AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧವನ್ನು ಉಳಿಸಿಕೊಳ್ಳಲು ಸತ್ಯಕ್ಕಿಂತ ಸುಳ್ಳಿನ ಅಗತ್ಯವಿದೆಯೇ?

ಸಂಬಂಧ(Relationship)ಗಳನ್ನು ಉಳಿಸಿಕೊಳ್ಳಲು ಸುಳ್ಳಿನ ಅಗತ್ಯವಿದೆಯೇ, ಸತ್ಯದಿಂದ ಸಂಬಂಧ ಉಳಿಯದೇ? ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡಿರುತ್ತದೆ.

Relationship: ಸಂಬಂಧವನ್ನು ಉಳಿಸಿಕೊಳ್ಳಲು ಸತ್ಯಕ್ಕಿಂತ ಸುಳ್ಳಿನ ಅಗತ್ಯವಿದೆಯೇ?
ಸಂಬಂಧImage Credit source: Helpguide.org
ನಯನಾ ರಾಜೀವ್
|

Updated on: May 10, 2023 | 10:00 AM

Share

ಸಂಬಂಧ(Relationship)ಗಳನ್ನು ಉಳಿಸಿಕೊಳ್ಳಲು ಸುಳ್ಳಿನ ಅಗತ್ಯವಿದೆಯೇ, ಸತ್ಯದಿಂದ ಸಂಬಂಧ ಉಳಿಯದೇ? ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡಿರುತ್ತದೆ. ಪ್ರತಿಯೊಂದು ಸಂಬಂಧಗಳು ನಂಬಿಕೆಯ ಮೇಲೆ ನಿಂತಿರುತ್ತದೆ, ಆ ನಂಬಿಕೆಯನ್ನು ಉಳಿಸಿಕೊಳ್ಳಲು ಹಲವು ಬಾರಿ ನಾವು ಸುಳ್ಳು ಹೇಳಿರುತ್ತೇವೆ, ಆದರೆ ಸತ್ಯಕ್ಕಿಂತ ಸುಳ್ಳೇ ಹೆಚ್ಚಾದಾಗ ಸುಳ್ಳಿನ ಕಟ್ಟೆಯೊಡೆದಾಗ ಸಂಬಂಧದಲ್ಲೂ ಬಿರುಕು ಮೂಡುವುದಂತೂ ಸತ್ಯ. ಯಾವುದೇ ಸಂಬಂಧಕ್ಕೆ ಸತ್ಯವೇ ಆಧಾರ.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿ ತನ್ನಿಂದ ಏನನ್ನೂ ಮುಚ್ಚಿಡಬಾರದು ಮತ್ತು ಸತ್ಯವನ್ನು ಹೇಳಬೇಕೆಂದು ಬಯಸುತ್ತಾರೆ. ಸಂಗಾತಿಯ ಭಾವನೆಗಳಿಗೆ ಧಕ್ಕೆಯಾಗದಂತೆ ಹೆಚ್ಚಿನ ಜನರು ದಿನನಿತ್ಯದ ಸುಳ್ಳುಗಳನ್ನು ಹೇಳುತ್ತಾರೆ ಎಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ಹೆಚ್ಚಿನ ಜನರು ತಮ್ಮ ಸಂಬಂಧವನ್ನು ಗಟ್ಟಿಯಾಗಿ ಮತ್ತು ಸಂತೋಷವಾಗಿಡಲು ಸಾಮಾನ್ಯವಾಗಿ ಸುಳ್ಳು ಹೇಳುತ್ತಾರೆ ಎಂದು ಹೇಳುತ್ತದೆ.

ಮತ್ತಷ್ಟು ಓದಿ: Relationship Tips: ಯುವ ಪೀಳಿಗೆ ದೀರ್ಘಕಾಲ ಸಂಬಂಧದಲ್ಲಿ ಆಸಕ್ತಿ ಇಲ್ಲ, ತಜ್ಞರ ಅಭಿಪ್ರಾಯ ಇಲ್ಲಿದೆ

ಹಸಿ ಸುಳ್ಳು ಕೆಲವೊಮ್ಮೆ ಕಣ್ಣೆದುರು ನಡೆಯುತ್ತಿರುವುದರ ಬಗ್ಗೆಯೇ ಸುಳ್ಳು ಹೇಳುವುದು ಕಥೆ ಕಟ್ಟುವುದು ಮಾಡಿದರೆ ಅದು ಸುಳ್ಳು ಎಂದು ಯಾರಿಗಾದರೂ ತಿಳಿಯುತ್ತದೆ. ಇದು ಸಂಗಾತಿಯ ಭವಿಷ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೆಚ್ಚಿನ ಜನರು ಸಂಬಂಧವನ್ನು ಬಲಪಡಿಸಲು ಈ 3 ಸುಳ್ಳುಗಳನ್ನು ಹೇಳುತ್ತಾರೆ

1) ನಿಮ್ಮ ಇಷ್ಟಗಳ ಬಗ್ಗೆ ಸುಳ್ಳು ಮದುವೆಗೂ ಮುನ್ನ ಸಂಗಾತಿಯ ಇಷ್ಟವೇ ನಿಮ್ಮ ಇಷ್ಟವಾಗಿರುತ್ತದೆ, ಎಲ್ಲವನ್ನೂ ಒಪ್ಪಿಕೊಳ್ಳುವ ಮನಸ್ಸಿರುತ್ತದೆ, ಆದರೆ ಮದುವೆಯ ಬಳಿಕ ಆ ಇಷ್ಟ ಬದಲಾಗುತ್ತದೆ, ಆಗ ಸಂಗಾತಿಗೆ ನೋವುಂಟಾಗಬಹುದು, ಹೀಗಾಗಿ ಮೊದಲೇ ನಿಮ್ಮ ಇಷ್ಟವೇನಿದೆ, ಯಾವುದು ಇಷ್ಟವಾಗುವುದಿಲ್ಲ ಎಮಬುದನ್ನು ನೇರವಾಗಿಯೇ ಹೇಳಿ.

2) ಈ ಉಡುಗೆ ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಲಿದೆ ಪ್ರತಿಯೊಬ್ಬರೂ ತಮ್ಮ ಸಂಗಾತಿಗೆ ಉಡುಗೆ ಖರೀದಿಸಲು ಬಯಸುತ್ತಾರೆ, ಆದರೆ ನಿಮ್ಮ ಸಂಗಾತಿ ಇಷ್ಟಪಡುವ ಉಡುಗೆಯನ್ನು ನೀವು ಇಷ್ಟಪಡುವ ಅಗತ್ಯವಿಲ್ಲ, ಆದರೆ ಉಡುಗೆ ಧರಿಸಿದ ನಂತರ ಸಂಗಾತಿಗೆ ಚೆನ್ನಾಗಿದೆ ಎನ್ನುವ ಒಂದು ಪ್ರಶಂಸೆ ನೀಡಿದರೆ ಸಾಕು.

3) ಆಹಾರದ ರುಚಿ ಅದ್ಭುತ ನೀವು ಮತ್ತು ನಿಮ್ಮ ಸಂಗಾತಿ ದೈನಂದಿನ ಕೆಲಸದಿಂದ ಸುಸ್ತಾಗುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿ ನಿಮಗಾಗಿ ನಿಮ್ಮ ನೆಚ್ಚಿನ ಪದಾರ್ಥವನ್ನು ಸಿದ್ಧಪಡಿಸುತ್ತಾರೆ. ತಿಂದ ಬಳಿಕ ತುಂಬಾ ಚೆನ್ನಾಗಿದೆ ಎಂದು ಹೇಳಿದರೆ ಸಾಕು ನಿಮ್ಮ ಸಂಗಾತಿಯ ಖುಷಿಗೆ ಪಾರವೇ ಇರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..