೆ ವಿಸ್ತರಿಸದೆ ಹೇಗೆ ಪರಿಹರಿಸಬಹುದು ಎಂಬ ಮಾರ್ಗಗಳ ಬಗ್ಗೆ ಕಂಡುಕೊಳ್ಳಬೇಕು ಆದರೆ ನಾವು ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇವೆ ಆ ಬಗ್ಗೆ ಅವರು ಅನೇಕ ಮಾಹಿತಿ ನೀಡಿದ್ದಾರೆ.

ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯಾತನೆಯನ್ನು ವಿಸ್ತರಿಸುವ ಕೆಲವು ವಿಧಾನಗಳನ್ನು ದಿವ್ಯಾ ಹಂಚಿಕೊಂಡಿದ್ದಾರೆ. ಇದು ನಮ್ಮ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.

ಇತರರು ಬದಲಾಗುವುದಕ್ಕಾಗಿ ಕಾಯುವುದು: ಇನ್ನೊಬ್ಬ ವ್ಯಕ್ತಿಯು ಬದಲಾಗುತ್ತಾನೆ ಮತ್ತು ಪರಿಸ್ಥಿತಿ ಅಂತಿಮವಾಗಿ ನಮಗೆ ಅನುಕೂಲಕರ ವಾಗುವಂತೆ ಬದಲಾಗುತ್ತದೆ ಎಂದು ನಾವು ಆಗಾಗ ಆಶಿಸುತ್ತೇವೆ. ಇದು ನಮ್ಮಲ್ಲಿ ಬೇರೆಯವರಿಗಾಗಿ ಕಾಯುವ ಭಾವನೆಯನ್ನು ಮತ್ತು ನಮ್ಮ ಭಾವನೆಗಳನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಅದಕ್ಕಾಗಿ ನಾವು ಬದಲಾಗ ಬೇಕು. ನಮ್ಮ ಸ್ವಂತ ಕ್ರಿಯೆಗಳಿಗೆ ಜವಾಬ್ದಾರರಾಗಲು ಕಲಿಯಬೇಕು ಹಾಗೂ ಬದುಕಿನಲ್ಲಿ ಏನೇ ಬಂದರೂ ಜಗ್ಗದೇ, ಕುಗ್ಗದೇ ಮುಂದುವರಿಯಬೇಕು.

ಬೇಡವೆನಿಸಿದರೂ ಕೆಟ್ಟ ಸಂಬಂಧಗಳಲ್ಲಿ ಉಳಿಯುವುದು: ಬದುಕಿನಲ್ಲಿ ಆಗಾಗ ನಾವು ಅನೇಕ ರೀತಿಯಲ್ಲಿ ನಮಗೆ ಹಾನಿಕಾರಕವಾದ ಅತೀ ಶೋಚನೀಯ ಸಂಬಂಧಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಅಂತಹವರ ಜೊತೆ ಇರುವ ಬದಲು, ಅವರ ಸಂಗದಲ್ಲಿ ಬೇಡದ ಸಂಭಾಷಣೆ ನಡೆಸಿಕೊಂಡು ಜಗಳ ಮಾಡುವ ಬದಲು, ನಿಮ್ಮ ಬದುಕಿಗೆ ಅರ್ಥವಿಲ್ಲದ ಸ್ಥಳದಲ್ಲಿ ಇರುವ ಬದಲು, ನಾವು ಅವರೊಂದಿಗೆ ಅಲ್ಲಿಯೇ ಉಳಿಯಲು ಪ್ರಯತ್ನಿಸುತ್ತೇವೆ ಮತ್ತು ಆ ವಿಷಯಗಳು ಬದಲಾಗುವವರೆಗೆ ಕಾಯುತ್ತೇವೆ. ಇದು ನಮಗೆ ಅಗತ್ಯಕ್ಕಿಂತ ಹೆಚ್ಚು ಬಳಲುವಂತೆ ಮಾಡುತ್ತದೆ.

ಬೇರೆಯವರು ನಮ್ಮನ್ನು ಅರ್ಥಮಾಡಿಕೊಳ್ಳಲು ಕಾಯುವುದು: ಇತರ ವ್ಯಕ್ತಿಯು ನೀಡಿದ ನೋವಿಗೆ ನಾವು ಕ್ಷಮೆ ಯಾಚಿಸಲು ಅರ್ಹರು ಎಂದು ನಾವು ಆಗಾಗ ಭಾವಿಸುತ್ತೇವೆ. ಕೆಲವೊಮ್ಮೆ ಇತರ ವ್ಯಕ್ತಿಯು ನಮ್ಮ ನೋವನ್ನು ಅರ್ಥಮಾಡಿಕೊಳ್ಳಲಿ ಎಂದು ಪರಿತಪಿಸುತ್ತೇವೆ. ಇದೂ ಕೂಡ ನಮ್ಮನ್ನು ಹೆಚ್ಚು ಸಮಯದವರೆಗೆ ಬಳಲುವಂತೆ ಮಾಡುತ್ತದೆ.

ಇದನ್ನೂ ಓದಿ: Relationship: ಯಾವುದೇ ಸಂಬಂಧವನ್ನು ಸರಿಪಡಿಸಲು, ಬಲಪಡಿಸಲು ಇರುವ ಕ್ಷಮೆಯ 5 ಭಾಷೆಗಳು

ನಮ್ಮ ಭಾವನೆಗಳನ್ನು ನಿರಾಕರಿಸುವುದು: ನಾವು ನಮ್ಮ ಸ್ವಂತ ಭಾವನೆಗಳನ್ನು ಆದ್ಯತೆಯ ಪಟ್ಟಿಯಲ್ಲಿ ಬಹಳ ಕೆಳಕ್ಕೆ ತಳ್ಳಿರುತ್ತೇವೆ. ಜೊತೆಗೆ ಇತರರನ್ನು ಆದ್ಯತೆಯಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ನಮಗೆ ಅನಗತ್ಯ ಭಾವನೆಯನ್ನು ಉಂಟುಮಾಡಿ ಮತ್ತು ನಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ನಮಗೆ ಸಾಧ್ಯವಾಗದಿರುವಂತೆ ಮಾಡುತ್ತದೆ.

ನಿಂದನೆಯ ಮಾತುಗಳನ್ನು ಸಹಿಸಿಕೊಳ್ಳುವುದು: ನಮಗೆ ಗೌರವ ಸಿಗದಿರುವ ಪರಿಸರದಲ್ಲಿದ್ದೇವೆ ಎಂದು ತಿಳಿದಾಗಲೂ ನಮಗಾಗಿ ಒಂದು ನಿಲುವನ್ನು ತೆಗೆದುಕೊಳ್ಳಲು ನಿರಾಕರಿಸಿಸುತ್ತೇವೆ ಮತ್ತು ನಿಂದನೆಯ ಮಾತುಗಳನ್ನು ಸಹಿಸಿಕೊಂಡು ನಾವು ಎದುರಿಸುತ್ತಿರುವ ನೋವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತೇವೆ.

ನಮ್ಮ ಮನಸ್ಸಿನ ಮಾತನ್ನು ನಿರಾಕರಿಸುವುದು: ಕೆಲವೊಮ್ಮೆ, ನಮ್ಮ ಸುತ್ತಲಿನ ಎಲ್ಲರನ್ನೂ ಮೆಚ್ಚಿಸುವ ಉದ್ದೇಶಕ್ಕಾಗಿ, ನಾವು ನಂಬುವ ವಿಷಯಗಳ ಬದಲು ಯಾರೋ ಕೇಳಲು ಬಯಸುವ ವಿಷಯಗಳ ಬಗ್ಗೆ ನಾವು ಮಾತನಾಡುತ್ತೇವೆ.

ವಾಸ್ತವದಿಂದ ತಪ್ಪಿಸಿಕೊಳ್ಳುವುದು: ನಾವು ವಿಷಯಗಳನ್ನು ನೋಡುವ ರೀತಿಯೇ ಬೇರೆ ಮತ್ತು ಯಾವಾಗಲೂ ಪರಿಸ್ಥಿತಿಯ ವಾಸ್ತವತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಏಕೆಂದರೆ ಅದನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಹೆದರಿಕೊಳ್ಳುವುದು. ಇವೆಲ್ಲವೂ ನಮ್ಮ ನೋವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ನಾವೇ ದಾರಿ ಮಾಡಿ ಕೊಡುವ ವಿಷಯಗಳಾಗಿವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ