AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hiccups Problem: ಬಿಕ್ಕಳಿಕೆ ಬಂದ್ರೆ ಈ ಟಿಪ್ಸ್ ಪ್ರಯತ್ನಿಸಿ

ಕೆಲವೊಮ್ಮೆ ಬಿಕ್ಕಳಿಗೆ ಪ್ರಾರಂಭವಾದರೆ, ಎಷ್ಟೇ ನೀರು ಕುಡಿದರೂ ಕಡಿಮೆಯೇ ಆಗುವುದಿಲ್ಲ. ನೀವೂ ಕೂಡ ಒಂದಲ್ಲ ಒಂದು ಸಲವಾದರೂ ಇಂತಹ ಸಮಸ್ಯೆಯನ್ನು ಅನುಭವಿಸಿರಬಹುದು.

Hiccups Problem: ಬಿಕ್ಕಳಿಕೆ ಬಂದ್ರೆ ಈ ಟಿಪ್ಸ್ ಪ್ರಯತ್ನಿಸಿ
ಸಾಂದರ್ಭಿಕ ಚಿತ್ರImage Credit source: OSF HealthCare
TV9 Web
| Edited By: |

Updated on:Dec 03, 2022 | 7:26 PM

Share

ಕೆಲವೊಮ್ಮೆ ಬಿಕ್ಕಳಿಕೆ (Hiccups) ನಿಮ್ಮನ್ನು ಪಚೀತಿಗೀಡು ಮಾಡುವುದಂತೂ ನಿಜ. ಹೌದು ಕೆಲವೊಮ್ಮೆ ಬಿಕ್ಕಳಿಗೆ ಪ್ರಾರಂಭವಾದರೆ, ಎಷ್ಟೇ ನೀರು ಕುಡಿದರೂ ಕಡಿಮೆಯೇ ಆಗುವುದಿಲ್ಲ. ನೀವೂ ಕೂಡ ಒಂದಲ್ಲ ಒಂದು ಸಲವಾದರೂ ಇಂತಹ ಸಮಸ್ಯೆಯನ್ನು ಅನುಭವಿಸಿರಬಹುದು. ಆದ್ದರಿಂದ ಇನ್ನು ಮುಂದೆ ಬಿಕ್ಕಳಿಗೆಯನ್ನು ತಕ್ಷಣ ನಿಲ್ಲಿಸಲು ಈ ಸುಲಭ ಟಿಪ್ಸ್ ಪ್ರಯತ್ನಿಸಿ ನೋಡಿ.

1. ಸಕ್ಕರೆ:

ನಿಮಗೆ ಬಿಕ್ಕಳಿಕೆ ಬಂದಾಗ ತಕ್ಷಣ ಬಿಕ್ಕಳಿಗೆ ನಿಲ್ಲಿಸಲು ಸಕ್ಕರೆ ಒಂದು ಉತ್ತಮ ಪರಿಹಾರವಾಗಿದೆ. ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಹಾಕಿ ಹಾಗೆಯೇ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ . ನೀವು ಈ ತರ ಮಾಡುವುದರಿಂದ ತಕ್ಷಣ ಬಿಕ್ಕಳಿಕೆಯಿಂದ ಮುಕ್ತಿ ಪಡೆಯಬಹುದಾಗಿದೆ.

2. ಜೇನು ತುಪ್ಪ:

ನಿಮಗೆ ತಕ್ಷಣ ಬಿಕ್ಕಳಿಕೆ ನಿಲ್ಲಿಸಲು ಇನ್ನೊಂದು ಸುಲಭವೆಂದರೆ ಜೇನು ತುಪ್ಪ. ಒಂದು ಲೋಟ ನೀರಿಗೆ ಒಂದು ಚಮಚ ಜೇನು ತುಪ್ಪ ಹಾಕಿ, ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ. ನೀವು ಹೀಗೆ ಮಾಡುವುದರಿಂದ ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಬಹುದು.

3. ಲಿಂಬೆ ರಸ:

ನಿಮಗೆ ಬಿಕ್ಕಳಿಕೆ ಬಂದಾಗ ತಕ್ಷಣ ಬಿಕ್ಕಳಿಗೆ ನಿಲ್ಲಿಸಲು ಲಿಂಬೆ ರಸ ಒಂದು ಉತ್ತಮ ಆಯ್ಕೆಯಾಗಿದೆ. ನೀವೂ ಸಾಮಾನ್ಯವಾಗಿ ಬಿಕ್ಕಳಿಕೆ ಬಂದಾಗ ನೀರು ಕುಡಿಯುತ್ತಿರಿ, ಆದರೆ ಇನ್ನು ಮುಂದೆ ನೀರಿಗೆ ಸ್ವಲ್ಪ ಲಿಂಬೆಯ ರಸವನ್ನು ಬೆರೆಸಿ ಕುಡಿಯಿರಿ. ಇದು ತಕ್ಷಣ ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಕಾರಿಯಾಗಿದೆ. ಇದರ ಹುಳಿಯಾದ ರುಚಿ ಬಿಕ್ಕಳಿಕೆಗೆ ಕಾರಣವಾಗಿದ್ದ ನರಗಳ ಪ್ರಚೋದನೆಯನ್ನು ಶಮನಗೊಳಿಸಿ ಬಿಕ್ಕಳಿಕೆ ಕಡಿಮೆಯಾಗುತ್ತದೆ.

ಇದನ್ನುಓದಿ: ರಾತ್ರಿ ವೇಳೆ ಒದ್ದೆ ಕೂದಲಿನೊಂದಿಗೆ ಎಂದಿಗೂ ಮಲಗಬೇಡಿ

4. ಐಸ್ ವಾಟರ್:

ಐಸ್ ವಾಟರ್ ತಕ್ಷಣ ಬಿಕ್ಕಳಿಕೆಯನ್ನು ನಿಲ್ಲಿಸಲು ಸಹಕಾರಿಯಾಗಿದೆ. ಬಿಕ್ಕಳಿಗೆ ಬಂದಂತಹ ಸಮಯದಲ್ಲಿ ಒಂದು ಲೋಟ ತಂಪಗಿರುವ ನೀರನ್ನು ಕುಡಿಯುವುದರಿಂದ ಬಿಕ್ಕಳಿಕೆಗೆ ಕಾರಣವಾಗಿದ್ದ ನರಗಳ ಪ್ರಚೋದನೆಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಬಿಕ್ಕಳಿಕೆಯ ಕಡಿಮೆಯಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 7:26 pm, Sat, 3 December 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ